ವೃಷಭ ರಾಶಿಯ ಸ್ತ್ರೀಯರ ಪ್ರಣಯ ಕ್ಷಣದ ಆದ್ಯತೆಗಳು
ಜ್ಯೋತಿಷ್ಯದಲ್ಲಿ ಯಾವುದೆಲ್ಲ ವಿಚಾರಗಳನ್ನು ಹೇಳಲಾಗಿದೆ ಅಂದರೆ ಸಮುದ್ರದ ಮುಂದೆ ನಿಂತು ಅಗೋ ಅಲ್ಲಿಗೆ ಕೊನೆ ಎಂದು ಕೂಗಿದರೆ ಹೇಗೋ ಹಾಗಾಗುತ್ತದೆ. ಈ ದಿನದ ಲೇಖನದಲ್ಲಿ ದಾಂಪತ್ಯದ ಬಗ್ಗೆ ಅದರಲ್ಲೂ ಪತಿ ಮಹಾಶಯ ಪತ್ನಿ ಜತೆಗೆ ಉತ್ತುಂಗಕ್ಕೆ ಏರಬಹುದಾದ ಪ್ರಣಯ ಕ್ಷಣಗಳನ್ನು ತಿಳಿಸಲಾಗುತ್ತದೆ. ಇದು ಕೂಡ ಆಯಾ ರಾಶಿಗೆ ಅನ್ವಯ ಆಗುತ್ತದೆ.
ಈ ದಿನ ವೃಷಭ ರಾಶಿಯ ಸ್ತ್ರೀಯರ ಬಗ್ಗೆ ತಿಳಿಸಲಾಗುವುದು. ಈ ರಾಶಿಯ ಸ್ತ್ರೀಯರ ಕತ್ತಿನ ಭಾಗದಲ್ಲಿ ಲೈಂಗಿಕತೆಯನ್ನು ಉದ್ದೀಪನ ಮಾಡುವ ಅವಕಾಶ ಹೆಚ್ಚು. ನೆನಪಿಡಿ, ಕತ್ತಿನ ಭಾಗದಲ್ಲಿ ಬೆರಳುಗಳನ್ನು ಹರಿದಾಡಿಸಿದರೆ ಹಾಗೂ ನಿಮ್ಮ ಮುಖವನ್ನು ಕತ್ತಿನ ಭಾಗದಲ್ಲಿ ನೇವರಿಸಿದರೆ ಈ ರಾಶಿಯ ಸ್ತ್ರೀಯರು ಹೆಚ್ಚು ಸಂತುಷ್ಟಗೊಳ್ಳುತ್ತಾರೆ. ಅಷ್ಟೇ ಅಲ್ಲ, ಆ ನಂತರದ ಕ್ರಿಯೆಗೂ ಸನ್ನದ್ಧಗೊಳ್ಳುತ್ತಾರೆ.
ಇದು ದಂಪತಿಯ ಮಧ್ಯದ ವಿಚಾರವಾದ್ದರಿಂದ ಈ ಲೇಖನವನ್ನು ಅಶ್ಲೀಲದ ಸೋಂಕಿಲ್ಲದೆ ರಸಿಕತೆಯ ದೃಷ್ಟಿಕೋನದಿಂದ ಗಮನಿಸಬೇಕು. ಮದುವೆ ಸಂದರ್ಭದಲ್ಲಿ ಗಮನಿಸುವ ದ್ವಾದಶ ಕೂಟದಲ್ಲಿ ಯೋನಿ ಕೂಟ ಎಂಬುದಿದೆ. ಗಂಡ-ಹೆಂಡತಿಯ ಮಧ್ಯೆ ಲೈಂಗಿಕ ಆಸಕ್ತಿ ಹಾಗೂ ಸಾಮರ್ಥ್ಯ, ಪರಸ್ಪರ ಮೇಲಿನ ಆಕರ್ಷಣೆಯನ್ನು ಆ ಮೂಲಕ ತಿಳಿಯಬಹುದು.

ಲೈಂಗಿಕ ಆದ್ಯತೆ ಸೂಚಿಸುವ ಯೋನಿ ಕೂಟ
ಕೃತ್ತಿಕಾ ನಕ್ಷತ್ರದ ಮೂರು ಪಾದ, ರೋಹಿಣಿ ನಕ್ಷತ್ರದ ನಾಲ್ಕು ಪಾದ ಹಾಗೂ ಮೃಗಶಿರಾ ನಕ್ಷತ್ರದ ಮೊದಲ ಎರಡು ಪಾದ ವೃಷಭ ರಾಶಿಯಾಗುತ್ತದೆ. ಈ ನಕ್ಷತ್ರಗಳಿಗೆ ಕ್ರಮವಾಗಿ ಆಡು ಹಾಗೂ ಹಾವು ಯೋನಿ ಕೂಟವಾಗುತ್ತದೆ. ಈ ಪ್ರಾಣಿಗಳು ಆಯಾ ನಕ್ಷತ್ರದ ಸ್ತ್ರೀಯರ ಲೈಂಗಿಕ ಆದ್ಯತೆಯನ್ನು, ಸ್ವಭಾವವನ್ನು ಸೂಚಿಸುತ್ತವೆ.

ಅಚ್ಚರಿ ಇಷ್ಟಪಡುವ ವೃಷಭ ರಾಶಿ ಸ್ತ್ರೀಯರು
ವೃಷಭ ರಾಶಿಯ ಸ್ತ್ರೀಯರಿಗೆ ಅಚ್ಚರಿಯನ್ನು ನೀಡುವುದು ಇಷ್ಟವಾಗುತ್ತದೆ. ಮನೆಯಲ್ಲಿ ಒಬ್ಬರೇ ಇರುವಾಗ ಹಿಂದಿನಿಂದ ಬಂದು ಆವರಿಸಿಕೊಳ್ಳುವ ಪತಿಯ ರೀತಿಯನ್ನು ಇಷ್ಟಪಡುವ ಈ ರಾಶಿಯ ಸ್ತ್ರೀಯರ ಪ್ರಣಯ ಆಸಕ್ತಿಯನ್ನು ಕೆರಳಿಸಲು ಕುತ್ತಿಗೆ ಭಾಗ ಸೂಕ್ತ.

'ನಾಗಿಣಿ' ಕೆರಳದಂತೆ ಎಚ್ಚರ ವಹಿಸಿ
ಹಾಗಂತ ಹಿಡಿತ ಬಿಗಿ ಮಾಡಿದರೆ 'ನಾಗಿಣಿ'ಗೆ ಕೆರಳಿ ಬಿಡುತ್ತದೆ. ಈ ರಾಶಿಯ ಸ್ತ್ರೀಯರ ಮೇಲೆ ಪತಿ ರಾಯರು ಪ್ರಭುತ್ವ ಸಾಧಿಸಲು ಪ್ರಯತ್ನಿಸಿದರೆ ಅದು ಬಹಳ ಕಷ್ಟ. ಹಾಗೂ ಅವರ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು ಕೆಲವೊಮ್ಮೆ ಈ ರಾಶಿ ಸ್ತ್ರೀಯರಿಗೇ ಮುಂದಾಳತ್ವ ಬಿಟ್ಟುಕೊಡಬೇಕಾಗುತ್ತದೆ.

ಸ್ವಲ್ಪ ಮಟ್ಟಿಗೆ ಆಲಸಿಗಳು
ಈ ರಾಶಿಯ ಸ್ತ್ರೀಯರು ಸ್ವಲ್ಪ ಮಟ್ಟಿಗೆ ಆಲಸಿಗಳು ಹಾಗೂ ಪತಿಯ ಆಸಕ್ತಿಗೆ ತಕ್ಕಂತೆ ಸ್ಪಂದಿಸದ ಸಾಧ್ಯತೆಗಳು ಹೆಚ್ಚಿರುತ್ತವೆ. ಇದನ್ನೇ ಮುಂದು ಮಾಡಿಕೊಂಡು ಹೀಯಾಳಿಸುವುದು, ಮೂದಲಿಸುವುದು ಮಾಡಿದರೆ ಆ ನಂತರದ ಪರಿಣಾಮ ಎದುರಿಸಲು ಸಿದ್ಧರಾಗಿರಬೇಕಾಗುತ್ತದೆ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications