ಚಿಂಟೂ ಜೊತೆ ಬೆಳೆಯಲಿದೆ ಮಕ್ಕಳ ನಂಟು!
"ಇದು ನಮ್ಮ ಏರಿಯಾ" ಅಂತ ಚಿಕ್ಕಮಕ್ಕಳ ಕಲರವದ ಹೊಸ ಜಾಹೀರಾತನ್ನು ನೀವು ಟಿ.ವಿಯಲ್ಲಿ ನೋಡ್ತಿರಬಹುದು, ಅದೇ ಗುರು! ಕನ್ನಡದ ಹೊಸವಾಹಿನಿ ಶುರುವಾಗಿದೆಯೆಲ್ಲಾ ಚಿಂಟೂ ಟಿ.ವಿ ಅಂತ, ಅದರ ಜಾಹೀರಾತು ಅದು. ಯಾವ್ದಪ್ಪಾ ಈ ಚಿಂಟೂ ಟಿ.ವಿ. ಅಂತೀರಾ?
ಇದು ಸನ್ ಟಿ.ವಿಯ ಹೊಸವಾಹಿನಿ, ದಿನದ 24 ಗಂಟೆಯೂ ಕನ್ನಡದಲ್ಲಿ ಕಾರ್ಯಕ್ರಮಗಳನ್ನು ಕೊಡುತ್ತದಂತೆ. ಇದನ್ನು ಚಿಕ್ಕಮಕ್ಕಳಿಗೆ ಅಂತ ಮಾಡಿದಾರಂತೆ. ಇದರಲ್ಲಿ ಬರೀ ಕಾರ್ಟೂನುಗಳದ್ದೇ ರಾಜ್ಯಭಾರ. ಕನ್ನಡದಲ್ಲಿ ಬರೋ ಈ ಚಾನೆಲ್ ಕರ್ನಾಟಕದಲ್ಲಿ ಕಾರ್ಟೂನ್ ನೆಟವರ್ಕ್, ಪೋಗೊ ಮುಂತಾದ ವಾಹಿನಿಗಳಿಗೆ ಸಡ್ಡು ಹೊಡೆಯೊಕ್ಕೆ ಅಂತಲೇ ತಯಾರಾಗಿ ಬಂದಿದೆ.
ಇನ್ಮುಂದೆ ಟಾಮ್ ಅಂಡ್ ಜೆರ್ರಿ ಚೆಲ್ಲಾಟ ಕನ್ನಡದಲ್ಲೇ!
ಹೌದೂ ಗುರು! ಇನ್ಮುಂದೆ ಟಾಮ್ ಮತ್ತು ಜೆರ್ರಿಗಳ ಚಿನ್ನಾಟವಿರಲೀ, ಸೂಪರ್ ಮ್ಯಾನಿನ ಹಾರಾಟವಿರಲೀ, ಸ್ಪೈಡರ್ ಮ್ಯಾನಿನ ತೂಗಾಟವಿರಲೀ ಎಲ್ಲಾನೂ ಕನ್ನಡದಲ್ಲಿ ನೋಡಬೌದು. ಡೊರಾ, ಪೋಕಿಮಾನ್, ಗಾಡ್ಜೀಲ್ಲಾ, ಪವರ್ ಪಫ್ ಗರ್ಲ್ಸ ಅನ್ನೋ ಕಾರ್ಟುನ್ಗಳು ಕನ್ನಡ ಮಾತನಾಡುತ್ತೆ. ಯಾಕಂದ್ರೆ ಚಿಂಟು ಟಿ.ವಿ. ಸಂಪೂರ್ಣ ಕನ್ನಡವಾಹಿನಿ.
ಇದುವರೆಗೂ ಕಾರ್ಟೂನುಗಳ ನಿಜವಾದ ಸವಿಯನ್ನು ಸಂಪೂರ್ಣವಾಗಿ ಸವಿಯಕ್ಕೆ ತೊಡಕಾಗಿದ್ದ "ಕನ್ನಡದಲ್ಲಿಲ್ಲ, ಅದಕ್ಕೇ ಪೂರ್ತಿ ಅರ್ಥವಾಗ್ತಿಲ್ಲಾ" ಅನ್ನೋ ಕೊರತೆ ಇನ್ಮುಂದೆ ಇದರಿಂದಾಗಿ ಅಳಿಯುತ್ತೆ. "ಕನ್ನಡಿಗರೂ ಉನ್ನತ ಗುಣಮಟ್ಟದ ವಿಶ್ವದರ್ಜೆಯ ಕಾರ್ಟೂನುಗಳನ್ನು ಸೃಷ್ಟಿಸೋ ಅನಿಮೇಷನ್ ತಂತ್ರಜ್ಞಾನದಲ್ಲಿ ಪರಿಣಿತಿ ಸಾಧಿಸಬೇಕು" ಅನ್ನೋ ಮಾತಿನ ಜೊತೆಯಲ್ಲೇ ಕನ್ನಡಿಗರ ಮನರಂಜನೇನಾ ಕನ್ನಡದಲ್ಲೇ ಪಡ್ಯೋದು ನಮ್ಮ ಮೂಲಭೂತ ಹಕ್ಕು ಅನ್ನೋದನ್ನೂ ಈ ವಾಹಿನಿ ಸಾರುತ್ತಾ ಇದೆ ಗುರು!(ಸ್ನೇಹಸೇತು: ಏನ್ಗುರು?)
-
Toxic release postponed: ಯಶ್ ಅಭಿಮಾನಿಗಳಿಗೆ ಆಘಾತ: "ಟಾಕ್ಸಿಕ್" ಸಿನಿಮಾ ಬಿಡುಗಡೆ ದಿಢೀರ್ ಮುಂದೂಡಿಕೆ -
ಕರ್ನಾಟಕ ವಿದ್ಯುತ್ ನಿಗಮ ಬೆಳಕಿನ ಸಂಸ್ಥೆಗೆ ಕತ್ತಲೆಯ ಛಾಯೆ: ಸರ್ಕಾರಿ ನಿರ್ಲಕ್ಷದ ಒಳನೋಟ -
Bengaluru: ‘92 ಲಕ್ಷದ ಪ್ಯಾಕೇಜ್ ಇದ್ದರೂ ಉಳಿಯಲಿಲ್ಲ ಕೆಲಸ’; ಒಂದೇ ದಿನ ಶೇ. 40ರಷ್ಟು ಸಿಬ್ಬಂದಿ ವಜಾ ಮಾಡಿದ ಐಟಿ ಕಂಪನಿ -
Karna Serial: "ಕರ್ಣ" ಧಾರಾವಾಹಿಯಿಂದ ಹೊರಬಂದ ಟಿ.ಎಸ್.ನಾಗಾಭರಣ, ಹಿರಿಯ ನಟ ಅಭಿಜಿತ್ ಎಂಟ್ರಿ -
Gold Rate: ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಹೀಗಿದೆ, ನಿಮ್ಮ ನಗರದ ದರ ಪರಿಶೀಲಿಸಿ -
'ವಂತಾರ'ಕ್ಕೆ ಒಂದು ವರ್ಷ: ಆರೋಗ್ಯ ಸುಧಾರಿಸಿದ ಅನೇಕ ಪ್ರಾಣಿಗಳು ಮರಳಿ ಕಾಡಿಗೆ -
Elnaaz Norouzi: ಭಾರತದಲ್ಲೇ ನೆಲೆಸಿದ್ದಾರೆ ಇರಾನ್ ಸುಂದರಿ, ಮತ್ತೆ ಅಲ್ಲಿಗೆ ಕಾಲಿಟ್ಟರೆ ನನ್ನ ಕೊಲ್ತಾರೆ ಎಂದ ನಟಿ ಎಲ್ನಾಜ್ -
South India: ದಕ್ಷಿಣ ಭಾರತದಲ್ಲಿ ಪ್ರಾದೇಶಿಕ ಪಕ್ಷಗಳ ಪ್ರಭಾವ: ತಮಿಳುನಾಡು ಮುನ್ನಡೆ, ಕರ್ನಾಟಕದಲ್ಲಿ ಏಕೆ ಹಿನ್ನಡೆ -
Middle East War: ಗಲ್ಫ್ ದೇಶಗಳಿಗೆ ರಫ್ತು ಸ್ಥಗಿತ; ರಾಜ್ಯದಲ್ಲೇ ಉಳಿದ ತರಕಾರಿ, ಮೊಟ್ಟೆ, ಹಾಲಿನ ಉತ್ಪನ್ನ- ರೈತರು ಕಂಗಾಲು -
Bengaluru: ಗೊರಗುಂಟೆಪಾಳ್ಯದ ಟ್ರಾಫಿಕ್ಗೆ ಸಿಗಲಿದ್ಯಾ ಮುಕ್ತಿ? ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು 'ಸುರಂಗ ರಸ್ತೆ' ಪ್ರಸ್ತಾಪ -
Rama Navami 2026: ಶ್ರೀರಾಮನವಮಿ ದಿನಾಂಕ, ಮುಹೂರ್ತ, ಮಹತ್ವ, ಪೂಜಾ ವಿಧಾನ ಸೇರಿ ಸಂಪೂರ್ಣ ವಿವರ -
ಅಮೆರಿಕ ಮತ್ತು ಬ್ರಿಟನ್ ನಡುವೆ ಬಿರುಕು, ಡೊನಾಲ್ಡ್ ಟ್ರಂಪ್ ತೀವ್ರ ಅಸಮಾಧಾನ | Operation Roaring Lion












Click it and Unblock the Notifications