ಪೊಳ್ಳು ಪ್ರೀತಿ ಹೆಚ್ಚಿಗೆ ದಿನ ಬಾಳಿಕೆ ಬರಲ್ಲ!

ಸಿಂಹ ರಾಶಿ ಸ್ತ್ರೀ - ಸಿಂಹ ರಾಶಿ ಪುರುಷ : ಇವರಿಬ್ಬರು ಒಂದೇ ರಾಶಿಯವರು ಆದ್ದರಿಂದ ಹೊಂದಾಣಿಕೆ ತುಂಬಾ ಕಷ್ಟ. ಇಬ್ಬರು ತಮ್ಮ ಮೂಗಿನ ನೇರಕ್ಕೆ ನಡೆಯುವ ಪೈಕಿ. ಅದು ಸಾಮಾನ್ಯವಾಗಿ ಎಲ್ಲಾ ಬಗೆಯ ತೊಂದರೆಗಳಿಗೆ ಕಾರಣ ಆಗುತ್ತದೆ. ಆದರೆ ಇಲ್ಲಿ ಮತ್ತೊಂದು ವಿಚಿತ್ರವಾದ ಸಂಗತಿ ಇದೆ. ಸಿಂಹ ರಾಶಿಯ ಸ್ತ್ರೀಯರಿಗೆ ಬೇರೆ ರಾಶಿಯರ ಬಗ್ಗೆ ಮೋಹ ಉಂಟಾಗುತ್ತದೆ, ಆದ್ರೆ ತಮ್ಮದೇ ರಾಶಿ ಪುರುಷನ ಬಗ್ಗೆ ಇಷ್ಟ ಆಗದು. ಆದರೆ ಸಿಂಹ ರಾಶಿ ಪುರುಷರಿಗೆ ತಮ್ಮ ರಾಶಿ-ಬೇರೆಯ ರಾಶಿ ಅನ್ನುವ ಭೇದ -ಭಾವ ಇಲ್ಲ. ಅವರಿಗೆ ತಮ್ಮ ಸಂಗಾತಿ ಬಗ್ಗೆ ಹೆಚ್ಚಿನ ಪ್ರೀತಿ. ಸಿಂಹ ರಾಶಿ ಸ್ತ್ರೀ - ಪುರುಷರಲ್ಲಿ ಒಂದು ಭಿನ್ನ ಗುಣ ಇದೆ. ಇಬ್ಬರಲ್ಲೂ ಸೋಗಲಾಡಿತನ ಹೆಚ್ಚಾಗಿ ಕಂಡು ಬರುತ್ತದೆ. ಅದು ಇವರಿಬ್ಬರ ಬದುಕಿನ ಮೈನಸ್ ಪಾಯಿಂಟ್. ನಿನ್ನನ್ನು ಬಿಟ್ರೆ ನನಗ್ಯಾರು, ನನ್ನನು ಬಿಟ್ರೆ ನಿನಗ್ಯಾರು ಎನ್ನುವ ಬಣ್ಣದ ಮಾತು ಆಡಿ ಒಬ್ಬರಿಗೊಬ್ಬರು ತಲೆ ಸವರುತ್ತಾರೆ. ದಾಂಪತ್ಯ-ಪ್ರೀತಿಯಲ್ಲಿ ಇಂತಹ ಪೊಳ್ಳುಗಳು ಹೆಚ್ಚು ದಿನ ಬಾಳಿಕೆ ಬರುವುದಿಲ್ಲ ಎಂದು ತಿಳಿದರೆ ಬದುಕು ಸುಂದರವಾಗುತ್ತದೆ.
ಸಿಂಹ ರಾಶಿ ಸ್ತ್ರೀ - ಕನ್ಯಾ ರಾಶಿ ಪುರುಷ : ತಮ್ಮನ್ನು ಯಾರೇ ಆಗಲಿ ಹೊಗಳುತ್ತಿರಬೇಕು, ಹಾಗೆ ಮಾಡಿದ್ರೆ ಇವರಂತಹ ಒಳ್ಳೆಯ ವ್ಯಕ್ತಿ ಮತ್ತೊಬ್ಬರಿಲ್ಲ. ಹಾಗಂತ ಸುಳ್ಳು ಸುಳ್ಳು ಹೊಗಳುವ ಸಾಹಸಕ್ಕೆ ಹೋಗುವುದು ತಪ್ಪು. ಆಮೇಲೆ ಒಂದು ಹೋಗಿ ಮತ್ತೊಂದಕ್ಕೆ ದಾರಿ ಮಾಡಿ ಕೊಡುತ್ತದೆ ಅಷ್ಟೆ. ಕನ್ಯಾ ರಾಶಿ ಸ್ತ್ರೀಯರಿಗೆ ಇಷ್ಟ ಆಗುವ ಕೆಲಸ ಮಾಡಿಕೊಡಿ ಆಗ ಅವರಿಗೆ ಆಗುವ ಆನಂದ ಅಷ್ಟಿಷ್ಟಲ್ಲ! ಇವರ ಈ ಆನಂದವು ಸ್ವಲ್ಪ ದುಬಾರಿಯಾಗಿದ್ರೆ ಮತ್ತಷ್ಟು ಖುಷಿ. ಕೈ ಬಿಚ್ಚಿ ಹಣ ಖರ್ಚು ಮಾಡಿ ಗಿಫ್ಟ್ ಕೊಟ್ರೆ ಅವರಷ್ಟು ಸುಖಿಗಳು ಮತ್ತೊಬ್ಬರಿಲ್ಲ. ಹಾಗೆಂದು ಸಂಗಾತಿ ಹೆದರುವ ಅಗತ್ಯವಿಲ್ಲ. ಪ್ರೀತಿಯ ಮುಂದೆ ಎಲ್ಲವು ದೊಡ್ದ ಸೊನ್ನೆ. ನೀವು ಅವಳ ಮೇಲೆ ತುಂಬಾ ಪ್ರೀತಿ ತೋರಿಸಿ ಆಗ ಈ ವಸ್ತುಗಳು, ಗಿಫ್ಟುಗಳು ಯಾವುದೇ ಆಗಲಿ ಅಂತಹ ಸಂಗತಿಗಳಿಗೆ ಆಕೆ ಆದ್ಯತೆ ನೀಡುವುದಿಲ್ಲ. ಪ್ರೀತಿಯ ಮುಂದೆ ಎಲ್ಲವು ಚಿಕ್ಕದಾಗಿ ಬಿಡುತ್ತದೆ. (ಇತರ ರಾಶಿ ಭವಿಷ್ಯಗಳಿಗೆ ಇಲ್ಲಿ ಕ್ಲಿಕ್ಕಿಸಿ.)
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications