ಶನೈಶ್ಚರನ ಅನುಗ್ರಹಕ್ಕೆ 10 ಸರಳ ಮಾರ್ಗಗಳು...
ನವಗ್ರಹಗಳ ಪೈಕಿ ಶನೈಶ್ಚರ ಎಂದರೆ ಜನ ಸಾಮಾನ್ಯರಲ್ಲಿ ಅತಂಕ ಶುರುವಾಗುತ್ತದೆ. ಮತ್ತು ಶನಿ ಅಂದರೆ ತೊಂದರೆ ಅಂತಲೂ ಭಾವಿಸುವವರಿದ್ದಾರೆ. ಆದರೆ ಈ ಭಾವನೆ ಪೂರ್ಣ ಸತ್ಯವಲ್ಲ. ಶನಿ ಮಹರ್ದಶೆ ಹಾಗೂ ಗೋಚಾರದಲ್ಲಿ ಉತ್ತಮ ಸ್ಥಿತಿಯಲ್ಲಿರುವಾಗ ಸಕಲ ಸಂಪತ್ತು, ಆಯುಷ್ಯ ಹಾಗೂ ಆರೋಗ್ಯ ದಯಪಾಲಿಸುತ್ತಾನೆ ಶನೈಶ್ಚರ.
ಇನ್ನೊಂದು ವಿಚಾರ ನೆನಪಿಟ್ಟುಕೊಳ್ಳಿ, ಧರ್ಮದ ಹಾದಿ ಬಿಟ್ಟು ನಡೆದರೆ ಶನಿಯ ದುಷ್ಪ್ರಭಾವವನ್ನು ಅನುಭವಿಸಬೇಕಾಗುತ್ತದೆ. ಇನ್ನೊಬ್ಬರಿಗೆ ಕೇಡು ಬಗೆಯುವ ಆಲೋಚನೆ ಕೂಡ ಮಾಡಬೇಡಿ. ನಮ್ಮ ರಾಶಿಗೆ ಶನಿಯು ಯಾವ ರೀತಿ ಪ್ರಭಾವ ಬೀರುತ್ತಿದ್ದಾನೆ ಅನ್ನೋದನ್ನು ತಿಳಿದುಕೊಳ್ಳಿ. ಅದು ಹೇಗೆ ಅಂತೀರಾ?[ಜ.26ಕ್ಕೆ ಧನು ರಾಶಿಗೆ ಶನಿ ಪ್ರವೇಶ: ಯಾವ ರಾಶಿಗೆ ಏನು ಫಲ, ಪ್ರಭಾವ?]
ನಮ್ಮದೇ ಒನ್ ಇಂಡಿಯಾ ಕನ್ನಡದಲ್ಲಿ ಈ ಬಗ್ಗೆ ಲೇಖನ ಪ್ರಕಟವಾಗುತ್ತದೆ. ಅದನ್ನು ಓದಿದರೆ ಶನಿಯು ನಿಮ್ಮ ರಾಶಿಗೆ ಯಾವ ರೀತಿಯ ಫಲ ನೀಡಲಿದ್ದಾನೆ ಎಂದು ತಿಳಿಯುತ್ತದೆ. ಅಗ ಆತನ ಪ್ರಭಾವ ಒಳ್ಳೆ ರೀತಿಯಲ್ಲಿ ಆಗಲು, ತೀಕ್ಷ್ಣತೆ ಕಡಿಮೆ ಆಗುವುದಕ್ಕೆ ಈ ಲೇಖನದಲ್ಲಿ ಅತ್ಯುತ್ತಮ ಸಲಹೆಗಳನ್ನು ಕೊಡಲಾಗಿದೆ.[ಜೂನ್ ನಲ್ಲಿ ಮತ್ತೆ ವೃಶ್ಚಿಕಕ್ಕೆ ಶನಿ ಪ್ರವೇಶ, ಹನ್ನೆರಡು ರಾಶಿಗಳ ಫಲಾಫಲ ಏನು]
ಸಾಡೇಸಾತ್, ಪಂಚಮ, ಚತುರ್ಥ ಹಾಗೂ ಅಷ್ಟಮ ಸ್ಥಾನಗಳಲ್ಲಿ ಈಗ ಶನಿ ಸಂಚಾರ ಆಗುತ್ತಿರುವ ರಾಶಿಗಳವರು ಮಾಡಿಕೊಳ್ಳಬೇಕಾದ ಶನಿಯ ಶಾಂತಿ ಕ್ರಮಗಳನ್ನು ಅನುಸರಿಸಿ. ನಿಮ್ಮ ಬದುಕು ಬಂಗಾರವಾಗಲಿ...[ಕನ್ಯಾ ರಾಶಿಗೆ ಗುರು ಪ್ರವೇಶ : ಯಾವ ರಾಶಿಗೆ ಏನು ಫಲ?]

ಆಂಜನೇಯನಿಗೆ ಉದ್ದಿನವಡೆ ಹಾರ
ನಿಮ್ಮ ಮನೆಯ ಬಳಿಯೋ ಅಥವಾ ಮನೆ ದೇವರ ಗುಡಿಯಲ್ಲಿ ಆಂಜನೇಯ ಮೂರ್ತಿಯಿದ್ದರೆ ಶನಿವಾರದಂದು ದೇಗುಲದಲ್ಲಿ ಸ್ವಾಮಿಗೆ ಉದ್ದಿನವಡೆ ಹಾರ ಮಾಡಿಸಿ ಹಾಕಿ ಹಾಗೂ ಎಳ್ಳುಬೆಲ್ಲದ ನೈವೇದ್ಯ ಮಾಡಿಸಿ.

ಶನೈಶ್ಚರ ವ್ರತ ಮಾಡಿಸಬಹುದು
ಎಷ್ಟೋ ಜನರಿಗೆ ತಿಳಿದಿಲ್ಲ. ಸತ್ಯನಾರಾಯಣ ಪೂಜೆ ವಿಧಾನದಲ್ಲಿಯೇ ಶನೈಶ್ಚರ ವ್ರತ ಎಂದು ಸಹ ಇದೆ. ಈ ವ್ರತವನ್ನು ಶನಿವಾರದಂದು, ಜನ್ಮ ನಕ್ಷತ್ರ ಬಂದಾಗ ಅಥವಾ ಶನಿವಾರದಂದೇ ಮಾಡಿಸಿದರೆ ಉತ್ತಮ. ಶೀಘ್ರವಾಗಿ ಶನಿ ಕಾಟದಿಂದ ಪರಿಹಾರ ಪಡೆಯ ಬಹುದು.

ರುದ್ರ ಹವನ ಮಾಡಿಸಿ
ಪೂರ್ವಾರ್ಜಿತ ಕರ್ಮ ಫಲ ಅಂದರೆ ಹಿಂದಿನ ಜನುಮದ ಪಾಪ ಶೇಷ ಹೆಚ್ಚಿದ್ದರೆ ಈ ಜನುಮದಲ್ಲಿ ಶನಿ ಕಾಟ ಹೆಚ್ಚು ಇರುತ್ತದೆ. ಆದುದರಿಂದ ಹಿಂದಿನ ಜನುಮದ ಪಾಪ ಪರಿಹಾರಕ್ಕಾಗಿ ಕರಿ ಎಳ್ಳು ಹಾಗೂ ಬತ್ತಕ್ಕೆ ಶುದ್ಧ ಹಸುವಿನ ತುಪ್ಪ ಬೆರೆಸಿ, ರುದ್ರ ಹವನ ಮಾಡಿಸಿ

ದತ್ತಾತ್ರೇಯ ವಜ್ರಕವಚ ಸ್ತೋತ್ರ ಪಠಣ
ಪ್ರತಿ ದಿನ ತಪ್ಪದೇ ಶ್ರೀ ದತ್ತಾತ್ರೇಯ ವಜ್ರ ಕವಚ ಸ್ತೋತ್ರ ಪಠಣ ಮಾಡಿದರೆ ಶನಿ ಕಾಟದಿಂದ ರಕ್ಷಣೆ ದೊರೆಯುತ್ತದೆ

ಕರಿ ಎಳ್ಳು ದಾನ
ಬ್ರಾಹ್ಮಣ ಪುರೋಹಿತ ಅಥವಾ ಅರ್ಚಕರಿಗೆ ಶನಿವಾರದಂದು ಕಬ್ಬಿಣದ ಬಾಂಡಲಿಯಲ್ಲಿ ಪರಿಶುದ್ಧವಾದ ಹಾಗೂ ಅಡುಗೆ ಮಾಡಲು ಉಪಯುಕ್ತವಾದ ಎಳ್ಳಎಣ್ಣೆ ದಕ್ಷಿಣೆ ಸಹಿತ ದಾನ ಮಾಡಿ. ನೀವು ಕೊಡುವ ಈ ದಾನ ತನಗೆ ನಿತ್ಯ ಬಳಸಲು ಬರದ ಕಾರಣ ಒಂದು ಪಕ್ಷ ದಾನ ತೆಗೆದುಕೊಳ್ಳಲು ಅವರು ನಿರಾಕರಿಸಿದರೆ ಹೊಸದಾದ ಸ್ಟೇನ್ ಲೆಸ್ ಸ್ಟೀಲ್ ತಟ್ಟೆಯಲ್ಲಿ ಸ್ವಲ್ಪ ಕರಿ ಎಳ್ಳು ಇಟ್ಟು ದಕ್ಷಿಣೆ ಸಹಿತ ದಾನ ಮಾಡಿ

ಹತ್ತಿಯ ಬತ್ತಿಯಲ್ಲಿ ದೀಪ ಹಚ್ಚಿ
ನಿಮ್ಮ ಮನೆಯ ಹತ್ತಿರದ ನವಗ್ರಹ ದೇಗುಲದಲ್ಲಿ ಅಥವಾ ಅದೇ ದೇಗುಲದ ಆವರಣದ ದೊಡ್ಡ ಮರದ ಬುಡದಲ್ಲಿ ಹೆಚ್ಚು ಗಾಳಿ ಆಡದ ವ್ಯವಸ್ಥೇ ಮಾಡಿ, ಅಲ್ಲಿ ಕಬ್ಬಿಣದ ಬಾಂಡಲಿ ನಲ್ಲಿ ಪರಿಶುದ್ಧ (ಅಡುಗೆಗೆ ಬಳಸುವ ಗುಣಮಟ್ಟದ್ದು) ಎಳ್ಳು ಎಣ್ಣೆ ಹಾಕಿ ಅದರಲ್ಲಿ ನಿಮ್ಮ ಮುಖ ನೋಡಿ, ಹತ್ತಿಯ ಬತ್ತಿ ಹಾಕಿ ದೀಪ ಹಚ್ಚಿ.

ಶನಿಗೆ ತೈಲಾಭಿಷೇಕ
ಇನ್ನು ಶನಿವಾರಗಳಂದು ಶನಿ ದೇಗುಲದಲ್ಲಿ ಸ್ವಾಮಿಗೆ ಪರಿಶುದ್ಧ ಎಳ್ಳು ಎಣ್ಣೆಯಲ್ಲಿ ತೈಲಾಭಿಷೇಕ ಮಾಡಿಸಿ. ಆ ಸಮಯದಲ್ಲಿ ನೀವು ಖುದ್ದಾಗಿ ಇದ್ದು, ಕುಟುಂಬ-ಪರಿವಾರದವರ ಸಂಕಲ್ಪ ಮಾಡಿಸಿದರೆ ಒಳ್ಳೆಯದು.

ಶನೈಶ್ಚರ ಅಷ್ಟೋತ್ತರ ಪಠಿಸಿ
ಸ್ನಾನ ನಂತರ ಮನೆಯಲ್ಲಿಯೋ ಅಥವಾ ಪ್ರಶಾಂತ ಎನಿಸುವಂಥ ಸ್ಥಳದಲ್ಲಿ ಕೂತು ಪ್ರತಿ ದಿನ ಶನೈಶ್ಚರ ಅಷ್ಟೋತ್ತರ ಪಠಿಸಿ. ನೆನಪಿಡಿ, ಸ್ಥಳದ ಆಯ್ಕೆ ಬಹಳ ಮುಖ್ಯ. ಮನಸ್ಸಿನ ಉದ್ದೇಶ ಕದಡುವಂಥ ಕಡೆ ಬೇಡ.

ದಶರಥ ಕೃತ ಶನಿ ಸ್ತೋತ್ರ
ಮತ್ತೊಂದು ಸ್ತೋತ್ರ ಪಠಣ ಇದೆ. ಈ ಸ್ತೋತ್ರ ರಚನೆ ಮಾಡಿರುವುದು ದಶರಥ. ಆ ಕಾರಣದಿಂದ ಅದನ್ನು ದಶರಥ ಕೃತ ಶನಿ ಸ್ತೋತ್ರ ಎಂದು ಕರೆಯುತ್ತಾರೆ. ಅದನ್ನು ಪ್ರತಿದಿನ ಪಠಿಸಿ

ಶನೈಶ್ಚರ ಶಾಂತಿ ಹವನ
1000 ಸಂಖ್ಯೆಯಲ್ಲಿ ಶನಿ ಮಂತ್ರದ ಜಪ ಮಾಡಿಸಿ, ಅದರ ದಶಾಂಶ ಅಂದರೆ ಹತ್ತನೇ ಒಂದು ಭಾಗದಷ್ಟು ಸಂಖ್ಯೆಯಲ್ಲಿ ಕೃಸರಾನ್ನ ಹಾಗೂ ಶಮಿ ಸಮಿಧ, ಆಜ್ಯ ಈ ದ್ರವ್ಯಗಳಲ್ಲಿ ಶನಿ ಶಾಂತಿ ಹವನ, ನಂತರ ಅದೇ ದಶಾಂಶ ವಿಧಾನದಲ್ಲಿ ತರ್ಪಣ ಪರೋಕ್ಷಣ ಹಾಗೂ ಪ್ರಾಶನ ಮಾಡಿದರೆ ಅತ್ಯಂತ ಶೀಘ್ರ ಹಾಗೂ ಅತ್ಯತ್ತಮ ನಿರೀಕ್ಷಿತ ಫಲಗಳನ್ನು ಕೊಡುತ್ತವೆ.

ಜ್ಯೋತಿಷಿ ಪಂಡಿತ್ ವಿಠ್ಠಲ ಭಟ್ ಭೇಟಿಗೆ
ಯಾವುದೇ ಪರಿಹಾರ ಸಂಬಂಧಿ ವಿಚಾರಗಳಿಗೆ ವೈಯಕ್ತಿಕವಾಗಿ ಜ್ಯೋತಿಷಿ ಪಂಡಿತ್ ವಿಠ್ಠಲ ಭಟ್ ಅವರನ್ನು ಭೇಟಿಯಾಗಲು ಮುಂಚಿತವಾಗಿ ಸಮಯ ನಿಗದಿಪಡಿಸಿಕೊಳ್ಳಿ. ಸಂಪರ್ಕ ಸಂಖ್ಯೆ-9845682380.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications