ಹೆಂಡತಿ ದಡ್ಡಿ ಅಂತ ಹೀಗಳಿದೀರಿ, ಜೋಕೆ!

ಸಿಂಹ ರಾಶಿ ಪುರುಷ - ಕನ್ಯಾ ರಾಶಿ ಸ್ತ್ರೀ : ಈ ಜೋಡಿಯಲ್ಲಿ ಸ್ವಲ್ಪ ಹೆಚ್ಚುಕಡಿಮೆ ಗಣಗಳು ಜೊತೆಯಾಗಿವೆ. ಅಂದ್ರೆ ಒಂದು ಗಣ ಅತಿ ಹೆಚ್ಚಾದರೆ ಮತ್ತೊಂದು ತುಂಬಾ ಕಡಿಮೆ. ಅಂತಹುದರಲ್ಲಿ ಇಬ್ಬರಲ್ಲೂ ಗಲಾಟೆ ಗದ್ದಲ ಇದ್ದದ್ದೇ. ಸರಿ ಯಾರೇ ಆಗಿರಲಿ, ಆಗ ಈ ಜಗಳ ಪರಿಹಾರ ಆಗಲ್ಲ ಎಂದು ತಿಳಿದರೆ ಅದು ತಪ್ಪು ಗ್ರಹಿಕೆ. ಯಾಕೆಂದ್ರೆ ಆ ಜೋಡಿ ಜಗಳವನ್ನು ಕೇವಲ ಆ ಕ್ಷಣಕ್ಕೆ ಮೀಸಲಾಗಿಡ್ತಾರೆ. ಇಬ್ಬರು ಪ್ರೀತಿಯ ವಿಷಯದಲ್ಲಿ ಪಕ್ಕಾ ಪರ್ಫೆಕ್ಟ್. ಆದ್ರೆ ಗಂಡಸು ಬುದ್ಧಿ ಎಲ್ಲಿಗೆ ಹೋಗುತ್ತೆ ಎನ್ನುವ ಕೊರಗು ಈಕೆಯದು. ಕಾರಣ ಇಷ್ಟೆ. ಆತನೇ ಮನೆಯ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳಲು ಇಷ್ಟ ಪಡುತ್ತಾನೆ. ಆದರೆ ಅದು ಎಲ್ಲಾ ಸಂದರ್ಭದಲ್ಲೂ ಸರಿಯಲ್ಲ. ಈ ಅಂಶದ ಬಗ್ಗೆ ಕೇಳಿದರೆ ಆತ ಹೇಳೋದೇ ಬೇರೆ. ಪುರುಷ ಸಿಂಹನ ಪ್ರಕಾರ, ತನ್ನ ಹೆಂಡತಿಗೆ ತಿಳಿವಳಿಕೆ ತುಂಬಾ ಕಡಿಮೆ. ನಾನು ಆದ್ರೆ ತುಂಬಾ ಜಾಣ. ಸೊ ನನಗೆ ಸರಿಯಾದ ನಿರ್ಧಾರ ತೆಗೆದುಕೊಳ್ಳಲಿಕ್ಕೆ ಸಾಧ್ಯ. ವಿಶೇಷ ಅಂದ್ರೆ ಕನ್ಯಾ ರಾಶಿ ಸ್ತ್ರೀ ಪುರುಷನಷ್ಟೇ ಬುದ್ಧಿವಂತಿಕೆ, ಜಾಣ್ಮೆ, ತಿಳಿವಳಿಕೆ ಹೊಂದಿರುತ್ತಾಳೆ. ಇಷ್ಟೆಲ್ಲಾ ಕಿರಿಕಿರಿ ಇದ್ರೂ ಪ್ರೀತಿ -ನಂಬಿಕೆಯ ವಿಷಯದಲ್ಲಿ ತುಂಬಾ ಆಸ್ಥೆ ಇರುತ್ತದೆ. ವಿರುದ್ಧ ರೀತಿಯ ಅಂಶಗಳು ಒಟ್ಟಾಗಿವೆ ಎಂದು ಅನ್ನಿಸಿದರು ಈ ದಂಪತಿಗಳ ಬದುಕು ಸುಂದರವಾಗಿ ಇರುತ್ತದೆ.
ಸಿಂಹ ರಾಶಿ ಸ್ತ್ರೀ - ತುಲಾ ರಾಶಿ ಪುರುಷ : ತುಲಾ ರಾಶಿ ಪುರುಷನ ವಿಷಯದಲ್ಲಿ ಸ್ವಲ್ಪ ಗಂಭೀರವಾದ ಸಂಗತಿಯೊಂದಿದೆ. ಆತನಿಗೆ ಪಾರ್ಟಿಗಳಿಗೆ ಹೋಗುವುದಕ್ಕೆ ಸಿಕ್ಕಾಪಟ್ಟೆ ಆಸಕ್ತಿ. ದಂಪತಿಗಳು ಸದಾ ಒಟ್ಟಿಗೆ ಇದ್ರೆ ಸರಿ, ಯಾವುದೇ ರೀತಿಯ ತೊಂದರೆ ಇರುವುದಿಲ್ಲ. ಅಯ್ಯೋ ನನಗೆ ಮೂಡಿಲ್ಲ ಎಂದು ಹೆಣ್ಣುಮಗಳು ಹೇಳಿದಳಂದ್ರೆ ಈತನ ಆಸಕ್ತಿ ಅಕ್ಕಪಕ್ಕ ಹೊರಳುತ್ತದೆ. ಅದೆಷ್ಟರ ಮಟ್ಟಿಗೆ ಅಂದ್ರೆ, ಯಾವುದೇ ಸಣ್ಣ-ಪುಟ್ಟ ಫಂಕ್ಷನ್ಗೆ ಆಗಲಿ ಈತನ ಜೊತೆ ಇಷ್ಟ ಇರಲಿ ಇಲ್ಲದೆ ಇರಲಿ ಹೋಗಲೇಬೇಕು. ಅದು ಆಕೆಯ ಭವಿಷ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು. ಅಪ್ಪಿತಪ್ಪಿ ಆತ ಒಬ್ಬನೇ ಕಾರ್ಯಕ್ರಮಗಳಿಗೆ ಹೋದನೋ ಸ್ವಲ್ಪ ಗಮನ ಅತ್ತಿತ್ತ ಹರಿಸುತ್ತಾನೆ. ಸಿಂಹ ರಾಶಿ ಸ್ತ್ರೀ ಸುಮ್ಸುಮ್ನೆ ಕೋಪ ಮಾಡಿಕೊಳ್ಳುವುದಿಲ್ಲ. ಆದರೆ ಬದುಕಲ್ಲಿ ಸಂಗಾತಿಯ ಈ ಗುಣ ಆಕೆಯಲ್ಲಿ ಕೋಪ ತರಿಸುತ್ತದೆ. ಏನೆ ಹೇಳಿ ದಾಂಪತ್ಯ ಗೀತೆಯಲ್ಲಿ ನಂಬಿಕೆ ತುಂಬಾ ಮುಖ್ಯ. ಹೊರಗಡೆಯ ಆಹಾರ ತಿಂದು ಆರೋಗ್ಯ ಕೆಡಿಸಿ ಕೊಳ್ಳುವುದಕ್ಕಿಂತ ಮನೆಯಲ್ಲಿ ಹಾಯಾಗಿ ಸುರಕ್ಷಿತವಾಗಿದ್ದರೆ ಅದರಿಂದ ಆಗುವ ಪ್ರಯೋಜನ ಯಾರಿಗೆ ಹೇಳಿ? ತಪ್ಪು ಹೆಜ್ಜೆ ಇಡುವುದಕ್ಕೆ ಮುನ್ನ ಒಮ್ಮೆ ಯೋಚಿಸಿ. ನಿರ್ಧರಿಸಿ. (ಇತರ ರಾಶಿ ಭವಿಷ್ಯಗಳಿಗೆ ಇಲ್ಲಿ ಕ್ಲಿಕ್ಕಿಸಿ.)
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications