ಈ 6 ವಸ್ತುಗಳು ನಿಮ್ಮ ಕೈಯಿಂದ ಜಾರಿ ಬಿದ್ದರೆ ಮನೆಯಲ್ಲಿ ಏನಾದರೂ ಅನಾಹುತ ತಪ್ಪಿದ್ದಲ್ಲ... ಎಚ್ಚರ!

ನಮ್ಮ ಕೈಯಿಂದ ವಸ್ತುಗಳು ಜಾರಿ ನೆಲದ ಮೇಲೆ ಬೀಳುವುದು ಸಾಮಾನ್ಯ. ಇದಕ್ಕೆ ಯಾವುದಾರೂ ಅನಾರೋಗ್ಯ ಕಾರಣಗಳಿರಬಹುದು ಅಥವಾ ಕೆಲವೊಮ್ಮೆ ಭಯದಿಂದಲೂ ವಸ್ತುಗಳು ನಿಮ್ಮ ಕೈಯಿಂದ ಜಾರಿ ಕೆಳಗೆ ಬೀಳಬಹುದು.

ಆದರೆ ಕೆಲವು ಸ್ಥಳಗಳಲ್ಲಿ, ಕೆಲವು ಸಮಯದಲ್ಲಿ ಅಥವಾ ಕೆಲವು ವಸ್ತುಗಳು ನಿಮ್ಮ ಕೈಯಿಂದ ಜಾರಿ ಬೀಳುವುದು ಶುಭವಲ್ಲ. ನಿಮ್ಮ ಕೈಯಲ್ಲಿರುವ ವಸ್ತು ಒಮ್ಮೆ ಅಥವಾ ಎರಡು ಬಾರಿ ಕೈ ಜಾರಿ ಬಿದ್ದರೆ ಇದು ಸಂಪೂರ್ಣವಾಗಿ ಸ್ವೀಕಾರಾರ್ಹವಾಗಿದೆ. ಆದರೆ ನೀವು ಅದನ್ನು ಅಭ್ಯಾಸ ಮಾಡಿಕೊಂಡರೆ, ಇದು ತೊಂದರೆಯನ್ನುಂಟು ಮಾಡಬಲ್ಲದು. ಜ್ಯೋತಿಷ್ಯದಲ್ಲಿ ಈ ನಡವಳಿಕೆಯು ಕೆಲವು ಗ್ರಹಗಳ ಅಡಚಣೆಗಳಿಗೆ ಸಹ ಕಾರಣವೆಂದು ಹೇಳಲಾಗುತ್ತದೆ. ಜೊತೆಗೆ ಇದು ವಾಸ್ತು ದೋಷವನ್ನೂ ಸೂಚಿಸಬಹುದು. ಹಾಗಾದರೆ ಕೈಯಿಂದ ಕೆಳಗೆ ಜಾರಿ ಬೀಳುವ ಯಾವ ವಸ್ತುಗಳನ್ನು ದುರದೃಷ್ಟವೆಂದು ಪರಿಗಣಿಸಲಾಗುತ್ತದೆ ಎಂಬುದನ್ನು ನೋಡೋಣ.

Bad luck of dropping these things on floor

ಪೂಜೆಯ ತಟ್ಟೆ ಮತ್ತು ದೀಪ

ಸಾಮಾನ್ಯವಾಗಿ ಆರತಿ ತಟ್ಟೆ ನಿಮ್ಮ ಕೈಯಿಂದ ಬಿದ್ದರೆ ಅದು ಅಶುಭ ಎಂದು ಹೇಳಲಾಗುತ್ತದೆ. ಆರತಿ ತಟ್ಟೆಯು ನಿಮ್ಮ ಕೈಯಿಂದ ಜಾರಿದರೆ, ದೇವರು ನಿಮ್ಮ ಪೂಜೆಯನ್ನು ಒಪ್ಪುವುದಿಲ್ಲ ಎಂದು ಹೇಳಲಾಗುತ್ತದೆ. ಇದು ನಿಮ್ಮ ಜೀವನವನ್ನು ಅಡ್ಡಿಪಡಿಸುವ ವಿಪತ್ತು ಅಥವಾ ಮುಂಬರುವ ದೊಡ್ಡ ಅಪಾಯವನ್ನು ಮುನ್ಸೂಚಿಸುತ್ತದೆ.

ಅದೇ ರೀತಿ ಉರಿಯುವ ದೀಪ ಇದ್ದಕ್ಕಿದ್ದಂತೆ ಆರಿಹೋದರೆ ಅದು ಕೆಟ್ಟ ಸಂಕೇತ. ಏನೋ ತಪ್ಪಾಗಲಿದೆ ಎಂದು ಅದು ನಮಗೆ ಹೇಳುತ್ತದೆ. ಹೀಗೆ ಒಂದು ವೇಳೆ ಆದಲ್ಲಿ, ಅನಾಹುತಗಳನ್ನು ತಪ್ಪಿಸಲು ಪರಿಹಾರವಿದೆ. ಅದನ್ನು ತಕ್ಷಣವೇ ಮಾಡಬೇಕು. ಪೂಜೆಯನ್ನು ಮತ್ತೆ ಮೊದಲಿನಿಂದ ಪ್ರಾರಂಭಿಸುವುದು ಪರಿಹಾರವಾಗಿದೆ. ಇದು ಕುಟುಂಬದಲ್ಲಿನ ಎಲ್ಲಾ ದೋಷಗಳನ್ನು ತೊಡೆದುಹಾಕುತ್ತದೆ.

ಸಾಸಿವೆ ಎಣ್ಣೆ

ಸಾಸಿವೆ ಎಣ್ಣೆ ಮತ್ತು ಕರಿಮೆಣಸಿನ ಪಾತ್ರೆಗಳು ಆಕಸ್ಮಿಕವಾಗಿ ನೆಲದ ಮೇಲೆ ಬೀಳಬಾರದು. ಸಾಸಿವೆ ಎಣ್ಣೆ ಶನಿ ದೇವರಿಗೆ ಸಂಬಂಧಿಸಿದೆ. ಆದ್ದರಿಂದ, ನೆಲದ ಮೇಲೆ ಚೆಲ್ಲಿದ ಸಾಸಿವೆ ಎಣ್ಣೆ ಶನಿ ದೇವರನ್ನು ಅಸಮಾಧಾನಗೊಳಿಸುತ್ತದೆ. ಹೀಗಾಗಿ ಕೈಯಲ್ಲಿ ಎಣ್ಣೆಯ ಬಾಟಲಿಯನ್ನು ತೆಗೆದುಕೊಂಡು ಹೋಗುವಾಗ ಎಚ್ಚರಿಕೆ ವಹಿಸಬೇಕು.

Bad luck of dropping these things on floor

ಧಾನ್ಯಗಳು

ಲಕ್ಷ್ಮಿ ದೇವಿಗೆ ಧಾನ್ಯಗಳೆಂದರೆ ತುಂಬಾ ಇಷ್ಟ. ಆದ್ದರಿಂದ, ನಿಮ್ಮ ಕೈಯಿಂದ ಧಾನ್ಯಗಳು ಬಿದ್ದರೆ ಲಕ್ಷ್ಮಿ ದೇವಿಯು ಅಸಮಾಧಾನಗೊಳ್ಳುತ್ತಾಳೆ. ನಿಮ್ಮ ಕೈಯಿಂದ ಧಾನ್ಯಗಳು ಅಜಾಗರೂಕತೆಯಿಂದ ಬಿದ್ದರೆ ಅಥವಾ ಆಕಸ್ಮಿಕವಾಗಿ ನಿಮ್ಮ ಪಾದದ ಮೇಲೆ ಬಿದ್ದರೆ, ಅದನ್ನು ನಿಮ್ಮ ಹಣೆಗೆ ಒಪ್ಪಿಕೊಂಡು, ನಿಮ್ಮ ತಪ್ಪಿಗೆ ಕ್ಷಮೆಯಾಚಿಸಿ.

ಹಾಲಿನ ಸೋರಿಕೆ

ನಾವು ಮನೆಯಲ್ಲಿ ಚಹಾ ಮತ್ತು ಕಾಫಿ ಮಾಡಲು ಪ್ರತಿದಿನ ಹಾಲು ಕುದಿಸುತ್ತೇವೆ. ಹಾಗೆ ಹಾಲನ್ನು ಕುದಿಸುವಾಗ ಅದು ಉಕ್ಕಿ ನೆಲಕ್ಕೆ ಚೆಲ್ಲಿದರೆ ಶುಭ ಸಂಕೇತವಾಗಿದೆ. ಆದರೆ ಅಜಾಗರೂಕತೆ ಮತ್ತು ಕಾಳಜಿಯ ಕೊರತೆಯಿಂದ ಹಾಲು ಲೋಟದಿಂದ ಅಥವಾ ಕೈ ತಾಗಿ ನೆಲಕ್ಕೆ ಬಿದ್ದರೆ ಅದು ಅಶುಭವೆಂದು ಕರೆಯಲಾಗುತ್ತದೆ. ಇದು ಸಮಸ್ಯೆಯನ್ನು ಸೂಚಿಸುತ್ತದೆ. ಹೀಗಾಗಿ ಈ ತಪ್ಪನ್ನು ಮಾಡಬೇಡಿ. ಜೊತೆಗೆ ನೀವು ಏನನ್ನಾದರೂ ತಿನ್ನುವಾಗ ನೆಲದ ಮೇಲೆ ಆಹಾರವನ್ನು ಚೆಲ್ಲಬೇಡಿ. ಇದು ಲಕ್ಷ್ಮಿ ದೇವಿಗೆ ಮಾಡಿದ ಅವಮಾನ. ಇದು ಬೇಜವಾಬ್ದಾರಿ ಕ್ರಮದ ಪರಿಣಾಮವಾಗಿ ಆರ್ಥಿಕ ಸಮಸ್ಯೆಗಳಿಗೆ ಕಾರಣವಾಗಬಹುದು.

Bad luck of dropping these things on floor

ಉಪ್ಪು

ನಾವು ಮನೆಯಲ್ಲಿ ಪ್ರತಿದಿನ ಬಳಸುವ ವಸ್ತುಗಳ ಪೈಕಿ ಉಪ್ಪು ಕೂಡ ಒಂದು. ಆ ಉಪ್ಪು ಜಾರಿ ಬಿದ್ದರೆ ಏನಾಗುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಆಕಸ್ಮಿಕವಾಗಿಯೂ ನೆಲದ ಮೇಲೆ ಉಪ್ಪು ಚೆಲ್ಲದಂತೆ ಎಚ್ಚರವಹಿಸಿ. ಇದು ಜೀವನದಲ್ಲಿ ಬರಲಿರುವ ಸಮಸ್ಯೆಗಳ ಸರಣಿಯನ್ನು ಮುನ್ಸೂಚಿಸುತ್ತದೆ. ಉಪ್ಪನ್ನು ವಿಶೇಷವಾಗಿ ಸಂಜೆ ಯಾರಿಗೂ ಕೊಡಬಾರದು. ಇದು ಬಡತನ ಮತ್ತು ಆರ್ಥಿಕ ಸಮಸ್ಯೆಗಳನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ.

ಭಕ್ಷ್ಯಗಳು

ನಾವು ಆಕಸ್ಮಿಕವಾಗಿ ಕೆಲ ಆಹಾರವನ್ನು ತಟ್ಟೆಯಲ್ಲಿ ಊಟಕ್ಕೆ ಕುಳಿತಾಗ ಬಿಡುತ್ತೇವೆ. ಎಲ್ಲರ ಮನೆಯಲ್ಲೂ ಇದು ಸಾಮಾನ್ಯ ಸಂಗತಿ. ಆದರೆ, ಇದು ಆಗಾಗ್ಗೆ ಸಂಭವಿಸಿದಲ್ಲಿ ಇದು ಸಮಸ್ಯೆಯನ್ನು ಸೂಚಿಸುತ್ತದೆ. ವಾಸ್ತು ದೋಷವನ್ನೂ ಸೂಚಿಸುತ್ತದೆ. ನೀವು ಲಕ್ಷ್ಮಿ ದೇವಿಯ ಕೋಪಕ್ಕೆ ಒಳಗಾಗಬಹುದು ಮತ್ತು ನಿಮ್ಮ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+