ಒಂದೆರಡ್ಮೂರು ಕಥೆಗಳು; ನನ್ನದು ನಿಮ್ಮದು ಮತ್ತ್ಯಾರದ್ದೋ..!
ಕಥೆ ನಂ.3
ಜಯಬಾಧುರಿ ನನ್ನ favourite. ಜೀವನದಲ್ಲಿ ಇನ್ನೇನಿಲ್ಲದಿದ್ದರೂ ಅವಳ ಗಂಡನಷ್ಟು ಎತ್ತರವಾಗಿರುವ ಗಂಡ ಸಿಕ್ಕಲಿ ಅಂತ ನನಗೊಂದು ಆಸೆಯಿತ್ತು. ಆ ಜಾದು ನಡೆದೇಬಿಟ್ಟಿತು ಗೊತ್ತಾ. ನನ್ನವರೂ ಆರಡಿ ಎತ್ತರ. ಹಾಂ. . . ದುಡ್ಡಿನ ವಿಷಯದಲ್ಲಿ ಮಾತ್ರ ಅಡಿ ಅಳತೆಯಲ್ಲ ಇಂಚು ಅಷ್ಟೆ. ಏನೇ ಆದ್ರೂ ಹನಿಮೂನ್ಗೆ ಹೋಗಬೇಕಲ್ಲ. ಅದ್ಯಾವುದೋ ಸಮುದ್ರ ತೀರಕ್ಕೆ ಹೋಗಿದ್ದ್ವಿ. ನನ್ನ ಹುಡುಗ ಕೈಭರ್ತಿ ಮುರಿದ ಶಂಖ, ಕಪ್ಪೆಚಿಪ್ಪು ಎಲ್ಲ ತುಂಬಿಕೊಂಡು ನನ್ನ ಕೈಗೆ ಸುರಿಯುತ್ತಾ “ಇವನೆಲ್ಲಾ ನಾನು ನಿನಗೆ ಕೊಡುತ್ತಿರುವ ಮುತ್ತು ಅಂತ ತಿಳ್ದ್ಕೋ” ಅಂದ. “ನಿನ್ನ ಮುಖಕ್ಕೆ ಮುತ್ತು ಈ ಜನ್ಮದಲ್ಲಿ ಆಗೋಲ್ಲಾ” ಅಂತ ಅನ್ನೋಕ್ಕೆ ನನ್ನ harmones ಬಿಡಲಿಲ್ಲ ಬದಲಿಗೆ “ಲಂಬೂ, ಐ ಲವ್ ಯೂ ಕಣೋ” ಅಂತ ಅವನ ಕಿವಿಯಲ್ಲಿ ಉಲಿದಿದ್ದೆ.
ನಾಳೆ ನಮ್ಮ ಮದುವೆಯ ಇಪ್ಪತ್ತೈದನೇ ವಾರ್ಷಿಕೋತ್ಸವ. ನೆನ್ನೆ ಮಗನ ಐ.ಐ.ಟಿ. ಅಡ್ಮಿಷನ್ನಾಯ್ತು. ಈ ರಾತ್ರಿ ಅಮೆರಿಕೆಯಲ್ಲಿ ಡಾಕ್ಟರ್ ಆಗಿರೋ ನನ್ನ ಮಗಳು ಬರ್ತಾಳೆ. ಸಡಗರದಿಂದ ಓಡಾಡ್ತಿದ್ದೆ. “ಮೇಡಂ ಬಾಸ್ ಕರೀತಿದ್ದಾರೆ” ಅಂದ ಡ್ರೈವರ್. ನನ್ನನ್ನು ಕಾರಿನಲ್ಲಿ ಕೂರಿಸಿಕೊಂಡು ಇವರು ಮಾತೇ ಆಡದೆ ಎಲ್ಲಿಗೋ ಕರೆದುಕೊಂಡು ಹೋಗುತ್ತಿದ್ದರು. ನನಗೆ ಹಿಂದಿ ಸಿನೆಮಾಗಳ ಎಷ್ಟೋ scene ಗಳು ಹಾಡುಗಳು ನೆನಪಾಗುತಿತ್ತು! ಒಂದರ್ಧ ಮುಕ್ಕಾಲು ಘಂಟೆ ಪ್ರಯಾಣದ ನಂತರ ಕಾರು ನಿಂತಿತು.
ಯಜಮಾನರು ಕಾರಿನಿಂದಿಳಿದು ನನಗೂ ಇಳಿಯಲು ಹೇಳಿದರು. ಜೊತೆ ಜೊತೆಯಲ್ಲಿ ಒಂದಷ್ಟು ದೂರ ನಡೆದೆವು. ಅಲ್ಲೊಂದು ಕಾಲುವೆ.. ಸುತ್ತಲೂ ಹಸಿರೋ ಹಸಿರು. ಎಲ್ಲಿಂದಲೋ ಕಾಡು ಜಾಜಿಯ ಘಮ ಬೇರೆ ಸೇರಿಕೊಂಡಿತ್ತು. ಪತಿ ಮಹಾಶಯರು ಕೋಟಿನ ಜೇಬಿನಿಂದ ಗಂಟೊಂದ ತೆಗೆದು ಬಿಚ್ಚಿ ತಮ್ಮ ಕೈಭರ್ತಿ ತುಂಬಿಸಿಕೊಂಡು ಹನಿಮೂನ್ ದಾಟಿಯಲ್ಲೇ ನನ್ನ ಕೈಗೆ ಸುರಿಯುತ್ತಾ “ಈ ಮುತ್ತುಗಳೆಲ್ಲ ಬಾಲ ಮುರಿದ ಶಂಖ, ಅಂಚು ಒಡೆದ ಕಪ್ಪ ಚಿಪ್ಪುಗಳೇ ಆಗಿರಬೇಕಿತ್ತು” ಅಂದರು.
ಆ ಕ್ಷಣ ನನ್ನೊಳಗಿನ ಎಲ್ಲಾ ಮುರುಕುಗಳು ನನ್ನನ್ನು ಚುಚ್ಚುತ್ತಿರುವಂತನ್ನಿಸಿತು. ಇದೇನು ಮಾಡಿಕೊಂಡಿದ್ದೆ?! ಮನೆ ಕಟ್ಟುತ್ತಿದ್ದೆ. ಸಂಸಾರವನ್ನು ಹಸನು ಮಾಡಿತ್ತಿದ್ದೆ. ನನ್ನ ಬದುಕಿನ ಶೈಲಿಯೇ ಒಂದು empire ಅನಿಸುವಂತೆ ಆಳಿದ್ದೆ, ಬಾಳಿದ್ದೆ. ನಾನು ಎಲ್ಲರನ್ನೂ ಪ್ರೀತಿಸುತ್ತಿದ್ದೆ. ಇಲ್ಲ, ಹಾಗಂದುಕೊಂಡಿದ್ದೆ ಅಷ್ಟೆ. material ಗಳ ಮಧ್ಯೆ ಮನಸ್ಸಿನ ಸಾಥ್ ಬಿಟ್ಟೇಹೋಗಿತ್ತು ನನಗರಿವಿಲ್ಲದಂತೆ. ನೋವು, ನಲಿವು, ಮಾತು, ಹಂಚಿಕೆ ಎಲ್ಲವೂ ರೂಢಿಯಾಗಿತ್ತೇ ಹೊರತು ನನ್ನ ಪ್ರೀತಿಯ ಬಸಿರಿನಿಂದ ಹುಟ್ಟಿರಲಿಲ್ಲ! ತಪ್ಪಾಗಿತ್ತು. ಥ್ಯಾಂಕ್ಸ್ ದೇವರೇ, ತಪ್ಪಿನ ಅರಿವೂ ಆಗಿತ್ತು. ಮತ್ತೊಮ್ಮೆ ಯಜಮಾನರ ಬಳಿ ಹೋಗಿ “ಲಂಬೂ, ಐ ಲವ್ ಯೂ ಕಣೋ” ಅಂತ ಉಲಿದೆ. ಯಾವ ಪೋಲಿಸ್ ಸ್ಟೇಷನ್ ಮೆಟ್ಟಲು ಹತ್ತದೆ ನನ್ನ ಕಳೆದುಹೋದ ಆಸ್ತಿಯೆಲ್ಲಾ ಸಿಕ್ಕಿಬಿಟ್ಟಿತ್ತು!
ಹೇ, ಆಕಳಿಸುತ್ತಾ ಕಣ್ಣುಜ್ಜಿಕೊಳ್ಳುತ್ತಾ ಪೆದ್ದ್ಪೆದ್ದು ಮುಖ ಮಾಡಿಕೊಂಡು ಮುದ್ದಾಗಿ ನೀವೆಲ್ಲಿಗೆ ಹೊರಟಿರಿ? ನಿಮ್ಮ ಮಾತಿನ ಧಾರೆಗೆ, ಮೌನದ ಪಾತಕ್ಕೆ ನನ್ನ ಮನಸ್ಸಿನ ಪ್ರಪಾತ ಇಟ್ಟುಕೊಂಡು ನಾನು ಇಲ್ಲೇ ಇದ್ದೇನಲ್ಲ. . . .ನೀವೆಲ್ಲಿ ಹೊರಟಿರಿ?!
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications