ಯೋಗದ ಬಗೆಗಿನ ಸತ್ಯ ಮತ್ತು ಅನಂತತೆಯ ಅನುಭವ
ಯೋಗದಿಂದ ನಿಮಗೆ ಹಿತ, ಸುಖ ಉಂಟಾಗುತ್ತದೆ. ಆಸನ ಎಂದರೆ ಯಾವುದು ಸ್ಥಿರವಾದ, ಸುಖವಾದ ಭಂಗಿಯೊ ಅದು. ಯೋಗಾಸನಗಳನ್ನು ಮಾಡುವಾಗ ನೀವು ಹಿತವನ್ನು ಅನುಭವಿಸಬೇಕು. ಸುಖ ಎಂದರೇನು? ನೀವು ದೇಹವನ್ನು ಅನುಭವಿಸದಿದ್ದಾಗ ಸಿಗುವಂತದ್ದು.
ಯಾವುದೋ ಒಂದು ಅಸಾಮಾನ್ಯವಾದ ಭಂಗಿಯಲ್ಲಿ ಕುಳಿತಾಗ, ದೇಹದ ಆ ಭಾಗದ ಅರಿವು, ಅದರಿಂದ ಬರುತ್ತಿರುವ ನೋವಿನಿಂದಾಗಿ ಉಂಟಾಗುತ್ತದೆ. ಆಗ ನಿಮ್ಮ ಗಮನವೆಲ್ಲವೂ ಅದರಿಂದ ಬರುತ್ತಿರುವ ಅಹಿತವಾದ ಸಂವೇದನೆಯ ಮೇಲೇ ಇರುತ್ತದೆ. ನೀವು ಯಾವುದೇ ಆಸನವನ್ನು ಮಾಡಿದಾಗ ನಿಮ್ಮ ಅನುಭವಕ್ಕೆ ಬರುವ ಮೊದಲನೆಯ ವಿಷಯವೆಂದರೆ ಅಹಿತಕರವಾದ ಸಂವೇದನೆ. ಅದರ ಮನಸ್ಸನ್ನು ಆ ಸಂವೇದನೆಯಲ್ಲಿ ನಡೆಸಿಕೊಂಡು ಹೋದಾಗ, ಕೆಲವೇ ಕ್ಷಣಗಳಲ್ಲಿ ಆ ಅಹಿತಕರವಾದ ಸಂವೇದನೆಯು ಮಾಯವಾಗಿ, ದೇಹದ ಅನುಭವವೂ ಮಾಯವಾಗುವುದನ್ನು ಕಾಣಬಹುದು.

ವಿಸ್ತಾರವಾದಂತಹ ಅಥವಾ ಅನಂತತೆಯ ಅನುಭವವನ್ನು ಆಸನಗಳಿಂದ ಪಡೆಯುತ್ತೀರಿ. ಒಂದು ಆಸನವನ್ನು ಹೇಗೆ ಮಾಡಬೇಕು? ಒಂದು ಆಸನದ ಭಂಗಿಯಲ್ಲಿ ಹೊಕ್ಕಿ, ಪ್ರಯತ್ನವನ್ನು ಬಿಟ್ಟುಬಿಡಬೇಕು. ಆಗೇನಾಗುತ್ತದೆ? ನಿಮ್ಮಲ್ಲಿ ಅನಂತತೆಯು ನೆಲೆ ನಿಲ್ಲುತ್ತದೆ. ಆದ್ದರಿಂದ, ಕೇವಲ ಸರಿಯಾದ ಭಂಗಿಯ ಸ್ಥಿತಿಯಲ್ಲಿರುವುದು ಮಾತ್ರ ನಮ್ಮ ಗುರಿಯಾಗಿರದೆ, ನಮ್ಮಲ್ಲಿ ಅನಂತತೆಯನ್ನು ಅನುಭವಿಸಬೇಕೆಂಬ ಗುರಿಯಿಂದ ಆಸನಗಳನ್ನು ಮಾಡಬೇಕು. ಯೋಗಾಸನಗಳನ್ನು ಮಾಡುವಾಗ ಇದು ಬಲು ಮುಖ್ಯ.
ಯೋಗದ ಉದ್ದೇಶ ನಮ್ಮನ್ನು ಉತ್ತಮವಾದ ದೇಹದ ಸ್ಥಿತಿಯಲ್ಲಿ ಇಟ್ಟುಕೊಳ್ಳುವುದಲ್ಲದೆ, ಒಳ್ಳೆಯ ಆಕಾರವನ್ನು ಹೊಂದುವುದಲ್ಲದೆ, ಕಾಲಾತೀತವಾದ ಅನಂತತೆಯನ್ನು ಅನುಭವಿಸುವುದೂ ಆಗಿದೆ. ಅಭ್ಯಾಸವನ್ನು ಮುಂದುವರಿಸುತ್ತಿದ್ದ ಹಾಗೆಯೇ ಇದರ ಅನುಭವ ನಮಗೆ ಆಗತೊಡಗುತ್ತದೆ. ಯೋಗದ ಮತ್ತೊಂದು ಲಕ್ಷಣನಿರೂಪಣೆ ಎಂದರೆ, ದೃಶ್ಯದಿಂದ ದ್ರಷ್ಟುವಿನೆಡೆಗೆ ಮರಳಿ ಬರುವುದು.
ಹೊರಗಿನಿಂದ ನಿಧಾನವಾಗಿ ಗಮನವನ್ನು ನಮ್ಮ ಆಂತರ್ಯದತ್ತ ತೆಗೆದುಕೊಂಡು ಹೋಗುವುದು. ಪರಿಸರದಿಂದ ಗಮನವನ್ನು ದೇಹದ ಮೇಲೆ ತರುವುದು. ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ, ದೇಹವನ್ನೂ ದೃಶ್ಯವನ್ನಾಗಿ ನೋಡುವುದು ಮತ್ತು ಗಮನವನ್ನು ಮನಸ್ಸಿನ ಕಡೆಗೆ ತಿರುಗಿಸುವುದು. ಮನಸ್ಸಿನಲ್ಲಿ ಏಳುತ್ತಿರುವ ಆಲೋಚನೆಗಳನ್ನು ಗಮನಿಸಿದಾಗ, ಆಲೋಚನೆಗಳು, ಮನಸ್ಸೂ ದೃಶ್ಯವಾಗಿಬಿಡುತ್ತದೆ. ಮತ್ತಷ್ಟು ಆಳವಾಗಿ ಹೊಕ್ಕಿ. ದೃಶ್ಯದಿಂದ ದ್ರಷ್ಟುವಿನಿಡೆಗೆ, ಎಲ್ಲವನ್ನೂ ಕಾಣುತ್ತಿರುವ ದ್ರಷ್ಟುವಿನೆಡೆಗೆ ಪಯಣಿಸುವುದೇ ಯೋಗ.

ನೀವು ಸಂತೋಷವನ್ನು, ಆನಂದವನ್ನು, ಉನ್ಮಾದತೆಯನ್ನು ಜೀವನದಲ್ಲಿ ಅನುಭವಿಸಿದಾಗ, ತಿಳಿದೊ ಅಥವಾ ತಿಳಿದೆಯೊ ನೀವು ದ್ರಷ್ಟುವಿನ ಸ್ವಭಾವದಲ್ಲಿ ಹೊಕ್ಕುತ್ತಿರುವಿರಿ. ಇಲ್ಲವಾದರೆ ಇತರ ಸಮಯಗಳಲ್ಲಿ ನೀವು ಮನಸ್ಸಿನ ವಿವಿಧ ಚಟುವಟಿಕೆಗಳಲ್ಲಿ ಕಳೆದುಹೋಗುತ್ತೀರಿ. ಮನಸ್ಸಿನ ವಿವಿಧ ಚಟುವಟಿಕೆಗಳು ಯಾವುದು? ಮನಸ್ಸಿಗೆ ಐದು ಪ್ರವೃತ್ತಿಗಳಿವೆ. ಕೆಲವು ಸಮಸ್ಯೆಗಳು ಸಮಸ್ಯೆಯನ್ನು ತರುತ್ತವೆ, ಕೆಲವು ಸಮಸ್ಯೆಗಳನ್ನು ತರುವುದಿಲ್ಲ. ಅವುಗಳು:
1) ಪ್ರಮಾಣ : ಮನಸ್ಸು ಪ್ರಮಾಣವನ್ನು ಹುಡುಕುವುದರಲ್ಲೇ ನಿರತವಾಗಿರುತ್ತದೆ.
2) ವಿಪರ್ಯಯ : ಎಂದರೆ ತಪ್ಪಾದ ತಿಳಿವಳಿಕೆ.
3) ವಿಕಲ್ಪ : ಸತ್ಯಕ್ಕೆ ದೂರವಾದ, ವಾಸ್ತವವಾಗಿರದ ಕಾಲ್ಪನಿಕ ಮನೋಭಾವನೆಯನ್ನು ಹೊಂದಿರುವುದು.
4) ನಿದ್ದೆ
5) ಸ್ಮೃತಿ : ನೆನಪುಗಳಲ್ಲಿಯೇ ಜೀವಿಸುವುದು.

ಈ ಐದು ವೃತ್ತಿಗಳು ಮಾನವರ ಸಾಮರ್ಥ್ಯವನ್ನು ಕುಗ್ಗಿಸಿಬಿಡುತ್ತವೆ. ಅವುಗಳು ಇರುತ್ತವೆ, ಆದರೆ ಅವುಗಳ ಮೇಲೆ ನಿಯಂತ್ರಣವನ್ನು ಹೊಂದುವುದೇ ಯೋಗ. ಅವುಗಳು ಕುದುರೆಗಳಂತೆ. ಕುದುರೆಗಳ ಲಗಾಮು ನಿಮ್ಮ ಕೈಯಲ್ಲಿದ್ದರೆ, ಆಗ ಅವುಗಳಿಗೆ ನೀವು ಸರಿಯಾದ ದಿಕ್ಕನ್ನು ತೋರಿಸಬಹುದು. ಆದರೆ ನೀವು ಕುದುರೆಯ ಅಡಿಯಾಳಾಗಿಬಿಟ್ಟರೆ, ಆಗ ಅದರ ಮನಸ್ಸಿಗೆ ತೋಚಿದಂತೆ ನಿಮ್ಮನ್ನು ಎಳೆದೊಯ್ಯುತ್ತದೆ. ಆದ್ದರಿಂದ, ಯೋಗಃ ಚಿತ್ತವೃತ್ತಿ ನಿರೋಧಃ ಎಂದರು ಪತಂಜಲಿಯವರು.

ಯೋಗ ಎಂದರೆ ಈ ಐದು ಮನಸ್ಸಿನ ವೃತ್ತಿಗಳನ್ನು ನಿರೋಧಿಸುವುದು. ಒಂದು ಆಸನವನ್ನು ಮಾಡಿದಾಗ, ಆಸನದ ಗುರಿಯು ನಿಮ್ಮನ್ನು ಆ ಭಂಗಿಯಲ್ಲಿ ಸುಖವಾಗಿ ಇಡುವುದು, ನಂತರ ವಿಸ್ತಾರದ ಅನುಭವವನ್ನು ನಿಮಗೆ ತಂದುಕೊಡುವುದು. ಏನೋ ಒಂದನ್ನು ಅನುಭವಿಸಲು ಹಾತೊರೆಯುವುದಲ್ಲ. ಬಿಟ್ಟುಬಿಡುವುದರಿಂದ, ಏನನ್ನೂ ಮಾಡದಿರುವುದರಿಂದ ಅನುಭವಿಸುವುದು. ಆದ್ದರಿಂದ, ಯೋಗದ ಮೊದಲನೆಯ ಹೆಜ್ಜೆಯೆಂದರೆ ಬಿಟ್ಟುಬಿಡುವುದು, ವಿಶ್ರಮಿಸುವುದು. ಯೋಗದ ಕೊನೆಯ ಹಂತದಲ್ಲೂ ಎಲ್ಲವನ್ನೂ ಬಿಟ್ಟು ವಿಶ್ರಮಿಸಬೇಕು.
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications