ಹೊರಟರು ರಾಯರು ಸಿಂಗಾರವಾಗಿ...
ಹಾರ್ಮೋನಿಯಂ ಮುಂದೆ ಕುಳಿತು ಶ್ರುತಿ ಹಿಡಿಯುತ್ತ ಕುಳಿತಿದ್ದ ನರಸಿಂಗರಾಯ ತಲೆಯೆತ್ತಿ ನೋಡಿದ. ಅಪ್ಪ ರೂಮಿನಿಂದ ಹೊರಬರುತ್ತಿದ್ದ. ಕೂಡಲೇ ವರಾಳಿರಾಗದಲ್ಲಿ ನುಡಿಸತೊಡಗಿದ,
ನೋಡಿರಿ ರಾಯರನ- ಹೊರಟಿಹ ರೀತಿಯನ
ತಲೆಯಲಿ ಪೇಟ- ಕಪ್ಪನೆ ಕೋಟು,
ಕೊಡೆ ಕೈಯಲ್ಲಿ- ಧರಿಸಿದ ರಾಯರನ,
ನೋಡಿರೆ.....'
ಅಪ್ಪ ಮುಗುಳು ನಗೆಯಲ್ಲಿ ಹುಸಿಮುನಿಸು ತೋರಿ, ಸಾಕೋ ಕೀಟಲೆ, ಕತ್ತೆ ಭಡವ ಎಂದರು. ಅಮ್ಮ ಕೊಟ್ಟ ತುಂಡು ಬೆಲ್ಲವನ್ನು ಬಾಯಿಗೆ ಹಾಕಿಕೊಂಡು, ತಾಮ್ರದ ತಂಬಿಗೆಯಲ್ಲಿ ತಂದ ನೀರಿನಲ್ಲಿ ಎರಡು ಗುಟುಕು ಕುಡಿದ. ಅಮ್ಮ ಬಾಗಿಲವರೆಗೆ ಹೋಗಿ ಬಂದಳು. ಮುಖ್ಯ ಕೆಲಸದ ಮೇಲೆ ಯಾರೇ ಮನೆಯಿಂದ ಹೊರಡಲಿ ಅಮ್ಮ ಕೂಡಲೆ ಬಾಗಿಲು ಹಾಕುತ್ತಿರಲಿಲ್ಲ. ಯಾವುದೋ ಮುಖ್ಯ ಕೆಲಸವಿದ್ದೀತು ಅಂದುಕೊಂಡ ನರಸಿಂಗರಾಯ. 'ಪತಿರಾಯರ ಪಯಣವೆತ್ತಲೆ ಭಾಮೆ' ಎಂದು ನುಡಿಸಿದ. ಅಮ್ಮ ಹಾರ್ಮೋನಿಯಂ ಎಳೆದುಕೊಂಡು 'ಕೋತಿಯಾಟವಂತೊ ಪೆಂಗೆ, ನೋಡಿ ಬರುತಾರಂತೊ' ಎಂದು ನುಡಿಸಿದಳು. ಇಬ್ಬರೂ ನಕ್ಕರು.

ಕಳೆದ ಸಂಜೆ ಹುಣಿಸೆ ತೋಪಿನಲ್ಲಿ ಕುಳತು ಸದಾರಮೆ ನಾಟಕದ ಕಳ್ಳನ ಪಾತ್ರ ಕುರಿತು ಆಲೋಚಿಸುತ್ತಿದ್ದಾಗ ಮನಸ್ಸಿಗೆ ಬಂದ,
ಜಲಜಾಕ್ಷಿ ಪೇಳೆ ಮನದ ಚಿಂತೆಯೇನೆ
ಸುರಪಾರಿಜಾತ ತರಲೆ ಮುಡಿಗೆ
ಅಕ್ಕಸಾಲಿ ಮನೆಗೆ ಕನ್ನವಿಕ್ಕಿ
ಚಿಂತಾಕುಪದಕ ತರಲೆ
ಪದ್ಯಕ್ಕೆ ಯಾವ ರಾಗ ಹಾಕುವುದೆಂದು ಚಿಂತಿಸುತ್ತ ಕುಳಿತ. ಹಲವು ರಾಗಗಳು ಮನಸ್ಸಿಗೆ ಬಂದವು. ಅವುಗಳಲ್ಲಿ ನಾದನಾಮಕ್ರಿಯ ಸರಿಯೆನಿಸಿತು. ನುಡಿಸಿ ನೋಡಿದ. ಸಮಾಧಾನವಾಯಿತು. ಅಮ್ಮನನ್ನು ಕರೆದು ಹೇಳಿ ನುಡಿಸಿ ಕೇಳಿಸಿದ. ಅವಳು ತಲೆ ನೇವರಿಸಿದಳು. ಇನ್ನೊಂದೆರಡು ಮೂರು ನುಡಿ ಸೇರಿಸಿದರೆ ಹೇಗೆ ಎಂದ. ಕಳ್ಳನ ಪಾತ್ರದ ಹಾಡುಗಳು ಚುಟುಕವಾಗಿದ್ದರೆ ಚೆನ್ನ. ಇಷ್ಟು ಸಾಕು. ಒಂದು ಸಲ ಅಪ್ಪನ ಮುಂದೆ ಹಾಡಿ ಏನು ಹೇಳುವರೊ ಕೇಳು ಎಂದಳು. ಸದಾರಮೆ ಅಸಹ್ಯ, ಅಸಹನೆಯಿಂದ ಕಳ್ಳನನ್ನು ನಿಂದಿಸುವ ಸನ್ನಿವೇಶದಲ್ಲಿ ಕಳ್ಳನಿಗೆ ಹಾಡೇ, ಪದ್ಯವೇ ಎಂಬ ಚಿಂತೆಗೆ ಬಿದ್ದ. ಪದ್ಯವೇ ಸೂಕ್ತವೆನ್ನಿಸಿತು. ಕುಳಿತಲ್ಲೆ ಅಮ್ಮನಿಗೆ ಕೇಳಿಸುವಂತೆ ಹೇಳಿದ. ಹಾಡೇಕೊ? ಪದ್ಯವೇ ಇರಲಿ ಎಂದಳು. ಆಗಲೇ ಮುನೆಕ್ಕನ ಅಂದಿನ ಮೊದಲ ಹಾಜರಿಯಾಯಿತು. ಅಮ್ಮ ಅಡುಗೆ ಮನೆಗೆ ಕರೆದು, ನರಸಿಂಗನಿಗೆ ಕಾಫಿ ಕೊಟ್ಟು ನೀನೂ ಕುಡಿ ಎಂದಳು. ಮುನೆಕ್ಕ ತಂದುಕೊಟ್ಟು ತನ್ನ ಲೋಟ ಹಿಡಿದು ಕುಳಿತಳು.
ನರಸಿಂಗರಾಯ ಅವಳಿಗೂ ಪದ್ಯವನ್ನು ಹಾಡಿ ಕೇಳಿಸಿದ. ಅಪ್ಪನ ಗರಡಿ. ಚೆನ್ನಾಗಿರದಿದ್ದೀತಾ ಎಂದು ರಾಗ ಎಳೆದವಳು, ಸದಾರಮೆ ರಾಣಿಯ ಕೊರಳ ಮಣಿಯಷ್ಟು ಸುಂದರಿಯಲ್ಲವ ಎಂದಳು. ಕೂಡಲೇ ನರಸಿಂಗರಾಯ ಆಹಾ ಮುನೆಕ್ಕ ಎಂದವನೆ ಅವಳ ಕೆನ್ನೆಗೆ ಮುತ್ತು ಕೊಟ್ಟ. ಅವಳು ತಬ್ಬಿಬ್ಬುಗೊಂಡಳು. ಅವನು ಕಣ್ಣು ಮುಚ್ಚಿ,
ನಾರೀ ರಾಣಿ ಕೊರಳ ಮಣಿ ಭಾಮಾಮಣಿ
ಮಾರ ಸುಕುಮಾರ ಸುರ ಸುಂದರನ
ಅರಸರೆದೆಗಳ ಗಡಗಡ ನಡುಗಿಪನ
ದೆವ್ವ ಭೂತ ಪಿಶಾಚಿ ಅನುವುದೇನು ಚೆನ್ನ, ಚಿನ್ನ
ಇದು ತರವೆ, ಸರಿಯೆ ಸರಸಿಜಾಕ್ಷಿ ಒಲಿಯೆ
ಎಂದು ಹಾಡಿ, ಹೇಗಿದೆ ಎಂದ. ಚೆನ್ನಾಗಿದೆ ಎಂದು ದೂರ ಸರಿದು ಕುಳಿತಳು. ಹತ್ತಿರದಿಂದ ಚೆನ್ನಾಗಿದೆ ಎಂದು ಹೇಳಲು ಭಯವಾಗತ್ತೆ ಎಂದು ನಕ್ಕಳು.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ












Click it and Unblock the Notifications