Vakri Mangal 2022 Gochar : ವೃಷಭ ರಾಶಿಯಲ್ಲಿ ವಕ್ರಿ ಮಂಗಳ ಸಂಚಾರ: ಈ ರಾಶಿಯವರು ಎಚ್ಚರದಿಂದಿರಿ..! ಕಷ್ಟ-ನಷ್ಟ ತಪ್ಪಿದ್ದಲ್ಲ..
ವೃಷಭ ರಾಶಿಯಲ್ಲಿ ಹಿಮ್ಮುಖ ಮಂಗಳ ಸಂಚಾರ 13 ನವೆಂಬರ್ 2022ರಂದು ಸಂಭವಿಸಲಿದೆ. ಮಂಗಳ ಗ್ರಹ ಧೈರ್ಯದ ಗ್ರಹವಾಗಿದೆ. ಮಂಗಳ ಗ್ರಹ ಜೀವನದಲ್ಲಿನ ಅಡೆತಡೆಗಳನ್ನು ಯೋಧನಂತೆ ಎದುರಿಸಲು ಶಕ್ತಿಗಳನ್ನು ಉತ್ತೇಜಿಸುತ್ತದೆ. ಇದು ಚೈತನ್ಯ, ದೈಹಿಕ ಶಕ್ತಿ, ಏನನ್ನಾದರು ಮಾಡಲು ಪ್ರೇರಣೆ ಮತ್ತು ಯಾವುದೇ ಕೆಲಸವನ್ನು ಪೂರ್ಣಗೊಳಿಸಲು ಶಕ್ತಿಯನ್ನು ನೀಡುತ್ತದೆ. ಮಂಗಳದ ಪ್ರಭಾವ ಹೊಂದಿರುವ ಜನರು ಧೈರ್ಯಶಾಲಿ ಆಗಿರುತ್ತಾರೆ.
ಮಂಗಳ ಗ್ರಹವನ್ನು ಭೂಮಿ ಪುತ್ರ ಎಂದು ಕರೆಯಲಾಗುತ್ತದೆ. ಮಂಗಳ ಗ್ರಹದ ಮೇಲೆ ಬಲವಾದ ಪ್ರಭಾವ ಹೊಂದಿರುವ ವ್ಯಕ್ತಿಯು ತ್ರಾಣ, ನಿರ್ಣಯವನ್ನು ಹೊಂದಿದ್ದಾನೆ. ಇದು ವ್ಯಕ್ತಿಯನ್ನು ಅದೃಷ್ಟವಂತನನ್ನಾಗಿ ಮಾಡುತ್ತದೆ. ಆದರೆ ದುರ್ಬಲವಾದ ರಾಶಿಯವರಿಗೆ ಮಂಗಳ ಸಂಚಾರ ಕೆಲ ಸಮಸ್ಯೆಗಳನ್ನು ಉಂಟು ಮಾಡಬಹುದು.
ವೃಷಭ ರಾಶಿಯಲ್ಲಿ ಮಂಗಳ ಹಿಮ್ಮುಖ ಸಂಚಾರ: ಸಮಯ
ವಿಜ್ಞಾನದ ಪ್ರಕಾರ ಗ್ರಹದ ಹಿಮ್ಮುಖ ಚಲನೆಯು ಆಕಾಶದಲ್ಲಿ ಕಂಡುಬರುವ ಬದಲಾವಣೆಯಾಗಿದೆ. ಜ್ಯೋತಿಷ್ಯದಲ್ಲಿ ಇದು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಇದು ಜನರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ವೃಷಭ ರಾಶಿಯಲ್ಲಿ ಹಿಮ್ಮುಖ ಮಂಗಳ ಸಂಕ್ರಮವು 13 ನವೆಂಬರ್ 2022 ರಂದು 13:32ಕ್ಕೆ ನಡೆಯುತ್ತದೆ. ಇದು 13 ಜನವರಿ 2023 ರವರೆಗೆ ಈ ರಾಶಿಯಲ್ಲಿ ಇರುತ್ತದೆ.
ಮೇಷ: ತೀರ್ಥಯಾತ್ರೆಗೆ ಪ್ರಯಾಣ
ಈ ದಿನ ಸಮತೋಲನವಾಗಿರುತ್ತದೆ. ಮಂಗಳ ಗ್ರಹ ವೃಷಭ ರಾಶಿಯಲ್ಲಿ ಹಿಮ್ಮುಖವಾಗಿ ಸಾಗುವುದರಿಂದ ಮೇಷ ರಾಶಿಯವರ ಸಂವಹನದಲ್ಲಿ ಬದಲಾಗಬಹುದು. ಇದು ಕೊಂಚ ಮೊಂಡಾಗುವಂತೆ ಮಾಡುತ್ತದೆ. ನಿಮ್ಮ ಮೊಂಡುತನವನ್ನು ಇತರರು ಅಸಭ್ಯವೆಂದು ಪರಿಗಣಿಸಬಹುದು. ಕುಟುಂಬದವರೊಂದಿಗೆ ಕಲಹಗಳು ಮತ್ತು ಜಗಳಗಳು ಸಹ ಇದರ ಕಾರಣದಿಂದಾಗಿ ಸಂಭವಿಸಬಹುದು.
ಈ ಸಂಚಾರವು ಹಣಕಾಸಿನಲ್ಲಿ ಹಠಾತ್ ನಷ್ಟವನ್ನು ಉಂಟುಮಾಡಬಹುದು. ಅದರ ಬಗ್ಗೆ ಜಾಗೃತರಾಗಿರಿ ಮತ್ತು ಈ ಸಮಯದಲ್ಲಿ ಹೊಸ ಕೆಲಸವನ್ನು ಪ್ರಾರಂಭಿಸಬೇಡಿ. ವಿದ್ಯಾರ್ಥಿಗಳಿಗೆ ಇದು ಗೊಂದಲದ ಸಮಯ. ಕೆಲಸದತ್ತ ಗಮನಹರಿಸಲು ಪ್ರಯತ್ನಿಸಿ. ಅಧ್ಯಯನದ ಬಗ್ಗೆ ಭಯವಾಗಬಹುದು. ತಯಾರಿ ಮಾಡುತ್ತಿದ್ದರೆ ಭಯ ಪಡುವ ಅಗತ್ಯವಿಲ್ಲ. ಸಂಗಾತಿಯೊಂದಿಗೆ ಸೌಮ್ಯವಾಗಿ ವರ್ತಿಸುವಿರಿ. ನೀವು ಯಾವುದೇ ತೀರ್ಥಯಾತ್ರೆಗೆ ಇದ್ದಕ್ಕಿದ್ದಂತೆ ಪ್ರವಾಸವನ್ನು ಯೋಜಿಸಬಹುದು.
ವೃಷಭ: ದೈಹಿಕ ವ್ಯಾಯಾಮ ಮುಖ್ಯ
ಈ ದಿನ ಸಂತೋಷದಿಂದ ಕೂಡಿರುತ್ತದೆ. ಆದರೆ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಮುಖ್ಯ. ಸಾಕಷ್ಟು ನೀರು ಕುಡಿಯಿರಿ. ಜೊತೆಗೆ ಧ್ಯಾನ ಮತ್ತು ದೈಹಿಕ ವ್ಯಾಯಾಮಗಳನ್ನು ಮಾಡುವುದು ನಿಮ್ಮ ಶಕ್ತಿಯನ್ನು ಧನಾತ್ಮಕ ದಿಕ್ಕಿನಲ್ಲಿ ಚಲಿಸಲು ಸಹಾಯ ಮಾಡುತ್ತದೆ. ನೀವು ವಿದೇಶಿ ಭೂಮಿಯಿಂದ ಕೆಲವು ವ್ಯಾಪಾರ ಸಂಪರ್ಕವನ್ನು ಹೊಂದಿದ್ದರೆ ಅದು ಹಾಳಾಗಬಹುದು. ಆದ್ದರಿಂದ ಹೆಚ್ಚು ಜಾಗೃತರಾಗಿರಿ. ನೀವು ಕುಟುಂಬದ ಬಗ್ಗೆ ಹೆಚ್ಚು ಕಾಳಜಿವುಳ್ಳವರಾಗಿರುತ್ತೀರಿ. ನಿಮ್ಮ ಕಾಳಜಿ ಹಾಗೂ ಪ್ರೀತಿಯನ್ನು ಕುಟುಂಬಸ್ಥರು ಮೆಚ್ಚಿಕೊಳ್ಳುತ್ತಾರೆ. ಹೀಗಾಗಿ ನೀವು ಮನೆಯಲ್ಲಿ ಅಚ್ಚುಮೆಚ್ಚಿನ ವ್ಯಕ್ತಿಯಾಗಿರುವಿರಿ.
ಆಸ್ತಿಯನ್ನು ಮಾರಾಟ ಮಾಡಲು ಮತ್ತು ಖರೀದಿಸಲು ಯೋಜಿಸುತ್ತಿದ್ದರೆ ಅದನ್ನು ಮುಂದೂಡಲು ಪ್ರಯತ್ನಿಸಿ. ಇದನ್ನು ತಪ್ಪಿಸಲು ಸಾಧ್ಯವಾಗದಿದ್ದರೆ ಒಪ್ಪಂದದ ಸಮಯದಲ್ಲಿ ನೀವು ಎಚ್ಚರದಿಂದಿರಬೇಕು. ಶಾಂತವಾಗಿರಲು ಪ್ರಯತ್ನಿಸುವ ಜನರಿಗೆ ಇದು ಉತ್ತಮ ಸಮಯವಾಗಿದೆ. ವೃಷಭ ರಾಶಿಯಲ್ಲಿ ಹಿಮ್ಮುಖ ಮಂಗಳ ಸಂಚಾರದ ಸಮಯದಲ್ಲಿ ಕೆಲವು ಸಮಸ್ಯೆಗಳನ್ನು ಉಂಟುಮಾಡಬಹುದು. ನೀವು ಪ್ರಯಾಣ ಮಾಡುವಾಗ ಜಾಗರೂಕರಾಗಿರಬೇಕು.
ಮಿಥುನ: ಅಡೆತಡೆಯ ನಡುವೆ ಅದೃಷ್ಟ
ನೀವು ಕೆಲವು ಸಣ್ಣ ಪ್ರವಾಸವನ್ನು ಯೋಜಿಸಲು ಹಣವನ್ನು ಖರ್ಚು ಮಾಡಬಹುದು. ನಿಮ್ಮ ಹಣ ಎಲ್ಲಾದರು ಸಿಲುಕಿಕೊಳ್ಳಬಹುದು ಅಥವಾ ನಷ್ಟವಾಗಬಹುದು. ಆದ್ದರಿಂದ ಬುದ್ಧಿವಂತಿಕೆಯಿಂದ ಯೋಜಿಸಿ. ನೀವು ಯಾವುದೇ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರೆ ಅದನ್ನು ನಿರ್ಲಕ್ಷಿಸದ ಸಮಯವಿದು. ಆದ್ದರಿಂದ ನಿಮ್ಮ ಸ್ವಭಾವದಿಂದಾಗಿ ಕೆಲವು ಅನಗತ್ಯ ಘರ್ಷಣೆಗಳು, ನಿಮ್ಮ ಸಂಗಾತಿಯೊಂದಿಗಿನ ಸಂಬಂಧದಲ್ಲಿ ಏರಿಳಿತಗಳನ್ನು ಕಾಣಬಹುದು. ಆದ್ದರಿಂದ ವೃಷಭ ರಾಶಿಯಲ್ಲಿ ಹಿಮ್ಮುಖ ಮಂಗಳ ಸಂಕ್ರಮಣದ ಸಮಯದಲ್ಲಿ ನಿಮ್ಮ ವೈವಾಹಿಕ ಜೀವನದ ಬಗ್ಗೆ ಹೆಚ್ಚಿನ ಗಮನ ಕೊಡಿ.
ಕೆಲಸದಲ್ಲಿ ಕೊಂಚ ಒತ್ತಡ ಹೆಚ್ಚಾಗಬಹುದು. ಅಂದುಕೊಂಡ ಕಾರ್ಯಗಳಿಗೆ ಅಡೆತಡೆ ಉಂಟಾಗಬಹುದು. ಆದರೆ ಕೆಲಸದಲ್ಲಿ ಶ್ರದ್ಧೆ ಇರಲಿ. ಶ್ರಮವಹಿಸಿ ಕೆಲಸ ಮಾಡಿ. ನಿಮ್ಮ ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳೊಂದಿಗೆ ಉತ್ತಮ ಸಂಬಂಧ ಸಾಧಿಸುವುದು ಮುಖ್ಯ. ಕುಟುಂಬದಲ್ಲಿ ಸಂತಸ ನೆಲೆಸಲಿದೆ. ಯಾವುದೇ ಅಡೆತಡೆಗಳಿದ್ದರೂ ನೀವು ಮಾಡುವ ಒಳ್ಳೆಯ ಕಾರ್ಯಗಳು ನಿಮ್ಮ ಕೈ ಹಿಡಿಯಲಿವೆ.
ಕರ್ಕಾಟಕ: ಹಠಮಾರಿ ಮತ್ತು ಅಸಡ್ಡೆ ಸ್ವಭಾವ
ನಿಮ್ಮ ಆಸೆ ಮತ್ತು ಲಾಭಗಳ ಈಡೇರಿಕೆಗೆ ಈ ಸಂಚಾರ ತುಂಬಾ ಒಳ್ಳೆಯದು. ಆದರೆ ಅವು ಇದ್ದಕ್ಕಿದ್ದಂತೆ ಸಂಭವಿಸುತ್ತವೆ. ನೀವು ಎಲ್ಲದರ ಫಲಿತಾಂಶಗಳನ್ನು ಆನಂದಿಸುವಿರಿ. ನಿಮ್ಮ ಕೆಲಸದ ಸ್ಥಳದಲ್ಲಿ ನೀವು ಮಾಡಿದ ಕಠಿಣ ಪರಿಶ್ರಮ ಫಲ ನೀಡಲಿದೆ. ಅಹಂಕಾರ ನಿಮ್ಮ ಇಮೇಜ್ಗೆ ಅಡ್ಡಿಪಡಿಸಬಹುದು. ವೃಷಭ ರಾಶಿಯಲ್ಲಿನ ಮಂಗಳ ಹಿಮ್ಮುಖ ಸಂಚಾರ ವಿದ್ಯಾರ್ಥಿಗಳಿಗೆ ಉತ್ತಮ ಸಮಯವಾಗಿದೆ. ಆದರೆ ನೀವು ಸ್ವಲ್ಪ ಹಠಮಾರಿ ಮತ್ತು ಅಸಡ್ಡೆ ಸ್ವಭಾವವನ್ನು ಹೊಂದಿರಬಹುದು.
ಶಿಕ್ಷಣದ ವೈಫಲ್ಯಕ್ಕೆ ನಿಮ್ಮ ಸ್ನೇಹಿತರ ಮೇಲೆ ಆರೋಪವನ್ನು ಹಾಕಬಹುದು. ಆದ್ದರಿಂದ ನೀವು ಸಂಪೂರ್ಣ ಏಕಾಗ್ರತೆ ಮತ್ತು ಶಕ್ತಿಯನ್ನು ಪಡೆಯಲು ಜ್ಞಾನ ಪ್ರಾರಂಭಿಸಲು ಸಲಹೆ ನೀಡಲಾಗುತ್ತದೆ. ಆರೋಗ್ಯದ ದೃಷ್ಟಿಯಿಂದ ನೀವು ಯಾವುದೇ ಕಾಯಿಲೆಯಿಂದ ಬಳಲುತ್ತಿದ್ದರೆ ಅದನ್ನು ನಿರ್ಲಕ್ಷಿಸಬೇಡಿ ನಿಮ್ಮ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಿ.
ಸಿಂಹ: ಆರ್ಥಿಕ ಸ್ಥಿತಿ ಉತ್ತಮ
ನೀವು ಇಂದು ಅದ್ಭುತ ದಿನವನ್ನು ಹೊಂದಿರುತ್ತೀರಿ. ಈ ರಾಶಿಯ ಉದ್ಯಮಿ ಇದ್ದಕ್ಕಿದ್ದಂತೆ ಎಲ್ಲಿಂದಲೋ ಹಣವನ್ನು ಪಡೆಯಬಹುದು. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ನೀವು ಇಂದು ಹೊಸ ವ್ಯಾಪಾರವನ್ನು ಪ್ರಾರಂಭಿಸಲು ಯೋಚಿಸುತ್ತಿದ್ದರೆ, ನಿಮ್ಮ ಹೆತ್ತವರ ಆಶೀರ್ವಾದದೊಂದಿಗೆ ಪ್ರಾರಂಭಿಸಿ. ಈ ಸಮಯದಲ್ಲಿ ಹಣ ಸಂಪಾದಿಸುವ ಅವಕಾಶಗಳನ್ನು ಪಡೆಯುವಿರಿ. ಕೌಟುಂಬಿಕ ಸಮಸ್ಯೆಗಳಿಂದಾಗಿ ನಿಮ್ಮ ಮನಸ್ಸು ತೊಂದರೆಗೊಳಗಾಗುತ್ತದೆ. ನೀವು ಅಗತ್ಯವಿರುವವರಿಗೆ ಸಹಾಯ ಮಾಡಿದರೆ, ಇಂದು ಲಾಭದ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ. ಕೆಲವು ಕಾರ್ಯಗಳನ್ನು ಪೂರ್ಣಗೊಳಿಸಲು ನಿಮಗೆ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಆದರೆ ಕೆಲಸ ನೀವು ಅಂದುಕೊಂಡಂತೆ ನಡೆಯಲಿದೆ. ಏನನ್ನಾದರೂ ಮಾಡಲು ಆತುರಪಡಬೇಡಿ. ಯೋಚಿಸಿ ಮುನ್ನಡೆಯಿರಿ.
ನಿಮ್ಮ ಕೆಲಸದ ಸ್ಥಳದಲ್ಲಿ ಪ್ರಾಬಲ್ಯ ಸಾಧಿಸುವಿರಿ. ಗುರಿಗಳನ್ನು ಸಾಧಿಸುವಲ್ಲಿ ನೀವು ಕಿರಿಕಿರಿ ಅನುಭವಿಸಬಹುದು. ಆದ್ದರಿಂದ ಕೆಲಸದ ಸ್ಥಳದಲ್ಲಿ ಜಾಗರೂಕರಾಗಿರಿ. ಅದು ನಿಮ್ಮ ಇಮೇಜ್ ಅನ್ನು ಹಾನಿಗೊಳಿಸುತ್ತದೆ. ಸಿನಿಮಾದಲ್ಲಿ ನಟಿಸುತ್ತಿದ್ದರೆ ಹೊಸ ಪಾತ್ರಕ್ಕೆ ಹೊಂದಿಕೊಳ್ಳುವಲ್ಲಿ ನೀವು ಸಮಸ್ಯೆಗಳನ್ನು ಎದುರಿಸಬಹುದು. ಈ ಸಂಚಾರ ನಿಮ್ಮ ಶಕ್ತಿಯ ನಷ್ಟ, ಕಿರಿಕಿರಿ ಮತ್ತು ಆಕ್ರಮಣಶೀಲತೆಯನ್ನು ತರಬಹುದು.
ದೈಹಿಕ ಚಟುವಟಿಕೆಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಲು ನಿಮಗೆ ಸಲಹೆ ನೀಡಲಾಗುತ್ತದೆ. ನೀವು ಅವರ ಆರೋಗ್ಯದ ಬಗ್ಗೆ ಜಾಗೃತರಾಗಿರಬೇಕು. ಸಿಂಹ ರಾಶಿಯ ವಿದ್ಯಾರ್ಥಿಗಳ ಅಧ್ಯಯನಗಳು ಸ್ವಲ್ಪ ತೊಂದರೆಗೊಳಗಾಗಬಹುದು. ಆದ್ದರಿಂದ ದಯವಿಟ್ಟು ಹೆಚ್ಚುವರಿ ಶ್ರಮ ವಹಿಸಿ ಅಭ್ಯಾಸ ಮಾಡಿ.
ಕನ್ಯಾ: ವಿದ್ಯಾರ್ಥಿಗಳಿಗೆ ಅನುಕೂಲಕರ ದಿನ
ಈ ದಿನ ಅದೃಷ್ಟವು ನಿಮ್ಮನ್ನು ಬೆಂಬಲಿಸುತ್ತದೆ. ಅದು ನಿಮಗೆ ಪ್ರಯೋಜನಕಾರಿಯಾಗಿದೆ. ಅಲ್ಲದೆ ನೀವು ಹೆಚ್ಚು ಕೆಲಸ ಮಾಡಲು ಬಯಸುತ್ತೀರಿ. ಹೊಸ ಭೂಮಿಯನ್ನು ಖರೀದಿಸಲು ಯೋಜಿಸುತ್ತಿದ್ದರೆ, ಅದರ ಒಪ್ಪಂದವು ಇಂದು ಅಂತಿಮವಾಗುತ್ತದೆ. ನೀವು ಎಲ್ಲಿಗಾದರೂ ಹೊರಹೋಗಲು ಬಯಸಿದರೆ, ನಿಮ್ಮೊಂದಿಗೆ ಎಟಿಎಂ ಕಾರ್ಡ್ ತೆಗೆದುಕೊಳ್ಳಲು ಮರೆಯಬೇಡಿ. ಈ ರಾಶಿಯ ವಿದ್ಯಾರ್ಥಿಗಳಿಗೆ ಇಂದು ಅನುಕೂಲಕರ ದಿನವಾಗಿರುತ್ತದೆ. ನಿಮ್ಮ ಸಂಗಾತಿಯೊಂದಿಗಿನ ಸಂಬಂಧದಲ್ಲಿ ಮಾಧುರ್ಯ ಹೆಚ್ಚಾಗುತ್ತದೆ. ಅನಿಯಮಿತ ದಿನಚರಿಯಿಂದಾಗಿ ನೀವು ಆಲಸ್ಯ ಮತ್ತು ಆಯಾಸವನ್ನು ಅನುಭವಿಸಬಹುದು. ರಾತ್ರಿಯ ಊಟವನ್ನು ಕುಟುಂಬದೊಂದಿಗೆ ಹೊರಗೆ ಯೋಜಿಸಬಹುದು. ಹಿರಿಯರನ್ನು ಗೌರವಿಸುವ ಮೂಲಕ, ನೀವು ಶೀಘ್ರದಲ್ಲೇ ನಿಮ್ಮ ಕೆಲಸದಲ್ಲಿ ಯಶಸ್ವಿಯಾಗುತ್ತೀರಿ.
ಕುಟುಂಬದಲ್ಲಿ ಕೆಲವು ಭಿನ್ನಾಭಿಪ್ರಾಯಗಳನ್ನು ಎದುರಿಸಬಹುದು. ಆದ್ದರಿಂದ ಶಾಂತವಾಗಿರಿ. ದಿಢೀರ್ ತೀರ್ಥಯಾತ್ರೆ ಹೋಗುವ ಸಾಧ್ಯತೆಗಳು ಇವೆ. ಮಂಗಳನ ಸ್ಥಾನವು ನಿಮ್ಮನ್ನು ಪ್ರಾಬಲ್ಯಗೊಳಿಸಬಹುದು. ಕೆಲವು ಅನಿರೀಕ್ಷಿತ ವೆಚ್ಚಗಳು ಸಂಭವಿಸಬಹುದು ಎಂದು ತೋರಿಸುತ್ತದೆ. ನಿಮ್ಮನ್ನು ಹಠಾತ್ ಯೋಜಿತ ಕಿರು ಪ್ರವಾಸಕ್ಕೆ ಕರೆದೊಯ್ಯಬಹುದು. ನಿಮ್ಮ ಮನೆಯ ಸಂತೋಷಕ್ಕೆ ಅಡ್ಡಿಯಾಗಬಹುದು. ನಿಮ್ಮ ತಾಯಿಯ ಆರೋಗ್ಯವೂ ಹದಗೆಡಬಹುದು. ಆದ್ದರಿಂದ ನೀವು ವೃಷಭ ರಾಶಿಯಲ್ಲಿ ಹಿಮ್ಮುಖ ಮಂಗಳ ಸಂಚಾರದ ಸಮಯದಲ್ಲಿ ಎಚ್ಚರದಿಂದಿರಬೇಕು.
ತುಲಾ: ಶ್ರಮದ ಫಲ
ಇಂದು ನಿಮ್ಮ ಅತ್ಯುತ್ತಮ ದಿನವಾಗಿರುತ್ತದೆ. ಬಹುದಿನಗಳಿಂದ ಪಟ್ಟ ಶ್ರಮ ಇಂದು ಫಲ ನೀಡಲಿದೆ. ಈ ಸಮಯದಲ್ಲಿ ತುಲಾ ರಾಶಿಯವರು ತಮ್ಮ ಕೆಲಸವನ್ನು ಪೂರ್ಣಗೊಳಿಸಲು ಸಲಹೆ ನೀಡಲಾಗುತ್ತದೆ. ಇಂದು ನೀವು ಕೆಲವು ದೊಡ್ಡ ಜವಾಬ್ದಾರಿಗಳನ್ನು ಪಡೆಯುತ್ತೀರಿ. ಈ ರಾಶಿಯವರಿಗೆ ಇಂದು ಉತ್ತಮ ದಿನ. ನೀವು ಇಂದು ವ್ಯವಹಾರದಲ್ಲಿ ಲಾಭವನ್ನು ಗಳಿಸುವಿರಿ.
ನಿಮ್ಮ
ಹೆತ್ತವರ
ಆಶೀರ್ವಾದವನ್ನು
ನೀವು
ಪಡೆಯುವುದರಿಂದ
ಹಲವು
ಪ್ರಯೋಜನಗಳಿವೆ.
ಕೌಟುಂಬಿಕ
ಸಮಸ್ಯೆಗಳನ್ನು
ಹೋಗಲಾಡಿಸಲು
ಇಂದು
ದುರ್ಗಾ
ಚಾಲೀಸಾವನ್ನು
ಪಠಿಸಿ
ಮತ್ತು
ಪ್ರಾರ್ಥನೆಯನ್ನು
ಸಲ್ಲಿಸಿದರೆ
ಪ್ರಯೋಜನವಾಗುತ್ತದೆ.
ವೃಷಭ
ರಾಶಿಯಲ್ಲಿ
ಹಿಮ್ಮುಖ
ಮಂಗಳ
ಸಂಕ್ರಮಣದ
ಸಮಯದಲ್ಲಿ
ಬಹಳಷ್ಟು
ಹಠಾತ್
ಘಟನೆಗಳು
ಮಾನಸಿಕ
ಚಡಪಡಿಕೆಯನ್ನು
ನೀಡಬಹುದು.
ಹಠಾತ್
ಆರ್ಥಿಕ
ಏರಿಳಿತಗಳು
ಆಗಬಹುದು.
ಇತರರೊಂದಿಗೆ
ಜಗಳ
ಆಡಬಹುದು.
ಹಠಾತ್
ಘಟನೆಯನ್ನು
ತಪ್ಪಿಸಲು
ಪ್ರಯಾಣ
ಮಾಡುವಾಗ
ಹೆಚ್ಚು
ಜಾಗರೂಕರಾಗಿರಲು
ಪ್ರಯತ್ನಿಸಿ.
ವೃಶ್ಚಿಕ: ಇಂಜಿನಿಯರ್ಗಳಿಗೆ ಉತ್ತಮ ದಿನ
ಇಂದು ನಿಮ್ಮ ದಿನ ಸಾಮಾನ್ಯವಾಗಿರುತ್ತದೆ. ರಸ್ತೆಯಲ್ಲಿ ನಡೆಯುವಾಗ ಸಂಚಾರಿ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ರಸ್ತೆ ದಾಟಬೇಕು. ನಿಮ್ಮ ಸಂಗಾತಿಯನ್ನು ಸಂತೋಷಪಡಿಸಲು ನೀವು ಇಂದು ಅವರಿಗೆ ಉಡುಗೊರೆಯನ್ನು ನೀಡಬಹುದು. ಈ ರಾಶಿಯ ಇಂಜಿನಿಯರ್ಗಳಿಗೆ ಇಂದು ಪ್ರಯೋಜನಕಾರಿಯಾಗಲಿದೆ. ನಿಮ್ಮ ವೃತ್ತಿಜೀವನದಲ್ಲಿ ಏರಿಳಿತಗಳಿಂದ ನೀವು ತೊಂದರೆಗೊಳಗಾಗುತ್ತೀರಿ. ಆದರೆ ಅನುಭವಿ ಹಿರಿಯರ ಸಹಾಯದಿಂದ ನೀವು ಸ್ವಲ್ಪ ಪರಿಹಾರವನ್ನು ಪಡೆಯುತ್ತೀರಿ. ಮನೆಯಲ್ಲಿ ಮಕ್ಕಳೊಂದಿಗೆ ಸಂಜೆಯ ಸಮಯ ಕಳೆಯಲಿದ್ದೀರಿ. ನಿರ್ಗತಿಕರಿಗೆ ಅನ್ನ ನೀಡುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ.
ಈ ಸಮಯದಲ್ಲಿ ಅನಗತ್ಯ ಘರ್ಷಣೆಗಳು ಮತ್ತು ವಾದಗಳುಉಂಟುಮಾಡಬಹುದು. ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧದಲ್ಲಿ ಕೆಲವು ಏರಿಳಿತಗಳನ್ನು ಕಾಣಬಹುದು. ಆದ್ದರಿಂದ ದಯವಿಟ್ಟು ನಿಮ್ಮ ವೈವಾಹಿಕ ಜೀವನದ ಬಗ್ಗೆ ಹೆಚ್ಚಿನ ಗಮನ ಕೊಡಿ. ನಿಮ್ಮ ಕೆಲಸದ ಸ್ಥಳದಲ್ಲಿ ನಿಮ್ಮ ಇಮೇಜ್ ಬಗ್ಗೆ ಗಮನ ಹರಿಸಿ.
ನೀವು ಅಹಂ ಮತ್ತು ಘರ್ಷಣೆಯನ್ನು ತಪ್ಪಿಸಬೇಕು. ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಆಹಾರ ಮತ್ತು ನೀರಿನಿಂದ ದೂರವಿರಿ. ಅಜ್ಞಾನ ಕೆಲವು ರೀತಿಯ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು ಇದರಿಂದ ಜಾಗರೂಕರಾಗಿರಿ.
ಧನು: ಸವಾಲುಗಳನ್ನು ಎದುರಿಸುವ ಶಕ್ತಿ
ವೃಷಭ ರಾಶಿಯಲ್ಲಿ ಮಂಗಳ ಹಿಮ್ಮುಖ ಸಂಚಾರ ಸಮಯ ನಿಮಗೆ ಸಾಮಾನ್ಯ ದಿನವಾಗಿರುತ್ತದೆ. ನೀವು ಅನೇಕ ಸವಾಲುಗಳನ್ನು ಎದುರಿಸುತ್ತೀರಿ. ನೀವು ಶತ್ರುಗಳ ವಿರುದ್ಧ ನೇರವಾಗಿ ಹೋರಾಡಿ. ಯಶಸ್ಸು ಸಿಗಲಿದೆ. ಈ ರಾಶಿಯ ವಿದ್ಯಾರ್ಥಿಗಳಿಗೆ ಇಂದು ಸಾಮಾನ್ಯ ದಿನವಾಗಿರುತ್ತದೆ. ವೃತ್ತಿ-ಸಂಬಂಧಿತ ಆಯ್ಕೆಗಳು ನಿಮ್ಮನ್ನು ಸ್ವಲ್ಪ ತೊಂದರೆಗೆ ಸಿಲುಕಿಸಬಹುದು. ಇದು ನಿಮ್ಮ ವೃತ್ತಿಜೀವನವನ್ನು ಪ್ರಗತಿಯ ಹಾದಿಯಲ್ಲಿ ಕೊಂಡೊಯ್ಯುತ್ತದೆ. ಆರೋಗ್ಯದ ಬಗ್ಗೆ ಎಚ್ಚರದಿಂದಿರಬೇಕು. ಇಂದು ಮಾಧ್ಯಮದೊಂದಿಗೆ ಸಂಬಂಧ ಹೊಂದಿರುವ ಜನರಿಗೆ ಅನುಕೂಲಕರ ದಿನವಾಗಲಿದೆ. ನಿಮ್ಮ ತಾಯಿಯ ಆರೋಗ್ಯ ಸುಧಾರಿಸುತ್ತದೆ. ಪ್ರತಿದಿನ ಬೆಳಿಗ್ಗೆ ಸೂರ್ಯ ದೇವರಿಗೆ ನೀರನ್ನು ಅರ್ಪಿಸಿ.
ಈ ಸಂಚಾರದಿಂದಾಗಿ ಆರೋಗ್ಯದ ದೃಷ್ಟಿಯಿಂದ ಈ ಸಮಯವು ನಿಮಗೆ ಸ್ವಲ್ಪ ಅಪಾಯಕಾರಿಯಾಗಿದೆ. ಈ ಸಮಯದಲ್ಲಿ ನೀವು ರೋಗನಿರೋಧಕ ಶಕ್ತಿಯ ನಷ್ಟ ಮತ್ತು ದೈಹಿಕ ಸಾಮರ್ಥ್ಯದ ಸಮಸ್ಯೆಗಳನ್ನು ಎದುರಿಸುತ್ತೀರಿ. ನಿಮ್ಮ ಶತ್ರುಗಳು ನಿಮ್ಮ ವಿರುದ್ಧ ಕೆಲವು ಯೋಜನೆ ಮತ್ತು ಸಂಚು ಮಾಡಲು ಪ್ರಯತ್ನಿಸಬಹುದು. ಆದರೆ ಅವರು ನಾಶವಾಗುತ್ತಾರೆ. ಅವರು ನಿಮಗೆ ಯಾವುದೇ ರೀತಿಯಲ್ಲಿ ಹಾನಿ ಮಾಡಲು ಸಾಧ್ಯವಾಗುವುದಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಸ್ವಲ್ಪ ವಿಚಲಿತರಾಗಬಹುದು. ನೀವು ಖರ್ಚುಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬಹುದು.
ಮಕರ: ಕುಟುಂಬ ಸದಸ್ಯರೊಂದಿಗೆ ಭೋಜನ ಕೂಟ
ಇಂದು ನಿಮ್ಮ ದಿನವು ನಿಮ್ಮ ಪರವಾಗಿ ಇರುತ್ತದೆ. ಕಚೇರಿಯಲ್ಲಿ ನಿಮ್ಮ ಕೆಲಸಕ್ಕಾಗಿ ನೀವು ಗೌರವಿಸಲ್ಪಡುತ್ತೀರಿ. ಆದ್ದರಿಂದ ಕಚೇರಿ ಸಮಯಕ್ಕೆ ಹೋಗಿ. ಹಿಂದೆ ಮಾಡಿದ ತಪ್ಪಿನಿಂದಾಗಿ ಇಂದು ಸ್ನೇಹಿತರೊಂದಿಗಿನ ಕೆಟ್ಟ ಸಂಬಂಧಗಳಲ್ಲಿ ಸುಧಾರಣೆ ಕಂಡುಬರುತ್ತದೆ. ನೀವು ಕುಟುಂಬ ಸದಸ್ಯರೊಂದಿಗೆ ಎಲ್ಲೋ ಭೋಜನವನ್ನು ಯೋಜಿಸಬಹುದು. ನೀವು ಚೈತನ್ಯವನ್ನು ಅನುಭವಿಸುವಿರಿ. ದೈನಂದಿನ ಕೆಲಸಗಳು ಯಾವುದೇ ಅಡಚಣೆಯಿಲ್ಲದೆ ಪೂರ್ಣಗೊಳ್ಳುತ್ತವೆ. ಮುಂದೆ ಸಾಗಲು ಹೊಸ ದಾರಿಗಳು ತೆರೆದುಕೊಳ್ಳುತ್ತವೆ. ವಿದ್ಯಾರ್ಥಿಗಳು ಶಿಕ್ಷಕರ ಬೆಂಬಲವನ್ನು ಪಡೆಯಬಹುದು. ಒಟ್ಟಿನಲ್ಲಿ ಇಂದು ನಿಮಗೆ ಒಳ್ಳೆಯ ದಿನವಾಗಲಿದೆ.
ಮಕರ ರಾಶಿಯ ವಿದ್ಯಾರ್ಥಿಗಳಿಗೆ ತಮ್ಮ ಗುರಿಗಳನ್ನು ಸಾಧಿಸಲು ಇದು ತುಂಬಾ ಒಳ್ಳೆಯ ಸಮಯ. ಆದರೆ ಕೆಲವೊಮ್ಮೆ ನೀವು ನಷ್ಟವನ್ನು ಅನುಭವಿಸಬಹುದು. ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲು ದಿಕ್ಕು ತೋಚದಂತಾಗಬಹುದು. ಪೋಷಕರ ಅತೌಅ ಶಿಕ್ಷಕರ ಸಲಹೆ ಪಡೆಯಿರಿ. ಸಂಶೋಧನಾ ಕಾರ್ಯ ಅಥವಾ ನಿಗೂಢ ಅಧ್ಯಯನಗಳಿಗೆ ಸಹ ಅನುಕೂಲಕರ ಸಮಯವಾಗಿದೆ. ನಿಮ್ಮ ಪ್ರಣಯ ಸಂಬಂಧಗಳು ಸಹ ಹಾನಿಗೊಳಗಾಗಬಹುದು. ವೃಷಭ ರಾಶಿಯಲ್ಲಿ ಹಿಮ್ಮುಖ ಮಂಗಳ ಸಂಚಾರದ ಸಮಯದಲ್ಲಿ ನೀವು ನಿಮ್ಮ ಮಕ್ಕಳ ಬಗ್ಗೆ ಗಮನ ಹರಿಸಬೇಕು.
ಸಮಸ್ಯೆಗಳನ್ನು ಉಂಟುಮಾಡುವ ಮಕ್ಕಳನ್ನು ನಿಭಾಯಿಸಲು ಕಷ್ಟವಾಗುತ್ತದೆ. ಆದ್ದರಿಂದ ಅವರೊಂದಿಗೆ ಕೆಲವು ರೀತಿಯ ದೈಹಿಕ ಚಟುವಟಿಕೆಗಳು ಅಥವಾ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಅವರ ಶಕ್ತಿಯನ್ನು ಕೇಂದ್ರೀಕರಿಸಲು ಅವರಿಗೆ ಸಹಾಯ ಮಾಡಿ.
ಕುಂಭ: ಕೆಲಸದಲ್ಲಿ ಮೆಚ್ಚುಗೆ
ಇಂದು ನಿಮ್ಮ ದಿನವು ಉತ್ತಮವಾಗಿರುತ್ತದೆ. ಕಂಪನಿಯ ಪರವಾಗಿ ನೀವು ವಿದೇಶ ಪ್ರವಾಸ ಮಾಡಬೇಕಾಗಬಹುದು. ಈ ರಾಶಿಯ ಮಹಿಳೆಯರಿಗೆ ಇಂದು ಶುಭ ದಿನ. ಒಳ್ಳೆಯ ಕಂಪನಿಯಿಂದ ಉದ್ಯೋಗಕ್ಕಾಗಿ ಕರೆ ಬರುತ್ತದೆ. ಇಂದು ಪ್ರೀತಿಪಾತ್ರರೊಂದಿಗಿನ ಸಂಬಂಧದಲ್ಲಿ ಮಾಧುರ್ಯ ಉಳಿಯುತ್ತದೆ. ನಿಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವಲ್ಲಿ ಮತ್ತು ನಿಮ್ಮ ಅಭಿಪ್ರಾಯಗಳನ್ನು ಇತರರು ಒಪ್ಪುವಂತೆ ಮಾಡುವಲ್ಲಿ ನೀವು ಹೆಚ್ಚು ಯಶಸ್ವಿಯಾಗುತ್ತೀರಿ. ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸಲು ಇಂದು ಉತ್ತಮ ದಿನವಾಗಿದೆ. ನೀವು ಉತ್ತಮ ಕೊಡುಗೆಯನ್ನು ಪಡೆಯಬಹುದು. ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ಲಕ್ಷ್ಮಿ ದೇವಿಯ ಆರಾಧನೆಯಿಂದ ನೀವು ಹಣ ಸಂಪಾದಿಸಬಹುದು.
ಈ ಸಮಯದಲ್ಲಿ ನಿಮ್ಮ ಮನೆ ಮತ್ತು ವಾಹನದ ಸುರಕ್ಷತೆಯ ಬಗ್ಗೆ ನೀವು ಎಚ್ಚರದಿಂದಿರಬೇಕು. ಕುಟುಂಬಸ್ಥರ ಆರೋಗ್ಯದ ಕಡೆಗೆ ಗಮನ ಕೊಡಿ. ಈ ಸಮಯದಲ್ಲಿ ಅವರ ಬಿಪಿ ಸಮಸ್ಯೆಗಳು ಹೆಚ್ಚಾಗಬಹುದು. ನಿಮ್ಮ ಸಂಗಾತಿಯ ಬಗ್ಗೆ ಸ್ವಲ್ಪ ಸ್ವಾಮ್ಯತೆ ಕಾಪಾಡಿಕೊಳ್ಳಿ. ಇದು ಸಂಬಂಧವನ್ನು ಗಟ್ಟಿಗೊಳಿಸುತ್ತದೆ. ನಿಮ್ಮ ಕೆಲಸದ ಸ್ಥಳದಲ್ಲಿ ಜ್ಞಾನದ ಹರಿವು ಹೆಚ್ಚಾಗಬಹುದು. ನೀವು ಸಾಕಷ್ಟು ಶಕ್ತಿಯನ್ನು ಒದಗಿಸಬೇಕಾಗಬಹುದು. ಕೆಲವೊಮ್ಮೆ ಇದು ನಿಮಗೆ ಕಠಿಣವಾಗುತ್ತದೆ. ಇದು ವೃಷಭ ರಾಶಿಯಲ್ಲಿ ಹಿಮ್ಮುಖ ಮಂಗಳ ಸಂಚಾರದ ಸಮಯದಲ್ಲಿ ನಿಮ್ಮನ್ನು ಕೆರಳಿಸುತ್ತದೆ.
ಮೀನ: ಬಡವರಿಗೆ ದಾನ ಮಾಡುವ ಮನೋಭಾವ
ಇಂದು ನೀವು ಬಡವರಿಗೆ ಸಹಾಯ ಮಾಡುವ ಮೂಲಕ ನಿಮ್ಮ ದಿನವನ್ನು ಪ್ರಾರಂಭಿಸುತ್ತೀರಿ. ನೀವು ಹಿರಿಯರ ಅಭಿಪ್ರಾಯವನ್ನು ಕೇಳುತ್ತೀರಿ. ಅವರ ಮಾತುಗಳನ್ನು ಪಾಲಿಸುತ್ತೀರಿ. ನೀವು ವಾಹನವನ್ನು ಖರೀದಿಸಲು ಯೋಜಿಸುತ್ತಿದ್ದರೆ, ಇಂದು ಶುಭ ದಿನವಾಗಿದೆ. ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ಇದರಿಂದಾಗಿ ಆರ್ಥಿಕ ಸ್ಥಿತಿಯು ಗಮನಾರ್ಹವಾಗಿ ಸುಧಾರಿಸುತ್ತದೆ. ಇಂದು ಕಚೇರಿಯಲ್ಲಿ ಅಪೂರ್ಣ ಕೆಲಸವನ್ನು ನೋಡಿ ಬಾಸ್ ಕೋಪಗೊಳ್ಳಬಹುದು. ಕಚೇರಿಯಲ್ಲಿನ ಅಧಿಕಾರಿಗಳು ಕೆಲಸದ ವಿಷಯದಲ್ಲಿ ನಿಮ್ಮ ಮೇಲೆ ಸ್ವಲ್ಪ ಒತ್ತಡ ಹೇರಬಹುದು. ನಿಮ್ಮ ಕೆಲಸವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವುದು ಉತ್ತಮ. ಬಡವರಿಗೆ ದಾನ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ.
ನೀವು ಸಾಕಷ್ಟು ಹಣವನ್ನು ಖರ್ಚು ಮಾಡಬಹುದು. ನಿಮಗೆ ಧೈರ್ಯ ಮತ್ತು ಇಚ್ಛಾ ಶಕ್ತಿಯ ಕೊರತೆ ಇರುತ್ತದೆ. ನಿಮ್ಮ ಸಂವಹನದಲ್ಲಿ ನಿಮಗೆ ಹೆಚ್ಚಾಗಿ ಕಿರಿಕಿರಿ ಉಂಟಾಗಬಹುದು. ಮನೆಯನ್ನು ಆರೋಗ್ಯವಾಗಿ ನೋಡಿಕೊಳ್ಳುವ ನಿಮ್ಮ ಗುಣ ತುಂಬಾ ಚೆನ್ನಾಗಿರುತ್ತದೆ. ಹಿಂದಿನ ಅನಾರೋಗ್ಯ ಅಥವಾ ಕಾಯಿಲೆಯಿಂದ ಚೇತರಿಸಿಕೊಳ್ಳಲು ವಿಳಂಬವಾಗಬಹುದು. ನಿಮ್ಮನ್ನು ಧಾರ್ಮಿಕ ಮತ್ತು ನಿಗೂಢ ಆಚರಣೆಗಳ ಕಡೆಗೆ ಒಲವು ತೋರುವಂತೆ ಮಾಡುತ್ತದೆ.