ದಿನಕ್ಕೆ 20 ಸಿಗರೇಟು ಸೇದುವ 2 ವರ್ಷದ ಹುಡ್ಗ

ಹಾಗಂತ ಹಿತನುಡಿಯುವ ಮಾತುಗಳು, ಉದ್ದುದ್ದ ಲೇಖನಗಳ ಜತೆಗೆ ಹಿತೈಷಿಗಳು, ಸ್ನೇಹಿತರು, ಮನೆಯವರು, ವೈದ್ಯರು ಹಾಗೂ ಎಂದೂ ಸಿಗರೇಟುಗಳನ್ನೇ ಸೇದದವರು ಧೂಮಪಾನದ ಕೆಟ್ಟ ಪರಿಣಾಮಗಳ ಬಗ್ಗೆ ಬುದ್ದಿವಾದ ಹೇಳುತ್ತಲೇ ಇರುತ್ತಾರೆ. ತಂಬಾಕು ಚಟಕ್ಕೆ ಅಂಟಿಕೊಂಡವರಿಗೆ ಮಾತ್ರ ಈ ಯಾವ ಹಿತವಾದ ಮಾತುಗಳೂ ಕೇಳಿಸುವುದಿಲ್ಲ. ಕೇಳಿಸಿದರೂ ಹೊಗೆಯನ್ನು ಬಾಯಲ್ಲಿ ಎಳೆದುಕೊಂಡು ಮೂಗಿನಿಂದ ಹೊರಬಿಡುತ್ತಾರೆ.
ಡಿಗ್ರಿ ಪಾಸಾಗಿ ಕೆಲಸಕ್ಕೆ ಸೇರಿದನಂತರ ಸ್ವಂತ ಸಂಪಾದನೆ ಹಣದ ಮೇಲೆ ಸಿಗರೇಟನ್ನೋ ಬೀಡಿಯನ್ನೋ ಸೇದುವ ಚಟಕ್ಕೆ ಒಗ್ಗಿಕೊಳ್ಳುವ ಕಾಲವೊಂದಿತ್ತು. ಈಗ ಕಾಲ ಬದಲಾಗಿದೆ. ನಾಲಕ್ಕನೇ ತರಗತಿವರೆಗೆ ಓದಿ ಶಾಲೆಬಿಟ್ಟು ಗ್ಯಾರೇಜಿನಲ್ಲಿ ಹೆಲ್ಪರ್ ಆಗಿ ದುಡಿಯುವ ಹುಡುಗ ಹತ್ತನೇ ವರ್ಷಕ್ಕೆ ಬೀಡಿ ಸೇದಲು ಆರಂಭಿಸುತ್ತಾನೆ. ಹಳ್ಳಿಯಲ್ಲಿ ಹೈಸ್ಕೂಲು ಇಲ್ಲ ಎಂದು ದೊಡ್ಡ ಊರಿಗೆ ಹೋಗಿ ಹಾಸ್ಟೆಲ್ ಸೇರಿ ವಿದ್ಯಾಭ್ಯಾಸ ಮುಂದುವರೆಸುವ ಹುಡುಗ ಎಸ್ ಎಸ್ ಎಲ್ ಸಿ ಪರೀಕ್ಷೆ ಹಾಲ್ ಟಿಕೇಟ್ ಪಡೆಯುವ ಮೂರು ವರ್ಷಕ್ಕೆ ಮುಂಚೆ ಸಿಗರೇಟು ರುಚಿ ಕಂಡಿರುತ್ತಾನೆ.
ವ್ಯಸನಗಳು ಯಾವುದೋ ಒಂದು ಗಳಿಗೆಯಲ್ಲಿ ಅಮರಿಕೊಳ್ಳುತ್ತವೆ. ಅದಕ್ಕೆ ವಯಸ್ಸಿನ ಮಿತಿಯಂತ ಏನೂಇಲ್ಲ. ಮುಖ್ಯವಾಗಿ ಚಟಗಳು ಸಹವಾಸ ದೋಷದಿಂದ ಬರುವಂಥವು. ಅವನು ಸೇದುತ್ತಾನೆ ಅಂತ ಇವನೂ ಆರಂಭಿಸುತ್ತಾನೆ. ಇವಳು ಸೇದಿದಳು ಎಂದು ಅವಳೂ ಸೇದುತ್ತಾಳೆ. ಒಮ್ಮೆ ಶುರುವಾದದ್ದು ನಿಲ್ಲಬೇಕಾದರೆ ವ್ಯಸನಿಗೆ ಭಯಂಕರ ಕಾಯಿಲೆ ಬರಬೇಕು ಅಥವಾ ಸತ್ತೇ ಹೋಗಿರಬೇಕು.
ಕಳೆದ ತಿಂಗಳು ಕರ್ನಾಟಕ ಪ್ರಜೆಗಳನ್ನು ನಿಬ್ಬೆರಗಾಗಿಸಿದ ಒಂದು ಸುದ್ದಿ ನಿಮಗೂ ಗೊತ್ತಿರಬಹುದು. ಹರಪನಹಳ್ಳಿಯ 12 ವರ್ಷದ ಹುಡುಗನೊಬ್ಬನಿಗೆ ಕುಡಿಯುವ ಚಟ ಫೆವಿಕಾಲ್ ಟೈಪ್ ಅಂಟಿಕೊಂಡಿದೆ ಎಂತಲೂ ಅವನಿಗೆ ದಿನಕ್ಕೆ ಎರಡು ಕ್ವಾರ್ಟರ್ ಬ್ರಾಂಡಿ ಸಿಗದೆ ಇದ್ದರೆ ಚಡಪಡಿಸುತ್ತಾನೆಂದೂ ಸುದ್ದಿ ಆಗಿತ್ತು. ಅಬಕಾರಿ ಸಚಿವ ರೇಣುಕಾರವರು ಖುದ್ದಾಗಿ ಅವನನ್ನು ಭೇಟಿ ಮಾಡಿ ಆತನ ಉಭಯ ಕುಶಲೋಪರಿ ವಿಚಾರಿಸಿದರೆಂದು ಸುದ್ದಿಯಾಗಿತ್ತು.
![]() | |
| ಈ ಹುಡುಗನಿಗೆ ಚಿಕಿತ್ಸೆ ಆಗಬೇಕು. ಜೊತೆಗೆ ಸಂಶೋಧನೆಯೂ ಆಗಬೇಕು. | |
![]() | |
ಅಪ್ಪ ಅಮ್ಮ ಸಿಗರೇಟು ತೆಗೆಸಿಕೊಡದಿದ್ದರೆ ಚಡಪಡಿಕೆ ಹೆಚ್ಚಾಗಿ ಗೋಡೆಗೆ ತಲೆ ಚಚ್ಚಿಕೊಳ್ಳುತ್ತಾನಂತೆ. ತಲೆ ಸುತ್ತು ಬರುತ್ತಿದೆ ಎನ್ನುತ್ತಾನಂತೆ. ಅವನು ತಪ್ಪು ಮಾಡುತ್ತಿದ್ದಾನೆ ಎನ್ನುವದಕ್ಕಿಂತ ತಂಬಾಕು ಅವನಿಗೆ ಸಮಸ್ಯೆ ಆಗಿದೆ ಎಂದು ಭಾವಿಸುತ್ತೇನೆ ಎಂದು ಹುಡುಗನ ತಾಯಿ ಡಯಾನಾ ನಿಸ್ಸಹಾಯಕ ಧ್ವನಿಯಲ್ಲಿ ಹೇಳುತ್ತಾರೆ. ಹುಡುಗನ ತಂದೆ ಮೊಹಮ್ಮದ್ ರಿಜಾಲ್ ಗೆ ಇದೇನು ದೊಡ್ಡ ಸಮಸ್ಯೆ ಅನ್ನಿಸುವುದಿಲ್ಲ. ಮಗ ಆರೋಗ್ಯವಾಗಿದ್ದಾನೆ, ಸಿಗರೇಟು ಕೊಡದಿದ್ದರೆ ಮಾತ್ರ ಹುಚ್ಚನ ರೀತಿ ಆಡುತ್ತಾನೆ ಎಂದು ಟೆಲಿಗ್ರಾಫ್ ಪತ್ರಿಕೆಯ ವರದಿಗರಾರರಿಗೆ ತಿಳಿಸಿದ್ದಾನೆ.
ಅದೇನೇ ಇರಲಿ, ಕಡಿಮೆ ಆದಾಯ ಇರುವ ಕುಟುಂಬಗಳಲ್ಲಿ ಈ ವಿದ್ಯಮಾನ ಹೆಚ್ಚಾಗಿ ಕಂಡುಬರುತ್ತದೆ. ಮಕ್ಕಳು ಹೀಗಾಗುವುದಕ್ಕೆ ತಂದೆ ತಾಯಿ ಪೋಷಕರೇ ಕಾರಣ ಎಂದು ವಾಷಿಂಗ್ ಟನ್ ಡಿಸಿ ಪ್ರದೇಶದಲ್ಲಿನ ಟೊಬ್ಯಾಕೋ ಫ್ರೀ ಕಿಡ್ಸ್ ಚಳವಳಿಯ ಮುಖ್ಯಸ್ಥ ಮ್ಯಾಥ್ಯೂ ಮಯ್ಯರ್ಸ್ ಸುಮಾತ್ರದ ಧೂಮಪಾನ ವ್ಯಸನಿ ರಿಜಾಲ್ ಉದಾಹರಣೆ ಇಟ್ಟುಕೊಂಡು ಪ್ರತಿಕ್ರಿಯಿಸಿದ್ದಾರೆ.
ಸುಮಾತ್ರದಲ್ಲಿ ನಡೆದ ಈ ಘಟನೆಯಿಂದ ಅಮೆರಿಕಾದಲ್ಲಿರುವ ಧೂಮಪಾನ ವಿರೋಧಿ ಚಳವಳಿಗಾರರು ಚುರುಕಾಗಿದ್ದಾರೆ. ಇಂಡೋನೇಷಿಯಾ ಸರಕಾರ ಈ ಕೂಡಲೇ ಕ್ರಮ ಕೈಗೊಂಡು ಎಳವೆಯಲ್ಲಿ ಧೂಮಪಾನ ಚಟಕ್ಕೆ ಬಲಿಯಾಗುವ ಮಕ್ಕಳನ್ನು ರಕ್ಷಿಸಬೇಕು ಎಂದು ಆಗ್ರಹಿಸಿದ್ದಾರೆ. ಸಿಗರೇಟು ಮಾರಾಟ ಕಂಪನಿಗಳು ಅಮಾಯಕ ಬಡ ಕುಟುಂಬದ ಮಕ್ಕಳ ಮೇಲೆ ಮಾಡುತ್ತಿರುವ ಆಕ್ರಮಣ ಇದಾಗಿದೆ ಎಂದು ಗುಡುಗುತ್ತಿದ್ದಾರೆ.
ಸಿಗರೇಟು ಚಟದ ಎರಡು ವರ್ಷದ ಹುಡುಗನ ಪ್ರತಾಪಗಳು ವರದಿಯಾಗಿರುವುದು ದಕ್ಷಿಣ ಸುಮಾತ್ರದ ಕರಾವಳಿ ಪ್ರದೇಶದ ಒಂದು ಪುಟ್ಟ ಹಳ್ಳಿಯಿಂದ. ಹುಡುಗನ ಅಪ್ಪ ಮಗ 18 ತಿಂಗಳಿದ್ದಾಗ ಒಂದು ಸಿಗರೇಟು ಕೊಟ್ಟು ಸೇದಿಸಿ ರುಚಿ ತೋರಿಸಿದ್ದನಂತೆ ಎಂದು ಎಎನ್ಐ ಸುದ್ದಿಸಂಸ್ಥೆ ಬಾತ್ಮೀದಾರರು ಹೇಳುತ್ತಾರೆ. ಧೂಮಪಾನ ವಿರೋಧಿಗಳು ಜನ ಜಾಗೃತಿಯ ಗಂಟೆಗಳನ್ನು ಒಂದು ಕಡೆ ಬಾರಿಸುತ್ತಿದ್ದರೆ ಇನ್ನೊಂದೆಡೆ ತಂಬಾಕು ಕೃಷಿ, ಸಿಗರೇಟು, ಬೀಡಿ ಉತ್ಪನ್ನಗಳಲ್ಲಿ ಏರಿಕೆ, ಪಾನ್ ಪರಾಗುಗಳ ಅವ್ಯಾಹತ ಮಾರಾಟ ನಡೆಯುತ್ತಲೇ ಇರುತ್ತದೆ.
ಈ ವಿಷಚಕ್ರ ಒಂದಲ್ಲ ಒಂದು ದಿನ ನಿಲ್ಲಬೇಕು ಎಂದು ಪಣತೊಟ್ಟಿರುವ ಸಂಸ್ಥೆಗಳ ಪಟ್ಟಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮಂಚೂಣಿಯಲ್ಲಿದೆ. ಅಂದಹಾಗೆ, ನಾಡಿದ್ದು ಭಾನುವಾರ 31ರಂದು ವಿಶ್ವ ತಂಬಾಕು ರಹಿತ ದಿನಾಚರಣೆ ಸುದ್ದಿ ಪತ್ರಿಕೆಗಳಲ್ಲಿ ಮಿಂಚಿ ಮರೆಯಾಗುತ್ತದೆ.
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ














Click it and Unblock the Notifications