ನಿಮಗೊಂದು ಕಿವಿಮಾತು, ಹೆಂಡ್ತಿ ಮಾತು ಕೇಳಿ!

* ಧವಳ
ಮಿಥುನ ರಾಶಿ ಪುರುಷ - ವೃಶ್ಚಿಕ ರಾಶಿ ಸ್ತ್ರೀ : ಈ ಪುರುಷನಿಗೆ ಸ್ತ್ರೀಯನ್ನು ಹೆಚ್ಚು ಪ್ರೀತಿಸುವುದು ಗೊತ್ತಿಲ್ಲ. ಒಬ್ಬರೊಂದಿಗೆ ಮತ್ತೊಬ್ಬರು ವಿಶ್ವಾಸ ಹೊಂದಿರುತ್ತಾರೆ. ಮಾನಸಿಕ ಅಂತರ ಹೆಚ್ಚಾದರೆ ಕಾರಣ ತಿಳಿಯುವುದೇ ಇಲ್ಲ ಇಬ್ಬರಿಗೂ! ಪ್ರಪಂಚದ ಮಾತು ಅರ್ಥಾತ್ ಪರರ ಮಾತಿಗೆ ಹೆಚ್ಚು ಕಿವಿ ಕೊಡುವ ಮನುಷ್ಯ ಈತ. ಅಂದ್ರೆ ಬದುಕು ಹಂಚಿಕೊಳ್ಳಲು ಬಂದ ಬಾಳ ಸಂಗಾತಿಯ ಮಾತಿಗಿಂತ ಪಕ್ಕದ ಮನೆಯ ಆಂಟಿ ಮಾತೇ ಸರಿ ಅಂದ್ರೆ ಯಾರಿಗೆ ಕೋಪ ಬರುವುದಿಲ್ಲ ಹೇಳಿ? ಈತನನ್ನು ಆ ಭಗವಂತ ಅದ್ಯಾವ ಗಳಿಗೆಯಲ್ಲಿ ಸೃಷ್ಟಿ ಮಾಡಿದನೋ ಗೊತ್ತಿಲ್ಲ, ಸದಾ ಬೇರೆಯವರ ಮಾತಿಗೆ ಮರ್ಯಾದೆ. ಇದು ಸಂಸಾರದಲ್ಲಿ ಸಮರಸ ಕಡಿಮೆ ಆಗಲು ಕಾರಣ ಆಗುತ್ತದೆ. ರೀ ಈ ದುರ್ಗುಣದಿಂದ ಮನೆಯ ನೆಮ್ಮದಿಯನ್ನು ಪರರಿಗೇಕೆ ಮಾರ್ತೀರಿ? ನಂಬಿ ಬಂದವಳ ಹೃದಯಕ್ಕೆ ಘಾಸಿ ಮಾಡದಿರಿ.
ಮಿಥುನ ರಾಶಿ ಸ್ತ್ರೀ - ಧನಸ್ಸು ರಾಶಿ ಪುರುಷ : ಧನಸ್ಸು ರಾಶಿ ಪುರುಷ ಉತೃಷ್ಟವಾದ ಸ್ವಭಾವ ಹೊಂದಿರುತ್ತಾರೆ. ಒಂದರ್ಥದಲ್ಲಿ ಹೇಳುವುದಾದರೆ ಭೂಮಿ ತೂಕದ ಮನುಷ್ಯ. ಗೌರವಾನ್ವಿತ ವ್ಯಕ್ತಿತ್ವ. ಆದ್ರೆ ಹೆಂಡತಿ ಮಾತ್ರ ಉಹುಂ ಒಂದು ಮಾತಿಗೆ ಬದ್ಧ ಆಗಿರೋಲ್ಲ. ಇವತ್ತು ಪಿಜ್ಜಾ ತಿನ್ನೋಣ ಎಂದು ಹೇಳಿರ್ತಾಳೆ ಆದ್ರೆ ನಾಳೆ ಬಜ್ಜಿ ಸಾಕು ಎಂದು ನಿರ್ಧಾರ ಬದಲಾಯಿಸಿ ಬಿಡ್ತಾಳೆ. ಪಾಪ ಪಿಜ್ಜಾ ಆಸೆಯನ್ನು ಹೊತ್ತ ಪತಿದೇವ ಬಜ್ಜಿಯಲ್ಲೇ ತೃಪ್ತಿ ಹೊಂದಬೇಕು. ಆದರೆ ಈ ಜೋಡಿ ಜಗಳ ಆಡೋಕೆ ಪ್ರಾಮುಖ್ಯತೆ ಕೊಡಲ್ಲ, ಇದೆ ಇವರ ವಿಶೇಷತೆ. ಒಂದರ್ಥದಲ್ಲಿ ಸಮಾಜಕ್ಕೆ ಈ ಜೋಡಿಯು ಇಷ್ಟ ಆಗುತ್ತದೆ. ಮತ್ತೊಂದು ವಿಶೇಷ ಮಿಥುನ ರಾಶಿ ಸ್ತ್ರಿಯದ್ದು ಇದೆ. ಎಲ್ಲದಕ್ಕೂ ತಪ್ಪು ತಿಳಿಯಲ್ಲ. ಸಾರಿ ಕಣೆ ನಿಜವಾಗಿಯು ಆಫೀಸ್ನಲ್ಲಿ ಮೀಟಿಂಗ್ ಇತ್ತು ಅದಕ್ಕೆ ಸಂಜೆ ನಿನ್ನನ್ನು ಶಾಪಿಂಗ್ ಗೇ ಕರೆದುಕೊಂಡು ಹೋಗಲು ಆಗಲಿಲ್ಲ ಎಂದರೆ, ಹೋಗ್ಲಿ ಬಿಡಿ ಪಾಪ ನೀವೇನು ಮಾಡೋಕೆ ಆಗುತ್ತೆ ಆ ಹಾಗಲಕಾಯಿ ಮುಖದ ಬಾಸ್ ಹತ್ರ ಹೆಣಗೋದು ಅಂದ್ರೆ ಸುಮ್ನೆನಾ? ಎಂದು ಸಮಾಧಾನ ಚಿತ್ತದಿಂದ ಕಾಫಿ ಕೊಟ್ಟು ಒಳ್ಳೆಯ ಮಾತುಗಳನ್ನು ಹೇಳುವಂತಹ ಒಳ್ಳೆಯ ಹೆಣ್ಣುಮಗಳು. ಇಂತಹ ಸಂಗಾತಿಯನ್ನು ಹೆಚ್ಚು ಪ್ರೀತಿಯಿಂದ ಕಾಪಾಡುವ ಹೊಣೆ ನಿಮ್ಮ ಮೇಲೆ ಇದೆ ಮಹನೀಯರೇ! (ಇತರ ರಾಶಿ ಭವಿಷ್ಯಗಳಿಗೆ ಇಲ್ಲಿ ಕ್ಲಿಕ್ಕಿಸಿ.)
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications