ಪೂರ್ಣದರ್ಶನದ ಭಾಗ್ಯ ಕೊಟ್ಟ ನನ್ನೊಲವ ಶಕುಂತಲೆಗೆ ಪ್ರೀತಿ ತುಂಬಿದ ಪತ್ರ
ನನ್ನ ಶಕುಂತಲೇ,
ರೈಲು ಬರುತ ಕೂಗಿತು ನೀನು ಬಂದೆಯೆಂದು. ರೈಲು ಹೋಗುತ ಕೂಗಿತು ನೀನು ಇಳಿದಿರುವಿಯೆಂದು. ನಿಲ್ದಾಣಕ್ಕೆ ಬಂದಿದ್ದ ಅಪ್ಪನ ಹಿಂದೆ ನೀನು. ಅವನು ಒಳಬಂದಾಗ ಬಾಗಿಲಲ್ಲಿ ನನಗೆ ನಿನ್ನ ಪೂರ್ಣದರ್ಶನ ಭಾಗ್ಯ ಕೊಟ್ಟೆ ಶಕುಂತಲೆ.
ನಿನ್ನ ನಡುನೆತ್ತಿಯಲಿ ಓರೆಯಾದ ಬೈತಲೆ ಬೊಟ್ಟು, ಮುಡಿದ ಕನಕಾಂಬರದ ಜಡೆ ನಡುವೆ ಸೇವಂತಿಗೆ ಜಡೆಬಿಲ್ಲೆ, ಕೊರಳಲಿ ಚಿಂತಾಕು ಪದಕ, ಜೊತೆಗೆ ಕಾಸಿನಸರ, ಮುತ್ತಿನ ಮೂಗುತಿ, ತೋಳಬಂಧಿ, ಕಿವಿಯಲ್ಲಿ ಹೊಳೆವ ಮತ್ಸ್ಯದೋಲೆ, ಸೊಂಟದಲಿ ಬಂಗಾರದ ಡಾಬು, ಕಾಲಿನಲಿ ಬೆಳ್ಳಿ ಚೈನು, ಹಸಿರು ರೇಷಿಮೆಸೀರೆ - ರವಿಕೆ, ಹಗಲು ಇರುಳಾಯಿತೆ ಅನಿಸುವ ಕಣ್ಣ ಕಾಡಿಗೆ.
ಅಮ್ಮ ಕೆನ್ನೀರಿನಾರತಿ ಎತ್ತಿ ದಾಸವಾಳದ ಗಿಡಕೆರಚಿ ಬಂದಳು ದೃಷ್ಟಿ ನಿವಾರಣೆಗೆ. ನೀನು ಒಳಬಂದಾಗ ಮನೆಯಲ್ಲಿ ಎಂಥದೋ ಕಾಂತಿ. ನೀನಾಗ ಪ್ರಭಾದೇವಿ ಅನಿಸಿತು. ಕೋಳಿ ಕೂಗಿಗೆ ಕನಸು ಕರಗಿ ಎಚ್ಚರಗೊಂಡೆ ಶಕುಂತಲೆ.

ಅಂದು ಗದ್ದೆಯ ಕೆಲಸ. ನಾಟಿ ಮಾಡಿದ ನೆಲ್ಲುಪೈರು ಹೊಸಬೇರು ಬಿಟ್ಟು ನೆಟ್ಟಗೆ ನಿಂತು ಹೊಸ ಹಸಿರುಗರಿಯಿಟ್ಟಿತ್ತು. ಕನಸಿನಲಿ ನೀನುಟ್ಟ ಹಸಿರು ಸೀರೆಯಂತೆ. ಕಳೆ ತೆಗೆಯುವ ಕೆಲಸ ಕೆಸರುಗದ್ದೆಯಲ್ಲಿ. ಹೆಣ್ಣಾಳುಗಳು ಬಾಗಿ ತೆಗೆಯುತ್ತಿದ್ದರು ಕಳೆ. ಬಾಗಿದ ಅವರು ಕಾಣುತ್ತಿದ್ದರು ರಂಗುರಂಗಿನ ಬೆಳ್ಳಕ್ಕಿಯಮ್ಮರಂತೆ.
ಅವರಲ್ಲಿ ಒಬ್ಬಾಕೆ, ನಿನ್ನೆ ತವರಿಂದ ಬಂದವಳು ಉಟ್ಟಿದ್ದಳು ತವರಿನವರು ಕೊಟ್ಟಿದ್ದ ಗಿಳಿಯಂಚು ಹಸಿರುಸೀರೆ. ಅವಳ ಹೆಸರು ಗನ್ನೇರಿ. ಅವಳ ಪಕ್ಕದಲೆ ಇದ್ದಳು ಹುಲಿಬಣ್ಣದ ಸೀರೆ-ರವಿಕೆ ತೊಟ್ಟ. ನಿನ್ನೆಯಷ್ಟೇ ನಿಶ್ಚಿತಾರ್ಥ ಮುಗಿದಿದ್ದ ಜವ್ವನಿ. ಅವಳ ಹೆಸರು ಜವರಾಲು.
ಕೆಂಪು ಸೀರೆಯುಟ್ಟವಳು ವರದಮ್ಮ. ಅವಳದು ಚಲುವು ಮಾಸದ ನಡುವಯಸು. ಕಷ್ಟದ ಜೀವ, ಇಪ್ಪತ್ತೈದಕ್ಕೇ ನಾಲ್ಕು ಮಕ್ಕಳ ತಾಯಿ. ಚೌಡಿ ಉಟ್ಟಿದ್ದಳು ಅಮ್ಮ ಕೊಟ್ಟ ನೀಲಿ ರಂಗಿನ ಸೀರೆ. ನಮ್ಮ ಗದ್ದೆಯಲ್ಲಿ ಮೂಡಿತ್ತು ಶಕುಂತಲೆ ಕಾಮನಬಿಲ್ಲು. ಅಲ್ಲಿ ಕಂಡಿತು ಹಳದಿ ಬಣ್ಣದ ಕೊರತೆ. ಅದನು ತುಂಬಲು ಅಲ್ಲಿ ನಾ ನಿನ್ನ ಕಲ್ಪಿಸಿಕೊಂಡೆ.
ನಾನು ಕೊನೆಯಲ್ಲಿ ಆಳುಗಳ ಜೊತೆ ಸೊಂಟ ಬಗ್ಗಿಸಿದ್ದೆ. ಬದುವಿನ ಮೇಲೆ ಕುಳಿತಿದ್ದ ಅಪ್ಪ ಮಾಡುತ್ತ ಕೆಲಸದ ಅಜಮಾಯಿಷಿ. ಆಗ ಬೆಳಗಿನ ಒಂಬತ್ತು ಗಂಟೆ. ಕಾಯುತಿದ್ದೆವು ಅಮ್ಮನಿಗೆ ಅವಳು ಹೊತ್ತು ತರುವ ತಂಗಳು ಮಕ್ಕರಿಗೆ. ಅಮ್ಮ ಬರುತಲಿದ್ದಳು ಅನ್ನಪೂರ್ಣೆಯಂತೆ. ತಂಗಳುಂಡು ಆಳುಗಳು ಗದ್ದೆಗಿಳಿದರು. ಅವವರೊಡನೆ ಅಮ್ಮ ಕೈ ಹಾಕಿದಳು. ನಾನು ಎತ್ತುಗಳ ಮೇಸಲು ಕೆರೆಕಟ್ಟೆಗೆ ಹೋದೆ.
ಕೆರೆಯ ಕೋಡಿ ಅಂಚಿನಲ್ಲಿದ್ದ ಎಲೆಯಿರದ ಕಕ್ಕೆಮರದ ತುಂಬ ನೆಲದತ್ತ ಜೋಲುತ್ತಿದ್ದವು ಉದ್ದ ಮುಗ್ಗು-ಹೂ ಮುಡಿದ ಗೊಂಚಲುಗಳು. ಆ ಗೊಂಚಲುಗಳ ಹಿಡಿದು ಯಾರೋ ಇಳಿದು ಮರದಡಿಗೆ ಬಂದಂತೆ. ತಲೆದೂಗುತಿದ್ದವು ತಂಗಡಿ ಹೂಗಳು ಸ್ವಾಗತಿಸುವಂತೆ. ತಿತ್ತಿರಿ ಹಕ್ಕಿ ಬಾನಲ್ಲಿ ಸುತ್ತಿ ಹಾಡುತ್ತಿತ್ತು ಸ್ವಾಗತದ ಶುಭಗೀತೆ.
ಬಾರೆಂದು ಕರೆಯುತ್ತಿರುವ ಆ ಯಾರು? ನೋಡಿದೆ. ನೋಡುತ್ತ ನೋಡುತ್ತ ಕಾಣಿಸಿತು ಸ್ಪಷ್ಟ. ಅದು ನೀನೇ. ಕನಸಿನಲಿ ಕಂಡ ಒಡವೆ ವಸ್ತ್ರಗಳಲ್ಲಿ ನನ್ನ ಶಕುಂತಲೆ. ಹಗಲಿನಲಿ ಮರುಕಳಿಸಿದ ಇರುಳು ಕಂಡ ಕನಸು. ಗದ್ದೆ ಕಡೆಯಿಂದ ಹಾಡು:
ಅರಮನೆ ಬಾಕುಲಕ ಮಾಸಿಗುರು ತ್ವಾರಣ ಕಟಿಸಿ
ದ್ವಾರಕ ಬಾಡದ ದಾಳಿಂಬ್ರಿ ಹೂ ಮಾಲೆ ಹಾಕಿಸಿ
ಅರಮನೆ ಒಳಿಗೆ ಅತ್ತರು ಮಲಿಗೂವ್ವ ಗಮಲು
ಅರಸ ಕಾತವನೆ ಮನುಮತನಂತ ರೂಪು
ಮನದೊಳಗಿನ ಕನಸಿನ ಗುಂಗಿಗೆ ಹಾಡಿನಿಂಪು. ಆ ಇಂಪಿನಲಿ ನಿನ್ನ ಕಾಡಿಗೆ ಕಣ್ಣೋಟದ ಪ್ರೀತಿಯ ಬೆಳಕು.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications