ಲಕ್ಷ್ಮಿ ಎಲ್ಲಿದ್ದಾಳು : ಪುಟ-3
ಕೇಳಿದ್ದ ಕೊಡುವವಳೆ ಎಲ್ಲಿಯೂ ಹೋಗದಿರೆ
ಲಕ್ಷ್ಮಿ ಚಂಚಲಳು ಎಂಬ ಮಾತು ಹೊಸದೇನಲ್ಲ. ಈಗ ಇದ್ದು, ಇನ್ನು ಕೆಲವೇ ಕ್ಷಣಗಳಲ್ಲಿ ಇಲ್ಲವಾಗುವ ನೀರ ಅಲೆಯಂತೆ (' ಲಕ್ಷ್ಮೀಸ್ ತೋಯ-ತರಂಗ- ಭಂಗ ಚಪಲಾ’) ಅಸ್ಥಿರ ಸ್ವಭಾವದವಳು ಎಂಬ ಎಚ್ಚರಿಕೆ ಎಲ್ಲರೂ ಕೊಡುತ್ತಾರೆ. ' ತಾಯಿ, ಈ ಮಾತನ್ನು ಸುಳ್ಳಾಗಿಸು’, ಎಂದು ಚಮತ್ಕಾರವಾಗಿ ಹೇಳುವ ಶ್ರೀ ಪ್ರಸನ್ನ ತೀರ್ಥರ ಲಕ್ಷ್ಮೀಸ್ತುತಿಯಾಂದು ಸಹ ಇದೆ :
'' ಕೇಳಿದ್ದ ಕೊಡುವವಳೆ, ಚಂಚಲಳು ನೀನೆಂದು
ಕೊಂಚ ಭಯ ಪಡುವವರು ತಿಳಿಯದವರು ;
ಇರಲಿ, ನೀ ಬಂದೆನ್ನ ಹೃದಯಲಿ ಮನೆ ಮಾಡು,
ನಿಶ್ಚಂಚಲೆಯೆ ಆಗಿ ನೆಲಸು, ಸತತ ಹರಸು!
('' ವಾಂಛಿತದಾಯಿನಿ, ಚಂಚಲಾ ತ್ವಂ ಇತಿ ಕಿಂಚಿದ್ ಅಸ್ತಿ ಭಯಂ ಅಜ್ಞ-ಜನಾನಾಮ್। ತ್ವಂ ಚ ಮದೀಯೇ ಗೃಹೇ ಸತತಂ ನಿಶ್ಚಂಚಲಾ ಭವ ಪ್ರಸನ್ನಮುಖೀ ।। ತ್ವಾಂ ವನ್ದೇ ಮಾತರಮ್ ।।’’)
ಇಂಥ ಪರಿವಾರದ- ಸಮೃದ್ಧಳಾದ ಲಕ್ಷ್ಮೀ ಎಲ್ಲಿ ಎಲ್ಲಿ ನೆಲಸಿ ಇದ್ದಾಳು ? ಪುರಾಣಗಳಲ್ಲಿ ಹಲವೆಡೆ ಇಂದ್ರ, ಬೃಹಸ್ಪತಿ, ಪ್ರಹ್ಲಾದ ಮುಂತಾದವರು ಕೇಳಿದ ಪ್ರಶ್ನೆಯೇ ಇದು. ಸಿಗುವ ಸಾಮಾನ್ಯ ಉತ್ತರ : ''ಪುಣ್ಯ, ಧರ್ಮ ಮತ್ತು ಸತ್ಯ ಇದ್ದ ಕಡೆ ಲಕ್ಷ್ಮಿ ಸದಾ ಇರುತ್ತಾಳೆ- ಎಂದು.
' ಸುಮನಸ ವಂದಿತ ಪದ ಯುಗಳೆ, ಮನಸಿಜ- ಜನಕನ ಕೋಮಲತಮ ಹೃತ್ಕಮಲದೊಳು ನೆಲಸಿದ ಈ ಶುಭಗೆ ’ ಲಕ್ಷ್ಮಿ ಬೇರೆ ಬೇರೆಯವರಿಗೆ ಬೇರೆ ಬೇರೆ ರೂಪದಲ್ಲಿ ಇದ್ದು ಕಾಣಿಸಿಕೊಂಡಾಳು- ಎಂಬ ಭಾವವನ್ನು ಮಾರ್ಕಂಡೇಯ ಪುರಾಣದ, ದೇವೀ ಮಹಾತ್ಮ್ಯ ಭಾಗದಲ್ಲಿ ನೋಡುತ್ತೇವೆ :
ಪುಣ್ಯ ಕಾರ್ಯಗಳ ಎಸಗುವರ ನೆಲೆಯಲ್ಲಿ ಸಿರಿ, ಸಂಪತ್ತು ;
ಪಾಪಿಗಳ ಸೆರೆಯಲ್ಲಿ ದಾರಿದ್ರ್ಯದಾಪತ್ತು, ದೈನ್ಯ ವಿಪತ್ತು ;
ಸುಮನಸರ ಹೃದಯದಲಿ ಬೆಳಗುವ ಬುದ್ಧಿಯ ಮಹತ್ತು ;
ಸಜ್ಜನರ ಶ್ರದ್ಧೆಯ ಸೊತ್ತು,
ಕುಲೀನ ನಾರಿಯ ಸಹಜ ಲಜ್ಜೆಯ ಒತ್ತು
- ಹೀಗೆ ಬಗೆಬಗೆ ರೂಪದಲಿರುವೆ ;
ಲಕ್ಷ್ಮಿ, ಜಗವ ಕಾಪಾಡು, ಹೊತ್ತು !
(ಯಾ ಶ್ರೀಃ: ಸ್ವಯಂ ಸುಕೃತೀನಾಂ ಭವನೇಷು,
ಅಲಕ್ಷ್ಮೀ: ಪಾಪಾತ್ಮನಾಂ,
ಕೃತಧಿಯಾ ಹೃದಯೇಷು ಬುದ್ಧಿ :,
ಶ್ರದ್ಧಾಂ ಸತಾಂ, ಕುಲಜನ-ಪ್ರಭವಸ್ಯ ಲಜ್ಜಾ,
ತಾಂ ತ್ವಾಂ ನತಾ : ಸ್ಮ, ಪರಿಪಾಲಯ, ದೇವಿ, ವಿಶ್ವಮ್ ।। )
ವ್ಯಾಸ ಭಾರತದಲ್ಲೂ ಈ ಪ್ರಶ್ನೆ ಮರುಕಳಿಸುತ್ತದೆ. ಲಕ್ಷ್ಮಿಯನ್ನೇ ನೇರವಾಗಿ ಕೇಳುವ ಪ್ರಸಂಗ ಅದು. ಕೇಳಿದವರು ಬೇರೆ ಯಾರೂ ಅಲ್ಲ, ಅವಳ ಪ್ರತಿಬಿಂಬವಾದ ರುಕ್ಮಿಣಿಯೇ:
ಯಾರು ಯಾರುಗೆ ಒಲಿದು ನೀ ನಲಿವೆ, ಸಿರಿಯೆ?
ಯಾರು ಯಾರಲ್ಲಿರುವೆ? ನಿಲ್ಲುವೆಯೆ ನೆಲಸಿ?
ಜೀವ-ಜಡ-ಜಗ-ರಕ್ಷಣೆಯ ಪೂರಕದ ಓ ತತ್ತ್ವವೇ,
ಲಕ್ಷ್ಮಿಯೆ, ನಿನ್ನ ಮನದಿಂಗಿತವ ತಿಳಿಯ ಹೇಳೆ!
(ಕಾನಿ ಇಹ ಭೂತಾನಿ ಉಪಸೇವಸೇ ತ್ವಂ? ಸಂ-ತಿಷ್ಠಸೇ ಕಾನ್ ಇವ, ಸೇವಸೇ ತ್ವಂ? ಕಾನಿ ತ್ರಿಲೋಕೇಶ್ವರ-ಭೂತಕಾನ್ತೇ, ತ್ತತ್ತ್ವೇನ ಮೇ ಬ್ರೂಹಿ, ಮಹರ್ಷಿ-ಕನ್ಯೇ।। - ಮಹಾಭಾರತ, ಅನುಶಾಸನ ಪರ್ವ 11.4)
ಲಕುಮಿಯ ನೆಲೆಯ ನೀವ ಬಲ್ಲಿರಾ.. ನೀವು ಬಲ್ಲಿರಾ..
ತಾನು ಎಲ್ಲಿರುತ್ತಾಳೆ, ಇರಬಹುದು, ಇರಬಯಸಳು- ಎಂಬುದನ್ನ ಲಕ್ಷ್ಮಿ ಪಟ್ಟಿ ಮಾಡಿ ಹೇಳುತ್ತಾಳೆ. ಸಾರಾಂಶಿಸಿ ಹೇಳುವುದಾದರೆ,
ಆತ್ಮವಿಶ್ವಾಸಿಗಳಲ್ಲಿ, ದಕ್ಷರಲ್ಲಿ, ಸಾಹಸಿಗಳಲಿ,
ಕಾರ್ಯಕುಶಲರಲಿ, ಜಿತೇಂದ್ರಿಯರಲಿ, ಕೃತಜ್ಞರಲಿ,
ಕ್ರೋಧ- ರಹಿತರಲಿ, ಮೋಹ-ಮರೆತವರಲ್ಲಿ,
ಮದವ ತುಳಿದವರಲ್ಲಿ,
ಸೌಂದರ್ಯದ ನೆಲೆವೀಡಾದವರಲ್ಲಿ, ಶುಚಿ ಇದ್ದ ಕಡೆಯಲ್ಲಿ,
ಗುಣದ ಖಣಿಯಾದವರಲ್ಲಿ-
ಲಕ್ಷ್ಮಿ ಇರಲು ಸಂತೋಷಿಸುವಳು.
ಇದಕ್ಕೆ ವ್ಯತಿರಿಕ್ತ ಗುಣ (ದೋಷ?) ವುಳ್ಳವರನ್ನು ಅವಳು ಬೇಗ ತೊರೆದು ಹೋಗಿ ಬಿಡುತ್ತಾಳಂತೆ!
ಸದ್ಗುಣ, ಸಚ್ಚಾರಿತ್ರ್ಯ, ಸದುದ್ದೇಶಗಳನ್ನೇ ಬಾಳ ದೀವಿಗೆಯಾಗಿ ಉಳ್ಳವರ ಎದೆಯಲ್ಲಂತೂ ನೆಮ್ಮದಿಯಿಂದ ಇರುತ್ತಾಳೆ; ಕೇಳಿದರೆ ಹೇಳಿಯಾಳು:
ನಂಬಿ ಮೊರೆ ಹೊಕ್ಕವರ, ತುಂಬಿ ಭಕ್ತಿಯನೊಂದೆ
ಬೇರೆಲ್ಲದಕೆ ಬರಿದಾಗಿಸಿಕೊಂಡವರ ಹೃದಯದಲ್ಲಿ,
ಭಾವಪರವಶರಾಗಿ ಕರೆದವರ ಎದುರಿನಲಿ,
ನೆನೆದವರ ಮನದಲ್ಲಿ ಬೇಕೆಂದ ರೂಪದಲಿ ಮೈದೋರುವೆ !
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications