ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಷೇತ್ರ ಪರಿಚಯ : ಕಾಂಗ್ರೆಸ್‌ ಭದ್ರಕೋಟೆ ಗುರುಮಿಠಕಲ್‌

|
Google Oneindia Kannada News

ಯಾದಗಿರಿ ಜಿಲ್ಲೆಯ ವಿಧಾನಸಭಾ ಕ್ಷೇತ್ರ ಗುರುಮಿಠಕಲ್. ಇದೊಂದು ಪ್ರವಾಸಿ ತಾಣ, ಬೆಂಗಳೂರು ನಗರದಿಂದ ಸುಮಾರು 650 ಕಿ.ಮೀ.ದೂರದಲ್ಲಿದೆ. ಕ್ಷೇತ್ರದ ಜನರು ಕೃಷಿಯನ್ನು ಅವಲಂಬಿಸಿದ್ದಾರೆ.

ಗುರುಮಿಠಕಲ್ ಜಲಪಾತ ಪ್ರಸಿದ್ಧ ಪ್ರವಾಸಿತಾಣ. ಸುಮಾರು 30 ಅಡಿ ಎತ್ತರದಿಂದ ನೀರು ಧುಮ್ಮುಕ್ಕುವುದನ್ನು ನೋಡಲು ಚಳಿಗಾಲ ಸೂಕ್ತ. ಸಾರಿಗೆ ಸಂಚಾರದ ಸಮಸ್ಯೆ ಹೆಚ್ಚಿಲ್ಲ. ಹೈದರಾಬಾದ್ ವಿಮಾನ ನಿಲ್ದಾಣ, ಯಾದಗಿರಿ ರೈಲು ನಿಲ್ದಾಣ ಕ್ಷೇತ್ರಕ್ಕೆ ಹತ್ತಿರವಾಗಿವೆ.

ಕ್ಷೇತ್ರ ಪರಿಚಯ : ಯಾದಗಿರಿಯಲ್ಲಿ ಯಾರಿಗೆ ಗೆಲುವು?ಕ್ಷೇತ್ರ ಪರಿಚಯ : ಯಾದಗಿರಿಯಲ್ಲಿ ಯಾರಿಗೆ ಗೆಲುವು?

ರಾಜಕೀಯವಾಗಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಗುರುಮಿಠಕಲ್‌ನಿಂದ 8 ಬಾರಿ ಆಯ್ಕೆಯಾಗಿ ದಾಖಲೆ ನಿರ್ಮಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಭದ್ರಕೋಟೆ ಎಂದು ಕ್ಷೇತ್ರ ಹೆಸರು ಪಡೆದಿದೆ.

Karnataka assembly election 2018 : Gurmitkal constituency profile

ಮಲ್ಲಿಕಾರ್ಜುನ ಖರ್ಗೆ ಅವರು ಈಗ ರಾಷ್ಟ್ರ ರಾಜಕಾರಣದಲ್ಲಿ ಬ್ಯುಸಿಯಾಗಿದ್ದಾರೆ. 2008, 2013ರ ಚುನಾವಣೆಯಲ್ಲಿ ಗುರುಮಿಠಕಲ್ ಕ್ಷೇತ್ರದಿಂದ ಕಾಂಗ್ರೆಸ್‌ನ ಬಾಬುರಾವ್ ಚಿಂಚನಸೂರು ಆಯ್ಕೆಯಾಗಿದ್ದಾರೆ. ಸಿದ್ದರಾಮಯ್ಯ ಸಂಪುಟದಲ್ಲಿ ಅವರು ಸಚಿವರೂ ಆಗಿದ್ದರು.

2013ರ ಚುನಾವಣೆ ಫಲಿತಾಂಶ : 2013ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಬಾಬೂರಾವ್ ಚಿಂಚನಸೂರು ಅವರು 36,051 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಜೆಡಿಎಸ್‌ನ ನಾಗಣ್ಣ ಗೌಡ ಅವರು 34,401 ಮತ, ಬಿಜೆಪಿಯ ಗಿರೀಶ್ ಮಟ್ಟಣ್ಣನವರ್ 9,795 ಮತಗಳನ್ನು ಪಡೆದಿದ್ದರು.

2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಬಾಬೂರಾವ್ ಚಿಂಚನಸೂರು ಕಾಂಗ್ರೆಸ್ ಅಭ್ಯರ್ಥಿ. ಬಿಜೆಪಿಯಿಂದ ಸಾಯಿಬಣ್ಣ, ಜೆಡಿಎಸ್‌ ಪಕ್ಷದಿಂದ ನಾಗನಗೌಡ ಅವರು ಅಭ್ಯರ್ಥಿ.

English summary
Karnataka Assembly Election 2018 : Read all about Gurmitkal assembly constituency of Yadgir district. Get election news from Gurmitkal. Know about candidates list, election results during Karnataka elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X