ಬೆಂಗಳೂರು ಇನ್ಫೋಸಿಸ್ ಕಚೇರಿಗೆ ಬೇಡವಾದ ಕನ್ನಡ

ಟೋಟಲ್ ಕನ್ನಡವನ್ನು ಗಾಲಿ ಕುರ್ಚಿಯಲ್ಲಿ ಕುಳ್ಳಿರಿಸಿಕೊಂಡು ಬದುಕಿಸುತ್ತಿರುವ ಕನ್ನಡಿಗನ ಹೆಸರು ಲಕ್ಷ್ಮೀಕಾಂತ್ ಅಂತ. ಎಷ್ಟೇ ಕಷ್ಟಪಟ್ಟರೂ ಅವರಿಗೆ ಪಾಪ ಲಾಸೇ ಲಾಭ. ಮೊನ್ನೆ ಇವರು ಮತ್ತೆ ಕೈ ಸುಟ್ಟುಕೊಂಡರು. ಮೊದಲೇ ಕಪ್ಪಗಿರುವ ಅವರ ಮುಖ ಮತ್ತಷ್ಟು ಕಪ್ಪಿಟ್ಟಿತ್ತು. ಬಾಲ್ಡಿ ಲಕ್ಷ್ಮಿಕಾಂತ್ ತಲೆ ಸದ್ಯದಲ್ಲೇ ಪೂರ್ತಿ ಬೋಳಾಗುವ ಲಕ್ಷಣಗಳು ಕಂಡವು.
ಈ ಮನುಷ್ಯ ಬೆಂಗಳೂರಿನಲ್ಲಿ ಭಾನುವಾರ ಮುಕ್ತಾಯವಾದ ನಾವಿಕ ಸಂಸ್ಥೆಯ ಅಮೆರಿಕನ್ನಡೋತ್ಸವದಲ್ಲಿ [ಗ್ಯಾಲರಿ ನೋಡಿರಿ] ಭಾಗಿಯಾಗಿದ್ದರು. ರವೀಂದ್ರ ಕಲಾಕ್ಷೇತ್ರದಲ್ಲಿ ತಮ್ಮ ಪದಾರ್ಥಗಳ ಪ್ರದರ್ಶನ ಮಾರಾಟ ಹಾಕಿದ್ದರು. ಯಾರಾದರೂ ಬಿಲ್ ಬರೆಸುತ್ತಾರೆ ಎಂದು ಬೆಳಗ್ಗೆಯಿಂದ ರಾತ್ರಿಯವರೆಗೂ ಬಿಡಾರದಲ್ಲೇ ಇದ್ದರು.
ಮಳಿಗೆಗೆ ದಿನ ಬಾಡಿಗೆ 25 ಸಾವಿರ ಕೇಳಿದ್ದರಂತೆ. ಆದರೆ, ಕನ್ನಡದ ಕೆಲಸವಲ್ಲವೇ? ದಯೆತೋರಿ 10 ಸಾವಿರ ರೂಪಾಯಿಗೆ ಅಡ್ಜೆಸ್ಟ್ ಆಗಿತ್ತು. ಶನಿವಾರ 2.500 ರೂಪಾಯಿ ವ್ಯಾಪಾರ ಮಾಡಿದ ಟೋಟಲ್ ಕನ್ನಡ 7,500 ಸಾವಿರ ರೂ. ನಷ್ಟ ಅನುಭವಿಸಿತು. ಉತ್ಸವ ಮುಗಿಯುವವರೆಗೂ ಕಾಯದೆ ಭಾನುವಾರ ಜಯಚಾಮರಾಜೇಂದ್ರ ರಸ್ತೆಯಿಂದ ನಾಪತ್ತೆ ಆಯಿತು.
ಶನಿವಾರ ಸಾಯಂಕಾಲ ಮಳಿಗೆಗೆ ಹೋಗಿ ಲಕ್ಷ್ಮೀಕಾಂತ್ ಅವರನ್ನು ಮಾತನಾಡಿಸಿದ್ದೆ. ಕಷ್ಟ ಸುಖ ವಿಚಾರಣೆ ಮಾತಷ್ಟೆ. ಕೆಲವು ಪ್ರಾಮಿನೆಂಟಾದ ಅನುಭವಗಳನ್ನು ಹೇಳಿಕೊಳ್ಳುತ್ತಿದ್ದ ಅವರು ಇನ್ ಫೊಸಿಸ್ ಬಗ್ಗೆ ವಿಷಯ ಪ್ರಸ್ತಾಪಿಸಿದರು. ಬೆಂಗಳೂರಿನ ಇನ್ಫಿ ಕಾರ್ಪೊರೇಟ್ ಕಚೇರಿಯಲ್ಲಿ ಟೋಟಲ್ ಕನ್ನಡ ಮಳಿಗೆಯನ್ನು ತೆರೆಯಬೇಕೆಂಬ ಹಂಬಲ ಅವರಿಗಿದೆ.
ಕಳೆದ ಒಂದು ವರ್ಷದಿಂದ ಇನ್ಫಿ ಕಚೇರಿ ಇಮೇಲ್ ವಿಳಾಸಕ್ಕೆ ಪತ್ರ ಬರೆದದ್ದೇ ಬಂತು ಭಾಗ್ಯ ಎಂದರು. ಅಲ್ಲಿ ಉತ್ತರ ಕೊಡುವವರೇ ಗತಿಯಿಲ್ಲ. ಇನ್ನು ಸುಧಾ ಮೂರ್ತಿ ಅವರನ್ನು ಸ್ವತಃ ಭೇಟಿ ಮಾಡಿ ನಿವೇದಿಸಿಕೊಳ್ಳಬೇಕೆಂಬ ಆಸೆಯೂ ಮರೀಚಿಕೆ ಆಗಿದೆ. ಸುಧಾ ಅವರ ಮನೆಗೆ ಹೋದರೆ ಸೆಕ್ಯುರಿಟಿ ಗಾರ್ಡ್ ಒಳಗೆ ಬಿಡುವುದಿಲ್ಲ. ವಿಸಿಟಿಂಗ್ ಕಾರ್ಡ್ ನೋಡುವ ಸೆಕ್ರೆಟರಿಗೆ ಇಂಥವರ ಅಪಾಯಿಂಟ್ ಮೆಂಟ್ ಇಂಪಾರ್ ಟೆಂಟ್ ಅನಿಸುವುದಿಲ್ಲ.
ಸದ್ಯ ಬೆಂಗಳೂರಿನ ಇನ್ಫಿ ಕಚೇರಿ ಆವರಣದಲ್ಲಿ ಪುಸ್ತಕ ಮಳಿಗೆಯೊಂದಿದೆ. ಇಂಗ್ಲಿಷ್ ಕೃತಿಗಳನ್ನು ಮಾತ್ರ ಬಿಕರಿ ಮಾಡುವ ಅಂಗಡಿಯ ಹೆಸರು Strand book stall. ಸರಿಸುಮಾರು 25 ಸಾವಿರ ಸಿಬ್ಬಂದಿ ಕೆಲಸ ಮಾಡುವ ಇನ್ಫಿ ಕ್ಯಾಂಪಸ್ ನಲ್ಲಿ 8-10 ಸಾವಿರ ಕನ್ನಡಿಗರು ಇರಬಹುದೆಂಬ ಅಂದಾಜಿದೆ.
-
ಬೆಂಗಳೂರಿನ ಹೊಸೂರು ರಸ್ತೆಯ ದುಸ್ಥಿತಿ: ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಟ್ಯಾಗ್ ಮಾಡಿ ಕಿರಣ್ ಮಜುಂದಾರ್ ಶಾ ಆಕ್ರೋಶ -
Bengaluru Viral: ಬೆಂಗಳೂರಿನ ಲಾಲ್ಬಾಗ್ ನೋಡಿ ತಪ್ಪೊಪ್ಪಿಗೆ ಕೊಡಬೇಕು ಎಂದ ವಿದೇಶಿಗ, ವಿಡಿಯೋ ವೈರಲ್ -
RCB vs CSK: ಆರ್ಸಿಬಿ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಸಂದೇಶ: ಇಂದಿನ ಪಂದ್ಯಕ್ಕೂ ಮುನ್ನ ಇದು ಗಮನದಲ್ಲಿರಲಿ -
Gold and Silver Rate Today April 5: ಚಿನ್ನ - ಬೆಳ್ಳಿ ಪ್ರಿಯರಿಗೆ ಗುಡ್ನ್ಯೂಸ್, ಮುಂದಿನ ವಾರ ಹೇಗಿರಲಿದೆ ಬಂಗಾರದ ಬೆಲೆ -
Bengaluru Migration: ಅಸ್ಸಾಂನಿಂದ ಬೆಂಗಳೂರಿಗೆ ಬರುವವರ ಸಂಖ್ಯೆ ಕಡಿಮೆಯಾಗಿದೆ ಎಂದ ಸಂಸದ ತೇಜಸ್ವಿ ಸೂರ್ಯ -
ಸಿಎಸ್ಕೆ ವಿರುದ್ಧದ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಸ್ಫೋಟಕ ಸತ್ಯ ಬಿಚ್ಚಿಟ್ಟ ಆರ್ಸಿಬಿ ಸ್ಟಾರ್, ಕನ್ನಡಿಗ ಪಡಿಕ್ಕಲ್ -
ಉತ್ತರ ಕರ್ನಾಟಕದ ರೈಲು ಪ್ರಯಾಣಿಕರಿಗೆ ಬಂಪರ್ ಕೊಡುಗೆ: 3 ರೈಲುಗಳು ಇನ್ಮುಂದೆ ಪರ್ಮನೆಂಟ್, ಟಿಕೆಟ್ ದರದಲ್ಲಿ ಭಾರಿ ಇಳಿಕೆ! -
Match Weather Report: ಚಿನ್ನಸ್ವಾಮಿಯಲ್ಲಿ ಆರ್ಸಿಬಿ-ಸಿಎಸ್ಕೆ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
ಉಪೇಂದ್ರ ಅಣ್ಣನ ಮಗನ ಜೊತೆ ಶ್ರೇಯಾಂಕ ಪಾಟೀಲ್ ಮದುವೆ ಸುದ್ದಿ: ಖಡಕ್ ಪ್ರತಿಕ್ರಿಯೆ ಕೊಟ್ಟ ನಟ ನಿರಂಜನ್ ಸುಧೀಂದ್ರ -
Prakash Raj: ಚಹಾ ಮಾರುವುದರಿಂದ ಸಿನಿಮಾ ಮಾರುವವರೆಗೆ ಮೋದಿ ಬಗ್ಗೆ ನಟ ಪ್ರಕಾಶ್ ರಾಜ್ ವ್ಯಂಗ್ಯ -
ಪಾಪರ್ ಸರ್ಕಾರದ ಸಾಹುಕಾರ ಸಿದ್ದರಾಮಯ್ಯ: ಬಾಗಲಕೋಟೆ ಮೆಡಿಕಲ್ ಕಾಲೇಜ್ ಬಗ್ಗೆ ಬೊಮ್ಮಾಯಿ ಪ್ರಶ್ನೆ -
Basavaraj Bommai: ನಾನು ಗೌರವ ಡಾಕ್ಟರೇಟ್ ಸ್ವೀಕರಿಸುವುದಿಲ್ಲ ಎಂದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ












Click it and Unblock the Notifications