ಲಕ್ಷ್ಮಿ ಎಲ್ಲಿದ್ದಾಳು : ಪುಟ-3
ಕೇಳಿದ್ದ ಕೊಡುವವಳೆ ಎಲ್ಲಿಯೂ ಹೋಗದಿರೆ
ಲಕ್ಷ್ಮಿ ಚಂಚಲಳು ಎಂಬ ಮಾತು ಹೊಸದೇನಲ್ಲ. ಈಗ ಇದ್ದು, ಇನ್ನು ಕೆಲವೇ ಕ್ಷಣಗಳಲ್ಲಿ ಇಲ್ಲವಾಗುವ ನೀರ ಅಲೆಯಂತೆ (' ಲಕ್ಷ್ಮೀಸ್ ತೋಯ-ತರಂಗ- ಭಂಗ ಚಪಲಾ’) ಅಸ್ಥಿರ ಸ್ವಭಾವದವಳು ಎಂಬ ಎಚ್ಚರಿಕೆ ಎಲ್ಲರೂ ಕೊಡುತ್ತಾರೆ. ' ತಾಯಿ, ಈ ಮಾತನ್ನು ಸುಳ್ಳಾಗಿಸು’, ಎಂದು ಚಮತ್ಕಾರವಾಗಿ ಹೇಳುವ ಶ್ರೀ ಪ್ರಸನ್ನ ತೀರ್ಥರ ಲಕ್ಷ್ಮೀಸ್ತುತಿಯಾಂದು ಸಹ ಇದೆ :
'' ಕೇಳಿದ್ದ ಕೊಡುವವಳೆ, ಚಂಚಲಳು ನೀನೆಂದು
ಕೊಂಚ ಭಯ ಪಡುವವರು ತಿಳಿಯದವರು ;
ಇರಲಿ, ನೀ ಬಂದೆನ್ನ ಹೃದಯಲಿ ಮನೆ ಮಾಡು,
ನಿಶ್ಚಂಚಲೆಯೆ ಆಗಿ ನೆಲಸು, ಸತತ ಹರಸು!
('' ವಾಂಛಿತದಾಯಿನಿ, ಚಂಚಲಾ ತ್ವಂ ಇತಿ ಕಿಂಚಿದ್ ಅಸ್ತಿ ಭಯಂ ಅಜ್ಞ-ಜನಾನಾಮ್। ತ್ವಂ ಚ ಮದೀಯೇ ಗೃಹೇ ಸತತಂ ನಿಶ್ಚಂಚಲಾ ಭವ ಪ್ರಸನ್ನಮುಖೀ ।। ತ್ವಾಂ ವನ್ದೇ ಮಾತರಮ್ ।।’’)
ಇಂಥ ಪರಿವಾರದ- ಸಮೃದ್ಧಳಾದ ಲಕ್ಷ್ಮೀ ಎಲ್ಲಿ ಎಲ್ಲಿ ನೆಲಸಿ ಇದ್ದಾಳು ? ಪುರಾಣಗಳಲ್ಲಿ ಹಲವೆಡೆ ಇಂದ್ರ, ಬೃಹಸ್ಪತಿ, ಪ್ರಹ್ಲಾದ ಮುಂತಾದವರು ಕೇಳಿದ ಪ್ರಶ್ನೆಯೇ ಇದು. ಸಿಗುವ ಸಾಮಾನ್ಯ ಉತ್ತರ : ''ಪುಣ್ಯ, ಧರ್ಮ ಮತ್ತು ಸತ್ಯ ಇದ್ದ ಕಡೆ ಲಕ್ಷ್ಮಿ ಸದಾ ಇರುತ್ತಾಳೆ- ಎಂದು.
' ಸುಮನಸ ವಂದಿತ ಪದ ಯುಗಳೆ, ಮನಸಿಜ- ಜನಕನ ಕೋಮಲತಮ ಹೃತ್ಕಮಲದೊಳು ನೆಲಸಿದ ಈ ಶುಭಗೆ ’ ಲಕ್ಷ್ಮಿ ಬೇರೆ ಬೇರೆಯವರಿಗೆ ಬೇರೆ ಬೇರೆ ರೂಪದಲ್ಲಿ ಇದ್ದು ಕಾಣಿಸಿಕೊಂಡಾಳು- ಎಂಬ ಭಾವವನ್ನು ಮಾರ್ಕಂಡೇಯ ಪುರಾಣದ, ದೇವೀ ಮಹಾತ್ಮ್ಯ ಭಾಗದಲ್ಲಿ ನೋಡುತ್ತೇವೆ :
ಪುಣ್ಯ ಕಾರ್ಯಗಳ ಎಸಗುವರ ನೆಲೆಯಲ್ಲಿ ಸಿರಿ, ಸಂಪತ್ತು ;
ಪಾಪಿಗಳ ಸೆರೆಯಲ್ಲಿ ದಾರಿದ್ರ್ಯದಾಪತ್ತು, ದೈನ್ಯ ವಿಪತ್ತು ;
ಸುಮನಸರ ಹೃದಯದಲಿ ಬೆಳಗುವ ಬುದ್ಧಿಯ ಮಹತ್ತು ;
ಸಜ್ಜನರ ಶ್ರದ್ಧೆಯ ಸೊತ್ತು,
ಕುಲೀನ ನಾರಿಯ ಸಹಜ ಲಜ್ಜೆಯ ಒತ್ತು
- ಹೀಗೆ ಬಗೆಬಗೆ ರೂಪದಲಿರುವೆ ;
ಲಕ್ಷ್ಮಿ, ಜಗವ ಕಾಪಾಡು, ಹೊತ್ತು !
(ಯಾ ಶ್ರೀಃ: ಸ್ವಯಂ ಸುಕೃತೀನಾಂ ಭವನೇಷು,
ಅಲಕ್ಷ್ಮೀ: ಪಾಪಾತ್ಮನಾಂ,
ಕೃತಧಿಯಾ ಹೃದಯೇಷು ಬುದ್ಧಿ :,
ಶ್ರದ್ಧಾಂ ಸತಾಂ, ಕುಲಜನ-ಪ್ರಭವಸ್ಯ ಲಜ್ಜಾ,
ತಾಂ ತ್ವಾಂ ನತಾ : ಸ್ಮ, ಪರಿಪಾಲಯ, ದೇವಿ, ವಿಶ್ವಮ್ ।। )
ವ್ಯಾಸ ಭಾರತದಲ್ಲೂ ಈ ಪ್ರಶ್ನೆ ಮರುಕಳಿಸುತ್ತದೆ. ಲಕ್ಷ್ಮಿಯನ್ನೇ ನೇರವಾಗಿ ಕೇಳುವ ಪ್ರಸಂಗ ಅದು. ಕೇಳಿದವರು ಬೇರೆ ಯಾರೂ ಅಲ್ಲ, ಅವಳ ಪ್ರತಿಬಿಂಬವಾದ ರುಕ್ಮಿಣಿಯೇ:
ಯಾರು ಯಾರುಗೆ ಒಲಿದು ನೀ ನಲಿವೆ, ಸಿರಿಯೆ?
ಯಾರು ಯಾರಲ್ಲಿರುವೆ? ನಿಲ್ಲುವೆಯೆ ನೆಲಸಿ?
ಜೀವ-ಜಡ-ಜಗ-ರಕ್ಷಣೆಯ ಪೂರಕದ ಓ ತತ್ತ್ವವೇ,
ಲಕ್ಷ್ಮಿಯೆ, ನಿನ್ನ ಮನದಿಂಗಿತವ ತಿಳಿಯ ಹೇಳೆ!
(ಕಾನಿ ಇಹ ಭೂತಾನಿ ಉಪಸೇವಸೇ ತ್ವಂ? ಸಂ-ತಿಷ್ಠಸೇ ಕಾನ್ ಇವ, ಸೇವಸೇ ತ್ವಂ? ಕಾನಿ ತ್ರಿಲೋಕೇಶ್ವರ-ಭೂತಕಾನ್ತೇ, ತ್ತತ್ತ್ವೇನ ಮೇ ಬ್ರೂಹಿ, ಮಹರ್ಷಿ-ಕನ್ಯೇ।। - ಮಹಾಭಾರತ, ಅನುಶಾಸನ ಪರ್ವ 11.4)
ಲಕುಮಿಯ ನೆಲೆಯ ನೀವ ಬಲ್ಲಿರಾ.. ನೀವು ಬಲ್ಲಿರಾ..
ತಾನು ಎಲ್ಲಿರುತ್ತಾಳೆ, ಇರಬಹುದು, ಇರಬಯಸಳು- ಎಂಬುದನ್ನ ಲಕ್ಷ್ಮಿ ಪಟ್ಟಿ ಮಾಡಿ ಹೇಳುತ್ತಾಳೆ. ಸಾರಾಂಶಿಸಿ ಹೇಳುವುದಾದರೆ,
ಆತ್ಮವಿಶ್ವಾಸಿಗಳಲ್ಲಿ, ದಕ್ಷರಲ್ಲಿ, ಸಾಹಸಿಗಳಲಿ,
ಕಾರ್ಯಕುಶಲರಲಿ, ಜಿತೇಂದ್ರಿಯರಲಿ, ಕೃತಜ್ಞರಲಿ,
ಕ್ರೋಧ- ರಹಿತರಲಿ, ಮೋಹ-ಮರೆತವರಲ್ಲಿ,
ಮದವ ತುಳಿದವರಲ್ಲಿ,
ಸೌಂದರ್ಯದ ನೆಲೆವೀಡಾದವರಲ್ಲಿ, ಶುಚಿ ಇದ್ದ ಕಡೆಯಲ್ಲಿ,
ಗುಣದ ಖಣಿಯಾದವರಲ್ಲಿ-
ಲಕ್ಷ್ಮಿ ಇರಲು ಸಂತೋಷಿಸುವಳು.
ಇದಕ್ಕೆ ವ್ಯತಿರಿಕ್ತ ಗುಣ (ದೋಷ?) ವುಳ್ಳವರನ್ನು ಅವಳು ಬೇಗ ತೊರೆದು ಹೋಗಿ ಬಿಡುತ್ತಾಳಂತೆ!
ಸದ್ಗುಣ, ಸಚ್ಚಾರಿತ್ರ್ಯ, ಸದುದ್ದೇಶಗಳನ್ನೇ ಬಾಳ ದೀವಿಗೆಯಾಗಿ ಉಳ್ಳವರ ಎದೆಯಲ್ಲಂತೂ ನೆಮ್ಮದಿಯಿಂದ ಇರುತ್ತಾಳೆ; ಕೇಳಿದರೆ ಹೇಳಿಯಾಳು:
ನಂಬಿ ಮೊರೆ ಹೊಕ್ಕವರ, ತುಂಬಿ ಭಕ್ತಿಯನೊಂದೆ
ಬೇರೆಲ್ಲದಕೆ ಬರಿದಾಗಿಸಿಕೊಂಡವರ ಹೃದಯದಲ್ಲಿ,
ಭಾವಪರವಶರಾಗಿ ಕರೆದವರ ಎದುರಿನಲಿ,
ನೆನೆದವರ ಮನದಲ್ಲಿ ಬೇಕೆಂದ ರೂಪದಲಿ ಮೈದೋರುವೆ !
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications