Upendra's Film Re-Release: ಬಹುಕೋಟಿ ಗಳಿಸಿದ್ದ ಸಿನಿಮಾ ಮೇ. 17ಕ್ಕೆ ಮರು ಬಿಡುಗಡೆ
ಬೆಂಗಳೂರು, ಮೇ 12: ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಯಾವ ಸ್ಟಾರ್ ನಟರ ಹೊಸ ಸಿನಿಮಾಗಳು ಥಿಯೇಟರ್ಗೆ ಲಗ್ಗೆ ಇಟ್ಟಿಲ್ಲ. ಇದರ ಮಧ್ಯೆ ಐಪಿಎಲ್ ಮತ್ತು ಲೋಕಸಭಾ ಚುನಾವಣೆ ಕಾರಣದಿಂದ ಜನರು ಥಿಯೇಟರ್ ಕಡೆ ಮುಖ ಮಾಡಿಲ್ಲ. ಮೊನ್ನೆಯಷ್ಟೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Puneeth Rajkumar) ಅವರ ಎರಡು ಸಿನಿಮಾಗಳು ಮರು ಬಿಡುಗಡೆ ಆದವು. ಇದೀಗ ರಿಯಲ್ ಸ್ಟಾರ್ ಉಪೇಂದ್ರ (Actro Upendra) ಅವರ ಸಿನಿಮಾಗೂ ರೀ-ರಿಲೀಸ್ ಭಾಗ್ಯ ಸಿಕ್ಕಿದೆ.
ಹೌದು, ಜಾಕಿ ಸಿನಿಮಾ ಮರು ಬಿಡುಗಡೆ ಬಳಿಕ ಅಪ್ಪು ಅವರ 'ಅಂಜನಿಪುತ್ರ' ಹಾಗೂ 'ಪವರ್' ನಿನಿಮಾಗಳು ಮತ್ತೆ ಕರ್ನಾಟಕ ರಾಜ್ಯಾದ್ಯಂತ ತೆರೆ ಕಂಡವು. ಆದರೆ ಈ ಸಿನಿಮಾಗಳ ಮರು ಪ್ರದರ್ಶನಕ್ಕೆ ಸ್ವತಃ ಅಪ್ಪು ಅಭಿಮಾನಿಗಳೇ ಬೇಸರ ವ್ಯಕ್ತಪಡಿಸಿದರು.

ಏಕೆಂದರೆ, ಅಪ್ಪು ಅವರ ಎರಡು ಸಿನಿಮಾಗಳನ್ನು ಒಂದೇ ದಿನ ರೀ-ರಿಲೀಸ್ ಮಾಡಿರುವುದು ಸರಿಯಲ್ಲ. ಜಾಕಿ ರೀತಿಯಲ್ಲಿ ಅದ್ಧೂರಿಯಾಗಿ ಸಿನಿಮಾ ಸ್ವಾಗತಿಸಲು ಅಪ್ಪು ಅಭಿಮಾನಿಗಳು ಪ್ಲಾನ್ ಮಾಡಿದ್ದರು. ಆದರೆ ಒಂದೇ ದಿನ ಎರಡು ಸಿನಿಮಾ ರಿ-ರೀಲಿಸ್ ಮಾಡಿದ್ದು ಸರಿಯಲ್ಲ ಎಂದು ನಿರ್ಮಾಪಕರ ಮೇಲೆ ಅಭಿಮಾನಿಗಳು ಬೇಸರ ಹೊರ ಹಾಕಿದ್ದಾರೆ.
ಕಳೆದ ಮೇ 10ರಂದು ನಟಿ ರಶ್ಮಿಕಾ ಮಂದಣ್ಣ -ಪುನೀತ್ ರಾಜ್ ಕುಮಾರ್ ನಟನೆಯ 'ಅಂಜನಿಪುತ್ರ' ಹಾಗೂ ಬಹುಬಾಷಾ ನಟಿ ತ್ರಿಶಾ ಮತ್ತು ಅಪ್ಪು ಅವರ ನಟಿಸಿರುವ ಪವರ್ ಸಿನಿಮಾ ಒಂದೇ ದಿನ ಮರು ಬಿಡುಗಡೆ ಆಗಿವೆ.

ಮೇ 17ರಂದು ಉಪೇಂದ್ರ ಅವರ A ಸಿನಿಮಾ ತೆರೆಗೆ
ಇದರ ಬೆನ್ನಲ್ಲೆ ರಿಯಲ್ ಸ್ಟಾರ್, ನಿರ್ದೇಶಕ ಉಪೇಂದ್ರ ಅವರು ಸಿನಿಮಾವೊಂದು ಮತ್ತೆ ಅಭಿಮಾನಿಗಳ ಮುಂದೆ ಬರಲಿದೆ. ಹೌದು, ಉಪೇಂದ್ರ ಅವರ ನಟಿಸಿ ನಿರ್ದೇಶಿಸಿರುವ 'A' ಸಿನಿಮಾವನ್ನು ಇದೇ ಮೇ 17 ರಂದು ಮರು ಬಿಡುಗಡೆ ಆಗಲಿದೆ ಎಂದು ತಿಳಿದು ಬಂದಿದೆ.
ಹೌದು UI ಸಿನಿಮಾ ತಯಾರಿಯಲ್ಲಿರುವ ಉಪೇಂದ್ರ ಅವರು ಸದಾ ತಮ್ಮ ನಿರ್ದೇಶನದ ಸಿನಿಮಾಗಳ ಮೂಲಕ ಹೊಸ ಕಥೆ, ಸಂಭಾಷಣೆ ಮೂಲಕವೇ ಜನರ ತಲೆಗೆ ಕೈ ಹಾಕುತ್ತಾರೆ. ಅಂದು 1998ರಲ್ಲಿ ಬಿಡುಗಡೆ ಮಾಡಿದ್ದ 'ಎ' ಸಿನಿಮಾ ಭರ್ಜರಿ ಯಶಸ್ಸು ಕಂಡಿತ್ತು. ಅಂದಿನ ಕಾಲದಲ್ಲಿಯೇ 20 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಸುಮಾರು ಒಂದೂವರೆ ಕೋಟಿ ಹಣದಲ್ಲಿ 'ಎ' ಸಿನಿಮಾ ಸಿದ್ಧವಾಗಿತ್ತು.
ಹೊಸ ಸಿನಿಮಾದ ತಯಾರಿ ಮಧ್ಯೆ ಉಪೇಂದ್ರ ಅವರು 'ಎ' ಸಿನಿಮಾವನ್ನು ಮತ್ತೆ ತೆರೆಗೆ ತರಲಿದ್ದಾರೆ. ಈ ಸಿನಿಮಾ ಮುಂದಿನ ಮೇ 17ರಂದು ಶುಕ್ರವಾರ ಮರು ಬಿಡುಗಡೆ ಆಗಲಿದ್ದು, ಅವರ ಅಭಿಮಾನಿಗಳು ಸ್ವಾಗತಿಸಲು ಸಜ್ಜಾಗಿದ್ದಾರೆ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications