ಕುಂದಗೋಳ: ಲೀಟರ್ ಪೆಟ್ರೋಲ್ಗಿಂತಲೂ ದುಬಾರಿಯಾಯ್ತು ಕೆ.ಜಿ. ಟೊಮ್ಯಾಟೋ ಬೆಲೆ, ಮಾರುಕಟ್ಟೆಯತ್ತ ಮುಖ ಮಾಡದ ಗ್ರಾಹಕರು
ಕುಂದಗೋಳ, ಜುಲೈ, 06: ಮಾರುಕಟ್ಟೆಯಲ್ಲಿ ಏಲ್ಲಿ ನೋಡಿದರಲ್ಲಿ ಈಗ ಟೊಮೆಟೋ ಸುಂದರಿಯದ್ದೇ ಮಾತು. ಅಬ್ಬಬ್ಬಾ.! ಅವಳ ಬೆಲೆಯಂತೂ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಸದ್ಯ ಜಿಲ್ಲೆಯ ರೈತರು ಮಾರುಕಟ್ಟೆಯಲ್ಲಿ ಇಷ್ಟು ಬೇಡಿಕೆ ಇರುವಾಗ ನ್ಯಾವ್ಯಾಕೆ ಈ ಬೆಳೆಯನ್ನು ಬೆಳೆಯಲಿಲ್ಲ ಎಂದು ಮರುಗುತ್ತಿದ್ದಾರೆ.
ಟೊಮ್ಯಾಟೋ ಬೆಲೆ ಇದೀಗ ಕೆ.ಜಿ.ಗೆ 120 -140ರೂಪಾಯಿವರೆಗೆ ನಿಗದಿಯಾಗಿದ್ದು, ಪೆಟ್ರೋಲ್ ಬೆಲೆಗಿಂತ ಈ ಟೊಮ್ಯಾಟೋ ಬೆಲೆಯೇ ಜಾಸ್ತಿಯಾಗಿದೆ. ಬೆಲೆ ಹೆಚ್ಚಳ ಆದ್ದರಿಂದ ಕುಂದಗೋಳದ ಸಂತೆಯಲ್ಲಿ ಗ್ರಾಹಕರು ಅರ್ಧ ಕೆ.ಜಿ., ಕಾಲು ಕೆ.ಜಿ., ಇನ್ನೂ ಕೆಲವರಂತೂ ಟೊಮೆಟೊ ಬೆಡಪ್ಪಾ ಎಂದು ಹಣಸೆ ಹಣ್ಣನ್ನು ಖರೀದಿಸುವ ದೃಶ್ಯಗಳು ಕಂಡು ಬಂದವು.

ಇನ್ನೂ ಕೆಂಪು ಸುಂದರಿಯಷ್ಟೇ ಅಲ್ಲ.. ಅವಳ ಜೊತೆ ಆಕೆಯ ಸಹಪಾಠಿಗಳಾದ ಹಿರೇಕಾಯಿ, ಬೆಂಡೇಕಾಯಿ, ಬದನೆಕಾಯಿ, ಸೌತೆಕಾಯಿ, ಚವಳೆಕಾಯಿ, ಬಿನ್ಸ್, ಬಿಟರೂಟ್, ಡೊಣ್ಣಕಾಯಿ, ಸೇರಿದಂತೆ ಆಲೂಗಡ್ಡೆ, ಹಸಿ ಮೆಣಸಿನಕಾಯಿ ದರಗಳು ಕೂಡ ಕೆ.ಜಿ.ಗೆ 50ರ ಗಡಿ ಮುಟ್ಟುವಂತಿವೆ.
ಆದ್ದರಿಂದ ಕುಂದಗೋಳದ ಸಂತೆಗೆ ಬಂದವರು ತರಕಾರಿ ಖರೀದಿಗೆ ಹಿಂದೇಟು ಹಾಕಿದ್ದರಿಂದ ಕೆಲ ವ್ಯಾಪಾರಿಗಳು ಖಾಲಿ ಖಾಲಿ ಕುಳಿತಂತಹ ನೋಟಗಳು ಕೂಡ ಕಂಡುಬಂದವು.
ಬರೀ ಕುದಗೊಳದಲ್ಲಲ್ಲದೆ ರಾಜ್ಯದ ವಿವಿಧ ನಗರಗಳಲ್ಲೂ ಕೂಡ ಟೊಮ್ಯಾಟೋ ಬೆಲೆ ಗಗನಕ್ಕೇರಿದೆ. ಮಾರ್ಕೆಟ್ ಇಲ್ಲ ತರಕಾರಿ ಅಂಗಡಿಗೆ ಹೋಗಿ ಟೊಮೆಟೊ ದರ ಕೇಳಿ ಗ್ರಾಹಕರು ಶಾಕ್ ಆಗುತ್ತಿದ್ದಾರೆ. ಕೆ.ಜಿ. ಟೊಮ್ಯಾಟೊ 150 ರೂಪಾಯಿಗೆ ಬೆಂಗಳೂರಿನ ಸೂಪರ್ ಮಾರ್ಕೆಟ್ಗಳಲ್ಲಿ ಮಾರಾಟ ಆಗುತ್ತಿದೆ ಎನ್ನುವ ಮಾಹಿತಿಯೊಂದು ಹೊರಬಿದ್ದಿದೆ.
ಕಾಲು ಕೆ.ಜಿ. ಟೊಮ್ಯಾಟೋ 40-50 ರೂಪಾಯಿ, ಅರ್ಧ ಕೆ.ಜಿ.ಗೆ 75-80 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ಅಲ್ಲದೆ ಮಾರುಕಟ್ಟೆಗಳಲ್ಲಿ 120- 130 ರೂಪಾಯಿ, ತರಕಾರಿ ಅಂಗಡಿಯಲ್ಲಿ 130 -140 ರೂಪಾಯಿ ಬೆಲೆ ನಿಗದಿ ಮಾಡಿದ್ದಾರೆ ಎಂದು ತಿಳಿದ ಗ್ರಾಹಕರು ಶಾಕ್ ಆಗಿದ್ದಾರೆ. ಆದರೆ ಗ್ರಾಹಕರಿಗೆ ಟೊಮ್ಯಾಟೋ ಬೆಲೆಯು ವಿದ್ಯುತ್ ಬಿಲ್ಗಿಂತ ಹೆಚ್ಚಿನ ಶಾಕ್ ಹೊಡೆಸಿದೆ ಎನ್ನಲಾಗುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ ಒಂದು ಟೊಮ್ಯಾಟೋ ಬಾಕ್ಸ್ 3000 - 4000 ರೂ.,ಗೆ ಮಾರಾಟ ಆಗುತ್ತಿದೆ.
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications