ಸೂಪರ್ ಮೂನ್: ಮೇಷ, ತುಲಾ ರಾಶಿಯವರು ಎಚ್ಚರವಾಗಿರಿ!
ಈ ದಿನ (ಸೋಮವಾರ, ನವೆಂಬರ್ 14) ಆಗಸದಲ್ಲಿ ಕಾಣುವ ದೊಡ್ಡ-ಪ್ರಕಾಶಮಾನ ಚಂದ್ರನಿಂದ ಯಾವ ರಾಶಿಯವರಿಗೆ ತೊಂದರೆ? ಎಂಬ ಪ್ರಶ್ನೆಯಂತೂ ಹಲವರ ಮನಸ್ಸಿನಲ್ಲಿದೆ. ಅದಕ್ಕೆ ಉತ್ತರಿಸಿದ್ದಾರೆ ಜ್ಯೋತಿಷಿಗಳಾದ ಪಂಡಿತ್ ವಿಠ್ಠಲ್ ಭಟ್.
'ಸೂಪರ್ ಮೂನ್ ಬಗ್ಗೆ ತಿಳಿಯಬೇಕು ಅಂದರೆ ಜ್ಯೋತಿಷ್ಯದ ಪ್ರಕಾರ ಅಮಾವಾಸ್ಯೆ ಹಾಗೂ ಹುಣ್ಣಿಮೆ ಏನು ಅಂತ ತಿಳಿಯಬೇಕು. ಅಮಾವಾಸ್ಯೆ ಅಂದರೆ ರವಿ ಗ್ರಹ ಯಾವ ರಾಶಿಯಲ್ಲಿ ಇರುತ್ತದೋ ಅದೇ ರಾಶಿಗೆ ಚಂದ್ರ ಬಂದ ದಿನ. ಇನ್ನು ಹುಣ್ಣಿಮೆ ಅಂದರೆ ರವಿ ಗ್ರಹ ಇರುವ ರಾಶಿಯಿಂದ ಏಳನೇ ಮನೆಯಲ್ಲಿ ಚಂದ್ರ ಬಂದ ದಿನ.
'ಯಾವುದೇ ಗ್ರಹಕ್ಕೆ ಏಳನೇ ಮನೆ ಪೂರ್ಣ ದೃಷ್ಟಿ ಇರುತ್ತದೆ. ಅದೇ ರೀತಿ ಹುಣ್ಣಿಮೆ ದಿನ ರವಿ ಗ್ರಹದ ಪೂರ್ಣ ದೃಷ್ಟಿ ಚಂದ್ರನ ಮೇಲೆ ಬೀಳುತ್ತದೆ. ಚಂದ್ರನಿಗೆ ಮೂಲತಃ ಸ್ವತಂತ್ರವಾಗಿ ಬೆಳಕಿನ ಶಕ್ತಿ ಇಲ್ಲ. ಅಂದರೆ ಸೂರ್ಯನ ಬೆಳಕು ಚಂದ್ರನ ಮೇಲೆ ಬಿದ್ದು, ಪ್ರಕಾಶಿಸಬೇಕು ಅಷ್ಟೇ.[ಇಂದು ದೊಡ್ಡ ಚಂದಿರನ ನೋಡಿಬಿಡಿ, ಇಲ್ಲದಿದ್ದರೆ 16 ವರ್ಷ ಕಾಯ್ಬೇಕು!]

'ಭೂಮಿಯ ಕಕ್ಷೆಗೆ ತುಂಬ ಹತ್ತಿರದಲ್ಲಿ ಸೋಮವಾರ (ನವೆಂಬರ್ 14) ಚಂದ್ರ ಬರುತ್ತಾನೆ. ಇನ್ನು ಸೂಪರ್ ಮೂನ್ ಬಗ್ಗೆ ವಿಜ್ಞಾನಿಗಳು ಹೆಚ್ಚು ಸಮರ್ಥವಾಗಿ ಉತ್ತರಿಸಬಲ್ಲರು. ಯಾಕೆಂದರೆ ಜ್ಯೋತಿಷ್ಯದ ಪ್ರಕಾರ ಎಲ್ಲ ರಾಶಿಯವರೆಗೆ ತುಂಬ ಮುಖ್ಯವಾದ ವಿದ್ಯಮಾನವೇನೂ ಇದಲ್ಲ. ಆದರೆ ಈ ದಿನ ಮೇಷ ಹಾಗೂ ತುಲಾ ರಾಶಿಗೂ ಅಂಥ ಉತ್ತಮವಲ್ಲ.[ಸೂಪರ್ ಕೆಂಪು ಚಂದ್ರನ ಕುರಿತು ಇಂಟರೆಸ್ಟಿಂಗ್ ಸಂಗತಿ]

'ನವೆಂಬರ್ ಹದಿನಾಲ್ಕರಂದು ತುಲಾ ರಾಶಿಯಲ್ಲಿ ನೀಚನಾದ ರವಿ ಗ್ರಹವಿದೆ. ಮೇಷ ರಾಶಿಯಲ್ಲಿ ಚಂದ್ರನಿದ್ದಾನೆ. ಮೂಲತಃ ಚಂದ್ರನಿಗೆ ಸ್ವತಂತ್ರ ಗುಣವಿಲ್ಲ. ಚಂದ್ರ ಯಾವ ಗ್ರಹದ ಪ್ರಭಾವಕ್ಕೆ ಒಳಗಾಗುತ್ತನೋ ಅದರಂತೆ ವರ್ತನೆ ಇರುತ್ತದೆ. ಇಂದಿನ ಸನ್ನಿವೇಶದಲ್ಲಿ ನೀಚ ರವಿಯ ದೃಷ್ಟಿ ಚಂದ್ರನ ಮೇಲೆ ಬಿದ್ದಿರುವುದರಿಂದ ಮೇಷ ಹಾಗೂ ತುಲಾ ರಾಶಿಯವರಿಗೆ ಉತ್ತಮ ಸಮಯವಲ್ಲ. ಇನ್ನು ಎರಡು-ಮೂರು ದಿನ ಈ ಎರಡು ರಾಶಿಯವರು ಎಚ್ಚರವಾಗಿದ್ದರೆ ಒಳ್ಳೆಯದು.'
ಪಂಡಿತ್ ವಿಠ್ಠಲ್ ಭಟ್ ಸಂಪರ್ಕ ಸಂಖ್ಯೆ 9845682380.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications