ವಿಜಯವಾಣಿ, ದಿಗ್ವಿಜಯ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಅತಂತ್ರ ವಿಧಾನಸಭೆ
ಬೆಂಗಳೂರು, ಮೇ 07: ಕರ್ನಾಟಕ ವಿಧಾನಸಭೆ ಚುನಾವಣೆ 2018 ರ ಕುರಿತು ವಿಜಯ ಸಂಕೇಶ್ವರ್ ಒಡೆತನದ ಪತ್ರಿಕೆ ವಿಜಯವಾಣಿ ಮತ್ತು ದಿಗ್ವಿಜಯ ವಾಹಿನಿ ಜಂಟಿಯಾಗಿ ಮಾಡಿರುವ ಸಮೀಕ್ಷೆಯ ಪ್ರಕಾರ ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಲಿದೆ.
ವಿಜಯವಾಣಿ-ದಿಗ್ವಿಜಯ ಸಮೀಕ್ಷೆಯ ಪ್ರಕಾರ ಅತಿ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ಪಕ್ಷ ಬಿಜೆಪಿ ಆಗಲಿದ್ದು, ಕಾಂಗ್ರೆಸ್ಗೆ ಎರಡನೇ ಸ್ಥಾನ ಹಾಗೂ ಜೆಡಿಎಸ್ಗೆ ಮೂರನೇ ಸ್ಥಾನ ದೊರೆಯಲಿದೆ.
Tv 5 ಸಮೀಕ್ಷೆಯಲ್ಲಿ ಬಿಜೆಪಿಗೆ ಬಹುಮತ, ಯಡಿಯೂರಪ್ಪ ಮೆಚ್ಚಿನ ಸಿಎಂ
ಸಮೀಕ್ಷೆ ಪ್ರಕಾರ ಬಿಜೆಪಿಯು 90-94 ಸ್ಥಾನ ಪಡೆದುಕೊಂಡರೆ, ಕಾಂಗ್ರೆಸ್ 85-89 ಸ್ಥಾನ ಪಡೆದುಕೊಳ್ಳಲಿದೆ. ಜೆಡಿಎಸ್ ಪಕ್ಷವು 37-41 ಕ್ಷೇತ್ರದಲ್ಲಿ ಗೆಲ್ಲಲಿದೆ. ಇನ್ನು ಪಕ್ಷೇತರರು ಹಾಗೂ ಇತರ ಪಕ್ಷಗಳು 3-7 ಸ್ಥಾನಗಳಲ್ಲಿ ಗೆಲವು ಸಾಧಿಸಲಿದ್ದಾರೆ.
ಎಬಿಪಿ ಲೋಕನೀತಿ, ಸಿಎಸ್ ಡಿಎಸ್ ಸಮೀಕ್ಷೆ: ಅಸೆಂಬ್ಲಿ ಅತಂತ್ರ
ಸಮೀಕ್ಷೆ ಪ್ರಕಾರ ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಲಿದ್ದು ಮೈತ್ರಿ ಸರ್ಕಾರ ರಚನೆ ಆಗುವುದು ಖಂಡಿತ ಎನ್ನಲಾಗಿದೆ. ಕಳೆದ ಬಾರಿ ಚುನಾವಣೆಗೆ ಹೋಲಿಸಿದರೆ ಬಿಜೆಪಿ ಜಿಗಿತ ಕಂಡಿದ್ದು, ಕಾಂಗ್ರೆಸ್ ಕುಸಿತ ಕಂಡಿದೆ ಹಾಗೂ ಜೆಡಿಎಸ್ ಯಥಾಸ್ಥಿತಿ ಮುಂದುವರೆಸಿದೆ.