ಜ್ಯೋತಿಷ್ಯ: ಯಾವ ವಾರ ಹುಟ್ಟಿದವರ ಗುಣ ಹೇಗಿರುತ್ತೆ?
ಯಾವ ವಾರ ಜನಿಸಿದವರ ಗುಣ ಹೇಗಿರುತ್ತದೆ ಎಂಬುದರ ಸ್ಥೂಲ ಪರಿಚಯ ಇಲ್ಲಿದೆ. ಗುಣಾವಗುಣಗಳು, ಯಾವ ವಾರ ಜನಿಸಿದವರಿಗೆ ಅಧಿಪತಿ ಯಾರು ಎಂಬ ಮಾಹಿತಿ ಕೂಡ ಇಲ್ಲಿದೆ
ಜ್ಯೋತಿಷ್ಯ ಸಾಗರ ಇದ್ದಂತೆ. ಒಬ್ಬೊಬ್ಬರ ಜ್ಞಾನ-ಅನುಭವ ಒಂದೊಂದು ರೀತಿಯಲ್ಲಿರುತ್ತದೆ. ಈ ದಿನ ಯಾವ ವಾರ ಹುಟ್ಟಿದವರ ಗುಣ ಹೇಗಿರುತ್ತದೆ ಎಂದು ತಿಳಿಸ್ತೀವಿ. ನನ್ನ ಮಗ-ಮಗಳು ವಿಪರೀತ ಹಟ. ನಮ್ಮ ಮನೇಲಿ ಯಾರೂ ಹೀಗಿಲ್ಲ ಅಂತ ಮಾತನಾಡುವ ತಂದೆ-ತಾಯಿಯನ್ನು ನೋಡಿರ್ತೀರಿ.
ಹೌದು, ಆ ರೀತಿ ಗುಣ ಬರುವುದಕ್ಕೆ ಹುಟ್ಟಿದ ವಾರ ಕೂಡ ಕಾರಣ ಅನ್ನೋದು ನಿಮಗೆ ಗೊತ್ತಿರಲಿ. ಆಯಾ ದಿನ ಹುಟ್ಟಿದವರ ಮೇಲೆ ಆಯಾ ಗ್ರಹದ ಪ್ರಭಾವ ಇರುತ್ತದೆ. ಆದ್ದರಿಂದ ಗುಣ-ನಡವಳಿಕೆಗಳು ಬದಲಾಗುತ್ತವೆ. ಹಾಗಂತ ಇದರಿಂದ ಇಡೀ ಜೀವನದ ಭವಿಷ್ಯ ಹೀಗೆ ಇರುತ್ತದೆ ಅಂತ ತಿಳಿಯಬೇಡಿ.[ಯುಗಾದಿಗೆ ದ್ವಾದಶ ರಾಶಿಗಳಿಗೆ ಆಯವ್ಯಯ ಹೇಗಿದೆ?]
ಏಕೆಂದರೆ, ಜನ್ಮ ಕಾಲದಲ್ಲಿನ ಜಾತಕ, ಯೋಗ, ಶುಭಾಶುಭ ಫಲಗಳು, ದಶೆ ಎಲ್ಲವೂ ಆಯಾ ವ್ಯಕ್ತಿಯ ಜೀವನದಲ್ಲಿ ಖಂಡಿತಾ ಪರಿಣಾಮ ಬೀರುತ್ತವೆ. ಅವೆಲ್ಲದರ ಮಧ್ಯೆ ಸ್ಥೂಲವಾಗಿ ನೋಡಿದಾಗ ಇಲ್ಲಿ ಕೊಟ್ಟಿರುವ ಗುಣಗಳ ಪೈಕಿ ಹಲವು, ಕೆಲ ಬಾರಿ ಕೆಲವು ಗುಣಗಳು ತಾಳೆಯಾಗುತ್ತವೆ. ಇದನ್ನು ಓದಿಕೊಂಡರೆ ಗೊಂದಲವಿದ್ದರಂತೂ ಕಡಿಮೆಯಾಗುತ್ತದೆ.[ಜ್ಯೋತಿಷ್ಯ: ಯಾವ ರಾಶಿಯವರಿಗೆ ಯಾವುದು ಅದೃಷ್ಟ ರತ್ನ?]

ಭಾನುವಾರ
ಈ ದಿನ ಹುಟ್ಟಿದವರ ಅಧಿಪತಿ ಸೂರ್ಯ. ವಿಪರೀತ ಕ್ರಿಯೇಟಿವ್. ತಪ್ಪು-ತಲೆಹರಟೆಗಳು ಮಾಡೋದಿದ್ದರೂ ಹೊಸದಾಗಿ ಮತ್ತು ಈ ಹಿಂದೆ ಮಾಡದಿರುವಂಥದ್ದನ್ನು ಮಾಡುತ್ತಾರೆ. ತುಂಬ ಚಟುವಟಿಕೆ, ಚೀರಾಟ, ತಮ್ಮ ಕಡೆಗೆ ಎಲ್ಲರ ಗಮನ ಇರಬೇಕು ಎಂಬ ಆಲೋಚನೆ. ಸಂಭಾಳಿಸುವುದರಲ್ಲಿ ಸಾಕು ಬೇಕಾಗುತ್ತದೆ. ದೊಡ್ಡವರಾದಂತೆ ನೇರವಂತಿಕೆ, ಸ್ವಲ್ಪ ಮಟ್ಟಿಗಿನ ಸ್ವಾರ್ಥ ಮುಂದುವರಿಯುತ್ತದೆ.

ಸೋಮವಾರ
ಈ ದಿನ ಹುಟ್ಟಿದವರ ಅಧಿಪತಿ ಚಂದ್ರ. ಸೋಡಿದ ತಕ್ಷಣ ಗಮನಸೆಳೆಯುತ್ತಾರೆ. ವಿನಯವಂತಿಕೆ. ಎಲ್ಲ ಕಡೆಯೂ ಹೊಂದಿಕೊಳ್ಳುವ ಮನಸ್ಥಿತಿ. ತಾಯಿ ಕರುಳು. ತುಂಬ ಸೂಕ್ಷ್ಮ ಸ್ವಭಾವ. ಚಂಚಲಚಿತ್ತರಾಗಿರುತ್ತಾರೆ.ಮೃದುವಾದ ಮಾತಿನಿಂದ ಸಂಧಾನ ಮಾಡಿಸುವುದರಲ್ಲಿ ಎತ್ತಿದ ಕೈ.

ಮಂಗಳವಾರ
ಇವರು ಬಲೇ ಧೈರ್ಯವಂತರು. ನಾಯಕತ್ವ ಗುಣಗಳಿರುತ್ತವೆ. ಅಧಿಪತಿ ಕುಜ. ಕೆಲವು ಸಲ ತಾಳ್ಮೆ ಕಳೆದುಕೊಂಡರೆ ಮಾತ್ರ ಇವರನ್ನು ಸುಧಾರಿಸುವುದು ತೀರಾ ಕಷ್ಟ ಕಷ್ಟ. ಕೋಪದ ಭರದಲ್ಲಿ ಕೆಲ ಬಾರಿ ಅನಾಹುತಗಳನ್ನು ಮಾಡಿಕೊಳ್ಳುವುದು ಸಹ ಉಂಟು. ಆಗ ತಮ್ಮದೇ ವಸ್ತುವಾದರೂ ಬಿಸಾಡಿ, ಚಚ್ಚಿ-ಕುಟ್ಟಿ ಹಾಳು ಮಾಡ್ತಾರೆ.

ಬುಧವಾರ
ಮಾನಸಿಕವಾಗಿ ತುಂಬ ಸದೃಢರು. ಹೇಳಬೇಕಾದ್ದನ್ನು ಹೇಳಬೇಕಾದ ರೀತಿಯಲ್ಲಿ ಎದುರಿನವರಿಗೆ ದಾಟಿಸುವುದರಲ್ಲಿ ನಿಸ್ಸೀಮರು. ಇವರ ಆಲೋಚನೆಗಳೇ ವಿಭಿನ್ನವಾಗಿರುತ್ತವೆ. ತರ್ಕಬದ್ಧವಾಗಿ ಮಾತನಾಡುತ್ತಾರೆ. ಆದರೆ ಸರಿಯಾದ ಟೈಮಲ್ಲಿ ಕೈ ಕೊಡ್ತಾರೆ. ವಿಪರೀತವಾದ ಮಾತು, ಬೇಜವಾಬ್ದಾರಿ ಇರುತ್ತದೆ. ಇವರ ಅಧಿಪತಿ ಬುಧ.

ಗುರುವಾರ
ಅಧಿಪತಿ ಗುರು. ಇವರಿಗೆ ಸ್ವಲ್ಪ ಮರ್ಯಾದೆ ಮಾಡಲಿ ಎಂಬ ನಿರೀಕ್ಷೆ ಇರುತ್ತದೆ. ಅದಕ್ಕೆ ತಕ್ಕ ಗೌರವವೂ ಸಿಗುತ್ತದೆ. ಖುಷಿಖುಷಿಯಾಗಿ ಇರ್ತಾರೆ. ನಾಲಗೆ ತುಂಬ ಚುರುಕಾಗಿರುತ್ತದೆ. ಒಂದಿಷ್ಟು ಅಧ್ಯಾತ್ಮ-ಧರ್ಮ-ಕರ್ಮ ಅಂತ ಡೈಲಾಗ್ ಹೊಡೀತಾರೆ. ಸೋಂಬೇರಿತನ ಬಿಡಬೇಕು ಅಂತ ಇವರಿಗೆ ಹೇಳಿದರೆ ಎಲ್ಲಿಲ್ಲದ ಸಿಟ್ಟು ಮಾಡಿಕೊಳ್ತಾರೆ. ಬೇರೆಯವರ ತಪ್ಪು ಹುಡುಕುವುದನ್ನು ತುಂಬ ಎಂಜಾಯ್ ಮಾಡ್ತಾರೆ.

ಶುಕ್ರವಾರ
ಇವರ ಪ್ರೀತಿಯನ್ನು ಸಹಿಸಿಕೊಳ್ಳೋದು ಕಷ್ಟ. ಅಂಟಿಕೊಂಡರೆ ಬಿಡೋ ಆಸಾಮಿಗಳಲ್ಲ. ಕರುಣೆ ಜಾಸ್ತಿ. ಬೇರೆಯವರ ಬಗ್ಗೆ ವಿಪರೀತ ಕಾಳಾಜಿ ಮಾಡ್ತಾರೆ. ಆಲಸಿಗಳು. ಲೈಂಗಿಕ ಆಸಕ್ತಿ ಹೆಚ್ಚು. ಪೋಲಿ ಮಾತನಾಡುತ್ತಾರೆ. ಇವರೊಳಗೆ ಕಲಾವಿದ ಮನಸಿರುತ್ತದೆ. ಅದರೆ ಆರಂಭದಲ್ಲೇ ಹೇಳಿದ ಹಾಗೆ ತುಂಬ ಹಚ್ಚಿಕೊಂಡರೆ ಕಷ್ಟ ಕಷ್ಟ. ಇವರ ಅಧಿಪತಿ ಶುಕ್ರ

ಶನಿವಾರ
ಇವರು ಸಾಮಾನ್ಯ ಬುದ್ಧಿವಂತರಲ್ಲ. ತಮ್ಮ ಕೆಲಸದ ಬಗ್ಗೆಯೇ ಯೋಚನೆ ಮಾಡ್ತಿರ್ತಾರೆ. ತುಂಬ ಶ್ರಮ ವಹಿಸಿ ನೀಡಿದ ಕೆಲಸವನ್ನು ಪೂರೈಸುತ್ತಾರೆ. ವಾಸ್ತವವಾದಿಗಳು. ಸ್ವಲ್ಪ ಅನುಮಾನ ಜಾಸ್ತಿ. ಜಗತ್ತಿನ ಬಗ್ಗೆ ತುಂಬ ದೂರುಗಳು ಇರುತ್ತವೆ. ಒಂದಿಷ್ಟು ಹೊಟ್ಟೆಕಿಚ್ಚು ಅದರ ಜತೆಗೆ ಭಯದ ಸ್ವಭಾವ ಇವರದು. ಈ ದಿನ ಹುಟ್ಟಿದವರ ಅಧಿಪತಿ ಶನಿ.
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications