ಹೈದರಾಬಾದ್ ನತ್ತ ಶಾಸಕರು? ಅರ್ಥವಾಗದ ನಿಗೂಢ ನಡೆ!
ಹೈದರಾಬಾದ್, ಮೇ 18: ರಾಮನಗರ ಬಳಿಯ ಈಗಲ್ಟನ್ ರೆಸಾರ್ಟ್ ನಿಂದ ಕಾಲ್ಕಿತ್ತ ಕಾಂಗ್ರೆಸ್ ಶಾಸಕರು ಕೊಚ್ಚಿಗೆ ತೆರಳಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಜೆಡಿಎಸ್ ಶಾಸಕರು ಸಹ ಕೊಚ್ಚಿಯತ್ತ ಮುಖ ಮಾಡಿದ್ದಾರೆ ಎನ್ನಾಲಾಗಿತ್ತು. ಆದರೆ ಮಾರ್ಗ ಮಧ್ಯೆ ಶಾಸಕರಿದ್ದ ಬಸ್ಸು ಹಾದಿ ಬದಲಿಸಿದ್ದು, ಹೈದರಾಬಾದಿಗೋ, ಪಾಂಡೀಚೇರಿಗೋ ತಲುಪುವ ಸಾಧ್ಯತೆ ಇದೆ ಎನ್ನಲಾಗಿದೆ.
ಬಿಜೆಪಿಯು ಬಹುಮತ ಸಾಬೀತುಪಡಿಸಲು ತಮ್ಮ ಶಾಸಕರನ್ನು ಸೆಳೆಯುವ ಸಾಧ್ಯತೆ ಇರುವುದರಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಶಾಸಕರ ಮೇಲೆ ಹದ್ದಿನ ಕಣ್ಣಿಟ್ಟಿವೆ.
#WATCH Congress MLAs changing buses on #Hyderabad Highway. The MLAs along with JD(S) MLAs will be staying in Hyderabad #KarnatakaElections2018 pic.twitter.com/eUk3dFd4yq
— ANI (@ANI) May 17, 2018
ಆದರೆ ಶಾಸಕರು ಒಮ್ಮೆ ಕೊಚ್ಚಿಗೆ ತೆರಳುತ್ತಾರೆ ಎಂಬ ಮಾಹಿತಿ ಸಿಕ್ಕರೆ ಕೆಲವೇ ಕ್ಷಣಗಳಲ್ಲಿ ಹೈದರಾಬಾದ್ ಮತ್ತು ಪಾಂಡೀಚೇರಿ ಎಂಬ ಮಾಹಿತಿ ಬರುತ್ತಿದ್ದು ವರದಿಗಾರರನ್ನೂ ಗೊಂದಲಕ್ಕೀಡುಮಾಡಿದೆ.

ಮೇ 15 ರಂದು ಹೊರಬಿದ್ದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನ, ಕಾಂಗ್ರೆಸ್ 78 ಸ್ಥಾನ, ಜೆಡಿಎಸ್ 38 ಸ್ಥಾನ ಮತ್ತು ಇತರರು 2 ಸ್ಥಾನ ಗೆದ್ದಿದ್ದರು. ರಾಜ್ಯದ 24 ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಿದ್ದಾರೆ.












Click it and Unblock the Notifications