Artificial Intelligence: AI ಕಾರಣದಿಂದ ಬೆಂಗಳೂರಿನ ಈ ಭಾಗಗಳಲ್ಲಿ ಹೆಚ್ಚಾಯ್ತು ಟ್ರಾಫಿಕ್, ಹೇಗೆ?
ಕೃತಕ ಬುದ್ಧಿಮತ್ತೆ (ಎಐ) ಕಾಲ ಕ್ರಮೇಣವಾಗಿ ಉದ್ಯೋಗಗಳಲ್ಲಿ ಕ್ರಾಂತಿ ಮೂಡಿಸುತ್ತಿರುವುದು ಒಂದೆಡೆಯಾದರೆ, ಉದ್ಯೋಗಿಗಳನ್ನು ಮನೆಗೆ ಕಳುಹಿಸುವಲ್ಲಿಯೂ ಮುಂದಿದೆ. ಈಗೆಲ್ಲ ಎಐಗೆ ಒಗ್ಗಿಕೊಳ್ಳುತ್ತಿರುವ ದೈತ್ಯ ಕಂಪನಿಗಳು ನಿಧಾನವಾಗಿ ತಮ್ಮ ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತಿವೆ. ಇನ್ನು ಬೆಂಗಳೂರಿನ ಐಟಿ ಮಂದಿಗೂ ಈ ಎಐನ ಬಿಸಿ ತಟ್ಟಿದೆ. ಮೊದಲೆಲ್ಲ ಆಫೀಸ್ಗೆ ಬರೋಲ್ಲ, ಮನೆಯಲ್ಲೇ ಕೆಲಸ ಮಾಡ್ತೀವಿ ಎನ್ನುತ್ತಿದ್ದವರು, ಈಗ ಎಐ ಹಾಗೂ ಕೆಲಸ ಹೋಗುವ ಭಯದಲ್ಲಿ ಸುಮ್ಮನೆ ಆಫೀಸ್ಗಳಿಗೆ ಬರುತ್ತಿದ್ದಾರೆ ಎಂದು ವರದಿಯೊಂದು ಹೇಳಿದೆ.
ಹೌದು AIನಿಂದಾಗಿ ಉದ್ಯೋಗಿಗಳನ್ನು ಹೆಚ್ಚಾಗಿ ಕೆಲಸದಿಂದ ವಜಾ ಮಾಡಲಾಗುತ್ತಿದೆ. ಕೆಲಸದ ಅಭದ್ರತೆಯ ಭಯದಿಂದಾಗಿ ಬೆಂಗಳೂರಿನ ಟೆಕ್ ಮಂದಿ ಹೆಚ್ಚಾಗಿ ಕಚೇರಿಗಳಿಗೆ ಬರುತ್ತಿದ್ದಾರೆ ಎಂದು ವರದಿಯಾಗಿದೆ. ವಿಶೇಷವಾಗಿ ಬುಧವಾರದಂದು ಬಹುತೇಕ ಸಿಬ್ಬಂದಿ ಕಚೇರಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಕಚೇರಿಗಳಲ್ಲಿ ಸಿಬ್ಬಂದಿಯ ಹಾಜರಾತಿ ಹೆಚ್ಚಾಗುತ್ತಿರುವುದು ಟ್ರಾಫಿಕ್ ಹೆಚ್ಚಳಕ್ಕೂ ಕಾರಣವಾಗಿದೆ.

ವಿಶೇಷವಾಗಿ ಪ್ರಮುಖ ಟೆಕ್ ಕಾರಿಡಾರ್ ಆಗಿರುವ ಬೆಂಗಳೂರಿನ ಹೊರ ವರ್ತುಲ ರಸ್ತೆಯಲ್ಲಿರುವ 26 ಪ್ರಮುಖ ಟೆಕ್ ಪಾರ್ಕ್ಗಳಲ್ಲಿ ವಾಹನಗಳ ಪ್ರವೇಶವು ಕಳೆದ ವರ್ಷಕ್ಕೆ ಹೋಲಿಸಿದರೆ ಈ ಜೂನ್ನಲ್ಲಿ ಶೇ45 ರಷ್ಟು ಹೆಚ್ಚಾಗಿದೆ. ಅದರಲ್ಲೂ ಬುಧವಾರಗಳು ವಾಹನಗಳು ಅತ್ಯಧಿಕ ಏರಿಕೆಯನ್ನು ಕಂಡಿವೆ. ಕಳೆದ ಜೂನ್ನಲ್ಲಿ ಸುಮಾರು 82,000 ವಾಹನಗಳ ಎಂಟ್ರಿ ದಾಖಲಾಗಿದ್ದರೆ, ಈ ವರ್ಷ 1,20,000ಕ್ಕೂ ಹೆಚ್ಚು ವಾಹನಗಳು ದಾಖಲಾಗಿವೆ. ಇದೇ ಕಾರಣಕ್ಕೆ ಇತ್ತೀಚೆಗೆ ಬೆಂಗಳೂರು ಟ್ರಾಫಿಕ್ ಪೊಲೀಸರು ಬುಧವಾರದಂದು ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ಕೊಡಿ ಎಂದು ಮನವಿ ಮಾಡಿದ್ದರು.
ಕೋವಿಡ್ ಹೆಚ್ಚಾದ ನಂತರ ಎಲ್ಲ ಕಂಪನಿ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುವ (ವರ್ಕ್ ಫ್ರಂ ಹೋಂ) ವಿಧಾನವನ್ನು ಪರಿಚಯಿಸಿತು. ಇದರಿಂದಾಗಿ ಉದ್ಯೋಗಿಗಳು ವರ್ಷಾನುಗಟ್ಟಲೆ ಆಫೀಸ್ಗಳತ್ತ ಮುಖ ಮಾಡದೆ ಮನೆಯಿಂದಲೇ ಕೆಲಸ ಮಾಡುವುದಕ್ಕೆ ಒಗ್ಗಿಕೊಂಡರು. ಈಗಲೂ ಹಲವು ಕಂಪನಿಗಳು ಮನೆಯಿಂದಲೇ ಕೆಲಸ ಮಾಡುವ ಅವಕಾಶ ಕಲ್ಪಿಸಿದರೆ, ಆಫೀಸ್ ಖಾಲಿಯಾಗಿ ಕಾಣುವುದು ಬೇಡ ಎಂದು ಹೈಬ್ರಿಡ್ ವ್ಯವಸ್ಥೆ ಕಲ್ಪಿಸಿದೆ. ವಾರದಲ್ಲಿ ಕೆಲವು ದಿನ ಮನೆ, ಉಳಿದ ದಿನ ಕಚೇರಿಯಲ್ಲಿ ಕೆಲಸ ಮಾಡಿಸುತ್ತಿವೆ.
ಆದರೆ ಈಗ ಎಐ ಹೆಚ್ಚಾಗಿ ಬಳಕೆಯಾಗುತ್ತಿರುವುದರಿಂದ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡುವ ಪ್ರವೃತ್ತಿ ಹೆಚ್ಚಾಗಿದೆ. ಇದಕ್ಕೆ ಹೆದರಿ ಉದ್ಯೋಗಿಗಳು ಕಚೇರಿಗೆ ಬಂದು ಕೆಲಸ ಮಾಡುತ್ತಿದ್ದಾರೆ. ದೊಡ್ಡನೆಕ್ಕುಂದಿಯ ಕಂಪನಿಗಳು ಕೂಡ ವಾರದಲ್ಲಿ ಕನಿಷ್ಠ ನಾಲ್ಕು ದಿನಗಳವರೆಗೆ ತಮ್ಮ ಕಚೇರಿ ಹಾಜರಾತಿಯನ್ನು ಹೆಚ್ಚಿಸಿವೆ. ಈ ಪ್ರವೃತ್ತಿಯು ಹೊರ ವರ್ತುಲ ರಸ್ತೆ, ಸರ್ಜಾಪುರ ರಸ್ತೆ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿಗೆ ಹೋಗುವ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಹೆಚ್ಚಳಕ್ಕೆ ಕಾರಣವಾಗಿದೆ.
ಇದನ್ನು ಮನಗಂಡ ಬೆಂಗಳೂರು ಸಂಚಾರ ಪೊಲೀಸರು ಮತ್ತು ಅಧಿಕಾರಿಗಳು ಸಂಚಾರವನ್ನು ಸುಗಮಗೊಳಿಸಲು ವಾರದ ಮಧ್ಯದಲ್ಲಿ ಮನೆಯಿಂದ ಕೆಲಸ ಮಾಡುವ ನೀತಿಗಳು ಅಥವಾ ಕಚೇರಿ ಸಮಯವನ್ನು ಬದಲಾಯಿಸಲು ಸೂಚಿಸಿದ್ದಾರೆ. ಕೆಲವು ಟೆಕ್ ಕಂಪನಿಗಳು ಹೈಬ್ರಿಡ್ ನೀತಿಗಳನ್ನು ಹೊಂದಿವೆ. ಆದರೆ ಪ್ರಸ್ತುತ ಉದ್ಯೋಗಿಗಳಲ್ಲಿ ಒಟ್ಟಾರೆ ಆದ್ಯತೆಯು ತಮ್ಮ ಉದ್ಯೋಗಗಳನ್ನು ಉಳಿಸಿಕೊಳ್ಳುವ ಕಡೆಗೆ ಹೆಚ್ಚಾಗುತ್ತಿದೆ.
-
Karnataka Budget 2026: ಮಾ.6 ಸಿದ್ದರಾಮಯ್ಯ 17ನೇ ಬಜೆಟ್ ಮಂಡನೆ, ಸಮಯ, ನೇರ ಪ್ರಸಾರ ಲಿಂಕ್, ವಿವರ -
Karnataka Weather: ಮಾರ್ಚ್ 12ರ ವರೆಗೆ ಬೆಂಗಳೂರು ಸೇರಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಒಣಹವೆ ಮುನ್ಸೂಚನೆ -
ಬೆಂಗಳೂರು, ವಿದ್ಯಾಕಾಶಿ ಧಾರವಾಡದಲ್ಲಿ "ವಿದ್ಯಾರ್ಥಿ ಇಂದಿರಾ ಕ್ಯಾಂಟೀನ್" ಆರಂಭ: ಬಜೆಟ್ನಲ್ಲಿ ಘೋಷಣೆ -
Karnataka Highways: 1846 ಕಿಮೀ ರಾಜ್ಯ ಹೆದ್ದಾರಿ ಅಭಿವೃದ್ಧಿಗೆ 5000 ಕೋಟಿ ರೂ ಘೋಷಣೆ -
ಕರ್ನಾಟಕದ 66 ಆರ್ಟಿಓಗಳಲ್ಲಿ ಡಿಜಿಟಲ್ ವ್ಯವಸ್ಥೆ: ವಾಹನ ತೋರಿಸಿದರಷ್ಟೇ ಫಿಟ್ನೆಸ್ ಪ್ರಮಾಣಪತ್ರ, ಏನಿದು? -
ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧ: ಇದು ನಿಜಕ್ಕೂ ಕಾರ್ಯಸಾಧುವೆ? ತಜ್ಞರು ಹೇಳುವುದೇನು? -
ಅನಧಿಕೃತವಾಗಿ ಪ್ರವೇಶಿಸಿದರೆ ಗುಂಡು ಹಾರಿಸಲಾಗುವುದು: ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ಹುಟ್ಟುಹಾಕಿದ ವಾಯುಪಡೆಯ ಸೂಚನಾ ಫಲಕ -
Tamarind Cultivation: ಹೊಸಪೇಟೆ ಹುಣಸೆ ಘಟಕಕ್ಕೆ ವಿಶ್ವಬ್ಯಾಂಕ್ ಉನ್ನತ ಮಟ್ಟದ ತಂಡ ಭೇಟಿ, ರೈತರಿಗೆ ಗುಡ್ನ್ಯೂಸ್ ನಿರೀಕ್ಷೆ -
Saaniya Chandok: ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ಕುಟುಂಬಕ್ಕೆ ಸೊಸೆಯಾಗಿ ಬಂದ ಸಾನಿಯಾ ಚಾಂದೋಕ್ ಯಾರು? -
Abhishek Sharma: 'ಅಭಿಷೇಕ್ ಶರ್ಮಾ ಒಬ್ಬ ಬ್ಲೈಂಡ್ ಸ್ಲಾಗರ್': ರೊಚ್ಚಿಗೆದ್ದ ಅಭಿಮಾನಿಗಳು -
Horoscope March 5: ಇಂದಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ, ಯಾರಿಗೆ ಶುಭ-ಯಾರಿಗೆ ಅಶುಭ -
Jacob Bethell: ಟೀಂ ಇಂಡಿಯಾ ವಿರುದ್ಧ ಸೋತರೂ ಕನ್ನಡಿಗರ ಮನಗೆದ್ದ 22 ವರ್ಷದ ಜೇಕಬ್ ಬೆಥೆಲ್












Click it and Unblock the Notifications