ಸ ರಘುನಾಥ ಅಂಕಣ; ಡಿಯ್ಯ ಡಿಯ್ಯ ಡಾಡಾ ಡಿಯ್ಯ
ನರಸಿಂಗರಾಯನಿಗೆ ಕೂತರೆ ನಿಂತರೆ ಕಳ್ಳನ ಪಾತ್ರದ್ದೇ ಧ್ಯಾನವಾಯಿತು. ಸಾಕಷ್ಟು ಹೊತ್ತು ರಂಗದ ಮೇಲಿರುವ ಪಾತ್ರವದು. ಕತ್ತಲೆಗೆ ಕಾಯುವುದು, ಹೊಂಚು ಹಾಕುವುದು, ಚಟುವಟಿಕೆಯಿಂದಿರುವುದು. ಅವನಿಗೆ ಯಾವ ಕಾವಲೂ ಲೆಕ್ಕಕ್ಕಿಲ್ಲ. ಕಪ್ಪಗೆ ಗಟ್ಟಿಮುಟ್ಟಾದ ಮೈಕಟ್ಟು. ಅವನೆಂದರೆ ಭಯವೇ ಭಯಪಡಬೇಕು. ಜೊತೆಗೆ ಭಯವನ್ನೂ ನಗಿಸಬಲ್ಲವನು.
Recommended Video
ಸದಾರಮೆಯನ್ನು ಕಾಡುತ್ತ, ಪೀಡಿಸುವವನು. ಹೆಂಗರುಳಿನ ಪ್ರೇಕ್ಷಕರು ಅವಳ ಬಗ್ಗೆ ಕನಿಕರಿಸಿ ಅವನನ್ನು ನಿಂದಿಸುವಂತೆ ಬಲಗೊಳಿಸಬೇಕು ಎಂಬ ಇರಾದೆಗೆ ನರಸಿಂಗರಾಯ ಬಂದಿದ್ದ. ಅವನ ಪ್ರವೇಶದ ಹಾಡಿನಲ್ಲಿ ಅವನಲ್ಲಿನ ಚಮತ್ಕಾರ ಎದ್ದು ಕಾಣಬೇಕು. ಹಾಡು ಹಾಗಿರಬೇಕೆಂದುಕೊಂಡಾಗ ಕಳ್ಳನ ಪಾತ್ರ ಯಾರಿಗೆ ಕೊಡುವುದೆಂದು ಆಲೋಚಿಸಿದ.
ಈವರೆಗೆ ಆ ಪಾತ್ರ ಕಟ್ಟುತ್ತಿದ್ದ ಐನೋರ ಸತ್ಯಪ್ಪನ ನಟನೆ ತೆಗೆದು ಹಾಕುವಂತಿರಲಿಲ್ಲ. ಅವನೇ ಮಾಡುವುದಾದರೆ ಹಳೆಯ ಪದ್ಯಗಳೇ ಸಾಕೆ, ಹೊಸವು ಬೇಕೆ ಎಂದು ಕೇಳಬೇಕು. ಬೇಡವೆಂದರೆ ಹೊಸಬರನ್ನು ಆರಿಸಬೇಕು. ಅದಕ್ಕೆ ಸಭೆಯ ದಿನದವರೆಗೆ ಕಾಯಬೇಕು. ಈಗಲೇ ಇತ್ಯರ್ಥವಾದರೆ ಚೆನ್ನ ಅನ್ನಿಸಿತು. ಸತ್ಯಪ್ಪನ ಮನೆಗೆ ಹೋದ. ವಿಷಯ ಹೀಗೀಗೆಂದು ತಿಳಿಸಿದ. ಅವನು ನನ್ನನ್ನು ಬಿಟ್ಟುಬಿಡು ಮಾರಾಯ. ನನಗಾಗೊಲ್ಲವೆಂದ. ಆ ಸಮಸ್ಯೆ ತೀರಿತು. ಇನ್ನು ಹೊಸಬನನ್ನು ಆಯ್ಕೆ ಮಾಡಬೇಕು. ಯಾರು ಎಂದು ನೋಡೋಣ ಅಂದುಕೊಂಡು ಮನೆಯ ದಾರಿ ಹಿಡಿದ.

ಕೋಣೆಗೆ ಬಂದವನನ್ನು ಕಳ್ಳನ ಪಾತ್ರ ಕಾಡತೊಡಗಿತು. ಕಳ್ಳರು ತಮ್ಮನ್ನು ಹಿಡಿಯುವವರು ಯಾರೂ ಇಲ್ಲ ಎಂಬ ಅಹಮ್ಮಿನ ದಿಮಾಕಿನಲ್ಲಿರುತ್ತಾರಲ್ಲ ಅಂದುಕೊಂಡ. ಅವರೇನೆ ಕಡಿಮೆಯೆ ಅನ್ನಿಸಿದ್ದೇ ತಡ ಮನಸ್ಸಿನಲ್ಲಿ ಆ ಪದದಿಂದಲೇ ಹಾಡು ಹುಟ್ಟಲು ತವಕಿಸಿತು. ಹಾರ್ಮೋನಿಯಂ ಹಿಡಿದು ಕುಳಿತ.
ಡಿಯ್ಯ ಡಿಯ್ಯ ಡಾಡಾ ಡಿಯ್ಯ
ಡಿಯ್ಯ ಡಿಯ್ಯ ಡಾಡಾ ಡಿಯ್ಯ
(ಹಾಡುತ್ತ ರಂಗದ ಮೇಲೆ ಸುತ್ತಾಡುತ್ತ)
ಕಡಿಮೆಯಲ್ಲ ಈ ಕಳ್ಳ
ಬಲು ಸುಳ್ಳ ನಾ ಮಲ್ಲ
ಮನೆದೇವರಾಣೆ ಇದು ಸುಳ್ಳಲ್ಲ
ನನ್ನ ಹಿಡಿಯಲಾರ ಕೊತ್ವಾಲ
(ಸಭಿಕರತ್ತ ಕೈ ತೋರಿಸಿ)
ಕೇಳಿರಿ ಆ ಕೆಂಚಮ್ಮನ
ಹಾರಿಸಿದ್ದೆ ಕಾಸಿನ ಸರವನ್ನ
ಬೈಸಿದ್ದೆ ಕೊತ್ವಾಲನ
ಹಿಡಿಯೊ ಶಪಥ ಮಾಡಿ ಸೋತಿದ್ದನ್ನ.
ಅರಮನೆ ಕಾವಲು ಲೆಕ್ಕಕ್ಕಿಲ್ಲ
ರಾಣಿಯ ರತ್ನದ ಹಾರವೆ ಮಾಯ
ಇರುಳಲಿ ಹೆಂಡಿರ ಕೊರಳಲಿ ಮಿಣಮಿಣ
ಕೊತ್ವಾಲನ ಕಷ್ಟ ತಿಮ್ಮಪ್ಪನೆ ಬಲ್ಲ
ಹಾಡು ಕೇಳಿಸಿಕೊಳ್ಳುತ್ತ ಅಮ್ಮ ನಕ್ಕಾಗ ನರಸಿಂಗರಾಯನಿಗೆ ಗೆದ್ದೆ ಅನ್ನಿಸಿತು. ಮನೆಯಲ್ಲಿದ್ದ ಅಪ್ಪನ ನಗು ಹಾಡು ಚೆನ್ನಾಗಿದೆ ಎಂಬ ಸೂಚನೆ ಕೊಟ್ಟಿತು. ಸಂಜೆ ಮುನೆಕ್ಕ, ಸುನಂದಾ ಬಂದಾಗ ಮಾಡಿದ ಮೊದಲ ಕೆಲಸ ಹಾಡು ಕೇಳಿಸಿದ್ದು. ಆ ಇಬ್ಬರೊಂದಿಗೆ ಅಮ್ಮನೂ ನಕ್ಕಳು. ಕೆಂಚಮ್ಮನೂ ನಿನ್ನ ಹಾಡಿಗೆ ತಂದುಬಿಟ್ಟಿದ್ದೀಯಲ್ಲ. ಅವಳು ಕೇಳಿದರೆ ಕುಣಿದಾಡಿಬಿಡುತ್ತಾಳೆ. ನಾಳೆ ಬರಲು ಹೇಳುತ್ತೇನೆ ಎಂದಳು ಮುನೆಕ್ಕ. ಅದೇನು ಬೇಡ. ನಾಟಕದ ದಿನ ಕೇಳಲಿ ಸುಮ್ಮನಿರು ಎಂದಳು ಅಮ್ಮಯ್ಯ.
-
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
ಕರ್ನಾಟಕ PGCET 2026 ಅಧಿಸೂಚನೆ ಪ್ರಕಟ: ಎಂಬಿಎ ಸೇರಿ ವಿವಿಧ ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಮಾರ್ಚ್ 23 ರಿಂದ ಅರ್ಜಿ ಆಹ್ವಾನ












Click it and Unblock the Notifications