Get Updates
Get notified of breaking news, exclusive insights, and must-see stories!

ಜನವರಿ 1 ರ ದಿನ ಭವಿಷ್ಯ: ಈ ರಾಶಿಯವರಿಗೆ ಕೆಲಸದಲ್ಲಿ ಹತ್ತಾರು ಸವಾಲು

ಹೊಸ ವರ್ಷದ ಮೊದಲ ದಿನವಾದ ಜನವರಿ 1 ರಂದು ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ ಎನ್ನುವ ವಿವರ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದಿರುವ ದಿನ ಭವಿಷ್ಯ. ಇಂದಿನ ಪಂಚಾಂಗ ವಿವರ ಹೀಗಿದೆ: ಜನವರಿ 1 ರ ಗುರುವಾರ ವಿಶ್ವಾವಸು ನಾಮ ಸಂವತ್ಸರದ ದಕ್ಷಿಣಾಯನ ಹೇಮಂತ ಋತು ಪುಷ್ಯ ಶುದ್ಧ ತ್ರಯೋದಶಿ. ಇದು ಧನು ಮಾಸದ 17ನೇ ದಿನ. ರಾಹುಕಾಲ ಮಧ್ಯಾಹ್ನ 12 ರಿಂದ 1:30 ರ ವರೆಗೆ ಇರುತ್ತದೆ. (ಬರಹ: ಪಂಡಿತ್ ವಿಠ್ಠಲ್ ಭಟ್)

ಮೇಷ: ಸಹನೆಗೆ ಸವಾಲು

ಹೊಸ ವರ್ಷದ ಆರಂಭದಲ್ಲೇ ನಿಮ್ಮ ಧೈರ್ಯ, ಆತ್ಮವಿಶ್ವಾಸ ಮತ್ತು ಸಹನಶೀಲತೆಯನ್ನು ಪರೀಕ್ಷಿಸುವ ಸಂದರ್ಭಗಳು ಎದುರಾಗುತ್ತವೆ. ಅತುರ ಅಥವಾ ಕೋಪದ ನಿರ್ಧಾರಗಳು ಸಮಸ್ಯೆ ಹೆಚ್ಚಿಸಬಹುದು. ಸಂಯಮ, ಶಾಂತ ಮನಸ್ಸು ಮತ್ತು ವಿವೇಕದಿಂದ ನಡೆದುಕೊಂಡರೆ ದಿನದ ಅಂತ್ಯಕ್ಕೆ ಸಮಾಧಾನಕರ ಫಲ ಸಿಗುತ್ತದೆ. ಕೆಲಸದ ವಿಚಾರದಲ್ಲಿ ಜವಾಬ್ದಾರಿ ಹೆಚ್ಚಾಗಬಹುದು, ಆದರೆ ಅದನ್ನು ನಿಭಾಯಿಸುವ ಶಕ್ತಿ ನಿಮ್ಮಲ್ಲಿದೆ.

ಅದೃಷ್ಟ: 1 | ಬಣ್ಣ: ಕೆಂಪು | ದಿಕ್ಕು: ಪೂರ್ವ | ದೇವರು: ದತ್ತಾತ್ರೇಯ

January 1st Daily horoscope predictions for all zodiac signs from Mesha rashi to Meena

ವೃಷಭ: ಕೆಲಸದಲ್ಲಿ ನಿಧಾನ ಪ್ರಗತಿ

ಹಣಕಾಸು ವಿಚಾರದಲ್ಲಿ ಇಂದು ಎಚ್ಚರಿಕೆಯಿಂದ ನಡೆದುಕೊಳ್ಳುವುದು ಅಗತ್ಯ. ಅನಗತ್ಯ ಖರ್ಚು ಅಥವಾ ಸಾಲದ ನಿರ್ಧಾರಗಳನ್ನು ಮುಂದೂಡುವುದು ಒಳಿತು. ಕುಟುಂಬ ಸದಸ್ಯರ ಸಲಹೆ ಹಾಗೂ ಅನುಭವ ನಿಮಗೆ ಮಾರ್ಗದರ್ಶನವಾಗುತ್ತದೆ. ಮನೆಯಲ್ಲಿ ಶಾಂತ ವಾತಾವರಣ ಇರುತ್ತದೆ. ಕೆಲಸದಲ್ಲಿ ನಿಧಾನವಾದ ಪ್ರಗತಿ ಕಂಡರೂ, ಅದೇ ಮುಂದಿನ ದಿನಗಳಿಗೆ ಭದ್ರ ನೆಲೆ ಸಿದ್ಧಪಡಿಸುತ್ತದೆ.

ಅದೃಷ್ಟ: 6 | ಬಣ್ಣ: ಬಿಳಿ | ದಿಕ್ಕು: ದಕ್ಷಿಣ | ದೇವರು: ಲಕ್ಷ್ಮೀ

ಮಿಥುನ: ಹಿರಿಯರ ಸಲಹೆ ನಿರ್ಲಕ್ಷಿಸದಿರಿ

ಇಂದು ಹೊಸ ಯೋಜನೆಗಳು, ಮುಂದಿನ ಗುರಿಗಳ ಬಗ್ಗೆ ಚಿಂತಿಸಲು ಸೂಕ್ತ ದಿನ. ಬುದ್ಧಿ ಮತ್ತು ಸಂವಹನ ಶಕ್ತಿ ಉತ್ತಮವಾಗಿರುತ್ತದೆ. ಆದರೆ ತ್ವರಿತ ನಿರ್ಧಾರಗಳು ಅಥವಾ ಆತುರದ ಮಾತುಗಳಿಂದ ತಪ್ಪು ಸಂಭವಿಸಬಹುದು. ಮಹತ್ವದ ವಿಷಯಗಳಲ್ಲಿ ಹಿರಿಯರ ಸಲಹೆ ಪಡೆದುಕೊಳ್ಳುವುದು ಲಾಭಕರ. ಓದು, ಬರವಣಿಗೆ, ಸಂಶೋಧನೆಗೆ ಉತ್ತಮ ದಿನ.

ಅದೃಷ್ಟ: 5 | ಬಣ್ಣ: ಹಳದಿ | ದಿಕ್ಕು: ಉತ್ತರ | ದೇವರು: ವಿಷ್ಣು

ಕರ್ಕಾಟಕ: ಕಾಡುವ ನೆನಪುಗಳು

ಹಳೆಯ ನೆನಪುಗಳು ಅಥವಾ ಬಾಕಿ ಉಳಿದ ವಿಚಾರಗಳು ಇಂದು ಮನಸ್ಸನ್ನು ಕಾಡುವ ಸಾಧ್ಯತೆ ಇದೆ. ಭಾವನಾತ್ಮಕವಾಗಿ ದುರ್ಬಲವಾಗುವ ಸಂದರ್ಭ ಬಂದರೂ, ಧನಾತ್ಮಕ ಚಿಂತನೆ ನಿಮ್ಮನ್ನು ಉಳಿಸುತ್ತದೆ. ಕುಟುಂಬದೊಂದಿಗೆ ಸಮಯ ಕಳೆಯುವುದು ಮನಸ್ಸಿಗೆ ನೆಮ್ಮದಿ ಕೊಡುತ್ತದೆ. ಹಣಕಾಸಿನಲ್ಲಿ ದೊಡ್ಡ ನಿರ್ಧಾರಗಳನ್ನು ತಪ್ಪಿಸುವುದು ಒಳಿತು.

ಅದೃಷ್ಟ: 2 | ಬಣ್ಣ: ಬೆಳ್ಳಿ | ದಿಕ್ಕು: ಪಶ್ಚಿಮ | ದೇವರು: ಚಂದ್ರ

ಸಿಂಹ: ನಾಯಕತ್ವ ಗುಣಕ್ಕೆ ಮಹತ್ವ

ನಿಮ್ಮ ಮಾತು, ಅಭಿಪ್ರಾಯ ಮತ್ತು ನಾಯಕತ್ವ ಗುಣಗಳಿಗೆ ಇಂದು ಮಹತ್ವ ಸಿಗುತ್ತದೆ. ಅಧಿಕಾರಿಗಳು ಅಥವಾ ಹಿರಿಯರು ನಿಮ್ಮ ಕಾರ್ಯಶೈಲಿಯನ್ನು ಗಮನಿಸುತ್ತಾರೆ. ಆತ್ಮವಿಶ್ವಾಸ ಹೆಚ್ಚಿದ್ದರೂ, ಅಹಂಕಾರದಿಂದ ದೂರ ಇರುವುದು ಒಳ್ಳೆಯದು. ಸಾಮಾಜಿಕವಾಗಿ ಗೌರವ ಹೆಚ್ಚಾಗುವ ದಿನ. ಕೆಲಸದಲ್ಲಿ ನಿಮ್ಮ ನಿರ್ಧಾರಗಳು ಭವಿಷ್ಯದಲ್ಲಿ ಲಾಭ ಕೊಡಲಿವೆ.

ಅದೃಷ್ಟ: 1 | ಬಣ್ಣ: ಕಿತ್ತಳೆ | ದಿಕ್ಕು: ಪೂರ್ವ | ದೇವರು: ಸೂರ್ಯ

ಕನ್ಯಾ: ನಿರ್ಲಕ್ಷ್ಯ ಮನೋಭಾವದಿಂದ ಹತ್ತಾರು ಸಮಸ್ಯೆ

ಕೆಲಸದಲ್ಲಿ ಸಣ್ಣ ತಪ್ಪು ಅಥವಾ ನಿರ್ಲಕ್ಷ್ಯದಿಂದ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಪ್ರತಿಯೊಂದು ವಿಷಯವನ್ನು ಪರಿಶೀಲನೆ ಮಾಡಿಕೊಂಡು ಮುಂದುವರಿಯುವುದು ಅಗತ್ಯ. ಆರೋಗ್ಯದ ಕಡೆ ಸ್ವಲ್ಪ ಗಮನ ಕೊಡಿ. ದಿನದ ಮಧ್ಯ ಭಾಗದಲ್ಲಿ ಒತ್ತಡ ಇದ್ದರೂ, ಸಂಜೆ ವೇಳೆಗೆ ನೆಮ್ಮದಿ ಸಿಗುತ್ತದೆ. ಶ್ರಮ ವ್ಯರ್ಥವಾಗುವುದಿಲ್ಲ.

ಅದೃಷ್ಟ: 4 | ಬಣ್ಣ: ಹಸಿರು | ದಿಕ್ಕು: ಉತ್ತರ | ದೇವರು: ದುರ್ಗಾ

ತುಲಾ: ಸಂಬಂಧ ನಿರ್ವಹಣೆಗೆ ಇರಲಿ ಗಮನ

ಸಂಬಂಧಗಳಲ್ಲಿ ಸಮತೋಲನ ಕಾಪಾಡಿಕೊಳ್ಳುವುದು ಅತ್ಯಂತ ಅಗತ್ಯ. ಮಾತಿನಲ್ಲಿ ಶಾಂತಿ, ಸಹನೆ ಮತ್ತು ಮೃದುತ್ವ ಇದ್ದರೆ ಸಮಸ್ಯೆಗಳು ಸುಲಭವಾಗಿ ಬಗೆಹರಿಯುತ್ತವೆ. ದಾಂಪತ್ಯ ಅಥವಾ ಸ್ನೇಹ ಸಂಬಂಧಗಳಲ್ಲಿ ಸ್ಪಷ್ಟತೆ ಬೇಕಾಗುತ್ತದೆ. ಹಣಕಾಸಿನಲ್ಲಿ ಸ್ಥಿರತೆ ಇದ್ದರೂ, ಅನಗತ್ಯ ಚರ್ಚೆಗಳಿಂದ ದೂರವಿರುವುದು ಒಳಿತು.

ಅದೃಷ್ಟ: 6 | ಬಣ್ಣ: ಗುಲಾಬಿ | ದಿಕ್ಕು: ಪಶ್ಚಿಮ | ದೇವರು: ಲಕ್ಷ್ಮೀ

ವೃಶ್ಚಿಕ: ಅತಿ ನಂಬಿಕೆ ಸಲ್ಲದು

ಗುಪ್ತ ಶತ್ರುಗಳು ಅಥವಾ ನಿಮ್ಮಿಂದ ಮುಚ್ಚಿಟ್ಟಿರುವ ವಿಚಾರಗಳು ಇಂದು ನಿಮ್ಮ ಗಮನಕ್ಕೆ ಬರಬಹುದು. ಅತಿಯಾದ ನಂಬಿಕೆ ಅಥವಾ ರಹಸ್ಯ ಹಂಚಿಕೆ ತಪ್ಪಿಸಿ. ನಿಮ್ಮ ದೃಢ ನಿಲುವು ಮತ್ತು ಆತ್ಮವಿಶ್ವಾಸ ನಿಮ್ಮನ್ನು ರಕ್ಷಿಸುತ್ತದೆ. ಕೆಲಸದಲ್ಲಿ ಧೈರ್ಯದಿಂದ ಮುಂದುವರಿಯಿರಿ. ಇಂದು ತಾಳ್ಮೆಯೇ ನಿಮ್ಮ ದೊಡ್ಡ ಶಕ್ತಿ.

ಅದೃಷ್ಟ: 9 | ಬಣ್ಣ: ಕೆಂಪು | ದಿಕ್ಕು: ದಕ್ಷಿಣ | ದೇವರು: ಸುಬ್ರಹ್ಮಣ್ಯ

ಧನು: ಅಧ್ಯಾತ್ಮ ಚಿಂತನೆಗೆ ಅತ್ಯುತ್ತಮ ದಿನ

ಕಲಿಕೆ, ಅಧ್ಯಯನ, ಮಾರ್ಗದರ್ಶನ ಮತ್ತು ಆಧ್ಯಾತ್ಮಿಕ ಚಿಂತನೆಗೆ ಅತ್ಯುತ್ತಮ ದಿನ. ಹಿರಿಯರು ಅಥವಾ ಗುರುಗಳ ಆಶೀರ್ವಾದದಿಂದ ಮಾನಸಿಕ ಬಲ ಹೆಚ್ಚಾಗುತ್ತದೆ. ಹೊಸ ವಿಷಯ ಕಲಿಯುವ ಆಸಕ್ತಿ ಮೂಡುತ್ತದೆ. ಪ್ರಯಾಣ ಅಥವಾ ಸಂಭಾಷಣೆಗಳಿಂದ ಲಾಭ ಸಾಧ್ಯ. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವ ಅವಕಾಶ ಸಿಗಬಹುದು.

ಅದೃಷ್ಟ: 3 | ಬಣ್ಣ: ಹಳದಿ | ದಿಕ್ಕು: ಈಶಾನ್ಯ | ದೇವರು: ಗುರು

ಮಕರ: ಶ್ರಮಕ್ಕೆ ತಕ್ಕ ಪ್ರತಿಫಲ

ಜವಾಬ್ದಾರಿಗಳು ಹೆಚ್ಚಾಗುವ ದಿನ. ಕೆಲಸದ ಒತ್ತಡದಿಂದ ಸ್ವಲ್ಪ ದಣಿವು ಕಂಡರೂ, ನಿಮ್ಮ ಶ್ರಮಕ್ಕೆ ತಕ್ಕ ಫಲ ಸಮಯಕ್ಕೆ ತಕ್ಕಂತೆ ಸಿಗಲಿದೆ. ತಕ್ಷಣ ಫಲ ನಿರೀಕ್ಷಿಸದೇ ಸಹನದಿಂದ ಮುಂದುವರಿಯಿರಿ. ಹಿರಿಯರೊಂದಿಗೆ ಅಸಮ್ಮತಿ ತಪ್ಪಿಸುವುದು ಒಳಿತು. ಸಂಜೆ ವೇಳೆಗೆ ಮನಸ್ಸು ಸ್ವಲ್ಪ ಹಗುರಾಗುತ್ತದೆ.

ಅದೃಷ್ಟ: 8 | ಬಣ್ಣ: ನೀಲಿ | ದಿಕ್ಕು: ಪಶ್ಚಿಮ | ದೇವರು: ಶನಿ

ಕುಂಭ: ವಿಭಿನ್ನ ಚಿಂತನೆ

ಹೊಸ ಆಲೋಚನೆಗಳು, ವಿಭಿನ್ನ ಚಿಂತನೆಗಳು ಮನಸ್ಸಿನಲ್ಲಿ ಮೂಡುತ್ತವೆ. ಆದರೆ ಅವನ್ನು ಎಲ್ಲರೊಂದಿಗೆ ಹಂಚಿಕೊಳ್ಳದೇ ಸಮಯಕ್ಕೆ ಕಾಯುವುದು ಒಳಿತು. ಸ್ನೇಹಿತರಿಂದ ಸಹಾಯ ಸಿಗಬಹುದು. ಹಣಕಾಸಿನಲ್ಲಿ ಸ್ಥಿರತೆ ಇದ್ದರೂ, ಭವಿಷ್ಯದ ಯೋಜನೆಗಳಿಗೆ ಇಂದು ಬುನಾದಿ ಹಾಕುವ ದಿನ.

ಅದೃಷ್ಟ: 7 | ಬಣ್ಣ: ನೀಲಿ | ದಿಕ್ಕು: ಉತ್ತರ | ದೇವರು: ಶಿವ

ಮೀನ: ಕುಟುಂಬದ ಸಹಕಾರ

ಮನಸ್ಸು ಇಂದು ಸೂಕ್ಷ್ಮವಾಗಿರುತ್ತದೆ. ಸಣ್ಣ ವಿಷಯಗಳಿಗೂ ಭಾವನಾತ್ಮಕ ಪ್ರತಿಕ್ರಿಯೆ ಬರಬಹುದು. ಧ್ಯಾನ, ಜಪ ಅಥವಾ ಪ್ರಾರ್ಥನೆ ಮನಸ್ಸಿಗೆ ಶಾಂತಿ ನೀಡುತ್ತದೆ. ಕುಟುಂಬದ ಸಹಕಾರ ದೊರೆಯುತ್ತದೆ. ಸೃಜನಶೀಲ ಕೆಲಸಗಳಲ್ಲಿ ತೊಡಗಿಸಿಕೊಂಡರೆ ಒಳಗಿನ ಒತ್ತಡ ಕಡಿಮೆಯಾಗುತ್ತದೆ.

ಅದೃಷ್ಟ: 2 | ಬಣ್ಣ: ಹಸಿರು | ದಿಕ್ಕು: ಈಶಾನ್ಯ | ದೇವರು: ವಿಷ್ಣು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+