ನಮ್ಮ ಜ್ಞಾನದಾಹ ತೀರಿಸಿ - ಪ್ರಕಾಶ್ ರಾಜಾರಾವ್
[59ನೇ ಕನ್ನಡ ರಾಜ್ಯೋತ್ಸವ ನಿಮಿತ್ತ 'ಒನ್ಇಂಡಿಯಾ ಡಾಟ್ ಕಾಂ' ನಡೆಸಿದ ಈಮೇಲ್ ಸಮೀಕ್ಷೆಯಲ್ಲಿ ತಮ್ಮ ಅಭಿಪ್ರಾಯ ಮಂಡಿಸುತ್ತಿರುವವರು ಪ್ರಕಾಶ್ ರಾಜಾರಾವ್, ಆಕ್ಲೆಂಡ್, ನ್ಯೂಜಿಲೆಂಡ್. ಸಮೀಕ್ಷೆಯ ವಿಷಯ : ಕನ್ನಡ ಅಂತರ್ ಜಾಲ ತಾಣಗಳಿಂದ ನಾನೇನು ಬಯಸುತ್ತೇನೆ.]
ನಾನು ಕರ್ನಾಟಕ ಬಿಟ್ಟು ನ್ಯೂಜಿಲೆಂಡ್ ಸೇರಿದ್ದು ಹದಿಮೂರು ವರ್ಷಗಳ ಹಿಂದೆ. ಕನ್ನಡ ವಾರ್ತಾ ಪತ್ರಿಕೆಗಳನ್ನೋದುವ ಹುಚ್ಚು ಶಾಲಾ ದಿನಗಳಿಂದಲೇ ಇತ್ತು. ಭಾನುವಾರ ಬಂತೆಂದರೆ "ಕನ್ನಡ ಪ್ರಭ", "ಪ್ರಜಾವಾಣಿ", "ಉದಯವಾಣಿ" ಮುಂತಾದ ದಿನಪತ್ರಿಕೆಗಳನ್ನು ಓದುವುದೆಂದರೆ ಸಂತೋಷ. ನ್ಯೂಜಿಲೆಂಡಿಗೆ ಬಂದ ಹೊಸತರಲ್ಲಿ ಏನನ್ನೋ ಕಳೆದುಕೊಂಡ ಹಾಗೆ ಭಾಸವಾಗುತ್ತಿತ್ತು.
ಇಲ್ಲಿ ನಮ್ಮ ಕನ್ನಡಕೂಟದ ಗೃಂಥಾಲಯದಲ್ಲಿ ಅನೇಕ ಪುಸ್ತಕ, ನಿಯತಕಾಲಿಕಗಳು ಇದ್ದರೂ ದಿನ ಪತ್ರಿಕೆಗಳಿರಲಿಲ್ಲ. ಆಗ ಅಂತರ್ಜಾಲದಲ್ಲಿ ಸಿಗುತ್ತಿದ್ದ ಕನ್ನಡ ಪತ್ರಿಕೆಗಳು ನನ್ನನ್ನು ಕರ್ನಾಟಕದೊಡನೆ ಮತ್ತೆ ಬೆಸುಗೆ ಹಾಕಿದವು. ಆಗ ಮತ್ತು ಈಗ, ನಾನು ಕಂಪ್ಯೂಟರ್ ತೆಗೆದರೆ ಮೊದಲು ಓದುವುದೇ ಕನ್ನಡ ವಾರ್ತೆಗಳು. ಬಹುಶಃ ಇಲ್ಲಿ ದಿನವಿಡೀ ಎಲ್ಲವೂ ಇಂಗ್ಲಿಷ್ ಮಯವಾಗಿರುವುದೇ ಕಾರಣ.

ಅಂದು ಹಾಗೂ ಇಂದು ನನ್ನ ಮೆಚ್ಚಿನ ತಾಣ "ದಟ್ಸ್ ಕನ್ನಡ.ಕಾಂ ". ಮೊದಲು ಪ್ರಕಟವಾಗುತ್ತಿದ್ದ ಶೈಲಿ ನನಗೆ ಬಹಳ ಇಷ್ಟವಾಗಿತ್ತು. ಅಂದಿನ ಹಲವಾರು ಅಂಕಣಗಳು ನನ್ನನ್ನು ಕಾಯುವಂತೆ ಮಾಡುತ್ತಿದ್ದವು. ಉದಾಹರಣೆಗೆ, ಶ್ರೀವತ್ಸ ಜೋಶಿಯವರ 'ವಿಚಿತ್ರಾನ್ನ'. ಎಂತಹ ಸುಂದರ, ಅರ್ಥಪೂರ್ಣವಾದ ಅಂಕಣ, ಒಂದೂ ಬಿಡದೆ ಪ್ರತೀವಾರ ಓದಿದೆ. ಈ ಅಂಕಣ ನನ್ನನ್ನು ಮತ್ತೆ ಕರ್ನಾಟಕ ವಾಪಸ್ ಕರೆದುಕೊಂಡು ಹೋಯಿತು ಎಂದರೆ ಅತಿಶಯೋಕ್ತಿಯಲ್ಲ.
ಕನ್ನಡ ಅಂತರ್ಜಾಲದಿಂದ ನಾನು ನಿರೀಕ್ಷಿಸುವುದು
1. ನನ್ನ ಕನ್ನಡ ಭಾಷಾ ಜ್ಞಾನವನ್ನು ವಿಸ್ತರಿಸುವುದು.
2. ಕರ್ನಾಟಕದ ಎಲ್ಲಾ ಸುದ್ದಿಗಳನ್ನು ಸ್ವಚ್ಛ, ಸುಂದರ ಕನ್ನಡದಲ್ಲಿ ಓದಲು ಸಾಧ್ಯವಾಗುವುದು.
3. ಕರ್ನಾಟಕದ ಆಚೆ ಇರುವ ಕನ್ನಡಿಗರಿಗೆ ಒಂದು ವೇದಿಕೆ ಕಲ್ಪಿಸುವುದು.
4. ಹೊರನಾಡು ಕನ್ನಡಿಗರು ತಮ್ಮ ಮಕ್ಕಳಿಗೆ ಕನ್ನಡ ಕಲಿಸಲು ಉಪಯುಕ್ತವಾಗುವುದು.
5. ನಾವು ಹೊರನಾಡು ಕನ್ನಡಿಗರು ಕನ್ನಡಕ್ಕಾಗಿ ಏನು ಮಾಡಬಹುದು ಎಂದು ತಿಳಿಸುವುದು.
6. ಸಾಧ್ಯವಾದಷ್ಟು ಹೊಸ ಅಂಕಣಗಳನ್ನು ದಯವಿಟ್ಟು ಪ್ರಾರಂಭಿಸಿ. ಮೊದಲಿನಂತೆ ನಾವು ಓದುಗರು ಕಾತುರದಿಂದ ಕಾಯುವಂತೆ ಮಾಡುವಂತಹ ಅಂಕಣಗಳನ್ನು ನಮ್ಮ ನೆಚ್ಚಿನ ಬರಹಗಾರರಿಂದ ಬರೆಸಿ.
ಶ್ರೀವತ್ಸ ಜೋಶಿ, ಅಣಕು ರಾಮನಾಥ್, ಸಹನಾ ವಿಜಯ್ ಕುಮಾರ್, ಶಕುಂತಲಾ ಐಯ್ಯರ್, ದಟ್ಸ್ ಕನ್ನಡ ಬಳಗದ ಪ್ರಸಾದ ನಾಯಿಕ, ಸ್ವಯಂ ನೀವು (ಎಸ್ಕೆ ಶಾಮ ಸುಂದರ), ನಮ್ಮ ಜ್ಞಾನದಾಹ ತೀರಿಸಿ. ಹೀಗೆ ಈ ಪಟ್ಟಿಯನ್ನು ಬೆಳೆಸಬಹುದು. ಆದರೆ ನನಗೆ ಇಷ್ಟು ಸಾಕು. ನನಗೆ ಇಷ್ಟವಾಗದ ವಿಷಯ ಎಂದರೆ ಅದೇಕೊ ನಮ್ಮ ಕನ್ನಡ ಅಂತರ್ಜಾಲ ಪತ್ರಿಕೆಗಳಲ್ಲಿ ಕರ್ನಾಟಕಕ್ಕಿಂತ ಹೊರಗಿನ ಸುದ್ದಿಗಳಿಗೆ ಹೆಚ್ಚು ಪ್ರಾಶಸ್ತ್ಯ ಸಿಗುತ್ತಿರುವುದು. ಇದು ಕೊಂಚ ಕಡಿಮೆಯಾದರೆ ಒಳ್ಳೆಯದು.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications