ಪ್ರೀತಿನೇ ದ್ಯಾವ್ರು ತಂದ ಆಸ್ತಿ ನಮ್ಮ ಪಾಲಿಗೆ

* ಧವಳ
ವೃಷಭ ರಾಶಿ ಪುರುಷ ಕರ್ಕಾಟಕ ರಾಶಿ ಸ್ತ್ರಿ :
ವೃಷಭ ರಾಶಿ ಪುರುಷರು ಒಂದು ರೀತಿಯಲ್ಲಿ ಸ್ಥಿತಪ್ರಜ್ಞರು. ಏನೂ ಬೇಡ-ಯಾವುದೂ ಬೇಡ. ಒಟ್ಟಾರೆ ಕಲ್ಲಿನಂತೆ. ಆದ್ರೆ ಕರ್ಕಾಟಕ ರಾಶಿ ಸ್ತ್ರೀಯರು ನೀರಂತೆ ಸದಾ ಒಂದೇ ರೀತಿಯ ನಿರ್ಧಾರಕ್ಕೆ ಬದ್ಧರಾಗಿ ಇರುವುದಿಲ್ಲ. ವೃಷಭ ರಾಶಿ ಪುರುಷರು ಪ್ರೀತಿಯ ವಿಷಯದಲ್ಲಿ ಲೇಟ್ ಲತೀಫ್ ಗಳು. ಆದರೆ ಕರ್ಕಾಟಕ ರಾಶಿ ಸ್ತ್ರೀಯರು ಹಾಗಲ್ಲ ಪ್ರೀತಿಯ ವಿಷಯದಲ್ಲಿ ಸ್ವಲ್ಪ ಜಾಸ್ತೀನೆ ಫಾಸ್ಟ್. ಮಕ್ಕಳು, ಮನೆ, ಸಂಸಾರ, ಅಡುಗೆ... ಇಂಥ ವಿಷಯಗಳ ಬಗ್ಗೆ ಇವರಿಗೆ ನಿರಾಸಕ್ತಿ. ತಮಾಷೆ ಅಂದ್ರೆ ಇಂತಹ ಬೇಸರಗಳು ಕೇವಲ ಮದುವೆ ಆಗುವ ತನಕ, ಆದ್ರೆ ವೈವಾಹಿಕ ಜೀವನಕ್ಕೆ ಒಮ್ಮೆ ಕಾಲಿಟ್ಟರು ಅಂದ್ರೆ ಕರ್ಕಾಟಕ ರಾಶಿ ಸ್ತ್ರೀಯರು ಬದುಕನ್ನು ತುಂಬಾ ಇಷ್ಟ ಪಡೋಕೆ ಆರಂಭಿಸುತ್ತಾರೆ. ಒಟ್ಟಾರೆ ಒಂದು ಬಗೆಯಲ್ಲಿ ವಿಚಿತ್ರ ಜೀವಗಳು. ಇನ್ನು ವೃಷಭ ರಾಶಿ ಪುರುಷರು ತಮ್ಮ ಸಂಗಾತಿ ಸದಾ ತಮ್ಮ ಜೊತೇನೆ ಇರಬೇಕು ಎಂದು ಬಯಸುತ್ತಾರೆ. ಇವರಲ್ಲಿ ಪ್ರೀತಿಯ ರೇಟಿಂಗ್ ಸಿಕ್ಕಾಪಟ್ಟೆ ಜಾಸ್ತಿ. ಒಂದರ್ಥದಲ್ಲಿ ಹೆಂಡತಿ ಸೆರಗು ಹಿಡಿದುಕೊಂಡು ಓಡಾಡುವ ಮುದ್ದಿನ ಮಾಮ! ಇಬ್ಬರು ಎಂತಹ ಪರಿಸ್ಥಿತಿಯಲ್ಲೂ ಸಂಬಂಧಗಳನ್ನು ಹಾಳು ಮಾಡಿಕೊಳ್ಳುವುದಿಲ್ಲ. ಪ್ರೀತಿಯೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಪಾಲಿಗೆ ಎಂದು ನಂಬಿರುವುದೇ ಇದಕ್ಕೆ ಕಾರಣ. ಪ್ರೀತಿ-ಪ್ರೇಮ ಇವರ ಬದುಕನ್ನು ಸುಂದರವಾಗಿಡುತ್ತದೆ.
ವೃಷಭ ರಾಶಿ ಸ್ತ್ರೀ - ಸಿಂಹ ರಾಶಿ ಪುರುಷ :
ವೃಷಭರಾಶಿ ಸ್ತ್ರೀಯರು ಸಂಗೀತಪ್ರಿಯರು. ಮುಖ್ಯವಾಗಿ ಮೆಲೋಡಿ ಹಾಡುಗಳ ಬಗ್ಗೆ ಹೆಚ್ಚು ಆಸಕ್ತಿ. ಆದರೆ ಸಿಂಹ ರಾಶಿ ಪುರುಷರಿಗೆ ಅಬ್ಬರದ ಸಂಗೀತದತ್ತ ಹೆಚ್ಚಿನ ಒಲವು. ಈ ಮಂದ್ರಸ್ಥಾಯಿ ಹಾಗೂ ಏರುಸ್ಥಾಯಿಗಳು ಅನೇಕ ಬಾರಿ ಇವರಿಬ್ಬರಲ್ಲಿ ಜಗಳ ತಂದಿಡುತ್ತದೆ. ಒಂದರ್ಥದಲ್ಲಿ ಇಬ್ಬರಲ್ಲೂ ಏತಿ ಹಾಗೂ ಪ್ರೇತಿ ಅನ್ನುವ ನೇಚರ್. ಹಾಗಂತ ಇಬ್ಬರೂ ಸದಾ ಶರಂಪರ ಎಂದು ಜಗಳ ಆಡಿಕೊಂಡು ಇರ್ತಾರೆ ಎಂದು ತಿಳಿಯುವ ಅಗತ್ಯವಿಲ್ಲ. ದಾಂಪತ್ಯ ಬದುಕು ತುಂಬಾ ಸುಂದರವಾಗಿ ಇಟ್ಟುಕೊಂಡಿರ್ತಾರೆ. ಎಂತಹ ಕಷ್ಟ ಬಂದ್ರು ಇಬ್ಬರೂ ಎದುರಿಸಿ ಬದುಕನ್ನು ಹಸನಾಗಿಟ್ಟು ಕೊಂಡಿರ್ತಾರೆ. ಅದ್ಭುತ ರೀತಿಯಲ್ಲಿ ಬಾಳ್ವೆ ನಡೆಸುತ್ತಿರುತ್ತಾರೆ.
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications