ಬೆಂಗಳೂರು ಇನ್ಫೋಸಿಸ್ ಕಚೇರಿಗೆ ಬೇಡವಾದ ಕನ್ನಡ

ಟೋಟಲ್ ಕನ್ನಡವನ್ನು ಗಾಲಿ ಕುರ್ಚಿಯಲ್ಲಿ ಕುಳ್ಳಿರಿಸಿಕೊಂಡು ಬದುಕಿಸುತ್ತಿರುವ ಕನ್ನಡಿಗನ ಹೆಸರು ಲಕ್ಷ್ಮೀಕಾಂತ್ ಅಂತ. ಎಷ್ಟೇ ಕಷ್ಟಪಟ್ಟರೂ ಅವರಿಗೆ ಪಾಪ ಲಾಸೇ ಲಾಭ. ಮೊನ್ನೆ ಇವರು ಮತ್ತೆ ಕೈ ಸುಟ್ಟುಕೊಂಡರು. ಮೊದಲೇ ಕಪ್ಪಗಿರುವ ಅವರ ಮುಖ ಮತ್ತಷ್ಟು ಕಪ್ಪಿಟ್ಟಿತ್ತು. ಬಾಲ್ಡಿ ಲಕ್ಷ್ಮಿಕಾಂತ್ ತಲೆ ಸದ್ಯದಲ್ಲೇ ಪೂರ್ತಿ ಬೋಳಾಗುವ ಲಕ್ಷಣಗಳು ಕಂಡವು.
ಈ ಮನುಷ್ಯ ಬೆಂಗಳೂರಿನಲ್ಲಿ ಭಾನುವಾರ ಮುಕ್ತಾಯವಾದ ನಾವಿಕ ಸಂಸ್ಥೆಯ ಅಮೆರಿಕನ್ನಡೋತ್ಸವದಲ್ಲಿ [ಗ್ಯಾಲರಿ ನೋಡಿರಿ] ಭಾಗಿಯಾಗಿದ್ದರು. ರವೀಂದ್ರ ಕಲಾಕ್ಷೇತ್ರದಲ್ಲಿ ತಮ್ಮ ಪದಾರ್ಥಗಳ ಪ್ರದರ್ಶನ ಮಾರಾಟ ಹಾಕಿದ್ದರು. ಯಾರಾದರೂ ಬಿಲ್ ಬರೆಸುತ್ತಾರೆ ಎಂದು ಬೆಳಗ್ಗೆಯಿಂದ ರಾತ್ರಿಯವರೆಗೂ ಬಿಡಾರದಲ್ಲೇ ಇದ್ದರು.
ಮಳಿಗೆಗೆ ದಿನ ಬಾಡಿಗೆ 25 ಸಾವಿರ ಕೇಳಿದ್ದರಂತೆ. ಆದರೆ, ಕನ್ನಡದ ಕೆಲಸವಲ್ಲವೇ? ದಯೆತೋರಿ 10 ಸಾವಿರ ರೂಪಾಯಿಗೆ ಅಡ್ಜೆಸ್ಟ್ ಆಗಿತ್ತು. ಶನಿವಾರ 2.500 ರೂಪಾಯಿ ವ್ಯಾಪಾರ ಮಾಡಿದ ಟೋಟಲ್ ಕನ್ನಡ 7,500 ಸಾವಿರ ರೂ. ನಷ್ಟ ಅನುಭವಿಸಿತು. ಉತ್ಸವ ಮುಗಿಯುವವರೆಗೂ ಕಾಯದೆ ಭಾನುವಾರ ಜಯಚಾಮರಾಜೇಂದ್ರ ರಸ್ತೆಯಿಂದ ನಾಪತ್ತೆ ಆಯಿತು.
ಶನಿವಾರ ಸಾಯಂಕಾಲ ಮಳಿಗೆಗೆ ಹೋಗಿ ಲಕ್ಷ್ಮೀಕಾಂತ್ ಅವರನ್ನು ಮಾತನಾಡಿಸಿದ್ದೆ. ಕಷ್ಟ ಸುಖ ವಿಚಾರಣೆ ಮಾತಷ್ಟೆ. ಕೆಲವು ಪ್ರಾಮಿನೆಂಟಾದ ಅನುಭವಗಳನ್ನು ಹೇಳಿಕೊಳ್ಳುತ್ತಿದ್ದ ಅವರು ಇನ್ ಫೊಸಿಸ್ ಬಗ್ಗೆ ವಿಷಯ ಪ್ರಸ್ತಾಪಿಸಿದರು. ಬೆಂಗಳೂರಿನ ಇನ್ಫಿ ಕಾರ್ಪೊರೇಟ್ ಕಚೇರಿಯಲ್ಲಿ ಟೋಟಲ್ ಕನ್ನಡ ಮಳಿಗೆಯನ್ನು ತೆರೆಯಬೇಕೆಂಬ ಹಂಬಲ ಅವರಿಗಿದೆ.
ಕಳೆದ ಒಂದು ವರ್ಷದಿಂದ ಇನ್ಫಿ ಕಚೇರಿ ಇಮೇಲ್ ವಿಳಾಸಕ್ಕೆ ಪತ್ರ ಬರೆದದ್ದೇ ಬಂತು ಭಾಗ್ಯ ಎಂದರು. ಅಲ್ಲಿ ಉತ್ತರ ಕೊಡುವವರೇ ಗತಿಯಿಲ್ಲ. ಇನ್ನು ಸುಧಾ ಮೂರ್ತಿ ಅವರನ್ನು ಸ್ವತಃ ಭೇಟಿ ಮಾಡಿ ನಿವೇದಿಸಿಕೊಳ್ಳಬೇಕೆಂಬ ಆಸೆಯೂ ಮರೀಚಿಕೆ ಆಗಿದೆ. ಸುಧಾ ಅವರ ಮನೆಗೆ ಹೋದರೆ ಸೆಕ್ಯುರಿಟಿ ಗಾರ್ಡ್ ಒಳಗೆ ಬಿಡುವುದಿಲ್ಲ. ವಿಸಿಟಿಂಗ್ ಕಾರ್ಡ್ ನೋಡುವ ಸೆಕ್ರೆಟರಿಗೆ ಇಂಥವರ ಅಪಾಯಿಂಟ್ ಮೆಂಟ್ ಇಂಪಾರ್ ಟೆಂಟ್ ಅನಿಸುವುದಿಲ್ಲ.
ಸದ್ಯ ಬೆಂಗಳೂರಿನ ಇನ್ಫಿ ಕಚೇರಿ ಆವರಣದಲ್ಲಿ ಪುಸ್ತಕ ಮಳಿಗೆಯೊಂದಿದೆ. ಇಂಗ್ಲಿಷ್ ಕೃತಿಗಳನ್ನು ಮಾತ್ರ ಬಿಕರಿ ಮಾಡುವ ಅಂಗಡಿಯ ಹೆಸರು Strand book stall. ಸರಿಸುಮಾರು 25 ಸಾವಿರ ಸಿಬ್ಬಂದಿ ಕೆಲಸ ಮಾಡುವ ಇನ್ಫಿ ಕ್ಯಾಂಪಸ್ ನಲ್ಲಿ 8-10 ಸಾವಿರ ಕನ್ನಡಿಗರು ಇರಬಹುದೆಂಬ ಅಂದಾಜಿದೆ.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications