ನರೇಂದ್ರ ಮೋದಿ ಅವರಿಗಿರುವ ಬುಧಾದಿತ್ಯ ಯೋಗದ ಬಗ್ಗೆ ನಿಮಗೆಷ್ಟು ಗೊತ್ತು?
ಈ ದಿನ ನಿಮಗೆಲ್ಲ ಒಂದು ಯೋಗದ ಬಗ್ಗೆ ತಿಳಿಸಿಕೊಡುತ್ತೇನೆ. ನೀವು ಮಾಡಬೇಕಾದ್ದು ಇಷ್ಟೇ. ನಿಮ್ಮ ಜಾತಕವನ್ನು ಎದುರಿಗೆ ಇಟ್ಟುಕೊಳ್ಳಿ. ಅದರಲ್ಲಿ ರಾಶಿ ಅಥವಾ ಜನ್ಮಕುಂಡಲಿ ನೋಡಿಕೊಳ್ಳಬೇಕು. ಜನ್ಮ ಜಾತಕದಲ್ಲಿ ರವಿ ಹಾಗೂ ಬುಧ ಎರಡೂ (ಇವುಗಳನ್ನು ಕನ್ನಡದಲ್ಲಿ ರ, ಬು ಅಂತಲೂ ಇಂಗ್ಲಿಷಿನಲ್ಲಿ Su, Me ಅಂತಲೂ ನಮೂದಿಸಲಾಗಿರುತ್ತದೆ) ಒಂದೇ ಕಡೆ ಇದೆಯಾ ಎಂದು ಪರೀಕ್ಷಿಸಿಕೊಳ್ಳಿ.
Recommended Video
ಈ ರೀತಿ ಜಾತಕದಲ್ಲಿ ಒಂದೇ ಮನೆಯಲ್ಲಿ ರವಿ, ಬುಧರು ಇರುವುದನ್ನು ಬುಧಾದಿತ್ಯ ಯೋಗ ಎನ್ನಲಾಗುತ್ತದೆ. ಇದರಿಂದ ಬುದ್ಧಿವಂತಿಕೆ, ಅದೃಷ್ಟ, ಕೀರ್ತಿ, ಹಣ, ಅಧಿಕಾರ, ಗೌರವ ಮತ್ತಿತರ ಶುಭ ಫಲಗಳನ್ನು ನುಡಿಯಬೇಕಾಗುತ್ತದೆ. ಆದರೆ ಒಟ್ಟಿಗೆ ಇದ್ದ ಮಾತ್ರಕ್ಕೆ ಇವೆಲ್ಲವೂ ದೊರೆಯುತ್ತದೆ ಅಂತಲ್ಲ.
ಜನ್ಮ ಕುಂಡಲಿಯಲ್ಲಿ ಲಗ್ನದಲ್ಲೋ ಅಥವಾ ಲಗ್ನದಿಂದ ಎಷ್ಟನೇ ಮನೆಯಲ್ಲಿ, ಉಚ್ಚ ಸ್ಥಾನವೋ ಹಾಗೂ ಯಾವ ಕಾರಕತ್ವ ಮತ್ತು ಯಾವ ಗ್ರಹದ ದೃಷ್ಟಿಯಿದೆ ಎಂಬುದನ್ನು ಪರೀಕ್ಷಿಸಬೇಕು. ಸಾಮಾನ್ಯವಾಗಿ ಬಹುಸಂಖ್ಯಾತ ಜಾತಕರಲ್ಲಿ ಈ ಯೋಗ ಕಂಡುಬರುತ್ತದೆ. ಆದರೆ ಎಲ್ಲರಿಗೂ ಆ ಫಲ ದೊರೆಯುವುದಿಲ್ಲ.

ನರೇಂದ್ರ ಮೋದಿ ಜಾತಕದಲ್ಲಿ ಬುಧಾದಿತ್ಯ ಯೋಗ
ಆದರೆ, ಈ ಫಲದ ಸಮರ್ಥ ಬಳಕೆ ಆಗಿರುವುದು ನರೇಂದ್ರ ಮೋದಿ ಅವರಲ್ಲಿ. ಅವರಿಗೆ ಬುಧಾದಿತ್ಯ ಯೋಗದ ಜತೆಗೆ ಶಶಿ- ಮಂಗಳ (ಚಂದ್ರ್ ಹಾಗೂ ಕುಜ ಒಂದೇ ಮನೆಯಲ್ಲಿ ಇರುವುದು) ಯೋಗ ಸಹ ಇದೆ. ಅದಿರಲಿ. ಬುಧಾದಿತ್ಯ ಯೋಗದ ಶುಭ ಫಲ ದೊರೆಯಬೇಕಿದ್ದಲ್ಲಿ ಎರಡೂ ಗ್ರಹ ಉತ್ತಮ ಸ್ಥಾನದಲ್ಲೇ ಇರಬೇಕು.
ಒಂದು ಗ್ರಹ ಉಚ್ಚವಾಗಿದ್ದು, ಮತ್ತೊಂದು ನೀಚ ಆಗಿದ್ದಲ್ಲಿ ಅಥವಾ ದೋಷಪ್ರದವಾಗಿದ್ದಲ್ಲಿ ಈ ಯೋಗದ ಫಲ ಸಿಗುವುದಿಲ್ಲ ಅಥವಾ ಪೂರ್ಣ ಪ್ರಮಾಣದಲ್ಲಿ ಸಿಗುವುದಿಲ್ಲ. ಆಗ ನಕಾರಾತ್ಮಕ ಪ್ರಭಾವ ಬೀರುವ ಗ್ರಹವು ಶುಭ ಫಲವು ಪೂರ್ಣವಾಗಿ ದೊರೆಯದಂತೆ ಮಾಡಿಬಿಡುತ್ತದೆ. ಆದರೆ ಎರಡೂ ಗ್ರಹ ನೀಚವಾಗಿದ್ದಲ್ಲಿ ಮಾತ್ರ ದುಷ್ಪ್ರಭಾವ ಕಾಣಬೇಕಾಗುತ್ತದೆ.
ಉದಾಹರಣೆಗೆ, ಒಂದು ವೇಳೆ ರವಿ ಅನುಕೂಲಕರವಾಗಿದ್ದು, ಬುಧ ದುಷ್ಪ್ರದವಾಗಿದ್ದಲ್ಲಿ ಯಾವ ರಾಶಿಯಲ್ಲಿ ಇವೆರಡು ಗ್ರಹಗಳು ಒಟ್ಟಾಗಿವೆ ಎಂಬುದನ್ನು ನೋಡಿ, ಆ ಕಾರಕತ್ವಕ್ಕೆ ತಕ್ಕಂತೆ ಫಲ ನುಡಿಯಬೇಕಾಗುತ್ತದೆ. ಜಾತಕದಲ್ಲಿ ಎರಡೂ ಗ್ರಹ ಒಟ್ಟಾಗಿದ್ದು, ದುಷ್ಪ್ರಭಾವ ಬೀರುತ್ತಿದ್ದಲ್ಲಿ ಮಾತ್ರ ಅದಕ್ಕೆ ತಕ್ಕ ಶಾಂತಿ ಮಾಡಿಕೊಳ್ಳಬೇಕಾಗುತ್ತದೆ.
ರವಿ- ಬುಧ ಗ್ರಹರ ಉಚ್ಚ ಹಾಗೂ ನೀಚ ಕ್ಷೇತ್ರಗಳು
ರವಿ ಗ್ರಹವು ಮೇಷದಲ್ಲಿ ಉಚ್ಚ ಹಾಗೂ ತುಲಾದಲ್ಲಿ ನೀಚ. ಇನ್ನು ಬುಧ ಗ್ರಹವು ಕನ್ಯಾ ರಾಶಿಯಲ್ಲಿ ಉಚ್ಚ ಸ್ಥಿತಿಯಲ್ಲಿ ಇದ್ದರೆ, ಮೀನ ರಾಶಿಯಲ್ಲಿ ನೀಚವಾಗುತ್ತದೆ. ಜಾತಕ ನೋಡುವಾಗ ಗ್ರಹಗಳ ಬಲಾಬಲವನ್ನು ಪರೀಕ್ಷಿಸಬೇಕಾಗುತ್ತದೆ. ಒಬ್ಬ ವ್ಯಕ್ತಿಯ ಜಾತಕದಲ್ಲಿ ರವಿ ಹಾಗೂ ಬುಧ ಮತ್ತು ಇತರ ಗ್ರಹಗಳ ಸ್ಥಾನವನ್ನು, ಅದರ ಬಲವನ್ನು ಅಳೆಯಬೇಕಾಗುತ್ತದೆ.
ರವಿ ಹಾಗೂ ಬುಧ ಗ್ರಹ ಎರಡೂ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚರಿಸಲು ತೆಗೆದುಕೊಳ್ಳುವ ಸಮಯ 1 ತಿಂಗಳು. ಆದ್ದರಿಂದ ಬಹುತೇಕರ ಜಾತಕದಲ್ಲಿ ಬುಧಾದಿತ್ಯ ಯೋಗ ಕಂಡುಬರುತ್ತದೆ. ಆದರೆ ಈಗಾಗಲೇ ಹೇಳಿರುವಂತೆ ಆ ಗ್ರಹಗಳು ಯಾವ ರಾಶಿಯಲ್ಲಿವೆ, ಆ ರಾಶಿ ಅವುಗಳಿಗೆ ಉತ್ತಮ ಬಲ ನೀಡುತ್ತದೋ ಇಲ್ಲವೋ ಮತ್ತು ಇತರ ಗ್ರಹಗಳ ಬಲಾಬಲ ಹೇಗಿದೆ ಎಂದು ನೋಡಿದ ನಂತರವೇ ಫಲ ನುಡಿಯಬೇಕಾಗುತ್ತದೆ.
ಈ ಯೋಗಕ್ಕೆ ಸಂಬಂಧಿಸಿದಂತೆ ಅಥವಾ ಜಾತಕದಲ್ಲಿನ ಬೇರೆ ಯಾವುದೇ ಪ್ರಶ್ನೆ, ಗೊಂದಲ, ಭವಿಷ್ಯಕ್ಕೆ ಸಂಬಂಧಿಸಿದ ಮಾರ್ಗದರ್ಶನಕ್ಕಾಗಿ ವೈಯಕ್ತಿಕವಾಗಿ ಭೇಟಿಯಾಗಬಹುದು.
ವೈಯಕ್ತಿಕ ಭೇಟಿಗೆ ವಿಳಾಸ:
ಶ್ರೀ ಶಂಕರ ನಾರಾಯಣ
ಮೀರಾ ನಿವಾಸ, ಸಾಯಿಬಾಬಾ ದೇವಸ್ಥಾನದ ಎದುರು,
ಶೇಷಾದ್ರಿಪುರಂ ಕಾಲೇಜಿನ ಹತ್ತಿರ, ಶೇಷಾದ್ರಿಪುರ-
ಬೆಂಗಳೂರು- 560020
ಸಂಪರ್ಕ ಸಂಖ್ಯೆ: 9945065555
ಇ-ಮೇಲ್: [email protected]
ವೆಬ್ಸೈಟ್: srisaiastrologer.com
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications