ಅಕ್ಕ-ನಾವಿಕ : ಕುಲವೊಂದು ಕವಲೆರಡು

ಈ ಭಾರತೀಯರಲ್ಲಿ ಕರ್ನಾಟಕದಿಂದ ವಲಸೆಬಂದ ಕನ್ನಡಿಗರು ಎಷ್ಟು ಮಂದಿ ಇದ್ದಾರೆ ಎಂಬ ಬಗ್ಗೆ ಕರಾರುವಾಕ್ಕಾದ ಅಂಕೆಸಂಖ್ಯೆಗಳು ಲಭ್ಯವಿಲ್ಲ. ಸುಮಾರು 60 ಸಾವಿರ ಕನ್ನಡಿಗರು ಅಮೆರಿಕದಲ್ಲಿ ಇದ್ದಾರೆ ಎಂದು ಅಕ್ಕದ ಮಾಜಿ ಸದಸ್ಯ ವಿ.ಎಂ. ಕುಮಾರಸ್ವಾಮಿಯವರು ತಮ್ಮ ಸರಣಿ ಇಮೇಲುಗಳಲ್ಲಿ ಆಗಾಗ ಬರೆಯುತ್ತಿದ್ದುದನ್ನು ಓದಿದ ನೆನಪು. ದಟ್ಸ್ ಕನ್ನಡದ ಅಂತರ್ಜಾಲ ದಾಖಲೆಗಳ ಪ್ರಕಾರ ಈ ಸಂಖ್ಯೆ ಮೂವತ್ತು ಸಾವಿರ ದಾಟಿಲ್ಲ.
ಭಾರತದಿಂದ ಅಮೆರಿಕೆಗೆ ವಲಸೆ ಹೋಗುವವರು ಖಂಡಿತವಾಗಿ ವಿದ್ಯೆ ಗಳಿಸಿದವರೇ ಆಗಿರುವುದರಿಂದ ಅವರ ಜೀವನ ಉದ್ಯೋಗಾವಕಾಶ ಮತ್ತು ವಾಣಿಜ್ಯ ಭರಿತ ಜನನಿಬಿಡ ನಗರ ಪ್ರದೇಶಗಳಲ್ಲಿ ಹೆಚ್ಚಾಗಿ ಸಾಗುತ್ತದೆ. ಜಾರ್ಜಿಯ, ಕೆಂಟುಕಿ, ಮಿಸ್ಸಿಸಿಪ್ಪಿ ಮುಂತಾದ ಹಿಂದುಳಿದ ಕೆಲವು ರಾಜ್ಯಗಳನ್ನು ಹೊರತುಪಡಿಸಿದರೆ ಕನ್ನಡಿಗರು ಸಿಯಾಟಲ್ ನಿಂದ ಫ್ಲಾರಿಡಾದವರೆಗೆ, ಉತ್ತರ ಕೆರೋಲಿನಾದಿಂದ ಸ್ಯಾನ್ ಡಿಯಾಗೋವರೆಗೆ ಸುಮಾರು 40 ರಾಜ್ಯಗಳಲ್ಲಿ, ವಿವಿಧ ಸಂಖ್ಯೆಗಳಲ್ಲಿ ಹರಿದು ಹಂಚಿಹೋಗಿದ್ದಾರೆ.
ತಾವಿರುವ ಪ್ರದೇಶದಲ್ಲಿ ನಮ್ಮವರು ತಮ್ಮವರು ಯಾರಾದರೂ ಇದ್ದಾರಾ ಎಂದು ಈ ಕನ್ನಡಿಗರು ಹುಡುಕುತ್ತಿರುತ್ತಾರೆ. ಹತ್ತು ಕುಟುಂಬಗಳು ಜತೆಯಾದರೆ ಸಾಕು. ಅವೆರೆಲ್ಲ ಜತೆಗೂಡಿ ಒಂದು ಕನ್ನಡ ಸಂಘವನ್ನು ಕಟ್ಟಿಕೊಳ್ಳುತ್ತಾರೆ. ಅವುಗಳಿಗೆ ಪಂಪ, ಶ್ರೀಗಂಧ, ಕಸ್ತೂರಿ, ಮಲ್ಲಿಗೆ, ಕಾವೇರಿ, ಬೃಂದಾವನ, ವಿದ್ಯಾರಣ್ಯ, ಸಹ್ಯಾದ್ರಿ ಮುಂತಾದ ಕರ್ನಾಟಕ ಸ್ಮರಣೆಯ ಹೆಸರುಗಳನ್ನು ಇಟ್ಟುಕೊಳ್ಳುತ್ತಾರೆ. ಸಂಘದ ಆಶ್ರಯದಲ್ಲಿ ವರ್ಷಕ್ಕೆ ಮೂರೋ ನಾಲಕ್ಕೋ ಕರ್ನಾಟಕ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವುದು ವಾಡಿಕೆ. ಕನ್ನಡ ಜನರ ಈ ಪರಿಯ ಪ್ರಾದೇಶಿಕ ಸಂಘಗಳು ಅಮೆರಿಕೆಯಲ್ಲಿ ಮೂವತ್ತೇಳಿವೆ.
ಎಲ್ಲಾ ರಾಜ್ಯಗಳ ಎಲ್ಲಾ ಸಂಘಗಳ ಸದಸ್ಯರು ಒಟ್ಟಾಗಿ ಕಲೆತು ಸಂಭ್ರಮಿಸುವಂಥ ಒಂದು ವೇದಿಕೆಯ ಕಲ್ಪನೆ ಮೈದಾಳಿದ್ದು ಹನ್ನೆರಡು ವರ್ಷಗಳ ಹಿಂದೆ. ಅಮೆರಿಕಾದ ಎಲ್ಲ ಕನ್ನಡಿಗರನ್ನೂ ಕಲೆಹಾಕಿ ವಿಶ್ವ ಕನ್ನಡಿಗರ ಸಮ್ಮೇಳನ ನಡೆಸಬೇಕೆಂಬ ಆಲೋಚನೆ ಮೂಡಿದುದು ಮರಳುಗಾಡಿನ ನಗರ ಫೀನಿಕ್ಸಿನಲ್ಲಿ (1998). ಈ ದಿನಗಳಲ್ಲಿ ಹೆಚ್ಚು ಚಾಲ್ತಿಯಲ್ಲಿರುವ ಅಮೆರಿಕ ವಿಶ್ವ ಕನ್ನಡ ಸಮ್ಮೇಳನದ ಪದಗುಚ್ಛದ ಬೀಜಗಳು ಮೊಳಕೆ ಒಡೆದದ್ದು ಅಲ್ಲೇ.
ಅಲ್ಲಿಂದೀಚೆಗೆ ಅಮೆರಿಕನ್ನಡಿಗರು ಆಯೋಜಿಸುವ ಒಟ್ಟು ಆರು ಸಮ್ಮೇಳನಗಳು ಆಗಿಹೋಗಿವೆ. ಎರಡು ವರ್ಷದ ಹೆಣ್ಣುಕೂಸು ನಾವಿಕ ವತಿಯಿಂದ ಒಂದು, ಎಂಟು ವರ್ಷದ ಹುಡುಗ ಅಕ್ಕ ವತಿಯಿಂದ ಐದು. ಆರತಿಗೊಬ್ಬ ಮಗಳು ಕೀರುತಿಗೊಬ್ಬ ಮಗ. ವಿಶಾಲ ಅಮೆರಿಕದಲ್ಲಿ ಕಾರ್ಯೋನ್ಮುಖವಾಗಿರುವ ಈ ಎರಡೂ ಕನ್ನಡ ಸಂಸ್ಥೆಗಳ ಧ್ಯೇಯ ಮತ್ತು ಉದ್ದೇಶ ವಿಶಾಲ ತಳಹದಿಯಲ್ಲಿ ಒಂದೇ ಆಗಿರಬೇಕೆಂದು ಬಹು ಸಂಖ್ಯಾತ ಕನ್ನಡಿಗರು ಅಪೇಕ್ಷೆ ಪಡುತ್ತಾರೆ. ಅವು ಸ್ಥೂಲವಾಗಿ ಹೀಗಿವೆ:
ಅಮೆರಿಕಾದಲ್ಲಿ ಕರ್ನಾಟಕ ಪರಿವಾರದ ರಾಜಕೀಯೇತರ ಸಂಘಟನೆ, ಕನ್ನಡಿಗರ ಸಮ್ಮಿಲನಗಳು, ಕರ್ನಾಟಕದೊಂದಿಗೆ ನಿರಂತರ ಬೆಸುಗೆ, ತಾಯ್ನಾಡಿನೊಂದಿಗೆ ಅರ್ಥಪೂರ್ಣ ವಾಣಿಜ್ಯ, ಭಾವನಾತ್ಮಕ ಸಾಂಸ್ಕೃತಿಕ ಬಾಂಧವ್ಯ ವೃದ್ಧಿ. ಈ ಉದ್ದೇಶಗಳನ್ನು ಸಾಧಿಸಲು ಎರಡು ಸಂಘಟನೆಗಳು ಬೇಕಿತ್ತೇ ಎಂಬ ಪ್ರಶ್ನೆ ಕೇಳುವ ಕಾಲ ಮಿಂಚಿಹೋಗಿದೆ. ಅಮೆರಿಕ ಕನ್ನಡಿಗರ ಹೊಲಗಳಲ್ಲಿ ಅಕ್ಕ ಮತ್ತು ನಾವಿಕ ಸಂಸ್ಥೆಗಳು ಜೋಡೆತ್ತಿನ ಬೇಸಾಯ ಮಾಡುವ ಕಾಲಘಟ್ಟ ಸನ್ನಿಹಿತವಾಗಿರುವುದು ಸ್ಪಷ್ಟವಾಗಿದೆ.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications