ಹತ್ತಿ ಬೇಸಾಯ; ಕಾಯಿ ಕೊರಕದ ಕೀಟ ನಿರ್ವಹಣೆಗೆ ಸಲಹೆಗಳು
ಕಲಬುರಗಿ, ಮೇ 27 : ಈ ಬಾರಿಯ ಮುಂಗಾರು ಹಂಗಾಮಿಗೆ ಹತ್ತಿ ಬೆಳೆಯಲ್ಲಿ ಗುಲಾಬಿ ಕಾಯಿ ಕೊರಕದ ಕೀಟ ಬಾಧೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಕೃಷಿ ಇಲಾಖೆ ಎಚ್ಚರಿಕೆ ನೀಡಿದೆ. ಆದ್ದರಿಂದ, ರೈತರು ತಾಂತ್ರಿಕ ಸಲಹೆಗಳನ್ನು ಅನುಸರಿಸಬೇಕೆಂದು ಮನವಿ ಮಾಡಲಾಗಿದೆ.
Recommended Video
ಜೇವರ್ಗಿ ಸಹಾಯಕ ಕೃಷಿ ನಿರ್ದೇಶಕರಾದ ಸುನೀಲ ಕುಮಾರ ಜವಳಗಿ ರೈತರಿಗೆ ಹಲವು ಸಲಹೆಗಳನ್ನು ನೀಡಿದ್ದಾರೆ. ರೈತರು ತಮ್ಮ ಹೊಲದಲ್ಲಿ ಹತ್ತಿ ಗಿಡಗಳು ಇರದಂತೆ ನೋಡಿಕೊಳ್ಳುವ ಮೂಲಕ ಈ ಗುಲಾಬಿ ಕೀಟದ ಹಾವಳಿ ಬಹಳಷ್ಟು ಕಡಿಮೆ ಮಾಡಬಹುದಾಗಿದೆ ಎಂದು ಹೇಳಿದ್ದಾರೆ.
ದೆಹಲಿಗೂ ಪಪ್ಪಾಯ ಕಳಿಸಿ ಮಾದರಿಯಾದ ಕೊಪ್ಪಳದ ರೈತ
ಕೀಟಬಾಧೆ ಅತಿಯಾಗಿ ಭಾದಿಸುವ ಪ್ರದೇಶಗಳಲ್ಲಿ ಬೆಳೆ ಪರಿವರ್ತನೆ ಮಾಡುವುದು ಸೂಕ್ತ. ಬೇಸಿಗೆಯಲ್ಲಿ ಆಳವಾಗಿ ಉಳುಮೆ ಮಾಡುವುದರಿಂದ ಕೋಶಗಳನ್ನು ಮತ್ತು ಸೂಪ್ತಾವಸ್ಥೆಯಲ್ಲಿರುವ ಮರಿಹುಳುಗಳನ್ನು ಹೊರ ಹಾಕುವುದರಿಂದ ಮರಿ ಹುಳುಗಳು ಬಿಸಿಲಿನ ತಾಪಕ್ಕೆ ಸಾಯುತ್ತವೆ ಎಂದು ತಿಳಿಸಿದ್ದಾರೆ.
ವಾಟ್ಸಪ್, ಫೇಸ್ ಬುಕ್ ಮೂಲಕ ಮಾವು ಮಾರಿ ಮಾದರಿಯಾದ ರೈತ!
ಬಿತ್ತನೆ ಸಮಯದಲ್ಲಿ ಬಿ. ಟಿ. ರಹಿತ ಹತ್ತಿಯ ಬೀಜವನ್ನು ಹೊಲದ ಬದುವಿನ ಸುತ್ತಲೂ 4-5 ಸಾಲುಗಳಲ್ಲಿ ಬಿತ್ತಬೇಕು. ಇದರಿಂದ ನಿರೋಧಕತೆ ಬೆಳೆಸಿಕೊಂಡು ಕೀಟಬಾಧೆಯನ್ನು ತಡೆಗಟ್ಟಬಹುದಾಗಿದೆ ಎಂದು ಸಲಹೆ ನೀಡಿದ್ದಾರೆ.
ರೈತ - ಕೂಲಿಕಾರರ ಮೇಲೆ ಸರ್ಕಾರದ ದಾಳಿ: ಸಿಪಿಐಎಂ ಖಂಡನೆ
ಹತ್ತಿ ಬೆಳೆಯನ್ನು ಬೇಗನೆ ಬಿತ್ತನೆ ಮಾಡುವುದರಿಂದ ಗುಲಾಬಿ ಕಾಯಿ ಕೊರಕದ ಕೀಟ ಬಾಧೆ ಜಾಸ್ತಿಯಾಗುತ್ತಿದ್ದು, ರೈತರು ಸೂಕ್ತ ಸಮಯದಲ್ಲಿ ಬಿತ್ತನೆ ಮಾಡಬೇಕೆಂದು ಮನವಿ ಮಾಡಿದ್ದಾರೆ.