ದಿನಕ್ಕೆ 20 ಸಿಗರೇಟು ಸೇದುವ 2 ವರ್ಷದ ಹುಡ್ಗ

ಹಾಗಂತ ಹಿತನುಡಿಯುವ ಮಾತುಗಳು, ಉದ್ದುದ್ದ ಲೇಖನಗಳ ಜತೆಗೆ ಹಿತೈಷಿಗಳು, ಸ್ನೇಹಿತರು, ಮನೆಯವರು, ವೈದ್ಯರು ಹಾಗೂ ಎಂದೂ ಸಿಗರೇಟುಗಳನ್ನೇ ಸೇದದವರು ಧೂಮಪಾನದ ಕೆಟ್ಟ ಪರಿಣಾಮಗಳ ಬಗ್ಗೆ ಬುದ್ದಿವಾದ ಹೇಳುತ್ತಲೇ ಇರುತ್ತಾರೆ. ತಂಬಾಕು ಚಟಕ್ಕೆ ಅಂಟಿಕೊಂಡವರಿಗೆ ಮಾತ್ರ ಈ ಯಾವ ಹಿತವಾದ ಮಾತುಗಳೂ ಕೇಳಿಸುವುದಿಲ್ಲ. ಕೇಳಿಸಿದರೂ ಹೊಗೆಯನ್ನು ಬಾಯಲ್ಲಿ ಎಳೆದುಕೊಂಡು ಮೂಗಿನಿಂದ ಹೊರಬಿಡುತ್ತಾರೆ.
ಡಿಗ್ರಿ ಪಾಸಾಗಿ ಕೆಲಸಕ್ಕೆ ಸೇರಿದನಂತರ ಸ್ವಂತ ಸಂಪಾದನೆ ಹಣದ ಮೇಲೆ ಸಿಗರೇಟನ್ನೋ ಬೀಡಿಯನ್ನೋ ಸೇದುವ ಚಟಕ್ಕೆ ಒಗ್ಗಿಕೊಳ್ಳುವ ಕಾಲವೊಂದಿತ್ತು. ಈಗ ಕಾಲ ಬದಲಾಗಿದೆ. ನಾಲಕ್ಕನೇ ತರಗತಿವರೆಗೆ ಓದಿ ಶಾಲೆಬಿಟ್ಟು ಗ್ಯಾರೇಜಿನಲ್ಲಿ ಹೆಲ್ಪರ್ ಆಗಿ ದುಡಿಯುವ ಹುಡುಗ ಹತ್ತನೇ ವರ್ಷಕ್ಕೆ ಬೀಡಿ ಸೇದಲು ಆರಂಭಿಸುತ್ತಾನೆ. ಹಳ್ಳಿಯಲ್ಲಿ ಹೈಸ್ಕೂಲು ಇಲ್ಲ ಎಂದು ದೊಡ್ಡ ಊರಿಗೆ ಹೋಗಿ ಹಾಸ್ಟೆಲ್ ಸೇರಿ ವಿದ್ಯಾಭ್ಯಾಸ ಮುಂದುವರೆಸುವ ಹುಡುಗ ಎಸ್ ಎಸ್ ಎಲ್ ಸಿ ಪರೀಕ್ಷೆ ಹಾಲ್ ಟಿಕೇಟ್ ಪಡೆಯುವ ಮೂರು ವರ್ಷಕ್ಕೆ ಮುಂಚೆ ಸಿಗರೇಟು ರುಚಿ ಕಂಡಿರುತ್ತಾನೆ.
ವ್ಯಸನಗಳು ಯಾವುದೋ ಒಂದು ಗಳಿಗೆಯಲ್ಲಿ ಅಮರಿಕೊಳ್ಳುತ್ತವೆ. ಅದಕ್ಕೆ ವಯಸ್ಸಿನ ಮಿತಿಯಂತ ಏನೂಇಲ್ಲ. ಮುಖ್ಯವಾಗಿ ಚಟಗಳು ಸಹವಾಸ ದೋಷದಿಂದ ಬರುವಂಥವು. ಅವನು ಸೇದುತ್ತಾನೆ ಅಂತ ಇವನೂ ಆರಂಭಿಸುತ್ತಾನೆ. ಇವಳು ಸೇದಿದಳು ಎಂದು ಅವಳೂ ಸೇದುತ್ತಾಳೆ. ಒಮ್ಮೆ ಶುರುವಾದದ್ದು ನಿಲ್ಲಬೇಕಾದರೆ ವ್ಯಸನಿಗೆ ಭಯಂಕರ ಕಾಯಿಲೆ ಬರಬೇಕು ಅಥವಾ ಸತ್ತೇ ಹೋಗಿರಬೇಕು.
ಕಳೆದ ತಿಂಗಳು ಕರ್ನಾಟಕ ಪ್ರಜೆಗಳನ್ನು ನಿಬ್ಬೆರಗಾಗಿಸಿದ ಒಂದು ಸುದ್ದಿ ನಿಮಗೂ ಗೊತ್ತಿರಬಹುದು. ಹರಪನಹಳ್ಳಿಯ 12 ವರ್ಷದ ಹುಡುಗನೊಬ್ಬನಿಗೆ ಕುಡಿಯುವ ಚಟ ಫೆವಿಕಾಲ್ ಟೈಪ್ ಅಂಟಿಕೊಂಡಿದೆ ಎಂತಲೂ ಅವನಿಗೆ ದಿನಕ್ಕೆ ಎರಡು ಕ್ವಾರ್ಟರ್ ಬ್ರಾಂಡಿ ಸಿಗದೆ ಇದ್ದರೆ ಚಡಪಡಿಸುತ್ತಾನೆಂದೂ ಸುದ್ದಿ ಆಗಿತ್ತು. ಅಬಕಾರಿ ಸಚಿವ ರೇಣುಕಾರವರು ಖುದ್ದಾಗಿ ಅವನನ್ನು ಭೇಟಿ ಮಾಡಿ ಆತನ ಉಭಯ ಕುಶಲೋಪರಿ ವಿಚಾರಿಸಿದರೆಂದು ಸುದ್ದಿಯಾಗಿತ್ತು.
![]() | |
| ಈ ಹುಡುಗನಿಗೆ ಚಿಕಿತ್ಸೆ ಆಗಬೇಕು. ಜೊತೆಗೆ ಸಂಶೋಧನೆಯೂ ಆಗಬೇಕು. | |
![]() | |
ಅಪ್ಪ ಅಮ್ಮ ಸಿಗರೇಟು ತೆಗೆಸಿಕೊಡದಿದ್ದರೆ ಚಡಪಡಿಕೆ ಹೆಚ್ಚಾಗಿ ಗೋಡೆಗೆ ತಲೆ ಚಚ್ಚಿಕೊಳ್ಳುತ್ತಾನಂತೆ. ತಲೆ ಸುತ್ತು ಬರುತ್ತಿದೆ ಎನ್ನುತ್ತಾನಂತೆ. ಅವನು ತಪ್ಪು ಮಾಡುತ್ತಿದ್ದಾನೆ ಎನ್ನುವದಕ್ಕಿಂತ ತಂಬಾಕು ಅವನಿಗೆ ಸಮಸ್ಯೆ ಆಗಿದೆ ಎಂದು ಭಾವಿಸುತ್ತೇನೆ ಎಂದು ಹುಡುಗನ ತಾಯಿ ಡಯಾನಾ ನಿಸ್ಸಹಾಯಕ ಧ್ವನಿಯಲ್ಲಿ ಹೇಳುತ್ತಾರೆ. ಹುಡುಗನ ತಂದೆ ಮೊಹಮ್ಮದ್ ರಿಜಾಲ್ ಗೆ ಇದೇನು ದೊಡ್ಡ ಸಮಸ್ಯೆ ಅನ್ನಿಸುವುದಿಲ್ಲ. ಮಗ ಆರೋಗ್ಯವಾಗಿದ್ದಾನೆ, ಸಿಗರೇಟು ಕೊಡದಿದ್ದರೆ ಮಾತ್ರ ಹುಚ್ಚನ ರೀತಿ ಆಡುತ್ತಾನೆ ಎಂದು ಟೆಲಿಗ್ರಾಫ್ ಪತ್ರಿಕೆಯ ವರದಿಗರಾರರಿಗೆ ತಿಳಿಸಿದ್ದಾನೆ.
ಅದೇನೇ ಇರಲಿ, ಕಡಿಮೆ ಆದಾಯ ಇರುವ ಕುಟುಂಬಗಳಲ್ಲಿ ಈ ವಿದ್ಯಮಾನ ಹೆಚ್ಚಾಗಿ ಕಂಡುಬರುತ್ತದೆ. ಮಕ್ಕಳು ಹೀಗಾಗುವುದಕ್ಕೆ ತಂದೆ ತಾಯಿ ಪೋಷಕರೇ ಕಾರಣ ಎಂದು ವಾಷಿಂಗ್ ಟನ್ ಡಿಸಿ ಪ್ರದೇಶದಲ್ಲಿನ ಟೊಬ್ಯಾಕೋ ಫ್ರೀ ಕಿಡ್ಸ್ ಚಳವಳಿಯ ಮುಖ್ಯಸ್ಥ ಮ್ಯಾಥ್ಯೂ ಮಯ್ಯರ್ಸ್ ಸುಮಾತ್ರದ ಧೂಮಪಾನ ವ್ಯಸನಿ ರಿಜಾಲ್ ಉದಾಹರಣೆ ಇಟ್ಟುಕೊಂಡು ಪ್ರತಿಕ್ರಿಯಿಸಿದ್ದಾರೆ.
ಸುಮಾತ್ರದಲ್ಲಿ ನಡೆದ ಈ ಘಟನೆಯಿಂದ ಅಮೆರಿಕಾದಲ್ಲಿರುವ ಧೂಮಪಾನ ವಿರೋಧಿ ಚಳವಳಿಗಾರರು ಚುರುಕಾಗಿದ್ದಾರೆ. ಇಂಡೋನೇಷಿಯಾ ಸರಕಾರ ಈ ಕೂಡಲೇ ಕ್ರಮ ಕೈಗೊಂಡು ಎಳವೆಯಲ್ಲಿ ಧೂಮಪಾನ ಚಟಕ್ಕೆ ಬಲಿಯಾಗುವ ಮಕ್ಕಳನ್ನು ರಕ್ಷಿಸಬೇಕು ಎಂದು ಆಗ್ರಹಿಸಿದ್ದಾರೆ. ಸಿಗರೇಟು ಮಾರಾಟ ಕಂಪನಿಗಳು ಅಮಾಯಕ ಬಡ ಕುಟುಂಬದ ಮಕ್ಕಳ ಮೇಲೆ ಮಾಡುತ್ತಿರುವ ಆಕ್ರಮಣ ಇದಾಗಿದೆ ಎಂದು ಗುಡುಗುತ್ತಿದ್ದಾರೆ.
ಸಿಗರೇಟು ಚಟದ ಎರಡು ವರ್ಷದ ಹುಡುಗನ ಪ್ರತಾಪಗಳು ವರದಿಯಾಗಿರುವುದು ದಕ್ಷಿಣ ಸುಮಾತ್ರದ ಕರಾವಳಿ ಪ್ರದೇಶದ ಒಂದು ಪುಟ್ಟ ಹಳ್ಳಿಯಿಂದ. ಹುಡುಗನ ಅಪ್ಪ ಮಗ 18 ತಿಂಗಳಿದ್ದಾಗ ಒಂದು ಸಿಗರೇಟು ಕೊಟ್ಟು ಸೇದಿಸಿ ರುಚಿ ತೋರಿಸಿದ್ದನಂತೆ ಎಂದು ಎಎನ್ಐ ಸುದ್ದಿಸಂಸ್ಥೆ ಬಾತ್ಮೀದಾರರು ಹೇಳುತ್ತಾರೆ. ಧೂಮಪಾನ ವಿರೋಧಿಗಳು ಜನ ಜಾಗೃತಿಯ ಗಂಟೆಗಳನ್ನು ಒಂದು ಕಡೆ ಬಾರಿಸುತ್ತಿದ್ದರೆ ಇನ್ನೊಂದೆಡೆ ತಂಬಾಕು ಕೃಷಿ, ಸಿಗರೇಟು, ಬೀಡಿ ಉತ್ಪನ್ನಗಳಲ್ಲಿ ಏರಿಕೆ, ಪಾನ್ ಪರಾಗುಗಳ ಅವ್ಯಾಹತ ಮಾರಾಟ ನಡೆಯುತ್ತಲೇ ಇರುತ್ತದೆ.
ಈ ವಿಷಚಕ್ರ ಒಂದಲ್ಲ ಒಂದು ದಿನ ನಿಲ್ಲಬೇಕು ಎಂದು ಪಣತೊಟ್ಟಿರುವ ಸಂಸ್ಥೆಗಳ ಪಟ್ಟಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮಂಚೂಣಿಯಲ್ಲಿದೆ. ಅಂದಹಾಗೆ, ನಾಡಿದ್ದು ಭಾನುವಾರ 31ರಂದು ವಿಶ್ವ ತಂಬಾಕು ರಹಿತ ದಿನಾಚರಣೆ ಸುದ್ದಿ ಪತ್ರಿಕೆಗಳಲ್ಲಿ ಮಿಂಚಿ ಮರೆಯಾಗುತ್ತದೆ.
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು














Click it and Unblock the Notifications