ವೃಷಭ ರಾಶಿಯ ಸ್ತ್ರೀಯರ ಪ್ರಣಯ ಕ್ಷಣದ ಆದ್ಯತೆಗಳು
ಜ್ಯೋತಿಷ್ಯದಲ್ಲಿ ಯಾವುದೆಲ್ಲ ವಿಚಾರಗಳನ್ನು ಹೇಳಲಾಗಿದೆ ಅಂದರೆ ಸಮುದ್ರದ ಮುಂದೆ ನಿಂತು ಅಗೋ ಅಲ್ಲಿಗೆ ಕೊನೆ ಎಂದು ಕೂಗಿದರೆ ಹೇಗೋ ಹಾಗಾಗುತ್ತದೆ. ಈ ದಿನದ ಲೇಖನದಲ್ಲಿ ದಾಂಪತ್ಯದ ಬಗ್ಗೆ ಅದರಲ್ಲೂ ಪತಿ ಮಹಾಶಯ ಪತ್ನಿ ಜತೆಗೆ ಉತ್ತುಂಗಕ್ಕೆ ಏರಬಹುದಾದ ಪ್ರಣಯ ಕ್ಷಣಗಳನ್ನು ತಿಳಿಸಲಾಗುತ್ತದೆ. ಇದು ಕೂಡ ಆಯಾ ರಾಶಿಗೆ ಅನ್ವಯ ಆಗುತ್ತದೆ.
ಈ ದಿನ ವೃಷಭ ರಾಶಿಯ ಸ್ತ್ರೀಯರ ಬಗ್ಗೆ ತಿಳಿಸಲಾಗುವುದು. ಈ ರಾಶಿಯ ಸ್ತ್ರೀಯರ ಕತ್ತಿನ ಭಾಗದಲ್ಲಿ ಲೈಂಗಿಕತೆಯನ್ನು ಉದ್ದೀಪನ ಮಾಡುವ ಅವಕಾಶ ಹೆಚ್ಚು. ನೆನಪಿಡಿ, ಕತ್ತಿನ ಭಾಗದಲ್ಲಿ ಬೆರಳುಗಳನ್ನು ಹರಿದಾಡಿಸಿದರೆ ಹಾಗೂ ನಿಮ್ಮ ಮುಖವನ್ನು ಕತ್ತಿನ ಭಾಗದಲ್ಲಿ ನೇವರಿಸಿದರೆ ಈ ರಾಶಿಯ ಸ್ತ್ರೀಯರು ಹೆಚ್ಚು ಸಂತುಷ್ಟಗೊಳ್ಳುತ್ತಾರೆ. ಅಷ್ಟೇ ಅಲ್ಲ, ಆ ನಂತರದ ಕ್ರಿಯೆಗೂ ಸನ್ನದ್ಧಗೊಳ್ಳುತ್ತಾರೆ.
ಇದು ದಂಪತಿಯ ಮಧ್ಯದ ವಿಚಾರವಾದ್ದರಿಂದ ಈ ಲೇಖನವನ್ನು ಅಶ್ಲೀಲದ ಸೋಂಕಿಲ್ಲದೆ ರಸಿಕತೆಯ ದೃಷ್ಟಿಕೋನದಿಂದ ಗಮನಿಸಬೇಕು. ಮದುವೆ ಸಂದರ್ಭದಲ್ಲಿ ಗಮನಿಸುವ ದ್ವಾದಶ ಕೂಟದಲ್ಲಿ ಯೋನಿ ಕೂಟ ಎಂಬುದಿದೆ. ಗಂಡ-ಹೆಂಡತಿಯ ಮಧ್ಯೆ ಲೈಂಗಿಕ ಆಸಕ್ತಿ ಹಾಗೂ ಸಾಮರ್ಥ್ಯ, ಪರಸ್ಪರ ಮೇಲಿನ ಆಕರ್ಷಣೆಯನ್ನು ಆ ಮೂಲಕ ತಿಳಿಯಬಹುದು.

ಲೈಂಗಿಕ ಆದ್ಯತೆ ಸೂಚಿಸುವ ಯೋನಿ ಕೂಟ
ಕೃತ್ತಿಕಾ ನಕ್ಷತ್ರದ ಮೂರು ಪಾದ, ರೋಹಿಣಿ ನಕ್ಷತ್ರದ ನಾಲ್ಕು ಪಾದ ಹಾಗೂ ಮೃಗಶಿರಾ ನಕ್ಷತ್ರದ ಮೊದಲ ಎರಡು ಪಾದ ವೃಷಭ ರಾಶಿಯಾಗುತ್ತದೆ. ಈ ನಕ್ಷತ್ರಗಳಿಗೆ ಕ್ರಮವಾಗಿ ಆಡು ಹಾಗೂ ಹಾವು ಯೋನಿ ಕೂಟವಾಗುತ್ತದೆ. ಈ ಪ್ರಾಣಿಗಳು ಆಯಾ ನಕ್ಷತ್ರದ ಸ್ತ್ರೀಯರ ಲೈಂಗಿಕ ಆದ್ಯತೆಯನ್ನು, ಸ್ವಭಾವವನ್ನು ಸೂಚಿಸುತ್ತವೆ.

ಅಚ್ಚರಿ ಇಷ್ಟಪಡುವ ವೃಷಭ ರಾಶಿ ಸ್ತ್ರೀಯರು
ವೃಷಭ ರಾಶಿಯ ಸ್ತ್ರೀಯರಿಗೆ ಅಚ್ಚರಿಯನ್ನು ನೀಡುವುದು ಇಷ್ಟವಾಗುತ್ತದೆ. ಮನೆಯಲ್ಲಿ ಒಬ್ಬರೇ ಇರುವಾಗ ಹಿಂದಿನಿಂದ ಬಂದು ಆವರಿಸಿಕೊಳ್ಳುವ ಪತಿಯ ರೀತಿಯನ್ನು ಇಷ್ಟಪಡುವ ಈ ರಾಶಿಯ ಸ್ತ್ರೀಯರ ಪ್ರಣಯ ಆಸಕ್ತಿಯನ್ನು ಕೆರಳಿಸಲು ಕುತ್ತಿಗೆ ಭಾಗ ಸೂಕ್ತ.

'ನಾಗಿಣಿ' ಕೆರಳದಂತೆ ಎಚ್ಚರ ವಹಿಸಿ
ಹಾಗಂತ ಹಿಡಿತ ಬಿಗಿ ಮಾಡಿದರೆ 'ನಾಗಿಣಿ'ಗೆ ಕೆರಳಿ ಬಿಡುತ್ತದೆ. ಈ ರಾಶಿಯ ಸ್ತ್ರೀಯರ ಮೇಲೆ ಪತಿ ರಾಯರು ಪ್ರಭುತ್ವ ಸಾಧಿಸಲು ಪ್ರಯತ್ನಿಸಿದರೆ ಅದು ಬಹಳ ಕಷ್ಟ. ಹಾಗೂ ಅವರ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು ಕೆಲವೊಮ್ಮೆ ಈ ರಾಶಿ ಸ್ತ್ರೀಯರಿಗೇ ಮುಂದಾಳತ್ವ ಬಿಟ್ಟುಕೊಡಬೇಕಾಗುತ್ತದೆ.

ಸ್ವಲ್ಪ ಮಟ್ಟಿಗೆ ಆಲಸಿಗಳು
ಈ ರಾಶಿಯ ಸ್ತ್ರೀಯರು ಸ್ವಲ್ಪ ಮಟ್ಟಿಗೆ ಆಲಸಿಗಳು ಹಾಗೂ ಪತಿಯ ಆಸಕ್ತಿಗೆ ತಕ್ಕಂತೆ ಸ್ಪಂದಿಸದ ಸಾಧ್ಯತೆಗಳು ಹೆಚ್ಚಿರುತ್ತವೆ. ಇದನ್ನೇ ಮುಂದು ಮಾಡಿಕೊಂಡು ಹೀಯಾಳಿಸುವುದು, ಮೂದಲಿಸುವುದು ಮಾಡಿದರೆ ಆ ನಂತರದ ಪರಿಣಾಮ ಎದುರಿಸಲು ಸಿದ್ಧರಾಗಿರಬೇಕಾಗುತ್ತದೆ.
-
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ












Click it and Unblock the Notifications