ಲಗೂ ಬಂದ ಪಿಂಡಕ್ಕ ನಮಸ್ಕಾರ ಮಾಡಲಿಕ್ಕೆ ಏನ ಧಾಡಿ?
ನನ್ನ ಗೆಳೆಯ ಅವರ ಅವ್ವನ ಶ್ರಾದ್ಧಕ್ಕ ಯಾವಾಗಲೂ ಕರೀತಾನೇ ಇದ್ದ. ಕೆಲಸದ ವ್ಯಾಳ್ಯಾದಾಗ ಆಗೂದಿಲ್ಲ ಸೂಟಿ ಇದ್ದ ದಿವಸ ಇದ್ರ ಹೇಳು ಬರ್ತೀನಿ ಅಂದಿದ್ದೆ. ಒಮ್ಮೆ ಅದು ರವಿವಾರನೇ ಬಂತು. ಹಿಂಗಾಗಿ ಹೋದೆ. ಧಾರವಾಡದ ಮಾಳಮಡ್ಡಿಯ ರಾಮದೇವರ ಗುಡಿಯೊಳಗ ಮಾಡಿದ್ದ. ಇವರ ಜೋಡಿ ಇನ್ನೊಂದೆರಡು ಇದ್ದವು.
ನಾನು ಹೋಗುವ ಹೊತ್ತಿಗೆ ಪಿಂಡಪ್ರದಾನ ಮುಗಿದಿತ್ತು. ಇನ್ನೇನು ಊಟಕ್ಕ ಎಲಿ ಹಾಕೂ ತಯಾರಿ ನಡದಿತ್ತು. ನಾ ಹೋಗಿ 5 ಮಿನಿಟಿಗೆ ನನ್ನ ಗೆಳೆಯನ ಹಾಗೂ ಅವನ ತಮ್ಮನ ಹೆಂಡ್ರು ಬಂದ್ರು. ಆಗ ಅವನ ತಮ್ಮ ತನ್ನ ಹೆಂಡತಿಗೆ "ಈಗ ಬರೂದs" ಅಂತ ಸಿಟ್ಟ ಮಾಡ್ಲಿಕ್ಕೆ ಸುರು ಮಾಡಿದ್ದಕ್ಕ... ನನ್ನ ಗೆಳ್ಯಾ, ಇರ್ಲಿ ಸುಮ್ಮನಿರು ಜನಾ ಇದ್ದಾರ ಅಂತ ಸೋನ್ನಿ ಮಾಡಿ ಅವನನ್ನ ಸುಮ್ನಿರಿಸಿದ. ಮುಂದ ಯಥಾ ಪ್ರಕಾರ ಊಟ ಶುರು ಆತು. 'ನೀ ಬಂದಿ ಭಾಳ ಛಲೋ ಆತು' ಅಂತ ಜುಲಿಮಿ ಮಾಡಿ ಹಾಕ್ಸಿದ. ನಾನೂ ಗಡದ್ದ ತಗೊಂಡೆ.
ಬಾಜು ಖೋಲ್ಯಾಗ ಜಮಖಾನಿ ಹಾಸಿ ಎಲಿ ಅಡಿಕಿ ಇಟ್ಟಿದ್ದರು. ಬಾಕಿ ಎಲ್ಲಾರೂ ಹೊರಟು ಹೋಗಿದ್ದರು. ನನ್ನ ಗೆಳ್ಯಾನ ಪರಿವಾರ ಮಾತ್ರ ಅಲ್ಲಿ ಕೂತು ಎಲಿ ಅಡಿಕಿ ಹಾಕೋತ ಕೂತಾಗ, ಮತ್ತ ಅವನ ತಮ್ಮ ತನ್ನ ಹೆಂಡತಿಗೆ "ಲಗೂ ಬರಲಿಕ್ಕೆ ಏನ ಧಾಡಿ. ಪಿಂಡಕ್ಕ ನಮಸ್ಕಾರ ಮಾಡ್ಲಿಕ್ಕೆರೆ ಬರಬೇಕೋ ಬ್ಯಾಡೋ? ಎಲ್ಲಾ ಮುಗದ ಮ್ಯಾಲೆ ಅತಿಥಿಗತೆ ಊಟಕ್ಕ ಮಾತ್ರ ಬರೋದs" ಅಂತ ಜೋರ್ ಮಾಡ್ಲಿಕ್ಕೆ ಸುರು ಮಾಡಿದ. [ಅವಿಧವಾನವಮೀ ಶ್ರಾದ್ಧ ಯಾರಿಗೆ? ಮಹತ್ವವೇನು?]

ಆವಾಗ ನನ್ನ ಗೆಳ್ಯಾ "ಇರ್ಲಿ ಸುಮ್ಮ ಕೂಡೋ ಮಾರಾಯಾ. ಅವರು ಲಗೂ ಬರ್ದೇ ಇದ್ದದ್ದs ಛಲೋ ಆತು. ಖರೆ ಅಂದ್ರ ನಾವು ಅವರಿಬ್ಬರಿಗೂ ಧನ್ಯವಾದ (thanks) ಹೇಳಬೇಕು" ಅಂದಾ. ಆಗ ಅಲ್ಲಿದ್ದ ನಾವೆಲ್ಲಾ (ಅವರ ಅಕ್ಕ, ಅಕ್ಕನ ಗಂಡ ಸಹಿತ) ಅವನ ಕಡೇನ ಕುತೂಹಲದಿಂದ ಹಿಂಗ್ಯಾಕ್ ಅಂತಾನ ಇವ ಅಂತ ನೋಡ್ಲಿಕ್ಕೆ ಹತ್ತಿದೆವು.
ಆಗ ಅವಾ, "ಅವರು ಪಿಂಡಕ್ಕ ನಮಸ್ಕಾರ ಮಾಡೂ ಹೊತ್ತಿಗೆ ಜರ ಬಂದಿದ್ರಂದ್ರ ನಮ್ಮ ಅವ್ವನ ಪಿಂಡ (ಮೊದಲನೇದು) ಗುಡು ಗುಡು ಉರುಳಲಿಕ್ಕೆ ಶುರು ಮಾಡ್ತಿತ್ತು. ಯಾಕಂದ್ರ ಆಗ ನಮ್ಮ ಅವ್ವಾ ಘಾಬರಿ ಆಗಿ, 'ಅಯ್ಯ ಸುಡ್ಲಿ, ಇವರ ಕೈಯ್ಯಾಗಿಂದ ನೀಗಿ (ಪಾರಾಗಿ) ಬ್ಯಾರೆ ಲೋಕಕ್ಕ ಹೋದರೂ ಬಿಡವಲ್ಲರಲ್ಲs. ಮತ್ತ ಬಂದರೋ ಇವರ ಹೆಣಾ ಎತ್ತಲಿ' ಅಂತ ಹಿಂದ ನೋಡೂದು ಮುಂದ ಓಡೋದು ಮಾಡ್ತಿದ್ಲು. ಆಗ ನಾವಿಬ್ಬರೂ, ಆಕಳಾ ಹುಡುಕೋದ ಬಿಟ್ಟು, ಬಿಸ್ಲಾಗ ಪಿಂಡಾ ಹಿಡಕೊಂಡು ಬರಲಿಕ್ಕೆ ಓಡಬೇಕಾಗಿತ್ತು" ಅಂತ ಹೇಳಿ ಬಿರ್ಸಿನ ವಾತಾವರಣವನ್ನ ತಿಳಿಗೊಳಿಸಿ ಎಲ್ಲರನ್ನೂ ನಗೆಗಡಲಿನಲ್ಲಿ ಮುಳುಗಿಸಿದ.
ಎಂಥಾ ಮಾತು. ಮುತ್ತಿನಂಥಾ ಮಾತು. ನಗಿಸುವ ವಿಷಯ ಅಂತ ಅನಿಸಿ ಕಂಡಾಪಟ್ಟೆ ನಕ್ಕರೂ ಇದರೊಳಗ ಭಾಳ ವಿಚಾರ ಮಾಡೂ ಸಂಗತಿ ಅದ. ಹೊಟ್ಟೆ ತುಂಬಾ ನಗೆ ತಲೆ ತುಂಬಾ ವಿಚಾರ ಅಂತಾರಲ್ಲ ಹಂಗ. ಭಾಳ ಸಮಂಜಸ ಅಷ್ಟೇ ಪ್ರಸ್ತುತ. [ಮಹಾಲಯದಲ್ಲಿ ಯಾವಾಗ ಶ್ರಾದ್ಧ ಮಾಡಬಾರದು? ಯಾವಾಗ ಮಾಡಬೇಕು]
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ












Click it and Unblock the Notifications