ಸಿಂಹಿಣಿಯಂತೆ ಪ್ರೀತಿಸಿ, ಮಹಾರಾಣಿಯಂತೆ ಬದುಕಿರಿ

ಕರ್ಕಾಟಕ ರಾಶಿ ಪುರುಷ - ಸಿಂಹ ರಾಶಿ ಸ್ತ್ರೀ : ಇವರಿಬ್ಬರು ಮದುವೆಯಾದರೆ ಸ್ತ್ರೀ ಮಹಾರಾಣಿಯಂತೆ ಇರಬೇಕೆಂದು ಬಯಸುತ್ತಾಳೆ. ಗಂಡನನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಬೇಕೆಂದು ಬಯಸುತ್ತಾಳೆ. ಕರ್ಕಾಟಕ ರಾಶಿ ಪುರುಷರು ಪ್ರೇಮಮಯ ಹೃದಯವನ್ನು ಹೊಂದಿರುತ್ತಾರೆ. ಆತ ತನ್ನ ಪತ್ನಿಯನ್ನು ಪ್ರಾಮಾಣಿಕ ಮನದಿಂದ ಪ್ರೀತಿಸುತ್ತಾರೆ. ಸಿಂಹ ರಾಶಿ ಸ್ತ್ರೀಗೂ ಸಹ ತನ್ನ ಸಂಗಾತಿಯ ಬಗ್ಗೆ ಅಪಾರವಾದ ಪ್ರೀತಿ ಇರುತ್ತದೆ. ಇಬ್ಬರು ತಮ್ಮ ಬಾಳು ಬಂಗಾರವಾಗಿ ಇರಬೇಕು ಎಂದು ಬಯಸುವ ಮನದವರು.
ಅಷ್ಟೆ ಅಲ್ಲದೆ ಬದುಕನ್ನು ಎಷ್ಟು ಪ್ರೀತಿಸಿದರೆ ಅಷ್ಟು ಉತ್ತಮ ಜೀವನ ತಮ್ಮದಾಗುತ್ತದೆ ಎಂದು ಬಲ್ಲ ಜೋಡಿ ಇವರು. ತಮ್ಮ ಸಂಸಾರ ನೂರ್ಕಾಲ ಹೀಗೆ ಸುಖ-ಸಂತೋಷದಿಂದ ಇರಬೇಕು ಎಂದು ಬಯಸುವ ಮನಸ್ಥಿತಿಯನ್ನು ಇವರಿಬ್ಬರೂ ಹೊಂದಿರುತ್ತಾರೆ. ಒಬ್ಬರನೊಬ್ಬರು ಬಿಟ್ಟು ಹೋಗಬೇಕು ಎನ್ನುವ ಸಂಗತಿಯನ್ನು ಕನಸು-ಮನಸಿನಲ್ಲೂ ಬಯಸರು. ಎಲ್ಲಿ ಅಂತಹ ಮನಸ್ಥಿತಿ ಇರುತ್ತದೆಯೋ ಅಲ್ಲಿ ಯಾವುದೇ ಬಗೆಯ ಅವಘಡ ನಡೆಯದು. ಇಬ್ಬರು ಎಂತಹ ಪರಿಸ್ಥಿತಿ ಬಂದ್ರೂ ಹೊಂದಿಕೊಂಡು ಬಾಳುತ್ತಾರೆ. ಒಬ್ಬರನ್ನೊಬ್ಬರು ಪ್ರೀತಿಸಿ ಬದುಕುತ್ತಾರೆ.
ಕರ್ಕಾಟಕ ರಾಶಿ ಸ್ತ್ರೀ - ಕನ್ಯಾ ರಾಶಿ ಪುರುಷ : ಹೆಣ್ಣಿನ ಮನಸ್ಸು ಅರಿತವರು ಯಾರಿದ್ದಾರೆ ಎನ್ನುವ ಮಾತು ನಾವು ಪುರಾಣ-ಪುಣ್ಯ ಕಥೆಯಲ್ಲಿ ಮಾತ್ರವಲ್ಲ ಇತಿಹಾಸದಿಂದ ಪ್ರಸ್ತುತ ಕಾಲದವರೆಗೂ ಓದುತ್ತಲೇ ಬಂದಿದ್ದೇವೆ. ಅದೇ ರೀತಿ ಈ ಹೆಣ್ಣಿನ ಮನವನ್ನು ಅರಿಯುವ ಕೆಲಸ ಹುಟ್ಟಿಸಿದ ದೇವರಿಗೆ ಸಾಧ್ಯ ಇಲ್ಲವೇನೋ. ಎಲ್ಲಾ ವಿಷಯದಲ್ಲೂ ಓಕೆ ಆಗಿರುವ ಕರ್ಕಾಟಕ ರಾಶಿ ಸ್ತ್ರೀಗೆ ಆಗಾಗ ಒಂಟಿಯಾಗಿ ಇರಬೇಕು ಎನ್ನುವ ಮನಸ್ಥಿತಿ ಉಂಟಾಗುತ್ತದೆಯಂತೆ. ಹಾಗೆ ಒಂಟಿಯಾಗಿ ಮೂಲೆ ಸೇರಿದಾಗ ಅವರಿಗೆ ಅವರೇ ಪ್ರಪಂಚ. ಇನ್ಯಾವುದರ ಬಗ್ಗೆ ಅರಿವು ಇರಲ್ಲ. ಇಂತಹ ವಿಚಿತ್ರ ಎಲ್ಲಾದರು ಕಂಡಿದ್ದೀರಾ? ಒಂಟಿ ಮನಸು ಸೈತಾನನ ಕಾರಗಾರ ಎಂದು ಹೇಳ್ತಾರೆ. ಆದರೆ ಈಕೆಯ ವಿಷಯದಲ್ಲಿ ಹಾಗಲ್ಲ, ಒಂಟಿಯಾಗಿ ಇದ್ದಷ್ಟು ಕಾಲ ಭವಿಷ್ಯದ ಬಗ್ಗೆ ಯೋಚಿಸುತ್ತಲೇ ಇರ್ತಾಳಂತೆ.
ಮತ್ತೊಂದು ವಿಚಿತ್ರ ಏನು ಗೊತ್ತೇ, ಈ ಜೋಡಿ ಬೆಳಿಗ್ಗೆ ಆದ ತಕ್ಷಣ ಜಗಳಕ್ಕೆ ನಿಲ್ತಾರೆ. ಆದರೆ ರಾತ್ರಿ ಆದಂತೆ ಒಟ್ಟಾಗಿ ಬಾಳ್ತಾರೆ. ಪ್ರಾಯಶಃ ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎನ್ನುವ ಗಾದೆ ಇವರನ್ನು ನೋಡೇ ಹಿಂದಿನ ಕಾಲದಲ್ಲಿ ರಚಿತವಾಗಿರಬೇಕು ಎಂದು ಕಾಣುತ್ತದೆ. ಏನೇ ಇರಲಿ ಜಗಳದಿಂದ ಸಂಬಂಧಗಳು ಹಾಳಾಗುತ್ತದೆಯೇ ವಿನಃ ಯಾವುದೇ ಬಗೆಯ ಪ್ರಯೋಜನ ಇರದು. ಆ ಸಂಗಾತಿಯನ್ನು ಅರಿತರೆ ಜೀವನ ಸುಂದರ ರಮ್ಯಲೋಕ ಆಗುತ್ತದೆ. ಯೋಚಿಸಿ ನಿಮ್ಮ ಬದುಕು ನಿಮ್ಮ ಕೈಲೆ ಇದೆ. (ಇತರ ರಾಶಿ ಭವಿಷ್ಯಗಳಿಗೆ ಇಲ್ಲಿ ಕ್ಲಿಕ್ಕಿಸಿ.)
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications