ಕ್ಯಾನ್ಸರ್ ಇದೆ; ಆದರೆ ಚಿಂತೆ ಇಲ್ಲ!

ಈ ಸಂದರ್ಭದಲ್ಲಿ ಉಳಿದೆಲ್ಲರಂತೆಯೇ ಖಾಸಗಿ ಆಸ್ಪತ್ರೆಗಳ ಮೆಟ್ಟಿಲು ಹತ್ತಿ ಇಳಿದರು ರೇಖಾರಾಣಿ. ಅಲ್ಲಿ ಚಿಕಿತ್ಸೆಗೆಂದು ಲಕ್ಷ ಲಕ್ಷ ಕೇಳಿದಾಗ ಸಿಡಿಮಿಡಿಗೊಂಡ ಅಶೋಕ್- ಸಾಯೋದು ಗ್ಯಾರಂಟಿ ಅಂತಾಗಿದೆ. ಹೀಗಿರುವಾಗ ಸುಮ್ನೇ ಆಸ್ಪತ್ರೆಗೆ ಯಾಕೆ ದುಡ್ಡು ಸುರೀಬೇಕು? ನನ್ನನ್ನು ತೀರ್ಥಹಳ್ಳಿಗೆ ಕಳಿಸಿಬಿಡು ರೇಖಾ. ಅಲ್ಲಿ ನನ್ನ ತಂಗಿ ಮನೆ ಇದೆಯಲ್ಲ, ಅಲ್ಲಿರ್ತೀನಿ ನಾನು. ಆ ಹಸಿರು ಪ್ರಕೃತಿಯ ಮಧ್ಯೆ ನೆಮ್ಮದಿಯಾಗಿ ಸಾಯ್ತೀನಿ' ಅಂದರಂತೆ.
ಸರಿ, ಹಾಗೇ ಮಾಡೋಣ' ಅಂದರು ರೇಖಾ. ಅಶೋಕ್ ಅವರನ್ನು ತೀರ್ಥಹಳ್ಳಿಗೆ ಕಳಿಸಿ, ತಾವು ಬೆಂಗಳೂರಲ್ಲೇ ಇದ್ದುಕೊಂಡು ಸೀರಿಯಲ್ ಮುಂದುವರಿಸುವುದು. ಹೀಗೇ ಒಂದಷ್ಟು ಜಾಸ್ತಿ ದುಡ್ಡು ಜತೆಯಾದ ತಕ್ಷಣ ಅಶೋಕ್ಗೆ ಚಿಕಿತ್ಸೆ ಕೊಡಿಸುವುದು ಎಂಬುದು ರೇಖಾ ರಾಣಿಯ ಉದ್ದೇಶ ವಾಗಿತ್ತು.
ಆದರೆ, ನಮ್ಮ ಆಶಯಗಳಿಗೆ ವಿರುದ್ಧವಾದುದು ನಡೆಯುವುದೇ ಜೀವನದ ರಹಸ್ಯ ಮತ್ತು ಮಹತ್ವ ತಾನೆ? ಈ ಮಾತು ರೇಖಾ ರಾಣಿ- ಅಶೋಕ್ ಕಶ್ಯಪ್ ವಿಷಯದಲ್ಲೂ ನಿಜವಾಯಿತು. ಅಶೋಕ್ಗೆ ಕ್ಯಾನ್ಸರ್ ಎಂದು ಗೊತ್ತಾದ ತಕ್ಷಣ ಚಾನೆಲ್ನವರು ನಂದಗೋಕುಲ' ಸೀರಿಯಲ್ಗೆ ಗೇಟ್ಪಾಸ್ ಕೊಟ್ಟರು. ಒಂದು ವೇಳೆ ಅಶೋಕ್ ಆಕಸ್ಮಿಕವಾಗಿ ಗೊಟಕ್ ಎಂದರೆ ಧಾರಾವಾಹಿ ದಿಢೀರ್ ನಿಂತು ಹೋಗಬಹುದು. ಅಂಥ ಸಂದರ್ಭಕ್ಕೆ ಕಾಯುವ ಬದಲು ನಾವೇ ನಿಲ್ಲಿಸಿದರೆ ಚೆಂದ ಎಂಬುದೇ ಚಾನೆಲ್ನವರ ವಾದವಾಗಿತ್ತು! ಪರಿಸ್ಥಿತಿ ಹೀಗಿದ್ದಾಗಲೇ ಚಿಕಿತ್ಸೆ ಕೊಡಿಸಲಿಕ್ಕಾಗಿ ಯಾರ ಬಳಿಯೂ ಕೈ ಒಡ್ಡುವುದಿಲ್ಲ ಎಂದು ರೇಖಾರಿಂದ ಆಣೆ-ಪ್ರಮಾಣ ಮಾಡಿಸಿಕೊಂಡರು ಅಶೋಕ್ ಕಶ್ಯಪ್.
ಮುಂದೇನಾಯ್ತು ಎಂಬುದನ್ನು ರೇಖಮ್ಮ ವಿವರಿಸುವುದು ಹೀಗೆ : ಓಹ್, ಬದುಕು ಮುಗಿದೇ ಹೋಯ್ತು ಎಂಬ ಸ್ಥಿತಿ ತಲುಪಿದಾಗ ಎಲ್ಲರಿಗೂ ನೆನಪಾಗುವುದು ಸ್ನೇಹಿತರು, ಬಂಧುಗಳೇ. ಯಾರಾದರೂ ಒಬ್ಬರ ಕಡೆಯಿಂದ ಆಕಸ್ಮಿಕವಾಗಿ ಸಹಾಯ ದೊರೆತು ಒಂದಷ್ಟು ಸಹಾಯ ಆಗಬಹುದೇನೋ ಎಂಬ ಯೋಚನೆಗಳು ಬರುವುದೇ ಇಂಥ ಸಂದರ್ಭಗಳಲ್ಲಿ. ಅದರಿಂದ ನಾನೂ ಹೊರತಾಗಿರಲಿಲ್ಲ. ಆದರೆ, ನನಗೆ ಯಾರಿಂದಲೂ ಹಣದ ಸಹಾಯ ಬೇಕಿರಲಿಲ್ಲ. ಒಂದೇ ಒಂದು ಸಮಾಧಾನದ ಧೈರ್ಯದ, ಭರವಸೆಯ ಮಾತು ಬೇಕಿತ್ತು. ನಿನ್ನ ಬೆನ್ನ ಹಿಂದೆ ನಾವಿದ್ದೇವೆ. ಹೆದರಬೇಡ ಮುನ್ನುಗ್ಗು ಎಂಬ ಪ್ರೋತ್ಸಾಹದ ಅಗತ್ಯವಿತ್ತು.
ಆದರೆ, ಇಂಥ ಸಂಕಟದ ಸಂದರ್ಭದಲ್ಲಿ ಪರಮಾಪ್ತರು ಎಂದು ನಾವು ನಂಬಿದ್ದೆವಲ್ಲ? ಆ ಲಿಸ್ಟಿನಲ್ಲಿದ್ದ ಕೆಲವರು ಕೈಗೇ ಸಿಕ್ಕದೆ ತಪ್ಪಿಸಿಕೊಂಡರು. ಕೆಲವರು ಫೋನ್ಗೂ ಸಿಗದೆ ಓಡಾಡಿಬಿಟ್ಟರು. ಎಲ್ಲಿ ದುಡ್ಡು ಕೇಳಿಕೊಂಡು ಬಂದುಬಿಡ್ತಾರೋ ಎಂಬುದು ಹಲವರ ಹಳಹಳಿಕೆಯಾಗಿತ್ತು. ಅಲ್ಲಿಗೆ, ಹಲವು ಗೆಳೆಯರಿಂದ ಹಣಕಾಸಿನ ನೆರವು ಹಾಗಿರಲಿ, ಒಂದು ಸಮಾಧಾನದ ಮಾತಿಗೂ ಬರ ಬಂದಿದೆ ಎಂಬುದು ಅರ್ಥವಾಗಿ ಹೋಯಿತು.
ಮುಂದೆ ಓದಿ : ಆ ಬಡ್ಡೀಮಗಂದು ಧೈರ್ಯ ಅಂತಾರಲ್ಲ? »
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications