ಸಿಂಹಿಣಿಯ ಬೆನ್ನು ತಾಗಿಸಿ ಉತ್ತೇಜನ ನೀಡಿದರೆ ಸುಖದ ಹಾದಿ
ಮದುವೆಯ ಸಂದರ್ಭದಲ್ಲಿ ಜ್ಯೋತಿಷಿಗಳ ಬಳಿಗೆ ಹೋಗಿ ಗಂಡು- ಹೆಣ್ಣಿನ ಜಾತಕ ತೋರಿಸಿ, ಇಬ್ಬರಿಗೂ ಹೊಂದಾಣಿಕೆ ಹೇಗಿರುತ್ತದೆ ಎಂದು ಕೇಳುವುದು ವಾಡಿಕೆ. ಅದೇ ರೀತಿ ಕೂಟಗಳು ಮತ್ತು ಗುಣ ಇಷ್ಟು ಎಂದು ಲೆಕ್ಕ ಹಾಕಿ ಜ್ಯೋತಿಷಿಗಳು ಬರೆದು ಕೊಟ್ಟು, ಮದುವೆ ಮಾಡಬಹುದೋ ಇಲ್ಲವೋ ಎಂಬುದನ್ನು ತಿಳಿಸುತ್ತಾರೆ. ಈ ಪರಿಪಾಠ ಹಿಂದಿನಿಂದಲೂ ನಡೆದುಬಂದಿದೆ.
ಗುಣ-ಕೂಟ ಇವೆಲ್ಲ ಯಾಕೆ ನೋಡಬೇಕ್ರಿ, ಇಬ್ಬರು ಪರಸ್ಪರ ಒಪ್ಪಿದ ಮೇಲೆ ಪಂಚಾಂಗ ನೋಡಿಕೊಂಡು ಏನು ಹೇಳುವುದಕ್ಕೆ ಸಾಧ್ಯ ಎಂದು ಪ್ರಶ್ನೆ ಮಾಡುವವರೂ ಇದ್ದಾರೆ. ಖಂಡಿತಾ ಹೇಳಬಹುದು. ಗಂಡು-ಹೆಣ್ಣಿನ ಮಧ್ಯೆ ಸಾಮರಸ್ಯ ಸಾಧ್ಯವೇ ಎಂಬುದನ್ನು ತಿಳಿಯುವುದಕ್ಕೆ ಅಂತಲೇ ಈ ಗುಣ- ಕೂಟ ಎಂಬುದನ್ನೆಲ್ಲ ನೋಡುವುದು.
ಗ್ರಹಮೈತ್ರಿಕೂಟ, ನಾಡಿಕೂಟ, ಯೋನಿಕೂಟ ಎಂಬುದೆಲ್ಲ ಬಹಳ ಮುಖ್ಯವಾಗಿ ಗಮನಿಸಲೇಬೇಕು. ಇರಲಿ, ಇಂದಿನ ಲೇಖನದಲ್ಲಿ ಸಿಂಹ ರಾಶಿಯ ಸ್ತ್ರೀಯರ ಪ್ರಣಯದ ಆದ್ಯತೆಗಳು ಹೇಗಿರುತ್ತವೆ? ಅವರಿಗೆ ಯಾವ ಸ್ಪರ್ಶ ಹೆಚ್ಚು ಉದ್ದೀಪನಗೊಳಿಸುತ್ತದೆ ಮತ್ತಿತರ ವಿವರಗಳನ್ನು ನೋಡೋಣ. ಈ ಲೇಖನಕ್ಕೆ ಅಶ್ಲೀಲದ ಸೋಂಕಿಲ್ಲ. ಇದನ್ನು ಜ್ಯೋತಿಷ್ಯದ ಹಿನ್ನೆಲೆಯಲ್ಲೇ ಗಮನಿಸಬೇಕು.

ಇಲಿ ಹಾಗೂ ಹಸು
ಮಖಾ, ಪುಬ್ಬಾ ಹಾಗೂ ಉತ್ತರಾ ಫಲ್ಗುಣಿ ನಕ್ಷತ್ರದ ಒಂದು ಪಾದ ಸೇರಿ ಸಿಂಹರಾಶಿ ಆಗುತ್ತದೆ. ಇನ್ನು ಯೋನಿ ಕೂಟದ ವಿಚಾರಕ್ಕೆ ಬಂದರೆ, ಮಖಾ ಹಾಗೂ ಪುಬ್ಬಾ ನಕ್ಶ್ಶತ್ರ ಇಲಿಯಾದರೆ, ಉತ್ತರಾ ಫಲ್ಗುಣಿ ನಕ್ಷತ್ರಕ್ಕೆ ಹಸು ಆಗುತ್ತದೆ. ಇವುಗಳ ಆಧಾರದಲ್ಲಿ ಈ ರಾಶಿಯ ಸ್ತ್ರೀಯರ ಲೈಂಗಿಕ ಆದ್ಯತೆಗಳನ್ನು ತಿಳಿದುಕೊಳ್ಳಬಹುದು.

ಬೆನ್ನು ಭಾಗ ಭಾವನೆಗಳನ್ನು ಕೆರಳಿಸುತ್ತದೆ
ಸಿಂಹ ರಾಶಿ ಸ್ತ್ರೀಯರ ಬೆನ್ನು ಭಾಗ ಭಾವನೆಗಳನ್ನು ಕೆರಳಿಸುತ್ತದೆ. ಜವಾಬ್ದಾರಿ ನಿರ್ವಹಿಸುವುದರಲ್ಲಿ ಎತ್ತಿದ ಕೈ ಎನಿಸಿಕೊಂಡ ಈ ಮಹಿಳೆಯರ ಬೆನ್ನಿನ ಭಾಗದಲ್ಲಿ ಮೃದುವಾಗಿ ಓಡಾಡುವ ಕೈ ಮುಂದಿನ ಕ್ರಿಯೆಗೆ ಇವರನ್ನು ಸನ್ನದ್ಧಗೊಳಿಸುತ್ತದೆ. ಆದರೆ ಇವರು ಬಾಯಿ ಬಿಟ್ಟು ಏನನ್ನಾದರೂ ಹೇಳುವುದೇ ಅಪರೂಪ.

ಮೂಡ್ ಗಮನಿಸಿ
ಈ ರಾಶಿ ಹೆಣ್ಣುಮಕ್ಕಳು ಪತಿಯ ಮೇಲೆ ಸಂಸಾರದ ಹೆಚ್ಚಿನ ಒತ್ತಡ ಹಾಕಲು ಇಷ್ಟಪಡುವುದಿಲ್ಲ. ಆದರೆ ಎಲ್ಲಕ್ಕೂ ತನ್ನನ್ನು ಕೇಳಬೇಕು ಎಂದು ಬಯಸುತ್ತಾರೆ. ಪ್ರಣಯದ ವಿಷಯದಲ್ಲೂ ಅಷ್ಟೇ. ಅವರ ಭಾವನೆ ಹಾಗೂ ಮೂಡ್ ನ ನೋಡಿ ಪತಿ ರಾಯರು ವರ್ತಿಸದಿದ್ದರೆ ಸಿಂಹಿಣಿಯ ಕೋಪ ವಿಪರೀತವಾಗುತ್ತದೆ.

ಆಧುನಿಕ ಸೌಲಭ್ಯ ಇಷ್ಟ ಪಡುತ್ತಾರೆ
ವಿಪರೀತ ನೇರವಾಗಿ ಮಾತನಾಡುವ ಈ ರಾಶಿಯ ಸ್ತ್ರೀಯರಿಗೆ ಕೊಟ್ಟ ಮಾತು ಈಡೇರಿಸದಿದ್ದರಂತೂ ರಂಪ-ರಾಮಾಯಣ ಕಟ್ಟಿಟ್ಟ ಬುತ್ತಿ. ನಗರ ಪ್ರದೇಶ, ರೆಸಾರ್ಟ್, ಸ್ವಿಮಿಂಗ್ ಪೂಲ್...ಒಟ್ಟಾರೆ ಆಧುನಿಕ ಸೌಲಭ್ಯಗಳು ಇರುವಂಥ ಸ್ಥಳಗಳಲ್ಲಿ ಇವರು ಹೆಚ್ಚಾಗಿ ಸಮಯ ಕಳೆಯಲು ಇಷ್ಟಪಡುತ್ತಾರೆ. ಆದರೆ ಭವಿಷ್ಯದ ಬಗ್ಗೆಯೇ ವಿಪರೀತ ಯೋಚನೆ ಮಾಡುತ್ತಾರೆ. ಈ ವಿಷಯದಲ್ಲಿ ಉತ್ತರಾ ನಕ್ಷತ್ರದ ಸ್ತ್ರೀಯರು ಸ್ವಲ್ಪ ಭಿನ್ನ.
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications