550857ganesha chaturthiಭೂತಾಯಿಯ ಒಕ್ಕಲುಮಗ ಗಣಪ್ಪ/festivals/ganesha/2008/0902-ganesha-as-son-of-soil.htmlಗಣೇಶನ ಬಯೋಡೇಟಾ ತುಂಬಾ ದೊಡ್ಡದು. ಅವನು ತನ್ನ ವೃತ್ತಿ ಜೀವನದಲ್ಲಿ ನಾನಾ ಬಗೆಯ ಸಾಹಸಗಳನ್ನು ಮಾಡಿದ್ದರೂ ಮೂಲತಃ ಆತ ಮಣ್ಣಿನ ಮಗನೆ, ನೇಗಿಲಯೋಗಿಯೇ. ಉಚಿತ ಕರೆಂಟು ಕೇಳದ, ರಸಗೊಬ್ಬರ ಬಯಸದ, ಸಾಲಬಾಧೆಯ ಬಲೆಯೊಳಗೆ ಸಿಲುಕದ ಸಹಜ ಕೃಷಿಕ. ಆತನ ಪೂರ್ವಾಪರಗಳನ್ನು ಉಲ್ಲೇಖಿಸುವ ಉತ್ತರ ಕರ್ನಾಟಕದ ಜಾನಪದ ಕಥಾಕಣಜದಿಂದ ಆಯ್ದ ಒಂದು ಪ್ರಸಂಗ, ನಿಮಗಾಗಿ. ಲೇಖನ : ಚಂದ್ರೇಗೌಡ 1016http://kannada.oneindia.com/img/2009/08/20-ganesha6.jpg550857ganesha chaturthiಗೌರಿ ಗಣೇಶರಿಗೆ ಭಕ್ತಿ ಪೂರ್ವಕ ನಮಸ್ಕಾರಗಳು/column/sham/2009/0821-happy-gowri-ganesha-festival-2009.htmlವಿರೋಧಿ ನಾಮ ಸಂವತ್ಸರದ ಗಣೇಶ ಚತುರ್ಥಿ, ಗೌರಿ ತೃತೀಯದ ಶುಭಾಶಯಗಳು. ಭಾದ್ರಪದ ಮಾಸ ಶುಕ್ಲಪಕ್ಷ ಆಗಸ್ಟ್ 22 ಶನಿವಾರ ಗೌರಿ ಹಬ್ಬ, ಸ್ವರ್ಣಗೌರೀ ವ್ರತ. 23ರ ಭಾನುವಾರ ಸಿದ್ದಿ ವಿನಾಯಕ, ಬುದ್ದಿ ವಿನಾಯಕ, ವಿಘ್ನನಾಶಕ ಗಣೇಶ ಚತುರ್ಥಿ. ಶನಿವಾರದಂದು ಸಾಮೋಪಕರ್ಮ ಇರುತ್ತದೆ. ಈ ಬಾರಿ ಹಬ್ಬಗಳು ವಾರಾಂತ್ಯದಲ್ಲಿ ಬಂದಿರುವುದರಿಂದ ಸರಕಾರಿ ರಜಾದಿನಗಳ ಲಾಭವನ್ನು ಹಿಂದೂ ಕುಂಟುಂಬಗಳು ಪಡೆಯಲಾರವು. 38763http://kannada.oneindia.com/img/2009/08/21-gowri-ganesha1.jpg550857ganesha chaturthiಕವನ : ಮಹಾ ನಾಯಕ ಮಾಹಾ ಕಾಯಕ/festivals/ganesha/2009/0821-siddhi-vinayaka-poem-by-moolky-nagabhushana.html* ಮೂಲ್ಕಿ ನಾಗಭೂಷಣ, ಅಮೆರಿಕಮಹಾ ನಾಯಕ ಮಾಹಾ ಕಾಯಕವಿಘ್ನ ವಿನಾಶಕ ವಿನಾಯಕಮಾಯಾದ ಸ್ವಪ್ನದದಿವ್ಯ ಜ್ಯೋತಿಯೇಜೀವಾಧಾರವಾಗಿಹೆಮೂಲಾಧಾರಾ ವಾಸಿಯೆಸೂಕ್ಷ್ಮರೂಪಿ ವಿಶ್ವಸ್ವರೂಪಿಸ್ಥಿತಿಲಯ ಪ್ರಳಯಸಾಕ್ಷಿ ನೀ ಮಂದಹಾಸಿವಿಸ್ಮಯ ರಾಶಿ ನೀ ವಿಶ್ವಾಸಿಸದ್ದಿಲ್ಲದ ಸದ್ದದುಓಂಕಾರ ನಾದವದುಸಿದ್ದಿಸು ಸಿದ್ದಿ ವಿನಾಯಕನನ್ನ ಕಾಯಕ ನಾಯಕನನ್ನಲೇ ಇರುವೆನನ್ನನೆ ಗೆಲುವೆಪ್ರೇಮದ ಚಿಲುಮೆಜೀವ ರಾಶಿಯ ಕುಲುಮೆವಂಚ ಪಂಚ ಭೂತಕಅದ್ಯ ಅದಿ ಭೌತಿಕಗತಿಕ ಪಂಚೇಂದ್ರಿಯಇಂದ್ರಿಯ ಸಾರ್ವಭೌಮ38769http://kannada.oneindia.com/img/2009/08/21-ganesha4.jpg550857ganesha chaturthiಮೋದಕ ಪ್ರಿಯನಿಗೆ ಮೋದಕದ ನೈವೇದ್ಯ/festivals/ganesha/2009/0821-modaka-sweet-recipe-ganesha-chaturthi.htmlಭಾದ್ರಪದ ಶುಕ್ಲ ಚತುರ್ಥಿಯಂದು ವಿಘ್ನ ವಿನಾಯಕ ಗಣೇಶನಿಗೆ 21 ನಮಸ್ಕಾರ ಹಾಕಿ ಕುಚ್ಚಿದ ಕಡುಬು ಅನ್ನ ಪಾಯಸದ ನೈವೇದ್ಯ ತೋರಿಸಿ, ಮೋದಕದ ನೈವೇದ್ಯವಿಲ್ಲದೇ ಎಲ್ಲ ವಿಘ್ನಗಳನ್ನು ನಿವಾರಿಸಿ ಸಂಕಷ್ಟದಿಂದ ಪಾರು ಮಾಡಪ್ಪಾ ಅಂತ ಬೇಡಿಕೊಂಡರೆ ಗಣೇಶ ವರ ನೀಡುವಲ್ಲಿ ಜಿಪುಣತನ ತೋರಿಯಾನು. ಆದ್ದರಿಂದ ಕಷ್ಟವೆನಿಸಿದರೂ ಮೋದಕ ಪ್ರಿಯನಿಗೆ ಮೋದಕದ ನೈವೇದ್ಯ ತೋರಲು ಮರೆಯಬೇಡಿ.* ನಿವೇದಿತಾ ಪ್ರಭಾಕರ್, ಬೆಂಗಳೂರುಬೆಲ್ಲ 38773http://kannada.oneindia.com/img/2009/08/21-ganesha-modaka1.jpg550857ganesha chaturthiಗಣಪತಿ ಬರೆದ ಮಹಾಪ್ರಬಂಧ/column/humor/2009/0822-phd-thesis-by-ganesha.htmlಓಂ ಶ್ರೀ ಗಣೇಶಾಯ ನಮಃ, ಓಂ ಶ್ರೀ ಗಣೇಶಾಯ ನಮಃ. ಯಾವುದೇ ಕೆಲಸವನ್ನು ಆರಂಭಿಸಬೇಕಾದರೆ ಮೊದಲು ಗಣಪತಿಗೆ "ಹಾಯ್" ಹೇಳಿ ಮುಂದುವರಿಯಬೇಕು. ಒಂದು ಸಲ "ಹಾಯ್" ಹೇಳಿದರೆ ಸಾಕು, ಆದರೆ ನಾನಿಲ್ಲಿ ಎರಡು ಸಲ ಹೇಳಿದ್ದೇನೆ. ಯಾಕೆಂದರೆ ಇದು ಗಣಪತಿಯ ಕುರಿತಾದ್ದೇ ಬರಹ.ಹರಿಕಥೆಯ ಪೇಳ್ವೆನು ಭಕ್ತರಿಗಿಂದುಹರಸುತನೆ ಹರಸುತನೆ ಓದುನೀನೂ ಚತುರ್ಥಿಯಂದುಇಲ್ಲಿಗೆ ಬಂದು.ಯಾವುದೇ ಹರಿಕಥೆಯಾಗಲೀ ಗಣಪತಿಯ ಪದ್ಯರೂಪಿ ಸ್ತುತಿಯೊಂದಿಗೆ 38790http://kannada.oneindia.com/img/2009/08/22-ganesha-mahabharata1.jpg484046swine fluಹಂದಿಜ್ವರಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಹೊಸ ಹೆಸರು/news/2009/05/01/swine-flu-renamed-by-who-to-h1n1-influenza.htmlಜೆನೀವಾ, ಮೇ.1: ಮಾಂಸೋದ್ಯಮದ ತೀವ್ರ ಒತ್ತಡಕ್ಕೆ ಮಣಿದಿರುವ ವಿಶ್ವ ಆರೋಗ್ಯ ಸಂಸ್ಥೆ ಸಾಂಕ್ರಾಮಿಕ ವ್ಯಾಧಿ ಹಂದಿ ಜ್ವರಕ್ಕೆ (ಸ್ವೈನ್ ಫ್ಲೂ) ಹೊಸ ಹೆಸರಿಟ್ಟಿದೆ. ಹಂದಿ ಜ್ವರ ಈಗ H1N1 influenza ಎಂದು ಬದಲಾಗಿದೆ.''ಇಂದಿನಿಂದ ಈ ಹೊಸ ಸಾಂಕ್ರಾಮಿಕ ವೈರಸನ್ನು H1N1ಎಂದು ಹೆಸರಿಸಿದ್ದೇವೆ '' ಎಂದು ವಿಶ್ವ ಆರೋಗ್ಯ ಸಂಸ್ಥೆ ಗುರುವಾರ(ಏ.30) ಪ್ರಕಟಣೆಯಲ್ಲಿ ತಿಳಿಸಿದೆ. ಈ 36337http://kannada.oneindia.com/img/2009/05/01-swine-outbreak.jpg484046swine fluಹಂದಿ ಜ್ವರಕ್ಕೆ ಬೆಚ್ಚಿದ ಬಿದ್ದ 'ರಾಜ್' ಚಿತ್ರತಂಡ /movies/headlines/2009/05/05-raaj-puneet-movie-shooting-called-off-swine-flu.htmlಹಂದಿ ಜ್ವರ(ಎಚ್ 1 ಎನ್ 1)ಕ್ಕೆ ಹೆದರಿಕೊಂಡ 'ರಾಜ್' ಚಿತ್ರತಂಡ ಕೆನಡಾ ಪ್ರವಾಸವನ್ನು ರದ್ದು ಮಾಡಿಕೊಂಡಿದೆ. ಈ ಕುರಿತು ವಿವರ ನೀಡಿರುವ ನಿರ್ದೇಶಕ ಪ್ರೇಮ್, ರಾಜ್ ಚಿತ್ರಕ್ಕಾಗಿ ಕೆನಡಾದಲ್ಲಿ ಎರಡು ಹಾಡುಗಳನ್ನು ಚಿತ್ರೀಕರಿಸಬೇಕಿತ್ತು. ಇದುವರೆಗೂ ಯಾರೂ ಸೆರೆಹಿಡಿಯದ ಕೆನಡಾದ ರಮಣೀಯ ದೃಶ್ಯಗಳನ್ನು ನಮ್ಮ ಚಿತ್ರದಲ್ಲಿ ತೋರಿಸಬೇಕು ಎಂದು ನಿರ್ಧರಿಸಿದ್ದೆವು. ಆದರೆ ಕೆನಡಾದಲ್ಲಿ ಹಂದಿಜ್ವರದ ಪ್ರಭಾವ ಜೋರಾಗಿರುವ ಕಾರಣ 36407http://kannada.oneindia.com/img/2009/05/05-raaj-the-showman2.jpg484046swine fluತಮಿಳುನಾಡಿನಲ್ಲಿ ಮತ್ತಿಬ್ಬರಿಗೆ ಹಂದಿಜ್ವರ /news/2009/06/02/swine-flu-india-confirms-two-more-cases.htmlನವದೆಹಲಿ, ಜೂ.02: ಅಮೆರಿಕಾದಿಂದ ವಾಪಸ್ಸಾದ ತಮಿಳುನಾಡಿನ 34 ವರ್ಷದ ಓರ್ವ ಮಹಿಳೆ ಹಾಗೂ ಆಕೆಯ 5 ವರ್ಷದ ಮಗನಿಗೆ ಮಾರಣಾಂತಿಕ ಹಂದಿ ಜ್ವರ ಇರುವುದಾಗಿ ಸೋಮವಾರ ದೃಢಪಟ್ಟಿದೆ. ಇವರು ಮೇ 28ರಂದು ಅಮೆರಿಕಾದಿಂದ ಸ್ವದೇಶಕ್ಕೆ ಹಿಂತಿರುಗಿದ್ದರು. ಈಕೆಯೊಂದಿಗೆ ಹಿಂತಿರುಗಿರುವ ಆರು ವರ್ಷದ ಮಗಳಿಗೆ ಹಂದಿ ಜ್ವರ ಸೋಂಕು ತಟ್ಟಿಲ್ಲ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಕೊಯಮತ್ತೂರಿನ ಆಸ್ಪತ್ರೆಯಲ್ಲಿ 37053http://kannada.oneindia.com/img/2009/06/02-swine-flu200.jpg484046swine fluಬೆಂಗಳೂರಿನಲ್ಲಿ ನಾಲ್ವರಿಗೆ ಎಚ್1ಎನ್1 ಶಂಕೆ/news/2009/06/13/h1n1-four-new-cases-in-bengaluru.htmlಬೆಂಗಳೂರು, ಜೂ.13: ಬೆಂಗಳೂರಿನಲ್ಲಿ ನಾಲ್ಕು ಮಂದಿಗೆ ಎಚ್1ಎನ್1ಸೋಂಕು ಇರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಚ್1ಎನ್1 ಶಂಕಿತ ರೋಗಿಗಳು ಪತ್ತೆಯಾಗಿದ್ದು ಅವರ ರಕ್ತದ ಮಾದರಿಗಳನ್ನು ಪುಣೆಯ ನ್ಯಾಶನಲ್ ಇನಿಸ್ಟಿಟ್ಯೂಟ್ ಆಫ್ ವೈರಾಲಜಿ ಸಂಸ್ಥೆಗೆ ಕಳುಹಿಸಲಾಗಿದೆ. ಸಾಫ್ಟ್ ವೇರ್ ದಂಪತಿ ಸೇರಿದಂತೆ ತಾಯಿ, ಮಗಳಿಗೆ ಎಚ್1ಎನ್1 ಸೋಂಕು ಇರುವ ಬಗ್ಗೆ ಶಂಕೆ 37317http://kannada.oneindia.com/img/2009/06/13-bial1.jpg484046swine fluದೇಶದಲ್ಲಿಐವತ್ತರ ಗಡಿ ಮುಟ್ಟಿದ ಹಂದಿಜ್ವರದ ಸಂಖ್ಯೆ/news/2009/06/20/six-more-swine-flu-cases-reported-total-50.htmlನವದೆಹಲಿ, ಜೂ.20: ಇಬ್ಬರು ಮಕ್ಕಳು ಸೇರಿದಂತೆ ಒಟ್ಟು ಆರು ಮಂದಿಗೆ ಎಚ್ 1ಎನ್1 ಸೋಂಕು ಇರುವುದು ಶುಕ್ರವಾರ ದೃಢಪಟ್ಟಿದೆ. ದೇಶದಲ್ಲಿ ಹಂದಿಜ್ವರದ ಸಂಖ್ಯೆ 50 ಕ್ಕೆ ತಲುಪಿದ್ದು, ಸುಮಾರು 16ರಷ್ಟು ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಿಅವರನ್ನು ಆಸ್ಪತ್ರೆಯಿಂದ ಬಿಡುಗಡೆಮಾಡಲಾಗಿದೆ.ಹೊಸದಾಗಿ ಆರು ಮಂದಿಗೆ ಹಂದಿಜ್ವರದ ರೋಗಲಕ್ಷಣಗಳು ಕಂಡುಬಂದಿವೆ. ದೆಹಲಿಯ ಮೂವರು, ಬೆಂಗಳೂರಿನಿಂದ ಇಬ್ಬರಿಗೆ ಮತ್ತು ಮುಂಬೈನ ಒಬ್ಬರಿಗೆ ಹಂದಿಜ್ವರದ 37465http://kannada.oneindia.com/img/2009/06/20-swine-flu2.jpg83806humorಮುದ್ದಾದ ಒಂದು ಹೆಸರಿನ ನಿತ್ಯ ಕಗ್ಗೊಲೆ/column/humor/2008/0917-how-they-spell-poornima-in-london.htmlಅಜ್ಜಿ ಇಟ್ಟ ಮುದ್ದಾದ ತನ್ನ ಹೆಸರು ನಿತ್ಯ ಕಗ್ಗೊಲೆ ಆಗುತ್ತಿರುವ ಕಥೆಗೆ ಹಾಸ್ಯದ ರವಿಕೆ ತೊಡಿಸಿದ ಹುಡುಗಿಯ ಹೆಸರು ನಿಮಗೆ ಗೊತ್ತಾ? ಅಣ್ಣತಮ್ಮಂದಿರೆ, ಅಕ್ಕತಂಗಿಯರೆ, ಲಂಡನ್ನಿನ ತರುಲತೆಗಳೆ ಒಮ್ಮೆಯಾದರೂ ನನ್ನನ್ನ ಬಾಯ್ತುಂಬ ಪೂರ್ಣಿ ಎಂದು ಕರೆಯುವಿರಾ ಎಂದು ಕನವರಿಸುತ್ತಿದ್ದಾರೆ. ಲಂಡನ್‌ಗೆ ಕೇಳಿಸುವ ಹಾಗೆ ನೀವೆಲ್ಲ ಪೂರ್ಣೀ..ಎಂದು ಇಲ್ಲಿಂದಲೇ ಜೋರಾಗಿ ಕೂಗಿ ಕರೆಯಿರಿ!! ಪೂರ್ಣಿಮಾ ಭಟ್ಟ ಸಣ್ಣಕೇರಿ, 788http://kannada.oneindia.com/img/2009/07/23-poornima-bhat1.jpg83806humorಕೊಳೆತ ಮಾರುಕಟ್ಟೆಯಲ್ಲಿ ಹೆಂಗಸರ ತಾಜಾ ರಾಜಕೀಯ/column/humor/2008/0506-fresh-politics-in-rotten-market.htmlಭಾನುವಾರ ಬೆಳಿಗ್ಗೆ ಸಂತೆ. ಹಣ್ಣು, ಹೂವು, ತರಕಾರಿ ಮಾರುವವರದೇ ಭರಾಟೆ. ತರಕಾರಿ ಹೆಸರನ್ನು ಹಿಡಿದುಕೊಂಡು ಗಿರಾಕಿಗಳನ್ನು ತಮ್ಮತ್ತ ಸೆಳೆಯುವವರದೇ ಚೀರಲು ಧ್ವನಿಗಳು. ಆದರೆ, ಒಂದು ಮೂಲೆಯಲ್ಲಿ ಈ ಎಲ್ಲ ಚೀರು ಧ್ವನಿಗಳನ್ನು ಮೀರಿ ರೋಷಾವೇಷದ ಮಾತುಗಳು ಕೇಳಿಬರುತ್ತಿತ್ತು. ಮಹಿಳಾಮಣಿಗಳದ್ದೇ ಅಬ್ಬರ. ಏನೋ ಮಜಾ ನಡೆದೈತಿ ಅಂತ ನನ್ನ ಅನುಮತಿಗೂ ಕಾಯದೇ ಡಿಬ್ಬಿ ಅತ್ತ ಎಳೆದುಕೊಂಡು ಹೋದ. ಯಶ್ 2596http://kannada.oneindia.com/img/2009/11/14-market1.jpg83806humorಪ್ರಮಿಳಾ ನೇಸರ್ಗಿಯೂ ಮಂತ್ರಿಸಿದ ನಿಂಬೆಹಣ್ಣೂ/column/humor/2008/0422-subbu-and-magical-lemon.htmlರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಗಲ್ಲಿಗಲ್ಲಿಗಳಲ್ಲಿ ಜ್ಯೋತಿಷಿಗಳು ಹುಟ್ಟಿಕೊಳ್ಳುತ್ತಿದ್ದಾರೆ. ಚುನಾವಣೆ ಇಲ್ಲದಿದ್ದರೂ ಅವರು ಇದ್ದೇ ಇರುತ್ತಾರೆ. ಯಾವ ಪಕ್ಷ ಗೆಲ್ಲುತ್ತೆ? ಮುಮಂ ಯಾರು? ಮೊದಲು ಎಡಗಾಲಿಡಬೇಕೋ, ಬಲಗಾಲಿಡಬೇಕೋ ಅವರೇ ಹೇಳುತ್ತಾರೆ. ಅರಳುತ್ತಿರುವ ಜ್ಯೋತಿಷಿಗಳು ಮರುಳಾಗುತ್ತಿರುವ ರಾಜಕಾರಣಿಗಳ ಕುರಿತು ಒಂದು ವಿಡಂಬನೆ. * ಪ್ರಸಾದ ನಾಯಿಕ ಪಕ್ಕದ ಓಣಿಯಲ್ಲಿದ್ದ ಗೆಳೆಯ ಡಿಬ್ಬಿ ಹಳೆಯ ಕಾಲದ ಚಿತ್ರದಲ್ಲಿ ತಾಯ್ ನಾಗೇಶ್ 2738http://kannada.oneindia.com/img/2009/11/14-pramila-nesargi1e.jpg83806humorಶರಶೈಯೆಯಲ್ಲಿ ಪವಡಿಸಿದ ಭೀಷ್ಮ ಪ್ರತಿಜ್ಞೆ/column/humor/2009/0102-i-just-broke-my-new-year-resolution-2009.htmlಹೊಸವರ್ಷ ಉದಯವಾಗುವ ವೇಳೆ ಅನೇಕ ಜನ, ಥರಹೇವಾರಿ ಪ್ರತಿಜ್ಞೆಗಳನ್ನು ಮಾಡುವುದು ರೂಢಿ. ತಪ್ಪೇನಿಲ್ಲ ಬಿಡಿ. ಎಷ್ಟೋ ಜನ 2009ಕ್ಕೆ ಹೊಸ ರೆಸಲ್ಯೂಷನ್ ಗಳನ್ನು ಕೈಗೊಂಡಿದ್ದನ್ನು ನೀವು ಕೇಳಿರಬಹುದು. ಆ ಭೀಷ್ಮ ಪ್ರತಿಜ್ಞೆಗಳು ಇಷ್ಟುಹೊತ್ತಿಗಾಗಲೇ ಶರಶೈಯೆಯಲ್ಲಿ ಅಂಗಾತ ಮಲಗಿದ್ದರೆ ಖಂಡಿತ ಆಶ್ಚರ್ಯವಿಲ್ಲ * ರೇಖಾ ಹೆಗಡೆ ಬಾಳೇಸರ, ಓಲ್ಡ್‌ಸ್ಮಾರ್; ಫ್ಲಾರಿಡಾನೋಡನೋಡುತ್ತ ನೂತನ ವರ್ಷ ಬಂದಿದೆ. ನಿನ್ನಿನ ದಿನಕ್ಕೂ, ಇಂದಿನದಕ್ಕೂ 33835http://kannada.oneindia.com/img/2009/01/02-new-year-resolutions1e.jpg83806humorತಿರುಪತಿ ತಿಮ್ಮಪ್ಪನೂ, ಉಡುಪಿಯ ಹೋಟೆಲೂ/column/humor/2009/0130-tirupathi-timmappa-and-udupi-hotel.htmlಶಂಕರಪುರಂನಲ್ಲಿರುವ ಬ್ರಾಹ್ಮಣರ ಕಾಫಿ ಬಾರ್ ಯಡಿಯೂರಪ್ಪನವರ ಭೇಟಿಯಿಂದಾಗಿ ಇವತ್ತು ಸುದ್ದಿ ಕೇಂದ್ರಕ್ಕೆ ಬಂದಿರಬಹುದು, ವಿಶ್ವೇಶ್ವರ ಭಟ್ ಅವರು ಬರೆದ ಎಂಟಿಆರ್ ಹೋಟೆಲಿನ ಇತಿಹಾಸ ಮತ್ತು ಪರಂಪರೆಯ ಬಗೆಗೆ ಕನ್ನಡಿಗರು ಬೆನ್ನು ತಟ್ಟಿಕೊಳ್ಳುತ್ತಿರಬಹುದು, ತಟ್ಟಿಕೊಳ್ಳಿರಿ ತಟ್ಟಿಕೊಳ್ಳಿರಿ. ಆದರೆ ಕನ್ನಡಿಗರೇ ಒಂದು ವಿಷಯ ತಿಳಿಯಿರಿ. ಐದಾರು ಶತಮಾನಗಳ ಹಿಂದೆಯೇ ನಮ್ಮಲ್ಲಿ ಉಡುಪಿ ಹೋಟೆಲುಗಳಿದ್ದವು, ಅಲ್ಲಿ ರುಚಿರುಚಿಯಾದ ಇಡ್ಲಿ ದೋಸೆಗಳು ಬಿಕರಿಯಾಗುತ್ತಿದ್ದವು. 34371http://kannada.oneindia.com/img/2009/01/30-balaji3.jpgnews"> ಗಣಪತಿ ಬರೆದ ಮಹಾಪ್ರಬಂಧ | Ganesha Chaturthi | PhD on Ganesha | Humor | Anandarama Shastry - ಹಾಸ್ಯ : ಗಣಪತಿ ಬರೆದ ಮಹಾಪ್ರಬಂಧ - Kannada Oneindia

ಗಣಪತಿ ಬರೆದ ಮಹಾಪ್ರಬಂಧ

PhD thesis by Ganesha
ಓಂ ಶ್ರೀ ಗಣೇಶಾಯ ನಮಃ, ಓಂ ಶ್ರೀ ಗಣೇಶಾಯ ನಮಃ. ಯಾವುದೇ ಕೆಲಸವನ್ನು ಆರಂಭಿಸಬೇಕಾದರೆ ಮೊದಲು ಗಣಪತಿಗೆ "ಹಾಯ್" ಹೇಳಿ ಮುಂದುವರಿಯಬೇಕು. ಒಂದು ಸಲ "ಹಾಯ್" ಹೇಳಿದರೆ ಸಾಕು, ಆದರೆ ನಾನಿಲ್ಲಿ ಎರಡು ಸಲ ಹೇಳಿದ್ದೇನೆ. ಯಾಕೆಂದರೆ ಇದು ಗಣಪತಿಯ ಕುರಿತಾದ್ದೇ ಬರಹ.

ಹರಿಕಥೆಯ ಪೇಳ್ವೆನು ಭಕ್ತರಿಗಿಂದು
ಹರಸುತನೆ ಹರಸುತನೆ ಓದು
ನೀನೂ ಚತುರ್ಥಿಯಂದು
ಇಲ್ಲಿಗೆ ಬಂದು.

ಯಾವುದೇ ಹರಿಕಥೆಯಾಗಲೀ ಗಣಪತಿಯ ಪದ್ಯರೂಪಿ ಸ್ತುತಿಯೊಂದಿಗೆ ಆರಂಭವಾಗಬೇಕು. ಎಂದೇ ಈ ಹರಿಕಥೆಯ ಆರಂಭದಲ್ಲಿ ಗಣಪತಿ ಕುರಿತ ಈ ಪದ್ಯ. ಆದರೆ ಈ ಪದ್ಯವು ಸ್ತುತಿಯಲ್ಲ, ವಸ್ತುಸ್ಥಿತಿ. ಬರಲಿರುವ ಚತುರ್ಥಿಯಂದು ಗಣಪ ನಮ್ಮ ಬಳಿಗೆ ಬರುತ್ತಾನಷ್ಟೆ. ಆಗ ಅವನೂ ಓದಲಿ ಈ ಹರಿಕಥೆ.

ಅಂದಹಾಗೆ, ಮೇಲಿನ ಪದ್ಯದಲ್ಲಿ ನಾನು ಎರಡು ಸಲ "ಹರಸುತನೆ" ಎಂದದ್ದರ ಅರ್ಥ ಇಂತಿದೆ. ಮೊದಲನೆಯದರ ಅರ್ಥ "ಹರನ ಮಗನೆ" ಎಂದು. ಎರಡನೆಯದರ ಅರ್ಥ "ಹರಸುತ್ತಲೇ" ಎಂದು. ಹರಿಕಥೆ ದಾಸರ ಶಬ್ದಚಮತ್ಕಾರ ಇದು. ಇಷ್ಟಕ್ಕೂ, ಹರಿಕಥೆಯೆಂದರೆ ಹಾರ್‍ಮೋನಿಯಂ ತಬಲಾ ಮತ್ತು ಹರಿದಾಸರ ಕೈಯಲ್ಲಿನ ಚಿಟಿಕೆ ಇವುಗಳ ಜೊತೆಗೆ ಅವರ ಬಾಯಿಂದಲೂ ಹೊರಡುವ ನಾನಾ ಬಗೆಯ ಶಬ್ದಗಳ ಅರ್ಥಾತ್ ಸೌಂಡ್‌ಗಳ ಚಮತ್ಕಾರವೇ ತಾನೆ!

ನನ್ನ ಈ ಹರಿಕಥೆ ಹರಿಕಥೆಯಲ್ಲ, ಹರಕಥೆ. ಹರಸುತನ ಕಥೆ. ಹರಿ ಹರ ಒಂದೇ. ಅದು ದಾವಣಗೆರೆಯ ಪಕ್ಕದಲ್ಲಿದೆ. ವಿಶ್ವ ಭೂಪಟದಲ್ಲಿ ಇನ್ನೊಂದು ಹರಿಹರ ನನಗಂತೂ ಕಂಡಿಲ್ಲ. ಇಷ್ಟಕ್ಕೂ ನನ್ನ ಈ ಹರಿಕಥೆ ಹರಿಕಥಾ ದಾಸರು ಮಾಡುವಂಥ ಆ ಟೈಪ್ ಹರಿಕಥೆ ಅಲ್ಲ. "ಸುಮ್ನೆ ಹರಿಕಥೆ ಹಚ್ಬೇಡ. ಷಾರ್ಟಾಗಿ ಹೇಳ್ಬಿಡು", ಅಂತಾರಲ್ಲಾ ಆ ಟೈಪ್ ಹರಿಕಥೆ ಇದು.

ಕಥೆ

ತಿಪ್ಪೇಶಿ ಎಮ್ಮೆ ಕಟ್ಟಿದ. ಪಾಸಾದ. ಎಂ.ಎ. ಪಾಸಾದಮೇಲೆ ಏನು ಮಾಡಬೇಕು? ಪಿ.ಎಚ್.ಡಿ. ಮಾಡಬೇಕು. ಭಾರತದ ಎಲ್ಲ ತಂದೆತಾಯಂದಿರಂತೆಯೇ ತಿಪ್ಪೇಶಿಯ ಮಾತಾಪಿತೃರೂ ತಮ್ಮ ಮಗ ಡಾಕ್ಟರ್ ಅಥವಾ ಇಂಜಿನಿಯರ್ ಆಗಬೇಕೆಂದು ಬಯಸಿದ್ದರು. ಆದರೆ ತಿಪ್ಪೇಶಿ ಎಮ್ಮೆ ಆದ. ಪಿ.ಎಚ್.ಡಿ. ಮಾಡಿ ಡಾಕ್ಟರ್ ಆಗಿ ತೋರಿಸ್ತೀನಿ ಅಂದುಕೊಂಡು ಪಿ.ಎಚ್.ಡಿ. ಮಾಡಲು ನಿರ್ಧರಿಸಿದ. ಯಾವ ವಿಷಯದಮೇಲೆ ಪಿ.ಎಚ್.ಡಿ. ಮಾಡೋದು? ದಿನಪತ್ರಿಕೆಯಮೇಲೆ ಕಣ್ಣಾಡಿಸಿದ. ಆ ದಿನ ಮೂವರು ಪಿ.ಎಚ್.ಡಿ. ಗಳಿಸಿದ ಸುದ್ದಿಗಳಿದ್ದವು. ಅವರು ಆಯ್ದುಕೊಂಡಿದ್ದ ವಿಷಯಗಳು:

(1) ಜಾಗತಿಕ ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ಭಾರತದಮೇಲೆ ಹಂದಿಜ್ವರದ ಪರಿಣಾಮ.
(2) ದರೋಡೆಕೋರರ ಮನಃಸ್ಥಿತಿ: ಒಂದು ಮನೋ ಅರ್ಥೋ ಸಮಾಜೋ ವೈಜ್ಞಾನಿಕ ವಿಶ್ಲೇಷಣೆ.
(3) ನೊಣ ಹೊಡೆಯುವುದಕ್ಕೂ ಸೊಳ್ಳೆ ಹೊಡೆಯುವುದಕ್ಕೂ ಇರುವ ಸಾಮ್ಯ ಹಾಗೂ ವ್ಯತ್ಯಾಸ: ಒಂದು ಕ್ಷ ಕಿರಣ.

ಊಹ್ಞೂ. ಇಂಥ ಕ್ಲಿಷ್ಟ ದುಷ್ಟ ನಿಕೃಷ್ಟ ವಿಷಯಗಳನ್ನು ಪಿ.ಎಚ್.ಡಿ.ಗೆ ಆಯ್ದುಕೊಳ್ಳಲು ತಿಪ್ಪೇಶಿಯ ಮನಸ್ಸು ಒಪ್ಪಲಿಲ್ಲ. ಯಾವುದಾದರೂ ಸರಳ ಸುಂದರ ಆಕರ್ಷಕ ವಿಷಯ ಆಗಬೇಕು. ಯಾವುದು?

"ಈ ಸಲ ಗಣಪ್ಪಂಗೆ ಸರ್ವಜ್ಞನ ಡ್ರೆಸ್ ಹಾಕಣ್ವಾ ಅಣ್ಣಾ?" ಅಂತ ತಮ್ಮರಾಯ ಕೇಳಿದ್ದೇ ತಡ ತಿಪ್ಪೇಶಿಯ ತಲೆಯಲ್ಲಿ ವಿದ್ಯುತ್ ಸಂಚಾರವಾಯಿತು! (ಈಶ್ವರಪ್ಪನವರಿಗೆ ಹೇಳ್ಬೇಡಿ, ಹರಿಸಿ ಇತ್ಲಾಗೆ ಅಂತಾರೆ.)

"ಗಣಪತಿಯನ್ನು ಬಿಟ್ಟು ಬೇರಾವ ದೇವರನ್ನೂ ನಾವು ವಿಧವಿಧ ಮಾಡರ್ನ್ ವೇಷಭೂಷಣಗಳಲ್ಲಿ ಮತ್ತು ವಿವಿಧ ಪಾತ್ರಗಳಲ್ಲಿ ಪ್ರದರ್ಶನಕ್ಕಿಡುವುದಿಲ್ಲ. ಬೇರಾವ ದೇವರಿಗೂ ಸಲ್ಲದ ಈ ಗೌರವ (ಅಥವಾ ಹಿಂಸೆ) ಗಣಪತಿಗೆ ಮಾತ್ರ ಯಾಕೆ?" ತಿಪ್ಪೇಶಿಯ ಪಿ.ಎಚ್.ಡಿ. ಸಂಶೋಧನೆಗೆ ವಿಷಯ ಸಿಕ್ಕಿಬಿಟ್ಟಿತು.

ಗಜಾನನ, ಏಕದಂತ, ಮಹೋದರ, ವಕ್ರತುಂಡ, ಲಂಬೋದರ, ವಿಘ್ನೇಶ್ವರ, ವಿಘ್ನರಾಜ, ವಿಘ್ನನಾಶಕ, ಸುಮುಖ, ಗಜಕರ್ಣ, ಧೂಮ್ರಜ, ಧೂಮ್ರಕೇತು, ಗಣಾಧಿಪ, ಗಣಾಧ್ಯಕ್ಷ, ಗಣಪತಿ, ಗಣನಾಥ, ಗಣನಾಯಕ, ಗಣೇಶ, ಗೌರೀತನಯ, ಗಜಮುಖ, ಗೌರೀಸುತ, ಹೇರಂಬ, ಭಾಲಚಂದ್ರ, ವಿಕಟ, ಮೂಷಿಕವಾಹನ, ಮೋದಕಹಸ್ತ, ಗಜವದನ, ಸಿದ್ಧಿದಾತ, ವಿಘ್ನಹರ, ವಿನಾಯಕ ಮುಂತಾದ ಗಣಪತಿಯ ವಿವಿಧ ಹೆಸರುಗಳನ್ನು ಒಂದೇ ಉಸುರಿಗೆ ಒದರಬಲ್ಲ ಪ್ರೊ. ಶಿವಪುತ್ರಪ್ಪಾ ಬಸವರಾಜಪ್ಪಾ ಕಂಚಿನಮನಿ ಇವರು ತಿಪ್ಪೇಶಿಯ ಪ್ರಸ್ತುತ ಸಂಶೋಧನೆಗೆ ಗೈಡ್ ಆದರು.

"ಅವರು ಕಂಚಿನಮನಿ ಇರಲಿಕ್ಕಿಲ್ಲ, ಹಂಚಿನಮನಿ ಇದ್ದಾರು. ಅಥವಾ ಅದು ಇಂಗ್ಲಿಷ್ ಮನಿಯೇ?" ಹೀಗೊಂದು ಸಂಶಯ ತಿಪ್ಪೇಶಿಗೆ ಬಂದು ಈ ಸಂಶಯಭರಿತ ವಿಷಯವೇ ಸಂಶೋಧನೆಗೆ ಯೋಗ್ಯ ಎಂದು ಅವನಿಗನ್ನಿಸಿತಾದರೂ ಈ ವಿಷಯದ ಸಾರ್ವತ್ರಿಕತೆಯ ಕೊರತೆಯಿಂದಾಗಿ ಇದರ ಸುದ್ದಿಗೆ ಹೋಗದೆ ಗಣಪತಿಗೇ ಅಂಟಿಕೊಂಡ. ಲೈಬ್ರೆರಿಗಳಿಗೆ ಹೋಗಿ ಪುಸ್ತಕಗಳನ್ನು ತಿರುವಿಹಾಕತೊಡಗಿದ ತಿಪ್ಪೇಶಿ. ಎಲ್ಲ ಪುಸ್ತಕಗಳಲ್ಲಿದ್ದುದೂ ಒಂದೇ ಮಾಹಿತಿ: "ಭಾರತೀಯರಲ್ಲಿ ರಾಷ್ಟ್ರೀಯತೆಯನ್ನು ಹುರಿದುಂಬಿಸಿ ವಿದೇಶಿ ದಬ್ಬಾಳಿಕೆಯ ವಿರುದ್ಧ ಭಾರತೀಯರನ್ನು ಒಗ್ಗೂಡಿಸುವ ಮಹಾನ್ ಉದ್ದೇಶದಿಂದ ಲೋಕಮಾನ್ಯ ಬಾಲಗಂಗಾಧರ ತಿಲಕರು ಗಣೇಶ ಚತುರ್ಥಿಗೆ ಸಾರ್ವಜನಿಕ ಉತ್ಸವದ ಮತ್ತು ಸಾರ್ವತ್ರಿಕ ಆಚರಣೆಯ ರೂಪು ನೀಡಿದರು."

ಇದಿಷ್ಟಕ್ಕೇ ತಿಪ್ಪೇಶಿಗೆ ಸಮಾಧಾನವಾಗಲಿಲ್ಲ. ಇನ್ನೂ ಡೀಟೈಲ್‌ಗಳಿಗಾಗಿ ತಡಕಾಡಿದ. ತಾಳೆಗರಿ ಗ್ರಂಥಗಳನ್ನು ತಿರುವಿಹಾಕಿದ. ಶಿಲಾಶಾಸನಗಳನ್ನು ಓದಿದ. ಪ್ರಯೋಜನವಾಗಲಿಲ್ಲ. ಕೊನೆಗೊಂದು ದಿನ, "ಗಜಮುಖನೇ ಗಣಪತಿಯೇ ನಿನಗೆ ವಂದನೆ. ನಂಬಿದವರ ಪಾಲಿನಾ ಕಲ್ಪತರು ನೀನೇ" ಹಾಡನ್ನು ಇಪ್ಪತ್ತೊಂದು ಸಲ ಹಾಡಿ ಮಲಗಿದ. ಕರೆದರೆ ಓ ಎನ್ನನೇ ಶಿವ(ಸೂ)ನು?

ಆ ರಾತ್ರಿ ತಿಪ್ಪೇಶಿಯ ಕನಸಿನಲ್ಲಿ ಸಾಕ್ಷಾತ್ ಗಣಪತಿಯೇ ಪ್ರತ್ಯಕ್ಷನಾದ! ತನ್ನ ಪಿ.ಎಚ್.ಡಿ. ವಿಷಯವನ್ನು ಡೀಟೈಲ್ ಆಗಿ ಗಣಪತಿಗೆ ತಿಳಿಸಿದ ತಿಪ್ಪೇಶಿ. ವಿಧವಿಧ ಮಾಡರ್ನ್ ವೇಷಭೂಷಣಗಳಲ್ಲಿ ಮತ್ತು ವಿವಿಧ ಪಾತ್ರಗಳಲ್ಲಿ ಪ್ರದರ್ಶನಕ್ಕೊಳಗಾಗಿರುವುದೇಕೆಂದು ಗಣಪತಿಯನ್ನು ಪ್ರಶ್ನಿಸಿದ. "ಅವರವರ ಭಾವಕ್ಕೆ, ಅವರವರ ಭಕುತಿಗೆ ತಕ್ಕಂತೆ ಅವರವರಿಗೆ ಬೇಕಾದ ವೇಷಭೂಷಣಗಳಲ್ಲಿ ಮತ್ತು ಪಾತ್ರಗಳಲ್ಲಿ ನಾನು ಅವತರಿಸುತ್ತೇನೆ ವತ್ಸಾ", ಎಂದ ಗಣಪತಿ.

"ಭಕ್ತರಿಗೆ ಬೇಕಾದ ರೀತಿಯಲ್ಲಿ ಅವತರಿಸುವ ಕೆಲಸವನ್ನು ನೀನು ಮಾತ್ರ ಯಾಕೆ ಮಾಡುತ್ತೀ, ಇನ್ನಾವ ದೇವರೂ ಯಾಕೆ ಮಾಡುವುದಿಲ್ಲ? ಅಥವಾ, ಭಕ್ತರು ಯಾಕೆ ನಿನ್ನನ್ನು ಮಾತ್ರ ತಮಗೆ ಬೇಕಾದ ರೀತಿಗಳಲ್ಲಿ ಅವತರಿಸಿಸುತ್ತಾರೆ, ಬೇರಾವ ದೇವರನ್ನೂ ಆ ರೀತಿಯೆಲ್ಲ ಅವತರಿಸಿಸುವುದಿಲ್ಲ ಯಾಕೆ?" ಎಂದು ಮರುಪ್ರಶ್ನೆ ಹಾಕಿದ ತಿಪ್ಪೇಶಿ. ಆಗ ಗಣಪತಿ ಹೇಳಿದ,

"ವತ್ಸಾ, ಇದಕ್ಕೆ ಉತ್ತರವನ್ನು ನಾನು ಡೀಟೈಲ್ ಆಗಿ ತಿಳಿಸುತ್ತೇನೆ. ಈಗ ಹೇಳತೊಡಗಿ ನಿನ್ನ ಸವಿನಿದ್ದೆಗೆ ಭಂಗ ತರಲಿಚ್ಛಿಸುವುದಿಲ್ಲ. ಹೇಗೂ ನಿನಗೆ ಪಿ.ಎಚ್.ಡಿ.ಗಾಗಿ ಈ ವಿಷಯದಲ್ಲಿ ಮಹಾಪ್ರಬಂಧವೇ ಬೇಕಷ್ಟೆ. ಮಹಾಪ್ರಬಂಧವನ್ನು ನಾನೇ ರಚಿಸಿ ನಿನಗೆ ಈಮೈಲ್ ಮಾಡುತ್ತೇನೆ. ವ್ಯಾಸೋಕ್ತ ಮಹಾಭಾರತವನ್ನು ಸರಸರನೆ ಲೀಲಾಜಾಲವಾಗಿ ಬರೆದು ಮುಗಿಸಿರುವ ನನಗೆ ಈ ನಿನ್ನ ಮಹಾಪ್ರಬಂಧವೇನು ಮಹಾ? ಇದೀಗಲೇ ಬರೆದು ಮುಗಿಸಿ ಈಮೈಲ್ ಮಾಡುತ್ತೇನೆ. ಬೆಳಗ್ಗೆ ಎದ್ದವನು ನೀನು ಕಂಪ್ಯೂಟರ್‌ನಲ್ಲಿ ಮೈಲ್‌ಬಾಕ್ಸ್ ಓಪನ್ ಮಾಡು. ನನ್ನ, ಊಹ್ಞೂ, ನಿನ್ನ ಮಹಾಪ್ರಬಂಧ ಅಲ್ಲಿ ರೆಡಿ ಇರುತ್ತದೆ."

ಇಷ್ಟು ಹೇಳಿದವನೇ ಗಣಪತಿಯು ತಿಪ್ಪೇಶಿಯ ಪ್ರತಿಕ್ರಿಯೆಗೂ ಕಾಯದೆ ಅಂತರ್ಧಾನವಾಗಿಬಿಟ್ಟ. ಮರುದಿನ ಎದ್ದವನೇ ತಿಪ್ಪೇಶಿಯು ತನ್ನ ಕಂಪ್ಯೂಟರ್ ಬಳಿಗೋಡಿದ. ಗಜಾನನನ ವಾಹನನಾದ ಮೂಷಿಕಪ್ರಭುವಿನ ನೆರವಿನಿಂದ ಈಮೈಲ್ ಬಾಕ್ಸ್ ಓಪನ್ ಮಾಡಿದ. ವಾಹ್! ಗಣಪತಿ ಕಳಿಸಿದ ಮಹಾಪ್ರಬಂಧದ ಕಡತ ಅಲ್ಲಿತ್ತು! ಮೂಷಿಕದ ನೆರವಿಂದ ಆ ಕಡತದಮೇಲೆ ಕೈಬಾಣ ಹಾಯಿಸಿ ಮೂಷಿಕದ ಬೆನ್ನನ್ನು ತನ್ನ ಬೆರಳಿಂದ ಒಮ್ಮೆ ಮೃದುವಾಗಿ ಒತ್ತಿದ. ಕಡತ ತೆರೆದುಕೊಂಡಿತು.

ಓಹ್! ಇದೇನಿದು?! ಅಂಕಿಗಳನ್ನು ಹೋಲುವ ಗಜಿಬಿಜಿ ಸನ್ನೆಗಳು, ಅರ್ಥವಾಗದ ಭಾಷೆಯ ಹುಚ್ಚಾಪಟ್ಟೆ ಆಕೃತಿಯ ಅಕ್ಷರಗಳು, ಬಗೆಬಗೆಯ ಗೀಟುಗಳು, ನಕ್ಷತ್ರಗಳು ಮತ್ತು ಇನ್ನೂ ಏನೇನೋ ಚಿತ್ರ-ವಿಚಿತ್ರಗಳು! ಇದೆಂಥ ಮಹಾಪ್ರಬಂಧ? ಇದನ್ನು ಓದುವುದಾದರೂ ಹೇಗೆ? ಕಂಪ್ಯೂಟರ್ ಎಕ್ಸ್‌ಪರ್ಟ್ ಮಿತ್ರನೋರ್ವನನ್ನು ಕರೆಸಿದ ತಿಪ್ಪೇಶಿ. ಆ ಮಿತ್ರ, "ಇದೇನ್ ಮಹಾ. ಒಂದ್ನಿಮಿಷದಲ್ಲಿ ಇದನ್ನ ಸರಿಮಾಡಿಕೊಡ್ತೀನಿ, ಆಗ ಓದ್ಬಹುದು", ಎಂದು ನುಡಿದು ಸರಿಮಾಡಲು ಕುಳಿತ.

ಇಪ್ಪತ್ತೊಂದು ದಿನ ಆಯಿತು, ಇನ್ನೂ ಸರಿಮಾಡುತ್ತಲೇ ಇದ್ದಾನೆ ಆ ಕಂ.ಎ.ಮಿತ್ರ! ಅದು ದೇವರ ಭಾಷೆಯೋ ಅಥವಾ ಕಂಪ್ಯೂಟರ್ ದೋಷವೋ ಅವನಿಗೆ ಗೊತ್ತಾಗುತ್ತಿಲ್ಲ. ಈ ಮಧ್ಯೆ ಏನಾಯಿತೆಂದರೆ ಗಣಪತಿಯು ತಿಪ್ಪೇಶಿಗೆ ಮಹಾಪ್ರಬಂಧ ಕಳಿಸಿರುವ ಸುದ್ದಿಯು ಅವನ ತಮ್ಮನ ಮುಖೇನ ಜಗತ್ತಿಗೆಲ್ಲ ಟಾಂಟಾಂ ಆಯಿತು. ಪರಿಣಾಮ, ಭಾರತದ ಬಹುತೇಕ ಎಲ್ಲ ವಿಶ್ವವಿದ್ಯಾಲಯಗಳು ಮತ್ತು ಪ್ರಪಂಚದ ಅನೇಕ ವಿಶ್ವವಿದ್ಯಾಲಯಗಳು ಸದರಿ ಮಹಾಪ್ರಬಂಧವನ್ನು ತೆಕ್ಕೆಗೆ ಹಾಕಿಕೊಳ್ಳಲು ಕ್ಯೂ ಹಚ್ಚಿವೆ! ಈಗಿರುವ ಪೊಸಿಷನ್‌ನಲ್ಲಿಯೇ ಅದನ್ನು ಸ್ವೀಕರಿಸಿ ತಿಪ್ಪೇಶಿಗೆ ಡಾಕ್ಟರೇಟ್ ದಯಪಾಲಿಸಲು ಅವೆಲ್ಲ ತುದಿಗಾಲಲ್ಲಿ ನಿಂತಿವೆ! ಕಾಲಾಂತರದಲ್ಲಿ ಅದು ತಿಳಿಯಾದರೆ ವಿಶ್ವವಿದ್ಯಾಲಯಕ್ಕೆ ಭಗವಾನ್ ಪ್ರಣೀತ ವಿಷಯವೊಂದರ ಸ್ವಾಮ್ಯ ದೊರೆತಂತಾಯಿತು. ಒಂದುವೇಳೆ ಆಗದೇನೇ ಇದ್ದರೂ ನೋ ಪ್ರಾಬ್ಲಮ್, ಭಗವಂತನೇ ಬರೆದು ಕಳಿಸಿದ ಮಹಾಪ್ರಬಂಧವೊಂದರ ಒಡೆತನವೆಂದರೇನು ಸಾಮಾನ್ಯವೇ? ಡಾಕ್ಟರೇಟ್ ಸ್ವೀಕರಿಸಲು ತಿಪ್ಪೇಶಿ ಕೇಳಿದ ರೇಟ್ ಕೊಡಲು ವಿ.ವಿ.ಗಳು ತಯಾರಾಗಿವೆ.

ಉಪಸಂಹಾರ : ಈಗ ತಾನೇ ಬಂದ ಸುದ್ದಿ: ತಿಪ್ಪೇಶಿಯ ಕಂ.ಎ.ಮಿತ್ರನು ಸದರಿ ಪ್ರಬಂಧಭಾಷೆಯನ್ನು ತಿಳಿಗೊಳಿಸುವ ಯತ್ನದಲ್ಲಿ ಆ ಕಡತವನ್ನೇ ಹೊಲಬುಗೆಡಿಸಿಬಿಟ್ಟನಂತೆ! ಪರಿಣಾಮ, ಅದರಲ್ಲಿದ್ದದ್ದೆಲ್ಲ ಅಳಿಸಿಹೋಗಿಬಿಟ್ಟಿದೆಯಂತೆ! ಎಲ್ಲ ದೈವೇಚ್ಛೆ! ದೇವರ ವಿಷಯವನ್ನೇ ಕೆದಕಲು ಹೊರಟರೆ ಇನ್ನೇನಾಗುತ್ತದೆ! ಓಂ ಶ್ರೀ ವಿಘ್ನರಾಜಾಯ ನಮಃ.

(ಕೃಪೆ : ಗುಳಿಗೆ ಬ್ಲಾಗ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+