ಸ ರಘುನಾಥ ಅಂಕಣ; ಗಾಳಕ್ಕೆ ಬಿದ್ದ ಮೀನುಗಳು...
ಪಾತ್ರಧಾರಿಗಳನ್ನು ಮುಂದಿಟ್ಟುಕೊಂಡು ಪಾತ್ರ ನಿಷ್ಕರ್ಶೆ ಮಾಡುವುದು ಬೇಡವೆಂಬ ಇಂಗಿತ ಅನುಭವಿ ಅಪ್ಪಯ್ಯ, ಮೋಟಪ್ಪರದಾಗಿತ್ತು. ಇದಕ್ಕೆ ನರಸಿಂಗರಾಯನ ಆಕ್ಷೇಪಣೆಯಿರಲಿಲ್ಲ.
Recommended Video
ರಾಜಕಂಠೀರವನ ಪಾತ್ರ ನಾರಾಯಣಪ್ಪನದು, ಮಂತ್ರಿಯ ಪಾತ್ರ ಮುನಿಕೃಷ್ಣಪ್ಪನದು ಎಂದಾಗಿಬಿಟ್ಟಿದ್ದರಿಂದ ಅವರನ್ನು ಕರೆಯಬಹುದು. ನಾರಾಯಣಪ್ಪ ಕೊಂಚ ಅತ್ತ ಇತ್ತ ತೂಗುವ ಮನುಷ್ಯ. ಯಾರನ್ನಾದರೂ ಎತ್ತಿಕಟ್ಟಬಹುದು. ಅದನ್ನು ತಪ್ಪಿಸಿದಂತಾಗುತ್ತದೆ ಎಂಬ ನರಸಿಂಗರಾಯನ ಅಭಿಪ್ರಾಯ ಒಪ್ಪಿತವಾಯಿತು. ಅರ್ಜೆಂಟಾಗಿ ದಾಸಪ್ಪನ ತೋಪಿಗೆ ಬರಬೇಕೆಂಬುದಾಗಿ ಅಪ್ಪಯ್ಯ ಪಿಲ್ಲಣ್ಣನ ಮೂಲಕ ಆ ಇಬ್ಬರಿಗೆ ಹೇಳಿ ಕಳುಹಿಸಿ, ನಾನು ಮೊದಲು ಹೋಗಿರುತ್ತೇನೆ. ಸ್ವಲ್ಪ ಹೊತ್ತಿನ ನಂತರ ನೀವು ಬನ್ನಿ ಎಂದು ಹೊರಟ.
ಮೋಟಪ್ಪ ದೋಟಿಕೋಲು ಹಿಡಿದು ಮೇಕೆಗಳಿಗೆ ಸೊಪ್ಪು ತರಲು ಹೊರಟವನಂತೆ ಹೊರಟರೆ, ನರಸಿಂಗರಾಯ ಮಚ್ಚು ಹಗ್ಗ ಹಿಡಿದು ಸೌದೆಗಾಗಿ ಹೊರಟಂತೆ ನಡೆದ. ಮೂವರೂ ಜುವ್ವಿಮರದಡಿ ಕೂತರೊ ಇಲ್ಲವೊ ನಾರಾಯಣಪ್ಪನನ್ನು ಹಿಂಬಾಲಿಸಿಕೊಂಡು ಮುನಿಕೃಷ್ಣಪ್ಪ, ಅವನ ಬೆನ್ನಲ್ಲೆ ಬೋಡೆಪ್ಪ, ಪಿಲ್ಲಣ್ಣ ಬಂದರು. ಈ ಇಬ್ಬರ ಹಾಜರಿಗೆ ಯಾರ ತಕರಾರೂ ಇರಲಿಲ್ಲ. ಮೊದಲೇ ಮಾತಾಡಿಕೊಂಡಂತೆ ತನಗೇ ಆದ್ಯತೆಯೇನೋ ಎಂದು ನಾರಾಯಣಪ್ಪ ಭಾವಿಸುವಂತೆ, ಮುನಿಕೃಷ್ಣಪ್ಪನೂ ಮುಖ್ಯನೆಂದುಕೊಳ್ಳುವಂತೆ ಮೋಟಪ್ಪ ಮಾತು ಆರಂಭಿಸಿದ.

ಅಪ್ಪಯ್ಯ, ನರಸಿಂಗರಾಯ ನೀಡಿದ್ದ ಮುನ್ಸೂಚನೆಯಂತೆ ಸದಾರಮೆ, ರಾಜಮಾರ್ಥಾಂಡನ ಪಾತ್ರಗಳ ವಿಷಯಕ್ಕೆ ಬರದೆ ಮೋಟಪ್ಪ ಇಂತಿಂಥ ಪಾತ್ರ ಇಂತಿಂತಹವರಿಗೆ ಎಂದು ಹೇಳುತ್ತ, ತೀಮಾನಿಸಿದ್ದನ್ನು, ಈಗ ತೀಮಾನಿಸಲೆಂಬಂತೆ ಹೇಳುತ್ತ, ಮಧ್ಯೆ ಮಧ್ಯೆ ಆದೀತ ನಾರಾಯಣಪ್ಪ, ಆಗಬಹುದ ಮುನಿಕೃಷ್ಣಪ್ಪ ಎಂದು ಕೇಳುತ್ತ, ಕೂಡಲೇ ನೀವು ಒಪ್ಪದ ಮೇಲೆ ಆಯ್ತು ಬಿಡಿ ಎಂದು ವ್ಯವಹಾರ ಚತುರತೆಯನ್ನು ಪ್ರದರ್ಶಿಸಿದ.
ಹೆಸರು, ಅದರ ಮುಂದೆ ಪಾತ್ರದ ಹೆಸರನ್ನು ಬರೆದುಕೊಳ್ಳುತ್ತಿದ್ದ ನರಸಿಂಗರಾಯ ಆ ಇಬ್ಬರಿಗೂ ಮಾತನಾಡಲು ಅವಕಾಶ ಕೊಡದೆ 'ಈ ಎರಡು ಹಾಳೆಗಳಲ್ಲಿ ಬರೆದಿದ್ದೇನೆ. ಎಲ್ಲರಿಗೂ ತಿಳಿಯುಂತೆ ನೀನು ಓದು ನಾರಾಯಣಪ್ಪ. ನೀನು ಚೆಕ್ಕು ಮಾಡಿಕೊಳ್ಳುತ್ತ ಹೋಗು ಮುನಿಕೃಷ್ಣಪ್ಪ' ಎಂದು ಇಬ್ಬರ ಕೈಗೂ ಒಂದೊಂದು ಪಟ್ಟಿಕೊಟ್ಟ. ನಾರಾಯಣಪ್ಪ ಓದಿ ಮುಗಿಸಿದ ಕೂಡಲೇ ಅಪ್ಪಯ್ಯ ಸರಿಯೋ, ಒಪ್ಪಿಗೆಯೋ ಎಂದ. ಕೂಡಲೇ ಮೋಟಪ್ಪ, 'ನೀವಿಬ್ಬರೂ ಎಲ್ಲರಿಗೂ ವಿಷಯ ತಿಳಿಸಿ, ಸಾಯಂಕಾಲಕ್ಕೆ ಚಲ್ಲಾಪುರಮ್ಮನ ಗುಡಿಗೆ ಬರೋಕೆ ಹೇಳಿಬಿಡಿ. ಅಲ್ಲಿ ಮುಂದಿನದು ನಿಮ್ಮಿಂದಲೆ ಆಗಲಿ' ಎಂದ.

ಅವರು ಮನಸ್ಸಿನಲ್ಲೇ ಉಬ್ಬಿದರು. 'ಸರಿ ಇರದೀರ ಏನು? ಸಾಯಂಕಾಲ ಸೇರೋಣ' ಅಂದ ನಾರಾಯಣಪ್ಪ. 'ಎಲ್ಲಾ ಸರಿಯಾಗೇನೊ ಇದೆ. ರಾಜಮಾರ್ತಾಂಡ, ಕಲಹಂಸ, ಸದಾರಮೆ ಪಾರ್ಟು...' ಅಂದ ಮುನಿಕೃಷ್ಣಪ್ಪ. 'ಅದನ ನನಗೆ ಬಿಡ್ರಿ' ಅಂದ ಮೋಟಪ್ಪ. 'ಸರಿ ಹಾಗಾದರೆ ನಾವಿನ್ನು ಬರಬೋದ? ಇವರನೆಲ್ಲ ಕಾಣಬೇಕಲ್ಲ' ಅನ್ನುತ್ತ ಅವರಿಬ್ಬರು ಎದ್ದರು. ಸ್ವಲ್ಪ ಇರಿ, ಮುನೆಕ್ಕ ಏನೋ ತರ್ತಿದ್ದಾಳೆ ನೋಡೋಣ ಅಂದ ನರಸಿಂಗರಾಯ. ಮುನೆಕ್ಕ ತಂದ ಉಪ್ಪಿಟ್ಟು, ಕೇಸರಿಬಾತನ್ನು ತಿಂದು ಆ ಇಬ್ಬರು ಖುಷಿಯಿಂದ ಹೊರಟರು. ಉಳಿದವರು ಉಳಿದ ಮೂರು ಪಾತ್ರ, ಪಾತ್ರಧಾರಿಗಳ ಕುರಿತ ಮಾತಿಗೆ ತೊಡಗಿದರು.
-
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು












Click it and Unblock the Notifications