ಹೊಟ್ಟೆಯೋ ಕೆರೆಯ ಮೇಲಿನ ಕಟ್ಟೆಯೋ?

ಆಮೇಲೆ ನಾನು ಅಮ್ಮನಿಗೆ, ನಾನು ಯಾರಿಗೂ ನಮಸ್ಕಾರ ಮಾಡುವುದಿಲ್ಲ... ನನಗೆ ಯಾರು ಮಾಡುವುದೂ ಬೇಡ ಎಂದು ಹೇಳಿದೆ. ಅದು ಹೇಗೆ ಆಗುತ್ತೆ. ನೀನು ನಮಸ್ಕಾರ ಮಾಡಲೇಬೇಕು ಎಂದರು. ನಮಸ್ಕಾರ ಮಾಡಿ ಮಾಡಿ ಸಾಕಾಗಿತ್ತು. ಹೊಟ್ಟೆ ತಾಳ ಅನ್ನುವುದಕ್ಕಿಂತ ತಮಟೆ ಬಾರಿಸುತಿತ್ತು. ಕೆಲವೊಮ್ಮೆ ಹಸಿವು ಆದಾಗ ನಾದಮಯವಾಗಿ ಹಾಡುತ್ತಿತ್ತು ಕೂಡ. ಚಿಕ್ಕವನಿಗಿದ್ದಾಗ ಲೌಡ್ ಸ್ಪೀಕರ್ ಏನಾದರೂ ನುಂಗಿದ್ದೆ ಅಂತ ಕಾಣುತ್ತೆ. ಅಕ್ಕ ಪಕ್ಕದವರಿಗೂ ನನ್ನ ಹೊಟ್ಟೆ ಹಾಡಿದ್ದು ತಿಳಿಯುತ್ತಿತ್ತು. ಎಲ್ಲರಿಗಿಂತ ಬೇಗನೆ ತಿಂಡಿಗೆ ಹೋಗಿ ನಿಂತೆ. 20 ಬಿಳಿ ಗುಳಿಗೆ (ಇಡ್ಲಿ), ಎರಡು ಕೇಸರಿ ಬಾತ್ ತಿಂದೆ. ಹೊಟ್ಟೆ ತುಂಬಿದ ಹಾಗೆ ಅನ್ನಿಸಲೇ ಇಲ್ಲ. ಮತ್ತೆ ಹೋಗಿ ಇಡ್ಲಿ ಎಂದೆ. ಅಲ್ಲಿ ಇಡ್ಲಿ ಹಾಕುವ ಮನುಷ್ಯ, ಎಲ್ಲ ಇಡ್ಲಿ ನಾನೇ ಖಾಲಿ ಮಾಡಿದ್ದೇನೋ ಎಂಬ ರೀತಿಯಲ್ಲಿ, ನನ್ನನ್ನು ದುರುಗುಟ್ಟಿ ನೋಡಿದ. ಮತ್ತೆ ಹತ್ತು ಇಡ್ಲಿ ತಂದು ಹಾಕಿದ. ಅದರಲ್ಲಿ ಒಂದು ಇಡ್ಲಿ ಮುರಿದಿತ್ತು. ಅದನ್ನು ನೋಡಿ ನನಗೆ ತುಂಬಾ ಕೋಪ ಬಂದು. ಇದೇನು ಸರ್ ಇಡ್ಲಿ ಯಾರೋ ತಿಂದಿರೋ ಹಾಗಿದೆ ಎಂದು ತಮಾಷೆ ಮಾಡಿದೆ. ಓ... ಅದಾ ತೆಗೆಯುವ ಸಮಯದಲ್ಲಿ ಮುರಿದಿದೆ ಎಂದು ನಗುತ್ತಾ ನಿಂತ. ನಾನು ಮತ್ತೊಂದು ಇಡ್ಲಿ ಹಾಕುತ್ತಾನೆ ಎಂದು ಎಣಿಸಿದರೆ ಹಾಕಲೆ ಇಲ್ಲ. ಮತ್ತೆ ಎರಡು ಲೋಟ ಕಾಫೀ ಕುಡಿದು ಜಾಗ ಖಾಲಿ ಮಾಡಿದೆ.
ಬೇಗನೆ ಆರಕ್ಷತೆ, ಊಟ ಮುಗಿಸಿ ಟ್ರೈನ್ ಹತ್ತಿದೆ. ಟ್ರೈನ್ ಹೆಸರು ಜನಶತಾಬ್ದಿ ಅನ್ನುವುದಕ್ಕಿಂತಲೂ ಜನಾಹಿತಾಬ್ದಿ ಅನ್ನಬಹುದು. ಟ್ರೈನ್ ನಲ್ಲಿ ಐದೈದು ನಿಮಿಷಕ್ಕೆ ತಿಂಡಿ ಕಾಫೀ ಬರೋದು. ಆದರೂ ಈ ಬಾರಿ ಏನೂ ತಿನ್ನಬಾರದು ಎಂದು ತೀರ್ಮಾನಿಸಿ ಬಂದಿದ್ದೆ. ಆದರೂ ಎಲ್ಲಾ ಸಪ್ಲೈಯರ್ ಗಳು ನನ್ನ ಹೊಟ್ಟೆ ನೋಡಿ, ಸರ್.. ಇಡ್ಲಿ ಬೇಕಾ? ದೋಸೆ ಬೇಕಾ? ಎಂದು ಕೇಳುತ್ತಾ ಹೋಗುತ್ತಿದ್ದರು. ಬೇಡ.. ಬೇಡ.. ಎಂದು ಹೇಳಿ ಸಾಕಾಗಿ ಮತ್ತೆ ಹೊಟ್ಟೆ ತಾಳಮಯವಾಗಿ ನಾದ ಲಹರಿ ಶುರು ಮಾಡಿತ್ತು. ಪಕ್ಕದ ಸೀಟ್ ನಲ್ಲಿ ಇರುವ ಮನುಷ್ಯ ಎದ್ದು ಪಿಳಿಪಿಳಿ.. ಎಂದು ಅತ್ತ.. ಇತ್ತ.. ನೋಡಿ, ಮತ್ತೆ ಸುಮ್ಮನೇ ನಿದ್ದೆಗೆ ಜಾರಿದ. ಹೀಗೆ ಒಮ್ಮೆ ಏನಾಗಿತ್ತೆಂದರೆ, ಪಕ್ಕದ ಮನೆಯ ಆಂಟಿ, ನನ್ನ ಹೊಟ್ಟೆ ಸಂಗೀತ ಕೇಳಿ, ನಲ್ಲಿಯಲ್ಲಿ ನೀರು ಬಂದಿದೆ ಎಂದು, ಕೊಡ ತೆಗೆದುಕೊಂಡು ಹೋಗಿ ನಿರಾಶೆಯಲ್ಲಿ ತೇಲುತ್ತ ಬಂದಿದ್ದರು ಪಾಪ...
ಅಷ್ಟರಲ್ಲಿ ಹರಿಹರ ಸ್ಟೇಶನ್ ಬಂತು. ನನ್ನ ಪಕ್ಕದ ಸೀಟ್ ಗೆ ಒಂದು ಸುಂದರ ಹುಡುಗಿ ಬಂದು ಕುಳಿತಳು. ನಾನು ಸುಮ್ಮನೇ ನಿದ್ದೆ ಮಾಡಿದರೆ ಆಗುತ್ತೆ ಎಂದು ನಿದ್ದೆ ಮಾಡಹತ್ತಿದ್ದೆ. ಸ್ವಲ್ಪ ಸಮಯದ ನಂತರ ನನ್ನ ಭುಜ, ಹೊಟ್ಟೆ ಸ್ಪರ್ಶಿಸಿದ ಹಾಗೆ ಅನ್ನಿಸಿತು. ಆಹಾ.. ಹುಡುಗಿ ಎಂದು ಸುಮ್ಮನೇ ಕಣ್ಣು ಮುಚ್ಚಿ ಮಲಗಿಕೊಂಡಿದ್ದೆ. ಮತ್ತೆ ಅದೇ ಮಿಸುಗಾಟ... ಕಡೆಗೆ ಕಣ್ಣು ತೆಗೆದೆ. ನನ್ನದೇ ತದ್ರೂಪ ಎಂದನಿಸಿಬಿಟ್ಟಿತು. ಆಮೇಲೆ ತಿಳಿಯಿತು ಅವರು ಆ ಹುಡುಗಿಯ ಅಪ್ಪ. ಅವರಿಬ್ಬರೂ ಸೀಟ್ ಚೇಂಜ್ ಮಾಡಿದ್ದಾರೆ ಎಂದು.
ಕಡೆಗೆ ಇನ್ನೂ ಈ ಸಂಗೀತ ಕೇಳಲು ಆಗುವುದಿಲ್ಲ ಎಂದು ಯೋಚಿಸಿ, ದೋಸೆ ತೆಗೆದುಕೊಂಡೆ. ಸಪ್ಲೈಯರ್ ದೋಸೆನಾ ಸ್ನ್ಯಾಕ್ ಟ್ರೇ ಬದಲು ಹೊಟ್ಟೆ ಮೇಲೆ ಇಟ್ಟು ದುಡ್ಡು ತೆಗೆದುಕೊಂಡು ಹೋದ. ಮತ್ತೆ ಇಡ್ಲಿ, ವೆಜಿಟೆಬಲ್ ಪಲಾವ್, ವೇಜ್ ಕಟ್ಲೇಟ್ ...ಕಾಫೀ, ಟೀ, ಟೊಮ್ಯಾಟೋ ಸೂಪ್ ಎಲ್ಲವೂ ಸ್ವಾಹ ಮಾಡಿದ್ದೆ. ಕಡೆಕಡೆಗೆ ಸಪ್ಲೈಯರ್ ನನ್ನನ್ನು ಕೇಳದೇ ಒಂದು ಪ್ಲೇಟ್ ಇಟ್ಟು ಹೋಗಲು ಶುರುಮಾಡಿದ. ಇನ್ನೂ ಸ್ವಲ್ಪ ಅಲ್ಲೇ ಇದ್ದರೆ, ಬಾಯಲ್ಲಿ ತುರುಕಿ, ಕಿಸೆಯಿಂದ ದುಡ್ಡು ತೆಗೆದುಕೊಂಡು ಹೋಗುತ್ತಿದ್ದನೇನೋ?
ಮತ್ತೆ ಹಲವು ಬಾರಿ ನನ್ನ ಮಡದಿಗೆ ಊಟದ ಸಮಯದಲ್ಲಿ, ಸಂಜೆಗೆ ತಿಂಡಿ ಏನೇ ಎಂದು ಕೇಳಿದ್ದು ಇದೆ. ಅದಕ್ಕೆ ನನ್ನ ಮಡದಿ ಮುಸುರಿ ಕೈ ಎಂದು ಯೋಚಿಸದೇ ಹಣಿಹಣಿ.. ಗಟ್ಟಿಸಿಕೊಳ್ಳುತ್ತಾಳೆ. ಇದಕ್ಕೇ ಇರಬೇಕು ನನ್ನ ಮಡದಿ ನಿಮ್ಮ "ಹೊಟ್ಟೆ ಕೆರೆಯ ಮೇಲಿನ ಕಟ್ಟೆ" ಎಂದು ಅನ್ನುತ್ತಿದ್ದುದು. ಮತ್ತೆ ಅಮ್ಮ "ನೀನು ಕಸಾ ತಿನ್ನುವವನು, ನಿನಗೆ ತುಸಾ ಏನು ಈಡು" ಎಂದು ಹೇಳುತ್ತಿರುತ್ತಾರೆ. ಅಂತಹ ಮನುಷ್ಯ ನಾನು.
ಮತ್ತೆ ಬೆಂಗಳೂರು ಸ್ಟೇಶನ್ ಬಂತು. ಮನೆಗೆ ಹೋದವನೆ ಬಹಿರ್ದೇಸೆಗೆ ಹೋಗಬೇಕು ಎಂದು ಅಂದುಕೊಂಡಾಗ, ಮಗ ಟು.. ಟು.. ಎಂದ, ನಾನು ಆಯಿತು ಎಂದು, ಅವನ ಚಡ್ಡಿ ಕಳೆಯುತ್ತಿದ್ದೆ. ಅಷ್ಟರಲ್ಲಿ ನನ್ನ ಮಡದಿ ರೀ ಅವನು ನಿಮ್ಮ ಜೊತೆ ಚಾಳಿ ಬಿಟ್ಟಿದ್ದಾನೆ ಎಂದು ಹೇಳುತ್ತಿದ್ದಾನೆ ಎಂದಳು. ಕಡೆಗೆ ಸರಾಗವಾಗಿ ನನ್ನ ಕೆಲಸ ಮಾಡಿ ಬಂದು ಮತ್ತೆ ಊಟಕ್ಕೆ ಹಾಜರ್ ಆದೆ.
ಅದೇನೋ ಗೊತ್ತಿಲ್ಲ, ದೇವರು ನನಗೆ ಸಾಕಷ್ಟು ತಿನ್ನ'ಲಿ' ಎಂಬ 'ವರ' ಕೊಟ್ಟು ಈ "ಲಿವರ್" ಕರುಣಿಸಿದ್ದಾನೋ ಗೊತ್ತಿಲ್ಲ... ಇನ್ನೂ ಡೌಟ್ ಪಡುವ ಅವಶ್ಯಕತೆ ಇಲ್ಲ. ಇಷ್ಟೊತ್ತು ನಿಮ್ಮ ತಲೆ ತಿಂದಿದ್ದೇನೆ... ಆದರೂ ಹೊಟ್ಟೆಯಲ್ಲಿ ಸ್ವಲ್ಪ ತಾಳ ಹಾಕುತ್ತಿದ್ದೆ, ಮತ್ತೇನಾದರೂ ಸಿಗುತ್ತಾ ಎಂದು ಫ್ರಿಡ್ಜ್ ತೆಗೆದೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications