ಪಕ್ಕದ್ಮನೆಯವ್ರಿಗೆ ಹೊಟ್ಟೆ ಕಿಚ್ಚಾಗುವಂತೆ ಬದುಕಿರಿ

* ಧವಳ
ಮಿಥುನ ರಾಶಿ ಪುರುಷ - ಧನುಸ್ಸು ರಾಶಿ ಸ್ತ್ರೀ : ಭಾವುಕತೆ ಪ್ರತಿಯೊಬ್ಬರಲ್ಲೂ ಹುದುಗಿರುವ ಸಂಗತಿ. ಆದರೆ ಕೆಲವರಲ್ಲಿ ಅದರ ಪ್ರಮಾಣ ಹೆಚ್ಚಾಗಿರುತ್ತದೆ. ಧನಸ್ಸು ರಾಶಿ ಸ್ತ್ರಿಯರಲ್ಲೂ ಇಂತಹುದ್ದೆ ಗುಣ ಇದೆ. ಆದರೆ ಅದರ ಪ್ರಮಾಣ ಅತಿ ಹೆಚ್ಚಾಗಿರುವುದರಿಂದ ಮಾತನಾಡುವ ರಭಸದಲ್ಲಿ ಅತೀ ಭಾವುಕತೆ ಉಂಟಾಗಿ ಬಿಡುತ್ತದೆ. ಇವರಿಗೆ ಉದ್ವೇಗವೂ ಜಾಸ್ತಿ. ಆದರೆ ಮಿಥುನ ರಾಶಿ ಪುರುಷ ಇದಕ್ಕೆ ಸಂಪೂರ್ಣ ವಿರುದ್ಧ ಗುಣಸ್ವಭಾವ ಹೊಂದಿರುತ್ತಾರೆ. ಇವರಿಗೊಂದು ವಿಚಿತ್ರ ಸ್ವಭಾವವಿದೆ. ತನ್ನ ಸಂಗಾತಿಗೆ ನೋವು ಉಂಟು ಮಾಡುವ ವಿಷಯದಲ್ಲಿ ಮುಂದು. ನೋಯಿಸಿ ಸುಮ್ಮನಾಗೋದಿಲ್ಲ, ತಮ್ಮ ತಪ್ಪಿನ ಅರಿವಾಗಿ ಆಕೆಯನ್ನು ಸಮಾಧಾನ ಮಾಡಲು ಹೊರಡುತ್ತಾರೆ. ಅದೇನೋ ಹೇಳ್ತಾರಲ್ಲ ಆತುರಗಾರನಿಗೆ ಬುದ್ಧಿಮಟ್ಟ ಎಂದು, ಹಾಗೆ. ಇದು ಇವರ ಬದುಕಲ್ಲಿ ನಡೆಯುವ ಸಾಮಾನ್ಯ ಸಂಗತಿ. ಹೇಗಿದ್ರು ತಾವು ದುರ್ವಾಸಮುನಿ ವಂಶಕ್ಕೆ ಸೇರಿದವರು, ತಮ್ಮ ಪತ್ನಿಯು ಕಾವೇರಿ-ಗಂಗೆ ಕಾಂಟ್ರಾಕ್ಟ್ ತಗೊಂಡಿದ್ದಾರೆ ತಮಗೆ ಎಂದು ಗೊತ್ತಿದೆ, ಸೋ ನೀವು ಸ್ವಲ್ಪ ಸಮಾಧಾನಚಿತ್ತರಾದರೆ ಒಳ್ಳೆಯದು. ಇಷ್ಟೆಲ್ಲಾ ಜಟಾಪಟಿ ಇದ್ರು ಒಬ್ಬರ ಭಾವನೆಯನ್ನು ಮತ್ತೊಬ್ಬರು ಗೌರವಿಸುತ್ತಾರೆ. ಇಂತಹ ವಿಚಿತ್ರಗಳು ದಾಂಪತ್ಯ ಬದುಕಲ್ಲಿ ಇರುತ್ತವೆ.
ಮಿಥುನ ರಾಶಿ ಸ್ತ್ರೀ - ಮಕರ ರಾಶಿ ಪುರುಷ : ಕೆಲವರ ಗುಣ ಸ್ವಲ್ಪ ವಿಚಿತ್ರ. ಅದೇನು ಹೇಳ್ತಾರಲ್ಲ ಶಿವಲೀಲೆ ಎಂದು. ಪ್ರಪಂಚಕ್ಕೆ ಅರ್ಥ ಆಗುವಂತಹ ಸರಳ ವಿಷಯ ಅವರಿಗೆ ಅರ್ಥ ಆಗುವುದೇ ಇಲ್ಲ. ಈ ಅಂಶವೇ ಮಕರ ರಾಶಿ ಪುರುಷರಿಗೆ ಆಶ್ಚರ್ಯ ತರಿಸುವ ಸಂಗತಿ. ಪ್ರಪಂಚಕ್ಕೆ ಅರ್ಥ ಆಗುವ ಸರಳ ವಿಷಯ ಮಿಥುನ ರಾಶಿ ಸ್ತ್ರೀಗೆ ಯಾಕೆ ಗೊತ್ತೇ ಆಗ್ತಾ ಇಲ್ಲ? ಎಂದು ಸದಾ ಚಿಂತಿಸ್ತಾರೆ. ಆದರೆ ಮಿಥುನ ರಾಶಿ ಸ್ತ್ರೀಗೆ ಸ್ವಲ್ಪ ಹಾಗೆ ಪೆದ್ದು. ಜೊತೆಗೆ ಪುಕ್ಕಲು ಸ್ವಭಾವ. ಸ್ವಲ್ಪ ಸಹನೆಯಿಂದ ಆಕೆಯನ್ನು ತಿದ್ದಿದರೆ ಬದುಕು ಸುಂದರ. ಎಲ್ಲರು ಒಂದೇ ರೀತಿಯ ಗುಣ ಹೊಂದಿರಬೇಕು ಎಂದೇನೂ ಇಲ್ಲ ತಾನೆ. ಬದುಕು ಚೆನ್ನಾಗಿರಬೇಕಾದರೆ ನೀವು ಹೆಂಡತಿಯ ವಿಷಯದಲ್ಲಿ ಸಹನೆ ತೆಗೆದುಕೊಂಡರೆ ಆಯ್ತು. ಜೀವನಕ್ಕಿಂತ ಏನ್ರೀ ಮುಖ್ಯ? ಅವಳ ಪಾಡಿಗೆ ಅವಳಿರಲಿ ನನ್ನ ಪಾಡಿಗೆ ನಾನು ನಿರ್ಧಾರ ತಗೋತೀನಿ ಎಂದು ಆತುರ ಪಟ್ರೋ ತೊಂದ್ರೆ ಕಟ್ಟಿಟ್ಟ ಬುತ್ತಿ. (ಇತರ ರಾಶಿ ಭವಿಷ್ಯಗಳಿಗೆ ಇಲ್ಲಿ ಕ್ಲಿಕ್ಕಿಸಿ.)
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications