ವಿಶ್ವೇಶ್ವರ ಭಟ್ ಬ್ಲಾಗಿಗೆ ದಾರಿ ಯಾವುದಯ್ಯ

ಅನೇಕ ಪತ್ರಕರ್ತರು ತಮ್ಮದೇ ಆದ ವೆಬ್ ಸೈಟು ಇಟ್ಟುಕೊಂಡಿದ್ದಾರೆ. ಆದರೆ, ಭಟ್ಟರ ವೆಬ್ ಸೈಟು ತೆರೆದಿರುವುದು ಸುದ್ದಿ ಆಗುತ್ತಿರುವುದು ಏಕೆ ಎಂದು ತಾವು ಕೇಳುವ ಮುನ್ನ, ವೆಬ್ ಸೈಟಿನಲ್ಲಿ ಭಟ್ಟರು ಅವರ ಬಗ್ಗೆ ಅವರೇ ಬರೆದುಕೊಂಡಿರುವ ಅವರ ಪರಿಚಯವನ್ನು ಮೊದಲು ಓದಿಕೊಳ್ಳಿ. ಅದು ಹೀಗಿದೆ.
ಕನ್ನಡದ ಜನಪ್ರಿಯ ದೈನಿಕ 'ವಿಜಯ ಕರ್ನಾಟಕ"ದ ಮಾಜಿ ಪ್ರಧಾನ ಸಂಪಾದಕ. ಸೃಜನಶೀಲ ಬರಹಗಾರ, ಅಂಕಣಕಾರ. 'ನೂರೆಂಟು ಮಾತು, ಜನಗಳ ಮನ ಹಾಗೂ ಸುದ್ದಿಮನೆ ಕತೆ" ಜನಪ್ರಿಯ ಅಂಕಣಗಳು. ಇಪ್ಪತ್ತೈದಕ್ಕೂ ಅಧಿಕ ದೇಶ ಸುತ್ತಿದ ಅನುಭವ. 2005 ಸುವರ್ಣ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳಿಗೆ ಪಾತ್ರ. ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಜೊತೆ ಹದಿನೈದು ದಿನ ನಾಲ್ಕು ದೇಶಗಳಲ್ಲಿ ಪಯಣ.
ಪತ್ರಕರ್ತರು ಒಂದು ಪತ್ರಿಕೆಯನ್ನು ತೊರೆಯುವ ವಿಷಯ ತೀರಾ ಸಾಮಾನ್ಯವಾದದ್ದು. ಆದರೆ, ಭಟ್ಟರು ವಿಕದಿಂದ ಹೊರನಡೆದದ್ದು ಇತ್ತೀಚೆಗೆ ಭಾರೀ ಸುದ್ದಿಗೆ, ಸುದ್ದಿಗೊಂದು ಗುದ್ದಿಗೆ, ಗುದ್ದಿಗೊಂದು ಗುಡುಗಿಗೆ ಆಹಾರವಾಗಿತ್ತು. ಯಾಕೆಂದರೆ, ಭಟ್ಟರು ವಿಕ ಬಿಟ್ಟಿದ್ದು ಅವರ ಅನೇಕ ಅಭಿಮಾನಿಗಳಿಗೆ ಕಳವಳ ಉಂಟುಮಾಡಿದ್ದರೆ ಅವರ ಕೆಲವು ವಿರೋಧಿಗಳಿಗೆ ಸಂತಸದ ಹೊಳೆಯನ್ನೇ ಹರಿಸಿತ್ತು.
ಹಾಗಾಗಿ, ಭಟ್ಟರ ಮುಂದಿನ ಚನಲನವಲನಗಳೇನು ಎಂಬ ಬಗ್ಗೆ ಪತ್ರಕರ್ತರ ವಲಯಗಳಲ್ಲಿ ಸಾಕಷ್ಟು ಕದನ ಕುತೂಹಲವಿತ್ತು. ಈಗಲೂ ಇದೆ. ಅವರು ಪ್ರಜಾವಾಣಿ ಸಂಪಾದಕರಾಗುತ್ತಾರಂತೆ ಎಂಬ ಗುಲ್ಲಿಗೆ ಅನೇಕರು ಛೆಛೆ ಎಂದಿದ್ದರು, ಕನ್ನಡಪ್ರಭಕ್ಕೆ ಮರಳುತ್ತಾರೆ ಎಂಬ ಗಾಳಿಪಟಕ್ಕೆ ಅಯ್ಯೋ ಎಲ್ಲಾದರೂ ಉಂಟಾ ಎಂದಿದ್ದರು.
ಹಳೇ ಪೇಪರ್ ಸಂಯುಕ್ತ ಕರ್ನಾಟಕದ ಪ್ರಧಾನ ಸಂಪಾದಕರಾಗುತ್ತಾರೆ ಎಂಬ ಗಾಸಿಪ್ಪಿಗಂತೂ ಮಂದಿ ಗಹಗಹಿಸಿ ನಕ್ಕಿದ್ದರು. ಇನ್ನು ಪೈಗಳ ಸಹವಾಸದಲ್ಲಿ ಉದಯವಾಣಿ ಸಂಪಾದಕರಾಗುತ್ತಾರೆ ಎಂಬ ಗಾಳಿಸುದ್ದಿ ಕರಾವಳಿಯಲ್ಲಿ ಸುಳಿದು ಮಾಯವಾಯಿತು. ಉನ್ನತ ವ್ಯಾಸಂಗ ಕೈಗೊಳ್ಳುವ ಉದ್ದೇಶದಿಂದ ವಿಜಯ ಕರ್ನಾಟಕಕ್ಕೆ ರಾಜೀನಾಮೆ ನೀಡಿದ್ದುದಾಗಿ ಹೇಳಿದ್ದ ಭಟ್ಟರ ಪ್ರೆಸ್ ಸ್ಟೇಟ್ ಮೆಂಟನ್ನು ಹಲವರು ಕಿವಿಯ ಮೇಲೆ ಹೂ ಎಂದೂ ಲೇವಡಿ ಮಾಡಿದ್ದರು.
ಭಟ್ಟರು ಯಾವುದಾದರೊಂದು ಟಿವಿ ಚಾನಲ್ ಸೇರಿಕೊಳ್ಳುತ್ತಾರೆಂಬ ಗುಲ್ಲಿಗೆ ಇಲ್ಲೇನು ಬರಗಾಲವಿಲ್ಲ. ಮುಖ್ಯವಾಗಿ ಅವರು ರೆಡ್ಡಿಗಳ ದುಡ್ಡಿನಿಂದ ಆರಂಭವಾಗಲಿರುವ ಜನಶ್ರೀ ಚಾನಲ್ಗೆ ಭರ್ತಿ ಆಗುತ್ತಾರೆಂಬ ಸುದ್ದಿ ದಟ್ಟವಾಗಿತ್ತು. ಆದರೆ, ಆ ಚಾನಲ್ಲಿನ ಮುಖ್ಯ ಸಲಹೆಗಾರರಾಗಿ ಇನ್ನೊಬ್ಬ ಪತ್ರಕರ್ತ ರವಿ ಬೆಳಗೆರೆ ಅವರು ಈಗಾಗಲೇ ಇರುವುದರಿಂದ ಆ ಸುದ್ದಿಗೂ ಕವೆಡೆ ಕಾಸಿನ ಕಿಮ್ಮತ್ತೂ ಸಿಗಲಿಲ್ಲ.
ಭಟ್ಟರು ತಮ್ಮದೇ ಆದ ಸ್ವಂತ ಪೇಪರ್ ತೆಗೆಯುತ್ತಾರೆಂಬ ಗುಸುಗುಸು ಟ್ಯಾಬ್ ಲಾಯ್ಡ್ ಪೇಪರ್ ಮಾರ್ಕೆಟ್ಟಿನಲ್ಲಿ ಸುಳಿದಾಡುತ್ತಿರುವುದರ ನಡುವೆಯೇ ಅವರು ವೆಬ್ ಸೈಟಿಗೆ ಧುಮುಕಿದ್ದಾರೆ. ಅಂತರಜಾಲ ಅಂಗಳಕ್ಕೆ ಕಾಲಿಟ್ಟಿರುವ ಭಟ್ಟರ ಈ ಪ್ರಯತ್ನ ಹವ್ಯಾಸಿ ನೆಲೆಯಲ್ಲಿ ಇರುವುದೋ ಅಥವಾ ಅದಕ್ಕೊಂದು ಬಿಸಿನೆಸ್ ಚೌಕಟ್ಟು ಲಭ್ಯವಾಗುವುದೋ? ಬಣ್ಣಿಸುವುದಕ್ಕೆ ಕಾಲ ಮಾಗಿಲ್ಲ. ಇದೇ ವೇಳೆ, ಈ ಮಾರ್ಗವಾಗಿ ನೀವು ವಿಶ್ವೇಶ್ವರಭಟ್ಟರ ವಿಭಟ್ ಡಾಟ್ ಇನ್ ವೆಬ್ ಸೈಟಿಗೆ ಪ್ರವಾಸ ಕೈಗೊಳ್ಳಬಹುದು. [ಕನ್ನಡ ಬ್ಲಾಗ್ ಲೋಕ]
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications