ಸರಸ ಜನನ ವಿರಸ ಮರಣ ಸಮರಸವೇ ಜೀವನ

* ಧವಳ
ಮಿಥುನ ರಾಶಿ ಪುರುಷ - ಕುಂಭ ರಾಶಿ ಸ್ತ್ರೀ : ಕುಂಭ ರಾಶಿ ಸ್ತ್ರೀ ಬದುಕನ್ನು ಸಫಲಗೊಳಿಸುವ ಮನೋಭಾವ ಹೊಂದಿರುತ್ತಾಳೆ. ಇಂಥ ಸಂಗಾತಿ ಸಿಕ್ಕರೆ ಯಾರಿಗೆ ಖುಷಿ ಬದುಕು ಸಿಗದು ಹೇಳಿ. ಕ್ಷಮಾಗುಣ ಈ ಹೆಣ್ಣುಮಗಳ ವಿಶೇಷತೆ. ಪ್ರೀತಿಯ ವಿಷಯದಲ್ಲಿ ಆಗಾಗ ಇವರಿಂದ ತಪ್ಪು ನಡಿತಾನೆ ಇರುತ್ತೆ, ಆದರೆ ಪ್ರೀತಿ ಅನ್ನುವ ಮಾದಕ ಮದಿರೆಯನ್ನು ಕುಡಿದವರಿಗೆ ಅದರ ಸೆಳೆತ ಇದ್ದೆ ಇರುತ್ತದೆ ಅಲ್ವೆ ಹಾಗೆ ಈಕೆಯ ಕಥೆಯು. ಮದುವೆ ಆದ ಬಳಿಕ ಸಂಗಾತಿಯನ್ನು ಪ್ರೀತಿಸುವ ವಿಷಯದಲ್ಲಿ ಸದಾ ಮುಂದು. ಈಕೆಯನ್ನು ಪತಿರಾಯ ಎಷ್ಟು ಪ್ರೀತಿಸಿದರೆ ಅದಕ್ಕಿಂತ ಡಬ್ಬಲ್ ಪ್ರೀತಿಯನ್ನು ಪಡೆಯುತ್ತಾನೆ. ಈಕೆಯ ಒಂದು ವಿಭಿನ್ನ ಗುಣ ಅಂದ್ರೆ ತಾನು ಹೇಳಿದ್ದು ಸಂಗಾತಿಗೆ ಸರಿಯಾಗಿ ಅರ್ಥ ಆಗಿಲ್ಲ, ನಾನೇನೋ ಹೇಳಿದ್ರೆ ಈತನೇನೋ ತಿಳಿಯುತ್ತಾನೆ ಎಂದು ಕಲ್ಪನೆ ಮಾಡಿಕೊಳ್ಳುವ ಗುಣ ಹೆಚ್ಚು. ಕೆಲವು ಸಂದರ್ಭಗಳಲ್ಲಿ ಇದು ವಿಕೋಪಕ್ಕೂ ತಿರುಗುತ್ತದೆ. ಅತಿ ವಿಚಿತ್ರ ಅಂಶ ಈ ರಾಶಿಯ ಸ್ತ್ರೀಯರಲ್ಲಿ ಇದೆ, ಅಕಸ್ಮಾತ್ ಆಕೆ ಸಿಕ್ಕಾಪಟ್ಟೆ ನಗುತ್ತಾ ಇದ್ದಾಳೆ ಅಂದ್ರೆ ಆಕೆಯ ಹೃದಯದ ದುಃಖದಿಂದ ಭಾರವಾಗಿದೆ ಎಂದೇ ಅರ್ಥ. ಅದೇ ರೀತಿ ಆಕೆ ಅಳ್ತಾ ಇದ್ದಾಳೆ ಎಂದರೆ ಅವಳು ಹ್ಯಾಪಿ ಹ್ಯಾಪಿಯಾಗಿದ್ದಾಳೆ ಎಂದು ತಿಳಿಯಿರಿ.
ಮಿಥುನ ರಾಶಿ ಸ್ತ್ರೀ - ಮೀನ ರಾಶಿ ಪುರುಷ : ಮಿಥುನ ರಾಶಿ ಸ್ತ್ರೀಯರ ಮನವು ಎಳೆಯ ಮಕ್ಕಳಂತೆ ಮುಗ್ಧವಾಗಿರುತ್ತದೆ. ಭಾವುಕತೆಯ ಮಾತೊಂದು ರೂಪವೇ ಇವರಾಗಿರುತ್ತಾರೆ. ವೃತ್ತಿ, ತಾಯಿ ತಂದೆಯರ ವಿಷಯದಲ್ಲಿ ಆಗಾಗ ವಿವಾದಗಳು ಉಂಟಾಗುತ್ತವೆ. ಇಂತಹ ಸಂಗತಿಗಳೇ ಸಂಗಾತಿಯೊಂದಿಗೆ ಬಿರುಕು ಉಂಟಾಗಲು ಕಾರಣ ಆಗುತ್ತದೆ. ಯಾವಾಗ ಒಬ್ಬರ ಮನಸ್ಸು ಮತ್ತೊಬ್ಬರ ಬಗ್ಗೆ ಬೇಸರ ತಾಳುತ್ತದೆಯೋ ಆಗ ಮನಸ್ಸಿನ ಅಂತರ ಹೆಚ್ಚಾಗುತ್ತದೆ. ಇನ್ನು ಮೀನ ರಾಶಿಯ ಪುರುಷರ ವಿಷಯಕ್ಕೆ ಬರುವುದಾದರೆ ಇವರು ಕನಸು ಕಾಣುವುದಕ್ಕೆ ಹೆಚ್ಚು ಗಮನ ನೀಡ್ತಾರೆ. ಹೀಗಿದ್ರೆ ಚೆನ್ನ, ಹಾಗಾದ್ರೆ ಇನ್ನೂ ಚೆನ್ನ ಎನ್ನುವ ಕನಸು ಆತನದು. ತನ್ನ ಸಂಗಾತಿಯ ಕನಸುಗಳನ್ನು ಅರ್ಥಮಾಡಿಕೊಂಡು ತನ್ನ ಕೈಲಿ ಆಗುವಂತಹುದ್ದನ್ನು ನೆರೆವೇರಿಸುವ ಪ್ರಯತ್ನ ಮಾಡಿದರೆ ಈಕೆ ಪತಿಯ ಜೊತೆ ಸುಖವಾಗಿರಬಹುದು. ಆದರೆ ಈತ ಹುಚ್ಚು ಹುಚ್ಚಾಗಿ ಕನಸುಗಳನ್ನು ಕಂಡ್ರೆ ಅದನ್ನು ನೆರವೇರಿಸಲು ಸಾಧ್ಯವೇ? ಇದು ಸಹ ಯೋಚಿಸಬೇಕಾದ ವಿಷಯ, ಆಗ ಇದ್ದೆ ಇದೆಯಲ್ಲ ದಂಡಂ ದಶಗುಣಂ!
ಮಿಥುನ ರಾಶಿ ಪುರುಷ - ಮೀನ ರಾಶಿ ಸ್ತ್ರೀ : ಮೀನ ರಾಶಿ ಸ್ತ್ರೀ ಪರಿಸ್ಥಿತಿಗೆ ಅನುಗುಣವಾಗಿ ಬದಲಾಗುವ ಗುಣ ಹೊಂದಿರುತ್ತಾಳೆ. ತನ್ನ ಬಾಳ ಸಂಗಾತಿಯ ಮನಸ್ಸಿನಂತೆ-ಇಚ್ಛೆಯಂತೆ ನಡೆಯಲು ಇಷ್ಟ ಪಡುತ್ತಾಳೆ. ಕಾಣಿಕೆಗಳನ್ನು ಕೊಟ್ಟು -ತೆಗೆದುಕೊಳ್ಳುವ ವಿಷಯ ಇಬ್ಬರಿಗೂ ಖುಷಿ ತರುವಂತಹದ್ದು. ಮಿಥುನ ರಾಶಿ ಪುರುಷ ಸಹ ಬದಲಾವಣೆಯನ್ನು ಇಷ್ಟಪಡುವ ವ್ಯಕ್ತಿತ್ವ. ಆ ಮಾರ್ಪಾಟಿನ ವಿಷಯದಲ್ಲಿ ತನ್ನ ಸಹಕಾರದ ಅಗತ್ಯ ತುಂಬಾ ಇರುತ್ತದೆ ಎನ್ನುವ ಸರಳ ಸತ್ಯವನ್ನು ಈ ಜಾಣೆ ಅರಿತಿರುತ್ತಾಳೆ. ಈ ಸಂಗತಿಯೇ ಇವರಿಬ್ಬರ ದಾಂಪತ್ಯ ಹಸನಾಗಿರಿಸುತ್ತದೆ. ಈ ಜೋಡಿ ಜೋಡಿ ಹಕ್ಕಿಗಳೆಂದು ಕರೆಸಿಕೊಳ್ಳುವುದಕ್ಕೆ ಲಾಯಕ್ಕಾಗಿರುತ್ತಾರೆ. ಅಷ್ಟೊಂದು ಸಾಮರಸ್ಯ ಹಾಗೂ ಪ್ರೀತಿ ಇವರಿಬ್ಬರ ಬಾಂಧವ್ಯದಲ್ಲಿ ಇರುತ್ತದೆ. ಇವರಿಬ್ಬರಿಗೂ ಒಬ್ಬರ ಮನಸ್ಸು ಮತ್ತೊಬರಿಗೆ ಸುಲಭವಾಗಿ ಅರ್ಥವಾಗಿ ಬಿಡುತ್ತದೆ. ಇಂತಹ ಸಂಗಾತಿಯನ್ನು ತಾನೆ ಎಲ್ಲರು ಬಯಸುವುದು. ಸರಸ ಜನನ, ವಿರಸ ಮರಣ, ಸಮರಸವೇ ಜೀವನ ಎಂಬ ಬೇಂದ್ರೆಯವರ ನುಡಿಮುತ್ತನ್ನು ಗಮನವಿಟ್ಟುಕೊಂಡರೆ ಜೀವನದಲ್ಲಿ ಎಲ್ಲವೂ ಸಲೀಸು. (ಇತರ ರಾಶಿ ಭವಿಷ್ಯಗಳಿಗೆ ಇಲ್ಲಿ ಕ್ಲಿಕ್ಕಿಸಿ.)
(ಮುಂದಿನ ಕಂತಿನಿಂದ ಕರ್ಕಾಟಕ ರಾಶಿಯ ಪುರುಷ ಸ್ತ್ರೀಯರ ಬಾಂಧವ್ಯ ಇತರ ರಾಶಿಯವರೊಂದಿಗೆ ಹೇಗಿರುತ್ತದೆ ಎಂಬುದನ್ನು ತಿಳಿಯುವಿರಿ.)
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications