ಹಾಸನದಲ್ಲಿ ಗೆಲುವಿನ ಶಾಸನ ಯಾರು ಕೆತ್ತುತ್ತಾರೆ?

ದಶಕಗಳಿಂದ ಜೆಡಿಎಸ್ ಪ್ರಾಬಲ್ಯ ಜಿಲ್ಲೆಯಲ್ಲಿ ಮುಂದುವರೆದಿದ್ದು, ಈ ಬಾರಿ ಜೆಡಿಎಸ್ ಪ್ರಾಬಲ್ಯ ಮುರಿಯುವುದೇ ಬಿಜೆಪಿ ಕಾಂಗ್ರೆಸ್ ಹಾಗೂ ಇನ್ನಿತರ ಪಕ್ಷಗಳ ಸವಾಲಾಗಿದೆ. ಜಾತಿವಾರು ಲೆಕ್ಕಾಚಾರದಲ್ಲಿ ಒಕ್ಕಲಿಗರೇ ಪ್ರಾಧಾನ್ಯ. ಅದರಲ್ಲೂ ಒಕ್ಕಲಿಗರ ಉಪಜಾತಿ ಓಲೈಸಿಕೊಂಡವರಿಗೆ ಕೆಲವು ನಿಶ್ಚಿತ. ಉಳಿದಂತೆ ಮುಸ್ಲಿಮರು, ಅಲ್ಪಸಂಖ್ಯಾತರು, ಲಿಂಗಾಯತರು, ಕುರುಬರು ಜಿಲ್ಲೆಯ ಕೆಲ ಕ್ಷೇತ್ರದಲ್ಲಿ ನಿರ್ಣಾಯಕ ಪಾತ್ರವಹಿಸುತ್ತಾರೆ. [ 2013 ಫಲಿತಾಂಶ: ಗೆದ್ದವರು, ಸೋತವರ ವಿವರ]
ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಹಾಲಿ ಶಾಸಕರು:
ಹಾಸನ: ಎಚ್ ಎಸ್ ಪ್ರಕಾಶ್ ( ಜೆಡಿಎಸ್)
ಶ್ರವಣಬೆಳಗೊಳ: ಜೆಡಿಎಸ್ ಶಾಸಕ ಪುಟ್ಟೇಗೌಡ ರಾಜೀನಾಮೆಯಿಂದ ಕ್ಷೇತ್ರಕ್ಕೆ ಶಾಸಕರಿಲ್ಲದ್ದಂತಾಗಿದೆ.
ಅರಸೀಕೆರೆ: ಕೆಎಂ ಶಿವಲಿಂಗೇಗೌಡ (ಜೆಡಿಎಸ್)
ಬೇಲೂರು : ವೈಎನ್ ರುದ್ರೇಶ್ ಗೌಡ(ಕಾಂಗ್ರೆಸ್)
ಹೊಳೆನರಸೀಪುರ : ಎಚ್ ಡಿ ರೇವಣ್ಣ (ಜೆಡಿಎಸ್)
ಅರಕಲಗೂಡು: ಎ. ಮಂಜು (ಕಾಂಗ್ರೆಸ್)
ಸಕಲೇಶಪುರ: ಎಚ್.ಕೆ ಕುಮಾರಸ್ವಾಮಿ
ಬೇಲೂರು ಕ್ಷೇತ್ರಕ್ಕಾಗಿ ಜೆಡಿಎಸ್ ಅಭ್ಯರ್ಥಿ ಆಯ್ಕೆ ಗೊಂದಲದ ಬಗ್ಗೆ ಈಗಾಗಲೇ ಒನ್ ಇಂಡಿಯಾ ಕನ್ನಡದಲ್ಲಿ ಸಾಕಷ್ಟು ಬಾರಿ ಓದಿರುತ್ತೀರಿ. ಬೇಲೂರು ಸೇರಿದಂತೆ ಅರಕಲಗೂಡು ಮೇಲೆ ಪ್ರಾಬಲ್ಯ ಸಾಧಿಸಲು ಜೆಡಿಎಸ್ ಯತ್ನಿಸುತ್ತಿದೆ. ಹೊಳೆನರಸೀಪುರದಲ್ಲಿ ಎಚ್ ಡಿ ರೇವಣ್ಣ ವಿರುದ್ಧ ಮಹಿಳಾ ಸ್ಪರ್ಧಿಗಳನ್ನು ಇಳಿಸಿ ವಿಪಕ್ಷಗಳು ವಿಶಿಷ್ಟ ತಂತ್ರಗಾರಿಕೆ ಮೆರೆದಿವೆ.
2013 ಕರ್ನಾಟಕ ವಿಧಾನಸಭಾ ಚುನಾವಣೆ ಅಧಿಕೃತ ಅಭ್ಯರ್ಥಿಗಳ ಪಟ್ಟಿ:
| ಕ್ಷೇತ್ರ ಸಂಖ್ಯೆ | ಕ್ಷೇತ್ರದ ಹೆಸರು | ಬಿಜೆಪಿ | ಕಾಂಗ್ರೆಸ್ | ಜೆಡಿಎಸ್ | ಕೆಜೆಪಿ | ಬಿಎಸ್ ಆರ್ಸಿ /ಪಕ್ಷೇತರರು/ಇತರೆ |
| 193 | ಶ್ರವಣಬೆಳಗೊಳ | ಪಟೇಲ್ ಮಂಜುನಾಥ್ | ಸಿ.ಎಸ್ ಪುಟ್ಟೇಗೌಡ | ಸಿ.ಎನ್ ಬಾಲಕೃಷ್ಣ | ***** | 11 ಪಕ್ಷೇತರರು |
| 194 | ಅರಸೀಕೆರೆ | ಗಂಗಾಧರ್ | ಬಿ.ಶಿವರಾಂ | ಶಿವಲಿಂಗೇಗೌಡ | ಡಾ. ಲೋಕೇಶ್ | 11 |
| 195 | ಬೇಲೂರು | ಇ.ಎಚ್ ಲಕ್ಷ್ಮಣ್ | ರುದ್ರೇಶ್ ಗೌಡ ವೈ.ಎಸ್ | ಲಿಂಗೇಶ್ | ವಿಶ್ವನಾಥ್ | 11 |
| 196 | ಹಾಸನ | ಎಂ.ಬಿ. ಗುರುಪ್ರಸಾದ್ | ಮಹೇಶ್ ಎಚ್.ಕೆ | ಪ್ರಕಾಶ್ | *** | ಕೋಡಿಹಳ್ಳಿ ಚಂದ್ರಶೇಖರ್ +14 |
| 197 | ಹೊಳೆನರಸೀಪುರ | ಹೇಮಂತ್ ಕುಮಾರ್ ಗೌಡ | ಅನುಪಮ. ಎಸ್.ಜಿ | ಎಚ್.ಡಿ ರೇವಣ್ಣ | ಎಚ್.ಎಲ್ ಯಮುನ | 10 |
| 198 | ಅರಕಲಗೂಡು | ಎಂ.ಕೆ ನಟರಾಜ್ | ಎ.ಮಂಜು | ಎ.ಟಿ ರಾಮಸ್ವಾಮಿ | ಎಸ್. ಪುಟ್ಟಸ್ವಾಮಿ | 11 |
| 199 | ಸಕಲೇಶಪುರ (ಎಸ್ ಸಿ) | ಡಾ.ನಾರಾಯಣ ಸ್ವಾಮಿ | ಡಿ.ಮಲ್ಲೇಶ್ | ಕುಮಾರಸ್ವಾಮಿ | ಉಮೇಶ್ |
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications