Days for Marriage in July: ಆಷಾಡ ಮಾಸದಲ್ಲೂ ಮದುವೆಗಾಗಿ ಶುಭ ದಿನ: ಗುರು ಶುಕ್ರ ನೀಡುವ ಫಲಾಫಲವೇನು?
ಕೆಲವೇ ದಿನಗಳಲ್ಲಿ ಜೂನ್ ತಿಂಗಳು ಮುಕ್ತಾಯಗೊಳ್ಳಲಿದೆ. ಈಗಾಗಲೇ ಜೂನ್ ತಿಂಗಳಲ್ಲೇ ಮದುವೆ ಸಮಾರಂಭಗಳು ಆರಂಭವಾಗಿವೆ. ಜುಲೈ ತಿಂಗಳಲ್ಲೂ ಮದುವೆಗೆ ಶುಭ ಮುಹೂರ್ತಗಳಿವೆ.
ಜುಲೈನ ಕೆಲ ದಿನಗಳ ನಂತರ ಮದುವೆ ಸಮಾರಂಭಗಳಿಗೆ ಶುಭ ಮುಹೂರ್ತಗಳು ಇಲ್ಲ. ಹಾಗಾದರೆ ಯಾವ ದಿನ ಮದುವೆಗೆ ಮಂಗಳಕರ ದಿನವಾಗಿದೆ ಮತ್ತು ಯಾವ ದಿನ ಅಶುಭವಾಗಿದೆ ಎಂದು ತಿಳಿಯೋಣ.

ಜುಲೈ 9ರಿಂದ ಮದುವೆಗೆ ಶುಭ ಮುಹೂರ್ತ ಆರಂಭವಾಗಲಿದ್ದು, ಜುಲೈ 17ರವರೆಗೆ ಮದುವೆ ಕಾರ್ಯಗಳು ನಡೆಯಲು ಶುಭ ದಿನವಾಗಿದೆ. ಜುಲೈ 17ರಂದು ದೇವಶಯನಿ ಏಕಾದಶಿಯಿಂದ ಚೌಮಾಸ ಆರಂಭವಾಗುವುದರಿಂದ ಶುಭ ಮುಹೂರ್ತಗಳು ಇರಲಿದೆ. ನವೆಂಬರ್ ಎರಡನೇ ವಾರದವರೆಗೂ ವಿವಾಹ ಆಚರಣೆಗಳಿಗೆ ಸಮಯ ಉತ್ತಮವಾಗಿಲ್ಲ.
ಜ್ಯೋತಿಷಿಗಳ ಪ್ರಕಾರ, ಗುರು ಮತ್ತು ಶುಕ್ರ ಅಸ್ತವ್ಯಸ್ತತೆಯಿಂದಾಗಿ ವಿವಾಹ ಸಮಾರಂಭಕ್ಕೆ ಶುಭ ಸಮಯ ರೂಪಿಸಲು ಸಾಧ್ಯವಾಗಲಿಲ್ಲ. ಸನಾತನ ಸಂಪ್ರದಾಯದಲ್ಲಿ ಮದುವೆಯ ಸಮಯದಲ್ಲಿ ಗುರು ಮತ್ತು ಶುಕ್ರನ ಅಸ್ಥಿತ್ವವನ್ನು ಸಹ ಪರಿಗಣಿಸಲಾಗುತ್ತದೆ. ಮದುವೆಯ ಸಮಯದಲ್ಲಿ ಎರಡೂ ಗ್ರಹಗಳು ಉದಯಿಸುವುದು ತುಂಬಾ ಮುಖ್ಯವಾಗಿದೆ. ಈ ಎರಡು ಗ್ರಹಗಳು ಉದಯಿಸಿದರೆ ಮಾತ್ರ ಮದುವೆಗೆ ಶುಭ ದಿನ ಆರಂಭವಾಗಲಿದೆ. ಹಾಗಾದರೆ ಜುಲೈನಲ್ಲಿ ಮದುವೆಗಾಗಿ ಇರುವ ಶುಭ ದಿನಾಂಕ ಹಾಗೂ ಸಮಯ ಯಾವುದು ಎಂದು ತಿಳಿಯೋಣ..

ಜುಲೈನಲ್ಲಿ 8 ದಿನಗಳು ಮದುವೆಗೆ ಮಂಗಳಕರ
ಈ ಬಾರಿ ಜುಲೈನಲ್ಲಿ ಒಟ್ಟು ಎಂಟು ದಿನಗಳು ವಿವಾಹ ಸಮಾರಂಭಕ್ಕೆ ಅದ್ಭುತವಾಗಿವೆ. ಇವುಗಳೆಂದರೆ ಜುಲೈ 9, 10, 11, 12, 13, 14, 15 ಮತ್ತು 16. ಜುಲೈ 17ರಂದು ಚಾತುರ್ಮಾಸ್ಯ ಆರಂಭವಾಗುವುದರಿಂದ ಮುಂದಿನ ನಾಲ್ಕು ತಿಂಗಳ ಕಾಲ ಮದುವೆಗೆ ಶುಭ ಮುಹೂರ್ತಗಳು ಇಲ್ಲ.
ಗುರು ಮತ್ತು ಶುಕ್ರ ಗ್ರಹಗಳು ಉದಯಿಸಿದ ಕೂಡಲೇ ಮದುವೆ, ಗೃಹಸ್ಥಾಶ್ರಮ, ಮುಂಡನ ಇತ್ಯಾದಿ ಶುಭ ಕಾರ್ಯಗಳು ಆರಂಭವಾಗುತ್ತವೆ. ಹೀಗಾಗಿ ಜುಲೈ 9 ರಿಂದ 16 ರವರೆಗೆ ಮದುವೆ ಮತ್ತು ಶುಭ ಕಾರ್ಯಗಳಿಗೆ ಉತ್ತಮ ದಿನಗಳಾಗಿವೆ. ಬಳಿಕ ನವೆಂಬರ್ 12 ರಂದು ದೇವತಾನಿ ಏಕಾದಶಿ ನಂತರ ಮದುವೆಗೆ ಶುಭ ಮುಹೂರ್ತ ಇವೆ. ಹೀಗಾಗಿ ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ವರೆಗೂ ಯಾವುದೇ ಶುಭ ಸಮಯವಿಲ್ಲ.

ಜುಲೈ 17 ರಂದು ದೇವಶಯನಿ ಏಕಾದಶಿ
ದೇವಶಯನಿ ಏಕಾದಶಿ ಜುಲೈ 17 ರಂದು ಇದೆ. ಈ ದಿನ ಭಗವಾನ್ ವಿಷ್ಣುವು ನಾಲ್ಕು ತಿಂಗಳ ಕಾಲ ಯೋಗ ನಿದ್ರಾಗೆ ಜಾರುತ್ತಾನೆ. ಇದು ಚಾತುರ್ಮಾಸ ಆರಂಭವನ್ನು ಸೂಚಿಸುತ್ತದೆ. ಚಾತುರ್ಮಾಸದಲ್ಲಿ ಶುಭ ಕಾರ್ಯಕ್ರಮಗಳು ನಡೆಯುವುದಿಲ್ಲ. ಇದಕ್ಕಾಗಿ ಮತ್ತೆ ನಾಲ್ಕು ತಿಂಗಳ ಕಾಲ ಕಾಯಬೇಕಾಗುತ್ತದೆ.
ಇದಾದ ನಂತರ ನವೆಂಬರ್ 12 ರಂದು ಕಾರ್ತಿಕ ಮಾಸದ ಶುಕ್ಲ ಪಕ್ಷದ ದೇವೋತ್ಥಾನ ಏಕಾದಶಿಯಿಂದ ಮತ್ತೆ ವಿವಾಹ ಶುಭ ಮುಹೂರ್ತ ಆರಂಭವಾಗಲಿದ್ದು, ಡಿಸೆಂಬರ್ 14 ರವರೆಗೆ ಶುಭ ಕಾರ್ಯಗಳು ನಡೆಯಲಿದೆ.
ಆದರೆ ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ರಾಜಸ್ಥಾನಗಳಲ್ಲಿ ಮದುವೆ ಇತ್ಯಾದಿ ಶುಭ ಕಾರ್ಯಗಳು ಚಾತುರ್ಮಾಸದಲ್ಲಿ ನಡೆಯುತ್ತವೆ. ಆದ್ದರಿಂದ ಮದುವೆಯ ಮಂಗಳಕರ ಸಮಯಕ್ಕಾಗಿ ಜ್ಯೋತಿಷಿಗಳ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.
ಗುರು ಮತ್ತು ಶುಕ್ರ ಉದಯ
ಯಾವುದೇ ಗ್ರಹವು ಸೂರ್ಯನ ಬಳಿ ಬಂದಾಗ ಅದರ ಶಕ್ತಿಯು ಕಡಿಮೆಯಾಗುತ್ತದೆ. ಅದರ ಹೊಳಪು ಮಸುಕಾಗುತ್ತದೆ. ಗ್ರಹದ ಈ ಸ್ಥಿತಿಯನ್ನು ಶುಭ ಎಂದು ಪರಿಗಣಿಸಲಾಗುವುದಿಲ್ಲ. ಗ್ರಹವು ಸೂರ್ಯನಿಂದ ದೂರ ಹೋದಾಗ, ಆ ಗ್ರಹದ ಶಕ್ತಿಗಳು ಹಿಂತಿರುಗುತ್ತವೆ ಮತ್ತು ಅದು ಆಕಾಶದಲ್ಲಿ ಗೋಚರಿಸುತ್ತದೆ. ಗ್ರಹದ ಈ ಸ್ಥಿತಿಯನ್ನು ಉದಯ ಎಂದು ಕರೆಯಲಾಗುತ್ತದೆ. ಈಗಾಗಲೇ ಜೂನ್ 3 ರಂದು ಗುರು ಪೂರ್ವದಲ್ಲಿ ಉದಯಿಸಿದ್ದಾನೆ. ಹಾಗೆಯೇ ಜುಲೈ 7 ರಂದು ಪಶ್ಚಿಮದಲ್ಲಿ ಶುಕ್ರ ಉದಯಿಸುತ್ತಾನೆ.
ಸಂತೋಷದ ದಾಂಪತ್ಯ ಜೀವನಕ್ಕೆ ಗುರು ಮತ್ತು ಶುಕ್ರ ಕಾರಣ
ಗುರು ಗ್ರಹ ಹುಡುಗಿಗೆ ಸಂತೋಷದ ಅಂಶವಾಗಿದೆ ಮತ್ತು ಶುಕ್ರ ಗ್ರಹ ಹುಡುಗನ ಸಂತೋಷಕ್ಕೆ ಕಾರಣವಾಗಿದೆ. ಆದ್ದರಿಂದ ದಾಂಪತ್ಯದಲ್ಲಿ ಗುರು ಮತ್ತು ಶುಕ್ರನ ಉದಯ ಅವಶ್ಯಕವಾಗಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ವೈವಾಹಿಕ ಜೀವನದಲ್ಲಿ ಸಂತೋಷ ನೆಲೆಸಲು ಗುರು ಹಾಗೂ ಶುಕ್ರ ಜವಾಬ್ದಾರನಾಗಿವೆ. ಆದ್ದರಿಂದ ಅದು ಅಸ್ತಮಿಸಿದಾಗ ಮದುವೆಗಳು ನಡೆಯುವುದಿಲ್ಲ. ಮಂಗಳಕರ ವಿವಾಹಕ್ಕಾಗಿ ಎರಡೂ ಗ್ರಹಗಳ ಉದಯವನ್ನು ಶಾಸ್ತ್ರಗಳ ಪ್ರಕಾರ ಪರಿಗಣಿಸಲಾಗುತ್ತದೆ.
ಗುರು ಮತ್ತು ಶುಕ್ರರನ್ನು ಮಂಗಳಕರ ಗ್ರಹಗಳೆಂದು ಪರಿಗಣಿಸಲಾಗುತ್ತದೆ. ಈ ಗ್ರಹಗಳು ಉತ್ತಮ ದಾಂಪತ್ಯ ಜೀವನಕ್ಕೆ ಕಾರಣವೆಂದು ಪರಿಗಣಿಸಲಾಗುತ್ತದೆ. ಜಾತಕದಲ್ಲಿ ಗುರು ಮತ್ತು ಶುಕ್ರನ ಸ್ಥಾನವು ಬಲವಾಗಿದ್ದಾಗ ಮದುವೆ ಮಾಡಿದರೆ ಸಂಗಾತಿಯೊಂದಿಗೆ ಯಾವಾಗಲೂ ಸಮನ್ವಯವಿರುತ್ತದೆ. ಅವರು ಪರಸ್ಪರ ಅರ್ಥಮಾಡಿಕೊಂಡು ಜೀವನ ನಡೆಸುತ್ತಾರೆ ಎಮದು ನಂಬಲಾಗುತ್ತದೆ.
ಮದುವೆಗಾಗಿ ತಿಂಗಳು ಹಾಗೂ ಶುಭ ದಿನಗಳು
ಜುಲೈ - 9, 10, 11, 12, 13, 14, 15, 16
ನವೆಂಬರ್ - 12, 17, 18, 23, 25, 27, 28
ಡಿಸೆಂಬರ್ - 2, 3, 4, 6, 7, 10, 11, 14
-
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ












Click it and Unblock the Notifications