ರಾಯಚೂರು: ಕೊನೇ ಭಾಗದ ರೈತರಿಗೆ ತಲುಪದ ತುಂಗಭದ್ರಾ ಕಾಲುವೆ ನೀರು, ಭುಗಿಲೆದ್ದ ಆಕ್ರೋಶ

ರಾಯಚೂರು, ಅಕ್ಟೋಬರ್‌, 16: ತುಂಗಭದ್ರಾ ಜಲಾಶಯದ ಎಡದಂಡೆ ಮುಖ್ಯಕಾಲುವೆಗೆ ಕಳೆದ ಮೂರು ತಿಂಗಳಿಂದ 4,100 ಸಾವಿರ ಕ್ಯೂಸೆಕ್‌ ನೀರು ಹರಿಬಿಟ್ಟರೂ ಕೆಳಭಾಗದ ವಿತರಣಾ ಕಾಲುವೆ 104ಕ್ಕೆ ಬರದೆ ಇರುವುದರಿಂದ ರೈತರಿಗೆ ತೀವ್ರ ಸಮಸ್ಯೆಯಾಗಿದೆ.

ತುಂಗಭದ್ರಾ ಎಡದಂಡೆ ಕಾಲುವೆ (ಟಿಎಲ್‌ಬಿಸಿ) ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳ ರೈತರ ಜೀವನಾಡಿಯಾಗಿದ್ದು, ಮುನಿರಾಬಾದ್‌ನಿಂದ ಆರಂಭಗೊಂಡ ಕಾಲುವೆ ರಾಯಚೂರು ತಾಲೂಕಿನ ಕೊನೆ ಭಾಗದವರಿಗೆ ವ್ಯಾಪ್ತಿ ಹೊಂದಿದೆ. ನೀರಾವರಿ ಇಲಾಖೆ ಮಾಹಿತಿಯಂತೆ 6 ಲಕ್ಷ ಎಕರೆ ನೀರಾವರಿ ಜಮೀನಿದ್ದು, ಇದರಲ್ಲಿ 2 ಲಕ್ಷಕ್ಕೂ ಹೆಚ್ಚು ಎಕರೆ ಅಕ್ರಮವಾಗಿ ನೀರಾವರಿ ಇದೆ. ಆದರೆ, ಜಿಲ್ಲೆಯ ಜನಪ್ರತಿನಿಧಿಗಳು ನೀರು ತರಲು ಮುಂದಾಗದೆ ನಿರಾಸಕ್ತಿ ವಹಿಸಿದ್ದಾರೆ ಎನ್ನಲಾಗಿದೆ.

tungabhadra-canal-water

ಜಿಲ್ಲೆಯಲ್ಲಿ ಬರಗಾಲ ಅವರಿಸಿದೆ. ಇತ್ತ ಮಳೆ ಅಭಾವ ಕಾಡಿದೆ. ಮುಖ್ಯಕಾಲುವೆ 47ನೇ ಮೈಲ್‌ನಲ್ಲಿ 11ಅಡಿ 61ರಲ್ಲಿ 9,625, 69ರಲ್ಲಿ 7.8, 90ನೇ ಮೈಲ್‌ನಲ್ಲಿ 3.1 ಗೇಜ್‌ ಇದೆ. 104ನೇ ಮೈಲ್‌ ಬಳಿಯ ಮುಖ್ಯ ಕಾಲುವೆಗೆ ನೀರು ತಲುಪದ ಕಾರಣ ರೈತರು ಭತ್ತ ಬೆಳೆಯುವ ಆಸೆ ಬಿಟ್ಟಿದ್ದಾರೆ. ಎಡದಂಡೆ ಕಾಲುವೆ ಮುಖ್ಯ ಮೈಲ್‌ಗಳ ಬಳಿ ನಿಗದಿತ ಗೇಜ್‌ ಕಾಯ್ದುಕೊಳ್ಳಲು ನೀರಾವರಿ ನಿಗಮದ ಎಂಜಿನಿಯರ್‌ಗಳು ವಿಫಲರಾಗಿದ್ದಾರೆ.

ಸಮೀಪದ 69ನೇ ಮೈಲ್‌ ಬಳಿಯ ಮುಖ್ಯ ಕಾಲುವೆಯಲ್ಲಿ 9.1 ಅಡಿ ನೀರು ಹರಿಯಬೇಕು. ಅದರೆ, ಕಳೆದ ಮೂರು ತಿಂಗಳಿಂದ ನೀರು ಹರಿಯುತ್ತಿರುವ ಕಾರಣ ಕೊನೆ ಭಾಗದ ರೈತರ ಗದ್ದೆಗಳಿಗೆ ನೀರು ತಲುಪಿಲ್ಲ. ಎಡದಂಡೆ ಮುಖ್ಯ ಕಾಲುವೆಯಲ್ಲಿ ಹಗಲು ಹೊತ್ತಿನಲ್ಲಿ ಗೇಜ್‌ ಸ್ವಲ್ಪ ಹೆಚ್ಚು ಕಮ್ಮಿ ಇರಲಿದೆ. ರಾತ್ರಿ ಹೊತ್ತು ಕಾಲುವೆಯಲ್ಲಿ ನೀರಿನ ಪ್ರಮಾಣ ಕಡಿಮೆ ಆಗುತ್ತಿರುವ ಒಳ ಮರ್ಮ ಗೊತ್ತಾಗುತ್ತಿಲ್ಲ ಎನ್ನಲಾಗಿದೆ.

ತುಂಗಭದ್ರಾ ಜಲಾಶಯದಲ್ಲಿ 89 ಟಿಎಂಸಿ ನೀರು ಸಂಗ್ರಹಗೊಂಡಿದ್ದರೂ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ನಿಗದಿತ ಗೇಜ್‌ ಕಾಯ್ದುಕೊಳ್ಳಲು ನೀರಾವರಿ ನಿಗಮದ ಎಂಜಿನಿಯರ್‌ಗಳು ವಿಫಲರಾಗಿದ್ದು, ಮೇಲಧಿಕಾರಿಗಳು ಕ್ರಮ ಕೈಗೊಳ್ಳಲು ಚಿಂತನೆ ನಡೆಸಬೇಕಿದೆ. ಜಿಲ್ಲೆಯ 7 ತಾಲೂಕುಗಳ ಪೈಕಿ ಸರಕಾರ 6 ತಾಲೂಕುಗಳನ್ನು ಬರ ಪೀಡಿತ ಪ್ರದೇಶ ಎಂದು ಘೋಷಿಸಿದೆ. ಮಳೆ ಅಭಾವದಿಂದ ಸಂಕಷ್ಟಕ್ಕೆ ಸಿಲುಕಿದ ರೈತರು ಉಳಿದ ಅಲ್ಪ ಸ್ವಲ್ಪ ಬೆಳೆ ರಕ್ಷಣೆಗೆ ರೈತರು ಕೊಳವೆ ಬಾವಿ ಮೊರೆ ಹೋಗಿದ್ದಾರೆ.

ನಿರಂತರ ಲೋಡ್‌ ಶೆಡ್ಡಿಂಗ್‌ನಿಂದ ರೈತರು ಇತ್ತೀಚೆಗೆ ಜೆಸ್ಕಾಂ ಇಲಾಖೆಗೆ ಮುತ್ತಿಗೆ ಹಾಕಿ 24 ಗಂಟೆ ವಿದ್ಯುತ್‌ ಪೂರೈಕೆಗೆ ಒತ್ತಾಯಿಸಿದರೂ ಕ್ರಮವಾಗಿಲ್ಲ. ರೈತರ ಬೆನ್ನಿಗೆ ನಿಲ್ಲಬೇಕಿದ್ದ ಜಿಲ್ಲಾಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ್‌ ಪಾಟೀಲ್‌ ಅವರು ಮಾತ್ರ ಯಾವುದೇ ಸಭೆ ನಡೆಸದೇ ಮೌನವಹಿಸಿದ್ದಾರೆ ಎಂಬುದು ರೈತರ ಆರೋಪವಾಗಿದೆ. ಎಡದಂಡೆ ನಾಲೆಯಿಂದ ಕೆಳಭಾಗದ ರೈತರಿಗೆ ನೀರು ಹರಿಸಲು ಒತ್ತಾಯಿಸಿ ನಿರಂತರ ಪಕ್ಷಾತೀತವಾಗಿ ಹೋರಾಟ, ಪ್ರತಿಭಟನೆಗಳು ನಡೆಯುತ್ತಿವೆ.

ಕೆಲ ರಾಜಕೀಯ ಪಕ್ಷಗಳ ನಾಯಕರು ತಮ್ಮ ವರ್ಚಸ್ಸು ಹೆಚ್ಚಿಸಿಕೊಳ್ಳಲು ಅಸ್ತ್ರವನ್ನಾಗಿ ಮಾಡಿಕೊಂಡಿದ್ದು ತಿಕ್ಕಾಟ ಹೆಚ್ಚಾಗಿದೆ. ಬಿಜೆಪಿ ನಾಯಕರು ಒಂದು ದಿನ ಹೋರಾಟ ಮಾಡಿದರೆ, ಕಾಂಗ್ರೆಸ್‌ ನಾಯಕರು ಮತ್ತೊಂದು ದಿನ ಪ್ರತಿಭಟನೆ ಮಾಡುತ್ತಿದ್ದಾರೆ. ಈ ಹೋರಾಟ ತೀವ್ರಗೊಳಿಸಲು ಶೀಘ್ರವೇ ವಿವಿಧ ಪಕ್ಷಗಳ ಮುಖಂಡರು ರಾಯಚೂರು ಹೊರ ವಲಯದ ಸಾತ್‌ ಮೈಲ್‌ ಹತ್ತಿರ ರಾಜ್ಯ ಹೆದ್ದಾರಿ ತಡೆದು ಹೋರಾಟ ನಡೆಸಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.

ಮಳೆ ಇಲ್ಲದೆ ರೈತರಿಗೆ ಸಮಸ್ಯೆಯಾಗಿದೆ. ಉಳಿದ ಅಲ್ಪ ಸ್ವಲ್ಪ ಬೆಳೆ ಉಳಿಸಿಕೊಳ್ಳಲು ಕೊಳವೆ ಬಾವಿಯಿಂದ ನೀರು ಹರಿಸಬೇಕೆಂದರೆ ನಿರಂತರ ವಿದ್ಯುತ್‌ ಲೋಡ್‌ ಶೆಡ್ಡಿಂಗ್‌ ಎದುರಾಗಿದೆ. ಸರಕಾರ ತುಂಗಭದ್ರಾ ಎಡದಂಡೆ ಕಾಲುವೆ ಕೊನೆ ಭಾಗಕ್ಕೆ ನೀರು ಹರಿಸಲು ಕ್ರಮಕೈಗೊಳ್ಳದಿದ್ದರೆ ಅಕ್ಟೋಬರ್‌ 16ರಂದು ನಗರದ ಸಾತ್‌ ಮೇಲ್‌ನಲ್ಲಿ ನಿರಂತರ ರಸ್ತೆ ತಡೆ ಮಾಡುತ್ತೇವೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಮಹಾಂತೇಶ್ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+