ವಯ್ಯಾರಿ ಊರ್ವಶಿಯ ಪ್ರೇಮ ಪ್ರಸಂಗಗಳು

ಪ್ರೇಮಕ್ಕೇಂತ ಒಂದು ದಿನ ಬೇಕಾಗಿಲ್ಲ. ಆದರೆ ವ್ಯಕ್ತಪಡಿಸುವುದಕ್ಕೆ ಒಂದು ಗಳಿಗೆನಾದರೂ ಬೇಕಲ್ಲವಾ. ಅದಕ್ಕಾಗಿ ಪ್ರೇಮಿಗಳ ದಿನದಂದು ನಾವು ಮನಸ್ಸಿನ ಮಾತನ್ನು ಹೇಳೇ ತೀರೋಣ ಎನ್ನುವ ಜನರು ಸಿಕ್ಕಾಪಟ್ಟೆ ಸಿಕ್ತಾರೆ. ಮೊನ್ನೆ ಅಂಥ ಅನೇಕರನ್ನು ಭೇಟಿಮಾಡಿ ಚರ್ಚೆ ಮಾಡಿದೆ. ಆದರೆ ಏನೂ ಗಿಟ್ಟಲಿಲ್ಲ. ಅನ್ಯಮಾರ್ಗವಿಲ್ಲದೆ ಪುರಾಣಗಳ ಮೊರೆಹೊಕ್ಕೆ. ಪುರಾಣ ಪುಣ್ಯಕಾಲದ ವಿಷಯಕ್ಕೆ ಬಂದಾಗ ನಮಗೆ ಎದುರಾಗುವ ಛಾಲೆಂಜೇ ಬೇರೆ ಟೈಪ್.
ಅಪ್ಸರೆ ಎಂದರೆ ಯಾರು? ಹುಡುಗರ ಕನವರಿಕೆಗಳಲ್ಲಿ ಅತಿಕ್ರಮಪ್ರವೇಶ ಮಾಡುವ ಸಿನಿಮಾ ತಾರೆಯರು ಎಂದು ನೀವು ಪರಿಭಾವಿಸಿಕೊಳ್ಳಬಹುದು. (ಉದಾಹರಣೆಗಳು ಬೇಕಾ:-) ಬೇಡ ಬಿಡಿ. ಭಾರತೀಯ ಪುರಾಣಗಳಲ್ಲಿ ಮಿಂಚಿದರೂ ಮರೆಯಾಗದ ಅಪ್ಸರೆಯರೆಂದರೆ ಇಂದ್ರನ ಆಜ್ಞೆಯಂತೆ ದೇಹ ಹಾಗೂ ಮನಸ್ಸು ಕೊಟ್ಟು ಕೆಲಸವನ್ನು ಪೂರ್ಣ ಮಾಡುತ್ತಿದ್ದ ಹೆಣ್ಣುಮಕ್ಕಳು ಎಂದು ತಿಳಿಯಿರಿ.
ಯಾವುದೇ ಪುರಾಣದ ಕಥೆಗಳನ್ನು ಓದಿದರೂ ನಮಗೆ ಕಾಣ ಸಿಗುವುದು ಈ ಚಂದುಳ್ಳಿ ಚಲುವೆಯರೇ. ಇವರಿಗೆ ದಾಡಿವಾಲ ಋಷಿಗಳು, ಸುರಸುಂದರಾಂಗ ಚಕ್ರವರ್ತಿಗಳು ಎಲ್ಲರೂ ಓಕೆ...! ಇವರ ಗಂಡಂದಿರು ಗಂಧರ್ವರು ಅನ್ನುವ ಮಾತಿದೆ. ಆದರೆ ಅವ್ಯಾವುದು ಈಗ ನಾನು ಹೇಳ ಹೊರಟಿರುವ ವಿಷಯಕ್ಕೆ ಕನೆಕ್ಟ್ ಆಗುವುದಿಲ್ಲ! ಚೆಲುವೆಯರ ಜೀವನ ಇರೋದು ದೇವತೆಗಳ ಶ್ರೇಯಸ್ಸಿಗೆ ಮಾತ್ರ, ಅಕಸ್ಮಾತ್ ನಮ್ಮಂತಹ ಹುಲು ಮಾನವರು ಬೇರೆ ಏನೇನೋ ಅಂದುಕೊಂಡರೂ ಪರವಾಗಿಲ್ಲ, ಅವರಿಗೆ ದೇವಲೋಕದ ಏಳಿಗೆಯೇ ಮುಖ್ಯ.
ಅಪ್ಸರೆಯರ ಕ್ಯಾಟ್ ವಾಕಿನಲ್ಲಿ ಎದ್ದು ಕಾಣುವ ಹುಡುಗಿ ಊರ್ವಶಿ. ಈಕೆ ಎಲ್ಲರಿಗಿಂತ ಅಪಾರವಾದ ಸೌಂದರ್ಯವತಿ ಎಂದು ಪುರಾಣ ಪುರುಷರು ಅವಕಾಶ ಸಿಕ್ಕಾಗಲೆಲ್ಲ ಸಾರಿ ಸಾರಿ ಹೇಳಿದ್ದಾರೆ. ಈಪಾಟಿ ಚೆಲುವೆಯಲ್ಲಿ ರೂಪದ ಜೊತೆ ಮತ್ತೊಂದು ಸಂಗತಿಯು ತುಂಬಾ ವಿಶೇಷವಾಗಿದೆ. ಅದು ಪ್ರೀತಿ ಮಾಡುವುದು. ರಂಭೆ, ಮೇನಕೆ, ತಿಲೋತ್ತಮೆ ಪ್ರೀತಿಯನ್ನು ಡ್ಯುಟಿಯಂತೆ ಮಾಡಿ ಬಂದರೆ ಈ ಊರ್ವಶಿ ಮನುಷ್ಯರಂತೆ ಪ್ರೀತಿಯನ್ನು ಪ್ರೀತಿಯಿಂದ ಮಾಡುತ್ತಿದ್ದಳು. ಮೈ ಕೊಟ್ಟರು ಅದರಲ್ಲಿ ಮನಸ್ಸನ್ನು ಹದವಾಗಿ ಬೆರೆಸಿರುತ್ತಿದ್ದಳು. ತನ್ನ ಕರ್ತವ್ಯ ಮುಗಿದರೆ ಸಾಕೆಂದು ಪ್ರೀತಿಸಿದವನನ್ನು ಕೊಡವಿ ಎದ್ದು ಹೋಗ್ತಾ ಇರಲಿಲ್ಲ. ಈ ಎಲ್ಲ ವಿಶೇಷ ಕಾರಣಗಳಿಂದ ಊರ್ವಶಿ ದೇವೇಂದ್ರನ ಆಸ್ಥಾನದಲ್ಲಿಯು ಸಹ ವಿಶೇಷ ಸ್ಥಾನ ಪಡೆದಿದ್ದಳು.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications