ದೇಹವನ್ನು ಗೌರವಿಸುವುದೇ ನಿಜವಾದ ಯೋಗ
(ಸಂದರ್ಶನದ ಮುಂದುವರಿದ ಭಾಗ)
ಪ್ರಶ್ನೆ : ಧ್ಯಾನಕ್ಕೂ ಯೋಗಕ್ಕೂ ಏನು ವ್ಯತ್ಯಾಸ?
ಕಮಲೇಶ್ ಬರ್ವಾಲ್ : ಯೋಗ ಅಂದರೆ ದೇಹ, ಮನಸ್ಸು ಮತ್ತು ಆತ್ಮದ ಸಂಯೋಗ. ಈ ಸಂಯೋಗ ಹೊಂದಲು ಅನೇಕ ಮಾರ್ಗಗಳಿವೆ. ಧ್ಯಾನ ಯೋಗಾಭ್ಯಾಸದ ಅವಿಭಾಜ್ಯ ಅಂಗ. ಇಂಥ ಪ್ರಶ್ನೆ ಉದ್ಭವವಾಗುವುದು ಯೋಗವನ್ನು ಯೋಗಾಸನದ ಜೊತೆ ತಳಕುಹಾಕಲು ಯತ್ನಿಸಿದಾಗ.
ಯೋಗ ಅಂದರೆ ಯಾಗಾಸನ ಮಾತ್ರವಲ್ಲ, ಅದು ದೇಹ, ಮನಸ್ಸು ಮತ್ತು ಆತ್ಮದ ಸಂಯೋಗ ಎಂದು ನಾವು ಅರ್ಥ ಮಾಡಿಕೊಳ್ಳಲು ಸಾಧ್ಯವಾದಾಗ, ನಮ್ಮ ಯೋಚನೆ, ಮಾತು ಮತ್ತು ಕೃತಿಯಲ್ಲಿ ಸಾಮಸರ್ಯವನ್ನು ಯೋಗ ತರುತ್ತದೆ. ಇಂದಿನ ಜಗತ್ತಿನಲ್ಲಿ ಯೋಗ ಅಂದರೆ ಯೋಗಾಸನ ಎಂಬಂತಾಗಿದೆ. ಆದರೆ, ಯೋಗ ತರಬೇತಿಯ ಆತ್ಮವಿರುವುದೇ ಮನಸ್ಸನ್ನು ಸಮತೋಲನದಲ್ಲಿ ಇಟ್ಟುಕೊಳ್ಳುವುದರಲ್ಲಿ.

ಆಂತರಿಕ ಅನುಭವ ಮತ್ತು ಧ್ಯಾನ, ಯೋಗಾಭ್ಯಾಸದ ಶ್ರೇಷ್ಠತೆಯ ಸಂಕೇತ ಅಂತ ಗುರುದೇವ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರು ಯಾವಾಗಲೂ ಪ್ರತಿಪಾದಿಸುತ್ತಿರುತ್ತಾರೆ. ಅಲೌಕಿಕ ಪ್ರಜ್ಞೆಯ ಗೂಡಾಗಿರುವ ದೇಹವನ್ನು ಗೌರವಿಸುವುದೇ ನಿಜವಾದ ಯೋಗ. ಆದರೆ, ಯೋಗದಲ್ಲಿ ಮನಸ್ಸಿನ ಸೌಖ್ಯ ಮತ್ತು ಮಾನವನ ಅಸ್ತಿತ್ವದ ಮೇಲೆ ಹೆಚ್ಚಿನ ಒತ್ತು ನೀಡಲಾಗುತ್ತದೆ.
ಪ್ರಶ್ನೆ : ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನ ಆಚರಿಸುತ್ತಿರುವುದನ್ನು ಕೆಲ ಧಾರ್ಮಿಕ ಸಂಘಟನೆಗಳು ಪ್ರತಿರೋಧಿಸುತ್ತಿವೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು? ಯೋಗ ಧಾರ್ಮಿಕವಾದದ್ದೆ?
ಕಮಲೇಶ್ ಬರ್ವಾಲ್ : ಜ್ಞಾನ ಯಾರ ಸ್ವತ್ತೂ ಅಲ್ಲ, ಅದು ವಿಶ್ವಕ್ಕೆ ಸೇರಿದ್ದು. ಸಂಕುಚಿತ ದೃಷ್ಟಿಕೋನ ಮತ್ತು ಕ್ಷುಲ್ಲಕ ಮನಸ್ಸಿನ ನಾವು ಎಲ್ಲವನ್ನೂ ಧರ್ಮದೊಂದಿಗೆ ತಾಳೆಹಾಕಲು ಪ್ರಯತ್ನಿಸುತ್ತೇವೆ. ಯೋಗ ಹುಟ್ಟಿದ್ದು ಭಾರತದಲ್ಲಿ ಮತ್ತು ಪ್ರಾಚೀನ ಹಿಂದೂ ಜ್ಞಾನಿಗಳು ಯೋಗದ ಹರಿಕಾರರು. ಯೋಗವೆನ್ನುವುದು ಆಂತರಿಕ ವಿಜ್ಞಾನ ಮತ್ತು ಸ್ವಾಸ್ಥ್ಯ ಪ್ರತಿಪಾದಿಸುವ ಒಂದು ಕಲೆ. ಹಲವಾರು ವರ್ಷಗಳ ಕಾಲ ಯೋಗಿಗಳು ಸ್ವಂತ ಸಂಶೋಧನೆ ಮತ್ತು ಅಧ್ಯಯನ ಮಾಡಿದ್ದರ ಫಲವೇ ಯೋಗ.
ಯೋಗ ಇಂದು ಇಡೀ ಮನುಕುಲದ ಲಾಭಕ್ಕಾಗಿ ಲಭ್ಯವಿದೆ. ಯೋಗವನ್ನು ಧಾರ್ಮಿಕ ಎಂದು ಹೇಳಿ ಕೆಲ ವರ್ಗದವರು ಲಾಭ ಪಡೆಯದಂತೆ ನೋಡಿಕೊಳ್ಳುವುದು, ನಮ್ಮ ದೇಶ ಅಭಿವೃದ್ಧಿಪಡಿಸದ ತಂತ್ರಜ್ಞಾನ ಮತ್ತು ವಿಜ್ಞಾನವನ್ನು ಬಳಸಬಾರದು ಎಂದು ಹೇಳಿದಂತೆ. ಯೋಗ ಮನುಕುಲಕ್ಕೆ ಸೇರಿದ್ದು. ಚೈನೀಸ್ ಆಹಾರ ತಿಂದರೆ ನಾವು ಚೀನಾದವರು ಹೇಗೆ ಆಗುವುದಿಲ್ಲವೋ, ಯೋಗ ಮಾಡುವುದರಿಂದ ನಮ್ಮ ನಂಬಿಕೆಯಿಂದ ನಾವು ದೂರವಾಗುವುದಿಲ್ಲ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ











Click it and Unblock the Notifications