ಉತ್ತರ ಅಮೆರಿಕಾಗೆ ಎದೆ ತುಂಬಿ ಹಾಡುವೆನು

ಈ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವ ಕನ್ನಡ ಕುಡಿಗಳಿಗೆ ಕೆಲವು ಕಿವಿಮಾತುಗಳು ಇಂತಿವೆ. ನಿಮಗೆ ಹಾಡುವ ಅದಮ್ಯ ಆಸೆ ಇರಬೇಕು. ಆಸೆಯ ಜತೆಗೆ, ಸಂಗೀತ ಅಭ್ಯಾಸ ಮಾಡಿದ್ದರೆ ಒಳಿತು. ಕನ್ನಡ ಚಲನಚಿತ್ರ ಗೀತೆಗಳನ್ನು ಹಾಡುವುದರಲ್ಲಿ ಆಸಕ್ತಿಯಿದ್ದರಂತೂ ಈ ಸ್ಪರ್ಧಾತ್ಮಕ ಕಾರ್ಯಕ್ರಮದಲ್ಲಿ ಭಾಗವಹಿಸಲು ನೀವು ತುಂಬಾ ಲಾಯಕ್ಕು.
ನಿಬಂಧನೆಗಳು : ಭಾಗವಹಿಸುವುದಕ್ಕೆ ಕೆಲವು ನಿಬಂಧನೆಗಳಿವೆ. ಅದನ್ನು ಗುರುತುಹಾಕಿಕೊಳ್ಳಿ. ನಿಮ್ಮ ವಯಸ್ಸು 14ರಿಂದ 18ರ ಒಳಗೆ ಇರಬೇಕು. ನಿಮ್ಮ ಇತ್ತೀಚಿನ ಭಾವಚಿತ್ರ, ಜನ್ಮದಿನಾಂಕವನ್ನು ದೃಢಪಡಿಸಲು ಸೂಕ್ತವಾದ ದಾಖಲೆ, ನಿಮ್ಮ ತಾಯಿ ತಂದೆ ಅಥವಾ ಪೋಷಕರ ಒಪ್ಪಿಗೆ ಪತ್ರ ಮತ್ತು ನಿಮ್ಮ ಸ್ವವಿವರಗಳನ್ನು ಸಲ್ಲಿಸಬೇಕು. ಸ್ವವಿವರಗಳ ಜತೆಗೆ ನೀವೇ ಹಾಡಿದ ಒಂದು ಸಿನಿಮಾ ಹಾಡಿನ ಪ್ರತಿಯನ್ನು (ವಿಡಿಯೋ ಫೈಲ್) ಕಳಿಸಿಕೊಡಬೇಕು. ಕಳಿಸಬೇಕಾದ ವಿಳಾಸ : [email protected].
ಆಸಕ್ತಿಯನ್ನು ವ್ಯಕ್ತಪಡಿಸಿ ಅರ್ಜಿಗಳನ್ನು ಸಲ್ಲಿಸಿದ ಮಕ್ಕಳ ವಿವರಗಳು ಮತ್ತು ಕಂಠ ಮಾಧುರ್ಯವನ್ನು ಅಳೆದು ನೋಡಲಾಗುತ್ತದೆ. 'ಎದೆ ತುಂಬಿ ಹಾಡುವೆನು' ಕಾರ್ಯಕ್ರಮ ನಿರ್ವಾಹಕರು ನಡೆಸುವ ಗುಣಮಟ್ಟ ಪರೀಕ್ಷೆಯಲ್ಲಿ ಉತ್ತೀರ್ಣರಾದ ಮಕ್ಕಳನ್ನು ಸ್ಪರ್ಧೆಯಲ್ಲಿ ಭಾಗವಹಿಸಲು ಆಹ್ವಾನಿಸಿ ಅವರ ಹಾಡುಗಳ ಧ್ವನಿ ಮುದ್ರಣ ಮಾಡಿಕೊಳ್ಳಲಾಗುತ್ತದೆ. ಹಲವು ಸುತ್ತುಗಳ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಸಹಕಾರಿಯಾಗುವಂತೆ ಸ್ಪರ್ಧೆಯಲ್ಲಿ (screening test) ಪಾಸಾದ ಒಟ್ಟು 36 ಮಕ್ಕಳನ್ನು ಕಾರ್ಯಕ್ರಮದಲ್ಲಿ ಸೇರಿಸಿಕೊಳ್ಳಲಾಗುತ್ತದೆ.
ಕೊನೆಯ ದಿನಾಂಕ : ನಿಮ್ಮ ವಿವರಗಳನ್ನು ಒಳಗೊಂಡ ಪ್ರವೇಶ ಪತ್ರಗಳನ್ನು ಕಳಿಸಲು ಕಡೆಯ ದಿನಾಂಕ ಭಾನುವಾರ ಅಕ್ಟೋಬರ್ 10, 2010. ವಿಳಾಸ : [email protected]. ಗಮನಿಸಿ : ಅರ್ಜಿ ಸಲ್ಲಿಸಿದವರನ್ನು ಎದೆ ತುಂಬಿ ಕಾರ್ಯಕ್ರಮದ ನಿರ್ವಾಹಕರೇ ಸಂಪರ್ಕಿಸುತ್ತಾರೆ.
ದಟ್ಸ್ ಕನ್ನಡ ಓದುಗರಲ್ಲಿ ವಿಶೇಷ ವಿನಂತಿ: ನಮ್ಮ ಅಂತರ್ಜಾಲ ತಾಣವನ್ನು ಅಮೆರಿಕದಾದ್ಯಂತ ಚದುರಿರುವ ಕನ್ನಡಿಗರು ನಿತ್ಯ ಬಳಸುತ್ತಾರಷ್ಟೆ. ಆದರೆ, ಎದೆ ತುಂಬಿ ಸ್ಪರ್ಧೆಯ ಸುದ್ದಿ ಎಲ್ಲರ ಕಣ್ಣಿಗೂ ಬೀಳದೇ ಹೋಗಬಹುದು. ಆದಕಾರಣ, ಇದನ್ನು ಓದಿದವರು ದಯಮಾಡಿ ನಿಮ್ಮ ನಿಮ್ಮ ರಾಜ್ಯಗಳಲ್ಲಿರುವ ಕನ್ನಡ ಕೂಟ ಅಥವಾ ಕನ್ನಡ ಸಂಘದ ಅಧ್ಯಕ್ಷರು ಮತ್ತು ಕೂಟ ವೆಬ್ ಸೈಟ್ ಮಾಡರೇಟರುಗಳಿಗೆ ಈ ಪುಟದ ಕೊಂಡಿಯನ್ನು ಫಾರ್ವರ್ಡ್ ಮಾಡುವುದು. ಮಾಡರೇಟರುಗಳು ತಮ್ಮ ಡೇಟಾ ಬೇಸಿನಲ್ಲಿರುವ ಸಂಘದ ಸದಸ್ಯ ಕುಂಟುಂಬ ವರ್ಗಗಳಿಗೆ ಈಟಿವಿ ಕರೆಯನ್ನು ತಲುಪಿಸಿದರೆ ಆಸಕ್ತಿ ಇರುವ ಎಲ್ಲ ಮಕ್ಕಳನ್ನೂ ತಲುಪುತ್ತದೆ. ಥ್ಯಾಂಕ್ಯು.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications