ವಿಶ್ವೇಶ್ವರ ಭಟ್ ಬ್ಲಾಗಿಗೆ ದಾರಿ ಯಾವುದಯ್ಯ

ಅನೇಕ ಪತ್ರಕರ್ತರು ತಮ್ಮದೇ ಆದ ವೆಬ್ ಸೈಟು ಇಟ್ಟುಕೊಂಡಿದ್ದಾರೆ. ಆದರೆ, ಭಟ್ಟರ ವೆಬ್ ಸೈಟು ತೆರೆದಿರುವುದು ಸುದ್ದಿ ಆಗುತ್ತಿರುವುದು ಏಕೆ ಎಂದು ತಾವು ಕೇಳುವ ಮುನ್ನ, ವೆಬ್ ಸೈಟಿನಲ್ಲಿ ಭಟ್ಟರು ಅವರ ಬಗ್ಗೆ ಅವರೇ ಬರೆದುಕೊಂಡಿರುವ ಅವರ ಪರಿಚಯವನ್ನು ಮೊದಲು ಓದಿಕೊಳ್ಳಿ. ಅದು ಹೀಗಿದೆ.
ಕನ್ನಡದ ಜನಪ್ರಿಯ ದೈನಿಕ 'ವಿಜಯ ಕರ್ನಾಟಕ"ದ ಮಾಜಿ ಪ್ರಧಾನ ಸಂಪಾದಕ. ಸೃಜನಶೀಲ ಬರಹಗಾರ, ಅಂಕಣಕಾರ. 'ನೂರೆಂಟು ಮಾತು, ಜನಗಳ ಮನ ಹಾಗೂ ಸುದ್ದಿಮನೆ ಕತೆ" ಜನಪ್ರಿಯ ಅಂಕಣಗಳು. ಇಪ್ಪತ್ತೈದಕ್ಕೂ ಅಧಿಕ ದೇಶ ಸುತ್ತಿದ ಅನುಭವ. 2005 ಸುವರ್ಣ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳಿಗೆ ಪಾತ್ರ. ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಜೊತೆ ಹದಿನೈದು ದಿನ ನಾಲ್ಕು ದೇಶಗಳಲ್ಲಿ ಪಯಣ.
ಪತ್ರಕರ್ತರು ಒಂದು ಪತ್ರಿಕೆಯನ್ನು ತೊರೆಯುವ ವಿಷಯ ತೀರಾ ಸಾಮಾನ್ಯವಾದದ್ದು. ಆದರೆ, ಭಟ್ಟರು ವಿಕದಿಂದ ಹೊರನಡೆದದ್ದು ಇತ್ತೀಚೆಗೆ ಭಾರೀ ಸುದ್ದಿಗೆ, ಸುದ್ದಿಗೊಂದು ಗುದ್ದಿಗೆ, ಗುದ್ದಿಗೊಂದು ಗುಡುಗಿಗೆ ಆಹಾರವಾಗಿತ್ತು. ಯಾಕೆಂದರೆ, ಭಟ್ಟರು ವಿಕ ಬಿಟ್ಟಿದ್ದು ಅವರ ಅನೇಕ ಅಭಿಮಾನಿಗಳಿಗೆ ಕಳವಳ ಉಂಟುಮಾಡಿದ್ದರೆ ಅವರ ಕೆಲವು ವಿರೋಧಿಗಳಿಗೆ ಸಂತಸದ ಹೊಳೆಯನ್ನೇ ಹರಿಸಿತ್ತು.
ಹಾಗಾಗಿ, ಭಟ್ಟರ ಮುಂದಿನ ಚನಲನವಲನಗಳೇನು ಎಂಬ ಬಗ್ಗೆ ಪತ್ರಕರ್ತರ ವಲಯಗಳಲ್ಲಿ ಸಾಕಷ್ಟು ಕದನ ಕುತೂಹಲವಿತ್ತು. ಈಗಲೂ ಇದೆ. ಅವರು ಪ್ರಜಾವಾಣಿ ಸಂಪಾದಕರಾಗುತ್ತಾರಂತೆ ಎಂಬ ಗುಲ್ಲಿಗೆ ಅನೇಕರು ಛೆಛೆ ಎಂದಿದ್ದರು, ಕನ್ನಡಪ್ರಭಕ್ಕೆ ಮರಳುತ್ತಾರೆ ಎಂಬ ಗಾಳಿಪಟಕ್ಕೆ ಅಯ್ಯೋ ಎಲ್ಲಾದರೂ ಉಂಟಾ ಎಂದಿದ್ದರು.
ಹಳೇ ಪೇಪರ್ ಸಂಯುಕ್ತ ಕರ್ನಾಟಕದ ಪ್ರಧಾನ ಸಂಪಾದಕರಾಗುತ್ತಾರೆ ಎಂಬ ಗಾಸಿಪ್ಪಿಗಂತೂ ಮಂದಿ ಗಹಗಹಿಸಿ ನಕ್ಕಿದ್ದರು. ಇನ್ನು ಪೈಗಳ ಸಹವಾಸದಲ್ಲಿ ಉದಯವಾಣಿ ಸಂಪಾದಕರಾಗುತ್ತಾರೆ ಎಂಬ ಗಾಳಿಸುದ್ದಿ ಕರಾವಳಿಯಲ್ಲಿ ಸುಳಿದು ಮಾಯವಾಯಿತು. ಉನ್ನತ ವ್ಯಾಸಂಗ ಕೈಗೊಳ್ಳುವ ಉದ್ದೇಶದಿಂದ ವಿಜಯ ಕರ್ನಾಟಕಕ್ಕೆ ರಾಜೀನಾಮೆ ನೀಡಿದ್ದುದಾಗಿ ಹೇಳಿದ್ದ ಭಟ್ಟರ ಪ್ರೆಸ್ ಸ್ಟೇಟ್ ಮೆಂಟನ್ನು ಹಲವರು ಕಿವಿಯ ಮೇಲೆ ಹೂ ಎಂದೂ ಲೇವಡಿ ಮಾಡಿದ್ದರು.
ಭಟ್ಟರು ಯಾವುದಾದರೊಂದು ಟಿವಿ ಚಾನಲ್ ಸೇರಿಕೊಳ್ಳುತ್ತಾರೆಂಬ ಗುಲ್ಲಿಗೆ ಇಲ್ಲೇನು ಬರಗಾಲವಿಲ್ಲ. ಮುಖ್ಯವಾಗಿ ಅವರು ರೆಡ್ಡಿಗಳ ದುಡ್ಡಿನಿಂದ ಆರಂಭವಾಗಲಿರುವ ಜನಶ್ರೀ ಚಾನಲ್ಗೆ ಭರ್ತಿ ಆಗುತ್ತಾರೆಂಬ ಸುದ್ದಿ ದಟ್ಟವಾಗಿತ್ತು. ಆದರೆ, ಆ ಚಾನಲ್ಲಿನ ಮುಖ್ಯ ಸಲಹೆಗಾರರಾಗಿ ಇನ್ನೊಬ್ಬ ಪತ್ರಕರ್ತ ರವಿ ಬೆಳಗೆರೆ ಅವರು ಈಗಾಗಲೇ ಇರುವುದರಿಂದ ಆ ಸುದ್ದಿಗೂ ಕವೆಡೆ ಕಾಸಿನ ಕಿಮ್ಮತ್ತೂ ಸಿಗಲಿಲ್ಲ.
ಭಟ್ಟರು ತಮ್ಮದೇ ಆದ ಸ್ವಂತ ಪೇಪರ್ ತೆಗೆಯುತ್ತಾರೆಂಬ ಗುಸುಗುಸು ಟ್ಯಾಬ್ ಲಾಯ್ಡ್ ಪೇಪರ್ ಮಾರ್ಕೆಟ್ಟಿನಲ್ಲಿ ಸುಳಿದಾಡುತ್ತಿರುವುದರ ನಡುವೆಯೇ ಅವರು ವೆಬ್ ಸೈಟಿಗೆ ಧುಮುಕಿದ್ದಾರೆ. ಅಂತರಜಾಲ ಅಂಗಳಕ್ಕೆ ಕಾಲಿಟ್ಟಿರುವ ಭಟ್ಟರ ಈ ಪ್ರಯತ್ನ ಹವ್ಯಾಸಿ ನೆಲೆಯಲ್ಲಿ ಇರುವುದೋ ಅಥವಾ ಅದಕ್ಕೊಂದು ಬಿಸಿನೆಸ್ ಚೌಕಟ್ಟು ಲಭ್ಯವಾಗುವುದೋ? ಬಣ್ಣಿಸುವುದಕ್ಕೆ ಕಾಲ ಮಾಗಿಲ್ಲ. ಇದೇ ವೇಳೆ, ಈ ಮಾರ್ಗವಾಗಿ ನೀವು ವಿಶ್ವೇಶ್ವರಭಟ್ಟರ ವಿಭಟ್ ಡಾಟ್ ಇನ್ ವೆಬ್ ಸೈಟಿಗೆ ಪ್ರವಾಸ ಕೈಗೊಳ್ಳಬಹುದು. [ಕನ್ನಡ ಬ್ಲಾಗ್ ಲೋಕ]
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ












Click it and Unblock the Notifications