ಫೆಬ್ರವರಿ 12ರಂದು ಆರು ಗ್ರಹಗಳು ಮಕರ ರಾಶಿಯಲ್ಲಿ; ಇದರ ಫಲಗಳೇನು?
ಫೆಬ್ರವರಿ 12, 2021ನೇ ತಾರೀಕಿನ ಶುಕ್ರವಾರದಂದು ಜ್ಯೋತಿಷ್ಯ ರೀತ್ಯಾ ಬಹಳ ಮಹತ್ತರವಾದ ಹಾಗೂ ಕುತೂಹಲಕರವಾದ ದಿನ. ಅಂದು ಆರು ಗ್ರಹಗಳು ಮಕರ ರಾಶಿಯಲ್ಲೇ ಇರುತ್ತವೆ. ಗುರು, ಶನಿ, ರವಿ, ಬುಧ, ಚಂದ್ರ ಹಾಗೂ ಶುಕ್ರ... ಈ ಆರು ಗ್ರಹಗಳು ಕಾಲ ಪುರುಷನ ಕರ್ಮ ಸ್ಥಾನವಾದ ಮಕರ ರಾಶಿಯಲ್ಲಿ ಇರುವುದರಿಂದ ತೀರಾ ಎಚ್ಚರಿಕೆ ಅಗತ್ಯ.
ಮುಖ್ಯವಾಗಿ ಮಕರ ರಾಶಿಯವರು ಎಚ್ಚರಿಕೆಯಿಂದ ಇರಬೇಕು. ಆ ನಂತರ ಕುಂಭ, ಮಿಥುನ ಹಾಗೂ ಕನ್ಯಾ ರಾಶಿಯವರು ಜಾಗ್ರತೆಯನ್ನು ವಹಿಸಬೇಕು. ಹಾಗಂತ ಒಂದು ರಾಶಿಯಲ್ಲಿ ಈ ರೀತಿ ಆರು ಗ್ರಹಗಳು ಇರುವುದು ಇಲ್ಲವೇ ಇಲ್ಲ ಅಂತೇನಿಲ್ಲ. ಎಪ್ಪತ್ತು ವರ್ಷಗಳ ಹಿಂದೆ ಕನ್ಯಾ ರಾಶಿಯಲ್ಲಿ ಇಂಥದ್ದೊಂದು ಸಂಯೋಗ ಆಗಿತ್ತು.
ಆ ನಂತರ 1962ರಲ್ಲಿ ಮಕರದಲ್ಲಿ, 1979ರಲ್ಲಿ ಸಿಂಹದಲ್ಲಿ, 1982ರಲ್ಲಿ ತುಲಾದಲ್ಲಿ, 1993ರಲ್ಲಿ ವೃಶ್ಚಿಕದಲ್ಲಿ, 2019ನೇ ಇಸವಿಯಲ್ಲಿ ಧನುಸ್ಸಿನಲ್ಲಿ ಸಂಯೋಗ ಆಗಿತ್ತು. ಮೊದಲೇ ಹೇಳಿದ ಹಾಗೆ ಈಗ ಆರು ಗ್ರಹಗಳು ಒಟ್ಟು ಸೇರುತ್ತಿರುವುದು ಕರ್ಮದ ಸ್ಥಾನದಲ್ಲಿ ಹಾಗೂ ಶನಿಯು ಅಧಿಪತಿ ಆಗಿರುವ ಮತ್ತು ಸದ್ಯಕ್ಕೆ ಅಲ್ಲೇ ಶನಿ ಗ್ರಹ ಇರುವ ಮಕರ ರಾಶಿಯಲ್ಲಿ.

ಆ ಕಾರಣದಿಂದ ಈ ಕೆಳಕಂಡ ಫಲಗಳನ್ನು ನಿರೀಕ್ಷೆ ಮಾಡಬಹುದು:
* ಮಾಧ್ಯಮ ವಲಯದಲ್ಲಿ ದೊಡ್ಡ ಮಟ್ಟದ ಅಪಘಾತಗಳ ಸಾಧ್ಯತೆ ಇದೆ.
* ಚೀನಾ/ಪಾಕಿಸ್ತಾನ ಸೇರಿದಂತೆ ನೆರೆಯ ರಾಷ್ಟ್ರಗಳ ಜತೆಗೆ ಸಂಬಂಧ ಹಾಳಾಗಿ, ಅದು ಯುದ್ಧದ ಸನ್ನಿವೇಶದ ತನಕ ಹೋಗಬಹುದು.
* ಮನರಂಜನೆ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ಪ್ರಮುಖ ವ್ಯಕ್ತಿಯೊಬ್ಬರು ಅನಾರೋಗ್ಯ ಅಥವಾ ದುರ್ಮರಣಕ್ಕೆ ಈಡಾಗಬಹುದು.
* ರಾಜಕೀಯ ವಲಯದಲ್ಲೂ ಪ್ರಮುಖ ಪಕ್ಷದ ಮುಖಂಡರಿಗೆ ವಿಪತ್ತು ಸಂಭವಿಸಬಹುದು.
* ಧರ್ಮದ ಕಾರಣಕ್ಕೆ ಆಂತರಿಕ ಕಲಹ, ದಂಗೆ ಏರ್ಪಡುವ ಸಾಧ್ಯತೆ ಇದೆ.
* ಷೇರು ಮಾರುಕಟ್ಟೆಯಲ್ಲಿ ವಿಪರೀತ ಏರಿಳಿತ ಕಂಡುಬರಲಿದ್ದು, ಹೂಡಿಕೆದಾರರು ಜಾಗ್ರತೆಯಿಂದ ಇರಬೇಕು.
ಇನ್ನು ದ್ವಾದಶ ರಾಶಿಗಳವರು ಈ ಸಂದರ್ಭದಲ್ಲಿ ಯಾವುದೇ ಪ್ರಮುಖ ನಿರ್ಧಾರ ಕೈಗೊಳ್ಳಬಾರದು. ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳಬಾರದು. ಉದ್ಯೋಗ ಬದಲಾವಣೆ, ಕೆಲಸ ಬಿಡುವ ನಿರ್ಧಾರಗಳನ್ನು ಮಾಡಿದಲ್ಲಿ ಕಷ್ಟ ಎದುರಿಸಬೇಕಾಗುತ್ತದೆ. ಧಾರ್ಮಿಕ ಮುಖಂಡರು, ಜ್ಯೋತಿಷಿಗಳು, ಪುರೋಹಿತರು, ಅಧ್ಯಾತ್ಮ ಪ್ರವಚನಕಾರರು ತಮ್ಮ ಹೇಳಿಕೆ ಮತ್ತು ನಡವಳಿಕೆ ಕಾರಣಕ್ಕೆ ನಿಂದೆ- ಆರೋಪಗಳನ್ನು ಎದುರಿಸಬೇಕಾಗುತ್ತದೆ.
ಈ ದಿನ ಮೇಷದಲ್ಲಿ ಕುಜ, ವೃಷಭದಲ್ಲಿ ರಾಹು ಹಾಗೂ ವೃಶ್ಚಿಕದಲ್ಲಿ ಕೇತು ಇರುತ್ತದೆ. ಅಲ್ಲಿಗೆ ರಾಹು ಹಾಗೂ ಕೇತು ಮಧ್ಯೆ ಉಳಿದ ಏಳು ಗ್ರಹಗಳು ಬಂದಿಯಾದಂತೆ ಆಗುತ್ತದೆ. ಇದನ್ನು ಕಾಳಸರ್ಪ ಯೋಗ ಎನ್ನಲಾಗುತ್ತದೆ. ಈ ಸ್ಥಿತಿ ಕೆಲ ದಿನಗಳಿಂದ ಇದೆ ಮತ್ತು ಇರುತ್ತದೆ. ಒಟ್ಟಾರೆಯಾಗಿ ಹೇಳಬೇಕು ಅಂದರೆ ಫೆಬ್ರವರಿ ತಿಂಗಳೇ ಶುಭದಾಯಕವಾಗಿಲ್ಲ.
ನಮ್ಮೆಲ್ಲರ ಮುಂದಿರುವುದು ದೇವರ ಪ್ರಾರ್ಥನೆಯ ದಾರಿವೊಂದೇ. ಯಾವುದೇ ಅರಿಷ್ಟ ಸಂಭವಿಸದಿರಲಿ. ಜನರ ಜೀವಕ್ಕೆ ಹಾನಿ ಆಗದಿರಲಿ ಎಂದು ಪ್ರಾರ್ಥನೆ ಮಾಡೋಣ. ಮನಸ್ಸನ್ನು ಪ್ರಶಾಂತವಾಗಿ ಇರಿಸಿಕೊಳ್ಳಿ. ಯಾವುದೇ ವದಂತಿಗಳಿಂದ ಆಕ್ರೋಶ ಪಡದಿರಿ. ಸರ್ವೇ ಜನಾಃ ಸುಖಿನೋ ಭವಂತು.
ರಾಘವೇಂದ್ರ ಕುಡ್ಲ
ಸದ್ಗುರು ಶ್ರೀ ಸಾಯಿ ಜ್ಯೋತಿಷ್ಯ ಕೇಂದ್ರ ತುಳುನಾಡಿನ ಕರಾವಳಿಯ ದೈವಶಕ್ತಿ ಜ್ಯೋತಿಷ್ಯರು ಸ್ತ್ರೀ-ಪುರುಷ ಪ್ರೇಮವಿಚಾರ, ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಅತ್ತೆ-ಸೊಸೆ ಕಿರಿಕಿರಿ, ವಶೀಕರಣ, ಸಂತಾನಯೋಗ, ಇತ್ಯಾದಿ ಸಮಸ್ಯೆಗಳಿಗೆ, ಅಷ್ಟಮಂಗಳ ಪ್ರಶ್ನೆ, ತಾಂಬೂಲ ಪ್ರಶ್ನೆ, ಜಾತಕ ವಿಶ್ಲೇಷಣೆ ಮಾಡಿ ನಿಮ್ಮ ಇಷ್ಟಾರ್ಥ ಕಾರ್ಯಗಳಿಗೆ 5 ದಿನದಲ್ಲಿ ಪರಿಹಾರ ಶತಸಿದ್ದ. ಮನೆಯ ವಿಳಾಸ: ನಂ.86, ಸಂಪಿಗೆ ರಸ್ತೆ, ಮಲ್ಲೇಶ್ವರಂ ಮೊ: 9945515555
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications