ಕುಂದಗೋಳ: ಲೀಟರ್ ಪೆಟ್ರೋಲ್ಗಿಂತಲೂ ದುಬಾರಿಯಾಯ್ತು ಕೆ.ಜಿ. ಟೊಮ್ಯಾಟೋ ಬೆಲೆ, ಮಾರುಕಟ್ಟೆಯತ್ತ ಮುಖ ಮಾಡದ ಗ್ರಾಹಕರು
ಕುಂದಗೋಳ, ಜುಲೈ, 06: ಮಾರುಕಟ್ಟೆಯಲ್ಲಿ ಏಲ್ಲಿ ನೋಡಿದರಲ್ಲಿ ಈಗ ಟೊಮೆಟೋ ಸುಂದರಿಯದ್ದೇ ಮಾತು. ಅಬ್ಬಬ್ಬಾ.! ಅವಳ ಬೆಲೆಯಂತೂ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಸದ್ಯ ಜಿಲ್ಲೆಯ ರೈತರು ಮಾರುಕಟ್ಟೆಯಲ್ಲಿ ಇಷ್ಟು ಬೇಡಿಕೆ ಇರುವಾಗ ನ್ಯಾವ್ಯಾಕೆ ಈ ಬೆಳೆಯನ್ನು ಬೆಳೆಯಲಿಲ್ಲ ಎಂದು ಮರುಗುತ್ತಿದ್ದಾರೆ.
ಟೊಮ್ಯಾಟೋ ಬೆಲೆ ಇದೀಗ ಕೆ.ಜಿ.ಗೆ 120 -140ರೂಪಾಯಿವರೆಗೆ ನಿಗದಿಯಾಗಿದ್ದು, ಪೆಟ್ರೋಲ್ ಬೆಲೆಗಿಂತ ಈ ಟೊಮ್ಯಾಟೋ ಬೆಲೆಯೇ ಜಾಸ್ತಿಯಾಗಿದೆ. ಬೆಲೆ ಹೆಚ್ಚಳ ಆದ್ದರಿಂದ ಕುಂದಗೋಳದ ಸಂತೆಯಲ್ಲಿ ಗ್ರಾಹಕರು ಅರ್ಧ ಕೆ.ಜಿ., ಕಾಲು ಕೆ.ಜಿ., ಇನ್ನೂ ಕೆಲವರಂತೂ ಟೊಮೆಟೊ ಬೆಡಪ್ಪಾ ಎಂದು ಹಣಸೆ ಹಣ್ಣನ್ನು ಖರೀದಿಸುವ ದೃಶ್ಯಗಳು ಕಂಡು ಬಂದವು.

ಇನ್ನೂ ಕೆಂಪು ಸುಂದರಿಯಷ್ಟೇ ಅಲ್ಲ.. ಅವಳ ಜೊತೆ ಆಕೆಯ ಸಹಪಾಠಿಗಳಾದ ಹಿರೇಕಾಯಿ, ಬೆಂಡೇಕಾಯಿ, ಬದನೆಕಾಯಿ, ಸೌತೆಕಾಯಿ, ಚವಳೆಕಾಯಿ, ಬಿನ್ಸ್, ಬಿಟರೂಟ್, ಡೊಣ್ಣಕಾಯಿ, ಸೇರಿದಂತೆ ಆಲೂಗಡ್ಡೆ, ಹಸಿ ಮೆಣಸಿನಕಾಯಿ ದರಗಳು ಕೂಡ ಕೆ.ಜಿ.ಗೆ 50ರ ಗಡಿ ಮುಟ್ಟುವಂತಿವೆ.
ಆದ್ದರಿಂದ ಕುಂದಗೋಳದ ಸಂತೆಗೆ ಬಂದವರು ತರಕಾರಿ ಖರೀದಿಗೆ ಹಿಂದೇಟು ಹಾಕಿದ್ದರಿಂದ ಕೆಲ ವ್ಯಾಪಾರಿಗಳು ಖಾಲಿ ಖಾಲಿ ಕುಳಿತಂತಹ ನೋಟಗಳು ಕೂಡ ಕಂಡುಬಂದವು.
ಬರೀ ಕುದಗೊಳದಲ್ಲಲ್ಲದೆ ರಾಜ್ಯದ ವಿವಿಧ ನಗರಗಳಲ್ಲೂ ಕೂಡ ಟೊಮ್ಯಾಟೋ ಬೆಲೆ ಗಗನಕ್ಕೇರಿದೆ. ಮಾರ್ಕೆಟ್ ಇಲ್ಲ ತರಕಾರಿ ಅಂಗಡಿಗೆ ಹೋಗಿ ಟೊಮೆಟೊ ದರ ಕೇಳಿ ಗ್ರಾಹಕರು ಶಾಕ್ ಆಗುತ್ತಿದ್ದಾರೆ. ಕೆ.ಜಿ. ಟೊಮ್ಯಾಟೊ 150 ರೂಪಾಯಿಗೆ ಬೆಂಗಳೂರಿನ ಸೂಪರ್ ಮಾರ್ಕೆಟ್ಗಳಲ್ಲಿ ಮಾರಾಟ ಆಗುತ್ತಿದೆ ಎನ್ನುವ ಮಾಹಿತಿಯೊಂದು ಹೊರಬಿದ್ದಿದೆ.
ಕಾಲು ಕೆ.ಜಿ. ಟೊಮ್ಯಾಟೋ 40-50 ರೂಪಾಯಿ, ಅರ್ಧ ಕೆ.ಜಿ.ಗೆ 75-80 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ಅಲ್ಲದೆ ಮಾರುಕಟ್ಟೆಗಳಲ್ಲಿ 120- 130 ರೂಪಾಯಿ, ತರಕಾರಿ ಅಂಗಡಿಯಲ್ಲಿ 130 -140 ರೂಪಾಯಿ ಬೆಲೆ ನಿಗದಿ ಮಾಡಿದ್ದಾರೆ ಎಂದು ತಿಳಿದ ಗ್ರಾಹಕರು ಶಾಕ್ ಆಗಿದ್ದಾರೆ. ಆದರೆ ಗ್ರಾಹಕರಿಗೆ ಟೊಮ್ಯಾಟೋ ಬೆಲೆಯು ವಿದ್ಯುತ್ ಬಿಲ್ಗಿಂತ ಹೆಚ್ಚಿನ ಶಾಕ್ ಹೊಡೆಸಿದೆ ಎನ್ನಲಾಗುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ ಒಂದು ಟೊಮ್ಯಾಟೋ ಬಾಕ್ಸ್ 3000 - 4000 ರೂ.,ಗೆ ಮಾರಾಟ ಆಗುತ್ತಿದೆ.
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ












Click it and Unblock the Notifications