ವಿವಾಹ ಜ್ಯೋತಿಷ್ಯ: ಒಂದೇ ನಕ್ಷತ್ರ, ಒಂದೇ ರಾಶಿಯವರು ಮದುವೆ ಆಗಬಹುದಾ?
ಹುಡುಗ-ಹುಡುಗಿ ಇಬ್ಬರದೂ ಒಂದೇ ನಕ್ಷತ್ರವಾದರೆ ಮದುವೆ ಮಾಡಬಹುದಾ ಅಥವಾ ಆಗಬಹುದಾ ಎಂಬ ಪ್ರಶ್ನೆ ಆಗಾಗ ಕೇಳಿಬರುತ್ತದೆ. ಆ ಪ್ರಶ್ನೆಗೆ ಉತ್ತರ ನೀಡುವ ಸಲುವಾಗಿಯೇ ಇಂದಿನ ಲೇಖನ.
ರೋಹಿಣಿ, ಆರಿದ್ರಾ, ಪುಷ್ಯಾ, ಮಖಾ, ವಿಶಾಖಾ, ಶ್ರವಣ, ಉತ್ತರಾಭಾದ್ರ ಹಾಗೂ ರೇವತಿ ಈ ಪೈಕಿ ಯಾವುದಾದರೂ ಒಂದಾಗಿದ್ದು, ಮದುವೆ ಆಗುವ ಹುಡುಗ ಹಾಗೂ ಹುಡುಗಿ ಇಬ್ಬರದೂ ಒಂದೇ ನಕ್ಷತ್ರವಾದರೆ ಶುಭ.
ಇನ್ನು ಅಶ್ವಿನಿ, ಕೃತ್ತಿಕಾ, ಮೃಗಶಿರಾ, ಪುನರ್ವಸು, ಚಿತ್ತಾ, ಅನೂರಾಧಾ ಹಾಗೂ ಪುರ್ವಾಭಾದ್ರಾವಾದರೆ ಮಧ್ಯಮ. ಉಳಿದ ನಕ್ಷತ್ರಗಳ ಪೈಕಿ ಯಾವುದಾದರೂ ಒಂದಾಗಿ, ಹುಡುಗ- ಹುಡುಗಿಯದು ಇಬ್ಬರದೂ ಒಂದೇ ನಕ್ಷತ್ರವಾದರೆ ವಿವಾಹ ಅಶುಭ. ಅಂದರೆ ಮದುವೆ ಮಾಡಬಾರದು.
ಇನ್ನು ವಧು- ವರರ ನಕ್ಷತ್ರವು ಒಂದೇ ಆಗಿ, ಪಾದವು ಬೇರೆ ಬೇರೆಯಾಗಿ, ಹುಡುಗನ ನಕ್ಷತ್ರದ ಪಾದವು ಹುಡುಗಿಯದ್ದಕ್ಕಿಂತ ಮುಂದಿನದ್ದಾಗಿದ್ದರೆ, ಉದಾಹರಣೆಗೆ ಹುಡುಗನದು ಅಶ್ವಿನಿ ನಕ್ಷತ್ರ ಎರಡನೇ ಪಾದ, ಹುಡುಗಿಯದು ಅಶ್ವಿನಿ ನಕ್ಷತ್ರ ಮೂರನೇ ಪಾದ. ಆಗ ಕೂಡ ಮದುವೆ ಶುಭ.

ಏಕನಕ್ಷತ್ರ ಮದುವೆ ವಿಚಾರ
ಅಶ್ವಿನಿ, ಕೃತ್ತಿಕಾ, ರೋಹಿಣಿ, ಮೃಗಶಿರಾ, ಆರಿದ್ರಾ, ಪುಷ್ಯಾ, ಮಖಾ, ಹಸ್ತಾ, ಸ್ವಾತಿ, ವಿಶಾಖಾ, ಪೂರ್ವಾಷಾಢ, ಶತಭಿಷಾ ಈ ಪೈಕಿ ಯಾವುದಾದರೂ ಒಂದು ಹುಡುಗಿಯ ನಕ್ಷತ್ರವಾಗಿದ್ದು, ಅದೇ ನಕ್ಷತ್ರವು ಹುಡುಗನದೂ ಆಗಿ, ಪಾದದ ವಿಚಾರದಲ್ಲಿ ಹುಡುಗಿಯ ನಕ್ಷತ್ರ ಪಾದವು ಮುಂದಿನದಾದರೆ ವಿವಾಹ ಶುಭ. ಉದಾಹರಣೆ: ಹುಡುಗಿಯದು ರೋಹಿಣಿ ನಕ್ಷತ್ರ ಎರಡನೇ ಪಾದ, ಹುಡುಗನದು ರೋಹಿಣಿ ನಕ್ಷತ್ರ ಮೂರನೇ ಪಾದ.

ಒಂದೇ ರಾಶಿಯವರು ಮದುವೆಯಾಗಬಹುದೆ?
ಒಂದು ವೇಳೆ ಹುಡುಗ ಹಾಗೂ ಹುಡುಗಿಯದು ಒಂದೇ ರಾಶಿಯಾಗಿ, ನಕ್ಷತ್ರವು ಬೇರೆ ಬೇರೆ ಆಗಿದ್ದರೆ ಆಗ ನಾಡಿ ದೋಷ ಹಾಗೂ ಗಣ ದೋಷಗಳನ್ನು ಗಣನೆಗೆ ತೆಗೆದುಕೊಳ್ಳುವ ಅಗತ್ಯವಿಲ್ಲ. ಅದೇ ರೀತಿ ನಕ್ಷತ್ರವು ಒಂದೇ ಹಾಗೂ ಪಾದಗಳು ಬೇರೆ ಆಗಿದ್ದಲ್ಲಿ ಕೂಡ ವಿವಾಹ ಪ್ರಶಸ್ತ. ಅಲ್ಲಿ ಯಾವುದೇ ದೋಷವಿಲ್ಲ.

ಯಾವಾಗ ನಾಡಿ ದೋಷವಿಲ್ಲ?
ವಧು- ವರರದು ಒಂದೇ ಜನ್ಮ ರಾಶಿ ಹಾಗೂ ಬೇರೆ ನಕ್ಷತ್ರಗಳಾಗಿದ್ದರೆ ಯಾವುದೇ ನಾಡಿ ದೋಷವಿಲ್ಲ. ಅದೇ ರೀತಿ ಒಂದೇ ನಕ್ಷತ್ರ ಹಾಗೂ ಬೇರೆ ಜನ್ಮ ರಾಶಿಗಳಿದ್ದರೂ ಯಾವುದೇ ನಾಡಿ ದೋಷವಿಲ್ಲ. ಇನ್ನೂ ಮುಂದುವರಿದು ಹೇಳಬೇಕು ಅಂದರೆ, ಹುಡುಗ ಹಾಗೂ ಹುಡುಗಿಯದು ಒಂದೇ ನಕ್ಷತ್ರ ಹಾಗೂ ಬೇರೆ ಪಾದಗಳಾಗಿದ್ದರೂ ನಾಡಿ ದೋಷವಿಲ್ಲ.

ಸ್ತ್ರೀ ಪೂರ್ವ ನಕ್ಷತ್ರ ಬಂದರೆ ವಿವಾಹ ಮಾಡುವಂತಿಲ್ಲ
ಆದರೆ, ಹುಡುಗಿಯ ನಕ್ಷತ್ರದ ಹಿಂದೆಯೇ ಹುಡುಗನ ನಕ್ಷತ್ರ ಬಂದರೆ ಮದುವೆ ಅಶುಭ. ಇದನ್ನು ಸ್ತ್ರೀಪೂರ್ವ ನಕ್ಷತ್ರ ಅಂತ ಕರೆಯಲಾಗುತ್ತದೆ. ಉದಾಹರಣೆಗೆ: ಹುಡುಗಿಯ ನಕ್ಷತ್ರವು ಅನೂರಾಧಾವಾಗಿ ಹುಡುಗನದು ಜ್ಯೇಷ್ಠಾ ನಕ್ಷತ್ರವಾದರೆ, ಹುಡುಗಿಯದು ಅಶ್ವಿನಿ ನಕ್ಷತ್ರವಾಗಿ ಹುಡುಗನದು ಭರಣಿಯಾದರೆ ವಿವಾಹ ಅಶುಭ. ಇನ್ನು ನಾಡಿ ದೋಷ ಎಂಬುದು ಆರೋಗ್ಯ, ಆಯುಷ್ಯ ಹಾಗೂ ಮಕ್ಕಳ ಸಂತೋಷ ಇವೆಲ್ಲವನ್ನೂ ಸೂಚಿಸುತ್ತದೆ. ಒಂದೇ ನಾಡಿಯಾದರೆ ಇವೆಲ್ಲಕ್ಕೂ ಸಮಸ್ಯೆಯಾಗುತ್ತದೆ. ಆದ್ದರಿಂದ ನಾಡಿ ದೋಷಕ್ಕೆ ಮಹಾ ಮೃತ್ಯುಂಜಯ ಜಪ ಅಥವಾ ಹೋಮ ಪರಿಣಾಮಕಾರಿ ಪರಿಹಾರ. ಇದನ್ನು ಸೋಮವಾರದಂದು ಶಿವ ದೇವಾಲಯದಲ್ಲಿ ಮಾಡಬೇಕು.
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications