ಧನು ರಾಶಿ ಮಕ್ಕಳೆಂದರೆ ನಡೆದಾಡುವ ಕ್ವೆಶ್ಚನ್ ಮಾರ್ಕ್
ಈ ದಿನ ಧನುಸ್ಸು ರಾಶಿಯ ಮಕ್ಕಳ ಬಗ್ಗೆ ಲೇಖನವನ್ನು ಓದುತ್ತಿದ್ದೀರಿ. ಈ ರಾಶಿಯ ಮಕ್ಕಳು ವಿಪರೀತ ಚಟುವಟಿಕೆ ಹಾಗೂ ಖುಷಿಯಿಂದ ಇರುತ್ತದೆ. ನಗುನಗುತ್ತಾ ಸುತ್ತ ಮುತ್ತ ನಗು ಉಕ್ಕಿಸುತ್ತಾ ಇರುತ್ತವೆ. ನಿಂತಲ್ಲಿ ನಿಲ್ಲದ ಈ ಮಕ್ಕಳು ಒಂದು ಕಡೆ ಇರುವುದಿಲ್ಲ. ಹೊಸಬರು-ಹಳಬರು ಎಂಬ ಭೇದವಿಲ್ಲದೆ ಎಲ್ಲರ ಜತೆಗೂ ಚೆನ್ನಾಗಿ ಮಾತನಾಡುತ್ತವೆ.
ಈ ಮಕ್ಕಳಿಗೆ ಬೇರೆಯವರು ಅದೇ ರೀತಿ ಇರಬೇಕು ಎಂಬ ನಿರೀಕ್ಷೆಯೂ ಇರುತ್ತದೆ. ಏನಾದರೊಂದು ಚಟುವಟಿಕೆಯಲ್ಲಿ ಭಾಗಿಯಾಗಿರಬೇಕು ಎಂಬುದು ಈ ಮಕ್ಕಳ ಅಪೇಕ್ಷೆ. ಅದರಲ್ಲೂ ಪ್ರಾಣಿಗಳೆಂದರೆ ಅಚ್ಚುಮೆಚ್ಚು. ಸಂಬಂಧ ಹಾಗೂ ಸ್ನೇಹದ ವಿಚಾರಕ್ಕೆ ಬಂದಾಗ ಈ ರಾಶಿಯವರು ತುಂಬ ಪ್ರಾಮಾಣಿಕರು. ಇದೇ ಗುಣವನ್ನು ಮತ್ತೊಬ್ಬರಿಂದಲೂ ನಿರೀಕ್ಷೆ ಮಾಡುತ್ತವೆ.
ಈ ರಾಶಿಯ ಮಕ್ಕಳು ಉಳಿದ ರಾಶಿಯವರಿಗೆ ಹೋಲಿಸಿದರೆ ಎದ್ದು-ಬಿದ್ದು ಗಾಯ ಮಾಡಿಕೊಳ್ಳುವುದು ಜಾಸ್ತಿ. ವಿಪರೀತ ಸಾಹಸ ಪ್ರವೃತ್ತಿಯ ಇವರು ಒಂದು ಜಾಗದಲ್ಲಿ ಕೂರುವುದೇ ಅಪರೂಪ. ಓಡಾಡುವ, ಆಟವಾಡುವ ಗಡಿಬಿಡಿಯಲ್ಲಿ ಎದ್ದು-ಬಿದ್ದು ಗಾಯವಾಗುತ್ತಲೇ ಇರುತ್ತವೆ.

ಹಣಕಾಸು ಖರ್ಚು ವಿಚಾರದಲ್ಲಿ ಎಚ್ಚರ
ಈ ಮಕ್ಕಳಿಗೆ ಸಾಮಾಜಿಕ ಕಟ್ಟುಪಾಡುಗಳು ಸುಲಭಕ್ಕೆ ಅರ್ಥವಾಗುವುದಿಲ್ಲ. ಪೋಷಕರೇ ಸ್ವಲ್ಪ ಗಮನ ವಹಿಸಿ, ಹೇಳಿಕೊಡಬೇಕಾಗುತ್ತದೆ. ಇನ್ನು ಈ ರಾಶಿಯ ಮಕ್ಕಳು ಏನೇ ಮಾಡಿದರೂ ಅತಿ ಅನ್ನುವಂತೆಯೇ ಮಾಡುತ್ತವೆ. ಆದ್ದರಿಂದ ಹಣಕಾಸು ಖರ್ಚು ಮಾಡುವ ವಿಚಾರದಲ್ಲಿ ಸ್ವಲ್ಪ ತಿಳಿ ಹೇಳದಿದ್ದಲ್ಲಿ ಅನಾಹುತ ಆಗುವ ಸಾಧ್ಯತೆ ಇರುತ್ತದೆ.

ಯೌವನಾವಸ್ಥೆಯಲ್ಲಿ ಉಡಾಫೆ
ಈ ಮಕ್ಕಳು ಜೀವನ ಹೇಗೆ ಬರುತ್ತದೋ ಹಾಗೇ ಸಾಗುವಂಥವು. ಒಂದು ವೇಳೆ ಬಾಲ್ಯದಲ್ಲಿ ಕೋಪಕ್ಕೆ - ಆಕ್ರೋಶಕ್ಕೆ ಈಡಾದರೆ ಯೌವನಾವಸ್ಥೆಗೆ ಬರುವ ವೇಳೆಗೆ ಎಲ್ಲದರ ಬಗ್ಗೆ ಉಡಾಫೆ ಮನೋಭಾವ ಬೆಳೆಯುತ್ತದೆ. ಆದ್ದರಿಂದ ಈ ಬಗ್ಗೆ ಕೂಡ ಪೋಷಕರು ಹೆಚ್ಚು ಜಾಗೃತರಾಗಿ ವರ್ತಿಸಬೇಕಾಗುತ್ತದೆ.

ಕುತೂಹಲದ ಪ್ರಶ್ನೆಗಳು
ಧನುರಾಶಿಯವರಿಗೆ ಎಲ್ಲದರಲ್ಲೂ ಕುತೂಹಲ. ತಿಳಿದುಕೊಳ್ಳಬೇಕೆಂಬ ಆಸಕ್ತಿ. ಆದ್ದರಿಂದ ತಮ್ಮ ಸುತ್ತಮುತ್ತಲ ಹಲವು ವಿಷಯಗಳ ಬಗ್ಗೆ ಪ್ರಶ್ನೆ ಮಾಡುತ್ತವೆ. ಉತ್ತರ ಹೇಳಬೇಕಾದಾಗ ಸರಿಯಾದ ಕಾರಣ ಕೊಟ್ಟೇ ಕೊಡಬೇಕು. ಇದರಿಂದ ಆ ಮಕ್ಕಳ ಬೌದ್ಧಿಕ ಸಾಮರ್ಥ್ಯ ಹೆಚ್ಚಾಗುತ್ತದೆ.

ಜನರ ಮಧ್ಯೆ ಇರಬೇಕು
ಸದಾ ಜನರ ಮಧ್ಯೆ ಇರಬಯಸುವ ಈ ಮಕ್ಕಳು ಮಲಗುವ ಹೊತ್ತಿನಲ್ಲೂ ಸುತ್ತ ಜನರಿರಬೇಕು ಎಂದು ಬಯಸುತ್ತವೆ. ಒಂದು ವೇಳೆ ಒಬ್ಬರನ್ನೇ ಬಿಟ್ಟು ಹೋಗುವಂಥ ಸನ್ನಿವೇಶ ಇದ್ದರೆ ಟೆಡ್ಡಿ ಬೇರ್ ಬೊಂಬೆಯನ್ನೋ ಅಥವಾ ಹೊದ್ದ ಹೊದಿಕೆಯನ್ನೋ ಜತೆಗಾರರಿದ್ದಂತೆ ತಬ್ಬಿ ಮಲಗುತ್ತವೆ. ಎಲ್ಲರನ್ನೂ ನಂಬುವ ಈ ಮಕ್ಕಳು ಅನುಮಾನ ಪ್ರವೃತ್ತಿಯವಲ್ಲ.
-
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
ಡಿವೋರ್ಸ್ವರೆಗೆ ಪತಿಯ ನಿವಾಸದಲ್ಲೇ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿ: ನಟ ವಿಜಯ್ ಪತ್ನಿ ಕೋರ್ಟ್ಗೆ ಮನವಿ -
Yash: ಪತ್ನಿ ರಾಧಿಕಾ ಪಂಡಿತ್ ಹುಟ್ಟುಹಬ್ಬಕ್ಕೆ ಹೊಸ ಲುಕ್ನಲ್ಲಿ ಯಶ್ ಪ್ರತ್ಯಕ್ಷ -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
ಟಿ20 ವಿಶ್ವಕಪ್ 2026 ಫೈನಲ್ ನಂತರ ಎಲ್ಲಾ ಮಾದರಿಯ ಕ್ರಿಕೆಟ್ಗೆ ಸೂರ್ಯಕುಮಾರ್ ಯಾದವ್ ನಿವೃತ್ತಿ ಘೋಷಣೆ ವದಂತಿ -
Vijay Divorce: ಡಿವೋರ್ಸ್ ವದಂತಿ ನಡುವೆಯೇ ನಟಿ ತ್ರಿಶಾ ಜೊತೆ ಕಾಣಿಸಿಕೊಂಡ ದಳಪತಿ ವಿಜಯ್; ವಿಡಿಯೋ ವೈರಲ್ -
UPSC Results: ಯಾದಗಿರಿ ಜಿಲ್ಲೆ ಒಂದರಲ್ಲೇ 4 ಮಂದಿ ಯುಪಿಎಸ್ಸಿ ಪಾಸ್, ಯಾರವರು? ಹಿನ್ನೆಲೆ ಏನು -
Karnataka Weather: ಕಲಬುರಗಿಯಲ್ಲಿ 39 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿಸಿಲ ಬೇಗೆ -
ದುಬೈ ವಿಮಾನ ನಿಲ್ದಾಣಕ್ಕೆ ನುಗ್ಗಿದ ಡ್ರೋನ್, ಎಲ್ಲಾ ವಿಮಾನ ಹಾರಾಟ ದಿಢೀರ್ ಸ್ಥಗಿತ | Operation Roaring Lion -
LPG Price Hike: ಗೃಹಬಳಕೆ ಎಲ್ಪಿಜಿ ಸಿಲಿಂಡರ್ ಬೆಲೆ 60 ರೂಪಾಯಿ ಏರಿಕೆ, ವಾಣಿಜ್ಯ ಸಿಲಿಂಡರ್ ದರ 115 ರೂಪಾಯಿ ಹೆಚ್ಚಳ -
SWR: ಬೆಂಗಳೂರಿನಿಂದ ಇಲ್ಲಿಗೆ ಮಾ.10ರಿಂದ ವಿಶೇಷ ರೈಲುಗಳ ಸಂಚಾರ, ವೇಳಾಪಟ್ಟಿ ಹೀಗಿದೆ












Click it and Unblock the Notifications