Upendra's Film Re-Release: ಬಹುಕೋಟಿ ಗಳಿಸಿದ್ದ ಸಿನಿಮಾ ಮೇ. 17ಕ್ಕೆ ಮರು ಬಿಡುಗಡೆ
ಬೆಂಗಳೂರು, ಮೇ 12: ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಯಾವ ಸ್ಟಾರ್ ನಟರ ಹೊಸ ಸಿನಿಮಾಗಳು ಥಿಯೇಟರ್ಗೆ ಲಗ್ಗೆ ಇಟ್ಟಿಲ್ಲ. ಇದರ ಮಧ್ಯೆ ಐಪಿಎಲ್ ಮತ್ತು ಲೋಕಸಭಾ ಚುನಾವಣೆ ಕಾರಣದಿಂದ ಜನರು ಥಿಯೇಟರ್ ಕಡೆ ಮುಖ ಮಾಡಿಲ್ಲ. ಮೊನ್ನೆಯಷ್ಟೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Puneeth Rajkumar) ಅವರ ಎರಡು ಸಿನಿಮಾಗಳು ಮರು ಬಿಡುಗಡೆ ಆದವು. ಇದೀಗ ರಿಯಲ್ ಸ್ಟಾರ್ ಉಪೇಂದ್ರ (Actro Upendra) ಅವರ ಸಿನಿಮಾಗೂ ರೀ-ರಿಲೀಸ್ ಭಾಗ್ಯ ಸಿಕ್ಕಿದೆ.
ಹೌದು, ಜಾಕಿ ಸಿನಿಮಾ ಮರು ಬಿಡುಗಡೆ ಬಳಿಕ ಅಪ್ಪು ಅವರ 'ಅಂಜನಿಪುತ್ರ' ಹಾಗೂ 'ಪವರ್' ನಿನಿಮಾಗಳು ಮತ್ತೆ ಕರ್ನಾಟಕ ರಾಜ್ಯಾದ್ಯಂತ ತೆರೆ ಕಂಡವು. ಆದರೆ ಈ ಸಿನಿಮಾಗಳ ಮರು ಪ್ರದರ್ಶನಕ್ಕೆ ಸ್ವತಃ ಅಪ್ಪು ಅಭಿಮಾನಿಗಳೇ ಬೇಸರ ವ್ಯಕ್ತಪಡಿಸಿದರು.

ಏಕೆಂದರೆ, ಅಪ್ಪು ಅವರ ಎರಡು ಸಿನಿಮಾಗಳನ್ನು ಒಂದೇ ದಿನ ರೀ-ರಿಲೀಸ್ ಮಾಡಿರುವುದು ಸರಿಯಲ್ಲ. ಜಾಕಿ ರೀತಿಯಲ್ಲಿ ಅದ್ಧೂರಿಯಾಗಿ ಸಿನಿಮಾ ಸ್ವಾಗತಿಸಲು ಅಪ್ಪು ಅಭಿಮಾನಿಗಳು ಪ್ಲಾನ್ ಮಾಡಿದ್ದರು. ಆದರೆ ಒಂದೇ ದಿನ ಎರಡು ಸಿನಿಮಾ ರಿ-ರೀಲಿಸ್ ಮಾಡಿದ್ದು ಸರಿಯಲ್ಲ ಎಂದು ನಿರ್ಮಾಪಕರ ಮೇಲೆ ಅಭಿಮಾನಿಗಳು ಬೇಸರ ಹೊರ ಹಾಕಿದ್ದಾರೆ.
ಕಳೆದ ಮೇ 10ರಂದು ನಟಿ ರಶ್ಮಿಕಾ ಮಂದಣ್ಣ -ಪುನೀತ್ ರಾಜ್ ಕುಮಾರ್ ನಟನೆಯ 'ಅಂಜನಿಪುತ್ರ' ಹಾಗೂ ಬಹುಬಾಷಾ ನಟಿ ತ್ರಿಶಾ ಮತ್ತು ಅಪ್ಪು ಅವರ ನಟಿಸಿರುವ ಪವರ್ ಸಿನಿಮಾ ಒಂದೇ ದಿನ ಮರು ಬಿಡುಗಡೆ ಆಗಿವೆ.

ಮೇ 17ರಂದು ಉಪೇಂದ್ರ ಅವರ A ಸಿನಿಮಾ ತೆರೆಗೆ
ಇದರ ಬೆನ್ನಲ್ಲೆ ರಿಯಲ್ ಸ್ಟಾರ್, ನಿರ್ದೇಶಕ ಉಪೇಂದ್ರ ಅವರು ಸಿನಿಮಾವೊಂದು ಮತ್ತೆ ಅಭಿಮಾನಿಗಳ ಮುಂದೆ ಬರಲಿದೆ. ಹೌದು, ಉಪೇಂದ್ರ ಅವರ ನಟಿಸಿ ನಿರ್ದೇಶಿಸಿರುವ 'A' ಸಿನಿಮಾವನ್ನು ಇದೇ ಮೇ 17 ರಂದು ಮರು ಬಿಡುಗಡೆ ಆಗಲಿದೆ ಎಂದು ತಿಳಿದು ಬಂದಿದೆ.
ಹೌದು UI ಸಿನಿಮಾ ತಯಾರಿಯಲ್ಲಿರುವ ಉಪೇಂದ್ರ ಅವರು ಸದಾ ತಮ್ಮ ನಿರ್ದೇಶನದ ಸಿನಿಮಾಗಳ ಮೂಲಕ ಹೊಸ ಕಥೆ, ಸಂಭಾಷಣೆ ಮೂಲಕವೇ ಜನರ ತಲೆಗೆ ಕೈ ಹಾಕುತ್ತಾರೆ. ಅಂದು 1998ರಲ್ಲಿ ಬಿಡುಗಡೆ ಮಾಡಿದ್ದ 'ಎ' ಸಿನಿಮಾ ಭರ್ಜರಿ ಯಶಸ್ಸು ಕಂಡಿತ್ತು. ಅಂದಿನ ಕಾಲದಲ್ಲಿಯೇ 20 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಸುಮಾರು ಒಂದೂವರೆ ಕೋಟಿ ಹಣದಲ್ಲಿ 'ಎ' ಸಿನಿಮಾ ಸಿದ್ಧವಾಗಿತ್ತು.
ಹೊಸ ಸಿನಿಮಾದ ತಯಾರಿ ಮಧ್ಯೆ ಉಪೇಂದ್ರ ಅವರು 'ಎ' ಸಿನಿಮಾವನ್ನು ಮತ್ತೆ ತೆರೆಗೆ ತರಲಿದ್ದಾರೆ. ಈ ಸಿನಿಮಾ ಮುಂದಿನ ಮೇ 17ರಂದು ಶುಕ್ರವಾರ ಮರು ಬಿಡುಗಡೆ ಆಗಲಿದ್ದು, ಅವರ ಅಭಿಮಾನಿಗಳು ಸ್ವಾಗತಿಸಲು ಸಜ್ಜಾಗಿದ್ದಾರೆ.
-
Gold Rate Today: ಕರ್ನಾಟಕದ ಬೆಂಗಳೂರಿನಲ್ಲಿ ಬಂಗಾರ ದರ ಇಳಿಕೆ: ಇಲ್ಲಿದೆ ಮಾರ್ಚ್ 6ರ ದರಪಟ್ಟಿ -
Oil Import: ತೈಲ ಆಮದಿಗೆ ವಿದೇಶಗಳ ಅನುಮತಿ ಬೇಕಿಲ್ಲ: ಭಾರತದ ಸ್ವತಂತ್ರ ಇಂಧನ ನೀತಿ ಹೊಂದಿದೆ -
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಬಜೆಟ್ನಲ್ಲಿ ಹೊಸ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ -
Jacob Bethell: ಟೀಂ ಇಂಡಿಯಾ ವಿರುದ್ಧ ಸೋತರೂ ಕನ್ನಡಿಗರ ಮನಗೆದ್ದ 22 ವರ್ಷದ ಜೇಕಬ್ ಬೆಥೆಲ್ -
ರಕ್ಷಿತ್ ಶೆಟ್ಟಿ ಪೋಸ್ಟ್ ವೈರಲ್, ರಶ್ಮಿಕಾ ಮಂದಣ್ಣ ಬಗ್ಗೆ ಚರ್ಚೆ ಶುರು... Rashmika Mandanna -
ಸಂಜು ನಿಜವಾದ ಮ್ಯಾಚ್ ವಿನ್ನರ್, ವಿಶ್ವದ ನಂ.1 ಟಿ20 ಬ್ಯಾಟರ್ ಅಭಿಷೇಕ್ ಮೇಲೆ ನಂಬಿಕೆಯಿಡಿ: ರವಿಶಾಸ್ತ್ರಿ ಮಹತ್ವದ ಸಲಹೆ -
ಮೊಟ್ಟೆ ಬೆಲೆ ಭಾರಿ ಕುಸಿತ, ಕೋಟಿ ಕೋಟಿ ರೂಪಾಯಿ ಕಳೆದುಕೊಳ್ಳುತ್ತಿರುವ ರೈತರು... Operation Roaring Lion -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕರ್ನಾಟಕ ಬಜೆಟ್ 2026: ನಮ್ಮ ಮೆಟ್ರೋ 41 ಕಿ.ಮೀ ಹೆಚ್ಚುವರಿ ಮಾರ್ಗ ಶೀಘ್ರವಾಗಿ ಪೂರ್ಣ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Karnataka Budget 2026 PDF: ಕರ್ನಾಟಕ ಬಜೆಟ್ 2026-27 ಪಿಡಿಎಫ್ ಡಾಕ್ಯುಮೆಂಟ್ ಇಲ್ಲಿ ಡೌನ್ಲೋಡ್ ಮಾಡಿ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers












Click it and Unblock the Notifications