ವಿಷಯ ತಿಳಿದರೆ ಕೋಪಗೊಳ್ಳಲು ಸಿದ್ಧ : ಸಮೀಕ್ಷೆ

ಉದಾಹರಣೆಗೆ ದೆಹಲಿಯ ಗೃಹಿಣಿ ಅಮೃತಾ ಸಿಂಗ್ ಅಹ್ಲುವಾಲಿಯಾ, "ನಾನು ಟಿ.ವಿ. ಚಾನಲ್ ಚೇಂಜ್ ಮಾಡುವಾಗ. ಸತ್ಯಂ-ಸತ್ಯಂ ಎಂದು ಕೆಲವರು ಮಾತನಾಡುತ್ತಿದ್ದುದು ಗೊತ್ತಾಯಿತು. ಓಹ್ ಏನೋ ದೊಡ್ಡ ಹಗರಣ ಆಗಿರಬಹುದು ಅಂತ ತಿಳಿದು ಚಾನಲ್ ಬದಲಾಯಿಸಿದೆ. ಒಟ್ಟಿನಲ್ಲಿ, ಈ ಹಗರಣದ ವಿವರಗಳು ಗೊತ್ತಾದರೆ ನಾನು ಕೋಪಗೊಳ್ಳಲು ಪೂರ್ಣ ಸಿದ್ಧ" ಎಂದರು. ಇದು ಶ್ರೀಮತಿ ಅಹ್ಲುವಾಲಿಯಾ ಒಬ್ಬರ ಅಭಿಪ್ರಾಯ ಅಲ್ಲ. ಅವರ ಸ್ನೇಹಿತರೂ ಸೇರಿದಂತೆ, ದೇಶದ ಬಹುಮಟ್ಟಿಗಿನ ಜನ ಇದೇ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಶೇ.18 ಮಂದಿ ಜನರು, ಸತ್ಯಂ ಹಗರಣದ ಬಗೆಗೆ ಪೂರ್ಣ ಮಾಹಿತಿ ಹೊಂದಿದ್ದು, ಅವರ ಪ್ರಕಾರ ಈ ಹಗರಣ ಕುಸಿಯುತ್ತಿರುವ ನೈತಿಕ ಮೌಲ್ಯಗಳ ದ್ಯೋತಕವಾಗಿದೆ. ಮೈಸೂರಿನ ನಿವೃತ್ತ ಸರ್ಕಾರಿ ಉದ್ಯೋಗಿ ಮೋಹನ್ ರಾವ್ ಈ ಹಗರಣದ ಬಗೆಗೆ 4 ದಿನ ಪತ್ರಿಕೆಗಳಲ್ಲಿ ಬರುತ್ತಿರುವ ಪ್ರತಿಯೊಂದು ವರದಿಯನ್ನೂ ಒಂದು ಅಕ್ಷರ ಬಿಡದಂತೆ ಓದುತ್ತಿದ್ದಾರೆ. ಜೊತೆಗೆ, ಮೂರು ಟಿ.ವಿ. ಚಾನಲ್ಗಳಲ್ಲಿ ಸತ್ಯಂ ಹಗರಣದ ಕುರಿತು ವರದಿ ಮತ್ತು ಚರ್ಚೆಗಳನ್ನು ವೀಕ್ಷಿಸುತ್ತಿದ್ದಾರೆ. "ಇದು ಖಂಡಿತಾ ನಮ್ಮ ನೈತಿಕ ಮೌಲ್ಯಗಳ ಅಧಃಪತನದ ದ್ಯೋತಕ. ಈ ಮೌಲ್ಯಗಳನ್ನು ಚಿಕ್ಕಂದಿನಲ್ಲೇ ಮನದಟ್ಟುವಂತೆ ಕಲಿಸಬೇಕು. ರಾಮಲಿಂಗ ರಾಜುವನ್ನು ಬಂಧಿಸಿದ್ದೇನೋ ಸರಿ. ಆದರೆ, ಆತನಿಗೆ ಸರಿಯಾಗಿ ನೈತಿಕ ಶಿಕ್ಷಣ ನೀಡದ ಆತನ ಪ್ರೈಮರಿ ಸ್ಕೂಲ್ ಶಿಕ್ಷಕರನ್ನೂ ಬಂಧಿಸಬೇಕು" ಎನ್ನುತ್ತಾರೆ ರಾವ್.
ಶೇ.12 ಮಂದಿ ಜನರ ಪ್ರಕಾರ, ಸತ್ಯಂ ಹಗರಣ ಆಗಿದ್ದೇನೋ ಆಗಿಹೋಯಿತು, ಈಗ ಅದರ ವಿಷಯ ಚರ್ಚಿಸುವುದಕ್ಕಿಂತ, ಮುಂದೆ ಹೀಗಾಗದಂತೆ ಎಚ್ಚರ ವಹಿಸುವುದು ಅಗತ್ಯ. ಸತ್ಯಂ ಸಂಸ್ಥೆಯಲ್ಲಿ ಪಾರದರ್ಶಕತೆ ಇಲ್ಲದ್ದೇ ಈ ಹಗರಣಕ್ಕೆ ಕಾರಣ ಎನ್ನುತ್ತಾರೆ ಅವರು. ಬೆಂಗಳೂರಿನ ಸಾಫ್ಟ್ವ್ವೇರ್ ಎಂಜಿನಿಯರ್ ಕಿರಣ್ ಗಂಗೂಲಿ ಸಹ ಇದೇ ಅಭಿಪ್ರಾಯ ಹೊಂದಿದ್ದಾರೆ. "ಕಂಪೆನಿಗಳಲ್ಲಿ ಖಂಡಿತಾ ಪಾರದರ್ಶಕತೆ ಹೆಚ್ಚಿಸಬೇಕು. ಸತ್ಯಂ ಬೋರ್ಡಿಗೆ ಸರ್ಕಾರ ಝೀನತ್ ಅಮಾನ್ ಅವರನ್ನು ನೇಮಿಸಿದರೆ ಒಳ್ಳೆಯದು. ಆಗ ಪಾರದರ್ಶಕತೆ ಹೆಚ್ಚುವುದಲ್ಲದೆ, ಶಿವಂ ಮತ್ತು ಸುಂದರಂಗಳನ್ನಾದರೂ ಉಳಿಸುವ ಸಾಧ್ಯತೆ ಇರುತ್ತದೆ" ಎನ್ನುತ್ತಾರೆ ಗಂಗೂಲಿ.
(ಮಜಾವಾಣಿ ಬ್ಯುಸಿನೆಸ್ ಡೆಸ್ಕ್)
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ












Click it and Unblock the Notifications